Homeಮುಖಪುಟಬೆಳ್ಳಿಚುಕ್ಕಿ; ಬಾಹ್ಯಾಕಾಶದಲ್ಲಿ ಅತ್ಯಂತ ದೊಡ್ಡದಾದ ಸ್ಫೋಟ?

ಬೆಳ್ಳಿಚುಕ್ಕಿ; ಬಾಹ್ಯಾಕಾಶದಲ್ಲಿ ಅತ್ಯಂತ ದೊಡ್ಡದಾದ ಸ್ಫೋಟ?

- Advertisement -
- Advertisement -

ನಭೋಮಂಡಲದಲ್ಲಿ ನಡೆಯುವ ಅತ್ಯಂತ ವಿಸ್ಮಯಕಾರಿ ವಿದ್ಯಮಾನ ಯಾವುದೆಂದು ಯೋಚಿಸಿದ್ದೀರಾ? ನೀವು ಯಾವುದಾದರೂ ಖಗೋಳ ವಿಜ್ಞಾನಕ್ಕೆ ಸಂಬಂಧಿಸಿದ ಚರ್ಚೆಯಲ್ಲಿಯೋ, ಉಪನ್ಯಾಸದಲ್ಲಿಯೋ ಭಾಗವಹಿಸಿದ್ದರೆ, ಈ ವಿಸ್ಮಯದ ವಿದ್ಯಮಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಮಾನ್ಯವಾಗಿ ಕೇಳೇ ಇರುತ್ತೀರಿ! ಅಷ್ಟು ಚಿರಪರಿಚಿತವಾಗಿರುವ ಈ ವಿದ್ಯಮಾನ ಅಷ್ಟೇ ಕುತೂಹಲವನ್ನು ಮತ್ತು ನಿಗೂಢತೆಯನ್ನು ತನ್ನೊಳಗೆ ಇಟ್ಟುಕೊಂಡಿದೆ. ಇಷ್ಟು ಹೊತ್ತಿಗೆ ನೆನಪಾಗಿರಬಹುದಲ್ಲವಾ? ಹೌದು ಅದೇ ಸೂಪರ್‌ನೋವಾ (Supernova)!

ಈ ಸೂಪರ್‌ನೋವಾ ಬಗ್ಗೆ ನೀವು ಕೇಳಿರಬಹುದು? ಬಾಹ್ಯಾಕಾಶದಲ್ಲೇ ಅತ್ಯಂತ ದೊಡ್ಡದಾದ ಸ್ಫೋಟವಾ ಇದು? ನಕ್ಷತ್ರಗಳ ಅಂತ್ಯ ಕಾಲವೇ? ಸೂಪರ್‌ನೋವಾ ಆದ ನಕ್ಷತ್ರ ಆಕಾಶದಲ್ಲಿ ಬೆಳಗ್ಗೆ ಸಮಯದಲ್ಲಿಯೂ ಕಾಣುತ್ತದೆಯೇ? ಎಂಬಂತಹ ವಿಚಾರಗಳನ್ನು ನೀವು ಕೇಳಿರಬಹುದು. ಇತ್ತೀಚಿನ ಅಂತಹ ಒಂದು ಸುದ್ದಿ ಕೂಡ ನಿಮ್ಮ ಕಿವಿಗೆ ಬಿದ್ದಿರಬಹುದು. ಅದೇನೆಂದರೆ, ವಿಜ್ಞಾನಿಗಳು ಪ್ರಥಮ ಬಾರಿಗೆ ಹಿಂದೆಂದಿಗಿಂತಲೂ ವಿವರವಾಗಿ, ದೂರದರ್ಶಕದಲ್ಲಿ ದಾಖಲೆಯಾಗಿದ್ದ ದತ್ತಾಂಶಗಳ ಮೂಲಕ ಸೂಪರ್‌ನೋವಾಗೊಂಡ ನಕ್ಷತ್ರದ ವಿವರಣಾತ್ಮಕ ಚಿತ್ರವನ್ನು ರಚಿಸಿದ್ದಾರೆ. ಇದೇ ಮೊದಲ ಬಾರಿಗೆ ಇಂತಹ ವೈಜ್ಞಾನಿಕ ಮೈಲುಗಲ್ಲನ್ನು ವಿಜ್ಞಾನಿಗಳು ಸಾಧಿಸಿರುವುದು. ಇದು ನಮ್ಮ ನಭೋಮಂಡಲದ ಹುಟ್ಟಿನ ಬಗ್ಗೆ ಇರುವ ಪ್ರಶ್ನೆಗಳಿಗೆ ಹಾಗೂ ನಕ್ಷತ್ರಗಳ ಬಗ್ಗೆ ಇದ್ದ ಕುತೂಹಲಕಾರಿ ಅಂಶಗಳ ಬಗ್ಗೆ ಇನ್ನಷ್ಟು ಬೆಳಕು ಚೆಲ್ಲಲಿದೆ. ಅಂದಹಾಗೆ, ನಾಸಾ ನಭೋಮಂಡಲಕ್ಕೆ ಹಾರಿಸಿದ್ದ ಬಾಹ್ಯಾಕಾಶ ದೂರದರ್ಶಕವಾದ ಕೆಪ್ಲರ್ ಸಹಾದಿಂದ ಈ ಸೂಪರ್‌ನೋವಾದ ವಿವರಣಾತ್ಮಕ ಚಿತ್ರವನ್ನು ರಚಿಸಲು ಸಾಧ್ಯವಾಗಿರುವುದು.

ಆಕಾಶದಲ್ಲಿ ಕಾಣುವ ಎಲ್ಲ ನಕ್ಷತ್ರಗಳೂ ಹುಟ್ಟುತ್ತವೆ ಮತ್ತು ಸಾಯುತ್ತವೆ (ಸಾಯುತ್ತವೆ ಅನ್ನುವ ಪದ ಸೂಕ್ತವಲ್ಲದಿದ್ದರೆ, ನಶಿಸಿಹೋಗುತ್ತವೆ ಎಂದಿಟ್ಟುಕೊಳ್ಳಬಹುದು, ಇರಲಿ). ತಮ್ಮ ಜೀವತಾವಧಿಯಲ್ಲಿ, ಅದರ ಗಾತ್ರ ಮತ್ತು ತಿರುಳಿನಲ್ಲಿರುವ (Core) ಧಾತುಗಳಿಗನುಸಾರವಾಗಿ (Elements) ಈ ನಕ್ಷತ್ರಗಳ ವಿವಿಧ ಹಂತಗಳನ್ನು ಗುರುತಿಸಲಾಗಿದೆ: ಯೌವ್ವನದ ನಕ್ಷತ್ರಗಳು (Young Stars), ದೈತ್ಯ ನಕ್ಷತ್ರಗಳು (Giant Stars), ಅತೀ ದೈತ್ಯ ನಕ್ಷತ್ರಗಳು (Super Giant Stars), ನ್ಯೂಟ್ರಾನ್ ನಕ್ಷತ್ರಗಳು (Neutron Stars) ಹೀಗೆ ಹಲವು ಹಂತಗಳನ್ನು ನಕ್ಷತ್ರಗಳಲ್ಲಿ ಗುರುತಿಸಲಾಗಿದೆ. ತಿರುಳಿನ ದ್ರವ್ಯರಾಶಿಗೆ ಅನುಸಾರವಾಗಿ ನಕ್ಷತ್ರಗಳು ವಿವಿಧ ಹಂತಗಳಲ್ಲಿ ಇರುವುದನ್ನು ನಾವು ನೋಡಬಹುದಾಗಿದೆ. ಸೂಪರ್‌ನೋವಾ ವಿದ್ಯಮಾನ ನಕ್ಷತ್ರಗಳ ಅಂತಿಮ ಹಂತದಲ್ಲಿ ಒಂದು. ಆದರೂ ಎಲ್ಲ ನಕ್ಷತ್ರಗಳೂ ಸೂಪರ್‌ನೋವಾ ಆಗುವುದಿಲ್ಲ. ಉದಾಹರಣೆಗೆ ನಮ್ಮ ಸೂರ್ಯ ಸೂಪರ್‌ನೋವಾಗೊಳ್ಳುವುದಿಲ್ಲ.

ಮಾನವನು ಪ್ರಸ್ತುತ ಸೂಪರ್‌ನೋವಾವನ್ನು ಅಧ್ಯಯನ ಮಾಡಬಹುದೆ?

ಇಡೀ ಬ್ರಹ್ಮಾಂಡದಲ್ಲೇ ಅತ್ಯಂತ ದೊಡ್ಡದಾದ ಸ್ಫೋಟ ಸೂಪರ್‌ನೋವಾ ಆಗುವ ನಕ್ಷತ್ರಗಳನ್ನು ಗುರುತಿಸಲು ‘ಚಂದ್ರಶೇಖರ್ ಮಿತಿ’ ಎನ್ನುವ ಥಿಯರಿಯನ್ನು ಬಳಸುತ್ತೇವೆ. ಈ ಥಿಯರಿಯ ಪ್ರಕಾರ, ಸೂರ್ಯನ ದ್ರವ್ಯರಾಶಿಗಿಂತಲೂ 1.4ರಷ್ಟು ಹೆಚ್ಚಿರು ನಕ್ಷತ್ರಗಳು ಸೂಪರ್‌ನೋವಾ ಆಗುತ್ತವೆ. ಈ ಅಂಶವನ್ನು ಮೊದಲ ಬಾರಿಗೆ ಭಾರತೀಯ ಮೂಲದ ವಿಜ್ಞಾನಿ ಸುಬ್ರಮಣ್ಯನ್ ಚಂದ್ರಶೇಖರ್ ತಮ್ಮ ಅಧ್ಯಯನದ ಮೂಲಕ ತಿಳಿಸಿದರು. ಈ ಅಧ್ಯಯನಕ್ಕೆ 1983ರಲ್ಲಿ ನೊಬೆಲ್ ಪ್ರಶಸ್ತಿಯು ಲಭಿಸಿತ್ತು. ಚಂದ್ರಶೇಖರ್ ಮಿತಿ ಉಪಯೋಗಿಸಿಕೊಂಡು ಯಾವ ಯಾವ ನಕ್ಷತ್ರಗಳು ಸೂಪರ್‌ನೋವಾ ಆಗುತ್ತವೆ ಎಂಬುದನ್ನು ಕಂಡುಕೊಳ್ಳಬಹುದಾಗಿದೆ.

ನಕ್ಷತ್ರವು ಸೂಪರ್‌ನೋವಾ ಆಗುವ ಸಂದರ್ಭದಲ್ಲಿ, ಅದರ ಹೆಚ್ಚು ದ್ರವ್ಯರಾಶಿಯಿಂದ ಉಂಟಾದ ಗುರುತ್ವ ಬಲವು ನಕ್ಷತ್ರವನ್ನು ಕಡಿಮೆ ಗಾತ್ರಕ್ಕೆ ಕುಸಿಯುವಂತೆ ಮಾಡುತ್ತಿದ್ದರೆ, ಈ ಗಾತ್ರದ ಕಡಿಮೆಯಿಂದ ಉಂಟಾದ ತೀವ್ರ ಒತ್ತಡವು, ನಕ್ಷತ್ರವನ್ನು ಹಿಗ್ಗುವಂತೆ ಮಾಡುತ್ತಿರುತ್ತದೆ. ಈ ಎರಡು ಬಲಗಳು (ಗುರುತ್ವ ಬಲ ಮತ್ತು ಒತ್ತಡದ ಬಲ) ವಿರುದ್ಧ ದಿಕ್ಕಿನಲ್ಲಿದ್ದು, ಪ್ರತಿ ಕ್ಷಣವೂ ಪೈಪೋಟಿಯಲ್ಲಿರುತ್ತವೆ.

ಈ ಸ್ಥಿತಿಯಲ್ಲಿ ನಕ್ಷತ್ರದ ತಿರುಳಿನ ದ್ರವ್ಯರಾಶಿಯ ಒತ್ತಡ ಮತ್ತು ಅದರ ಗುರುತ್ವಬಲ ಹೆಚ್ಚು ಅಸ್ಥಿರವಾಗಿದ್ದು, ಯಾವುದೇ ಸಂದರ್ಭದಲ್ಲಿ ಸಿಡಿದು, ತನ್ನೆಲ್ಲಾ ದ್ರವ್ಯವನ್ನು ಹೆಚ್ಚು ತೀವ್ರತೆಯಿಂದ ಹೊರಸೂಸಲು ಸನ್ನದ್ಧವಾಗಿರುತ್ತದೆ. ಇವೆಲ್ಲವೂ ಒಂದು ಕ್ಷಣಕ್ಕೆ ನಡೆದುಹೋಗಿ, ನಕ್ಷತ್ರವು ತನ್ನನ್ನು ತಾನೇ ಸ್ಫೋಟಿಸಿಕೊಳ್ಳುತ್ತದೆ. ಇದೇ ಸೂಪರ್‌ನೋವಾ!

ಸೂಪರ್‌ನೋವಾಗೊಂಡ ನಕ್ಷತ್ರವು ತನ್ನ ದ್ರವ್ಯವನ್ನು 15,000 ದಿಂದ 40,000 ಕಿಲೋ ಮೀಟರ್ ವೇಗದಲ್ಲಿ ಹೊರಕ್ಕೆ ಎಸೆಯುತ್ತದೆ. ಸೂಪರ್‌ನೋವಾವಾದಾಗ, ನಕ್ಷತ್ರದ ತಿರುಳಿನಲ್ಲಿ ಅತೀ ಹೆಚ್ಚು ತಾಪಮಾನವಿರುವುದರಿಂದ, ಅತ್ಯಂತ ಭಾರವಾದ ಧಾತುಗಳು [Heavy Element- ಆವರ್ತಕ ಕೋಷ್ಟಕದಲ್ಲಿ ಕಬ್ಬಿಣದ ನಂತರದ ಧಾತುಗಳು] ಆ ಸಮಯದಲ್ಲಿ ಉತ್ಪತ್ತಿಯಾಗುತ್ತವೆ.

ಸೂಪರ್‌ನೋವಾ ಅತ್ಯಂತ ಭಯಂಕರ ಸ್ಪೋಟ. ಇದು, ತನ್ನ ಸುತ್ತಲಿನ ಪ್ರದೇಶವನ್ನು ಕ್ಷಣ ಮಾತ್ರದಲ್ಲಿ ಬೂದಿ ಮಾಡುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಹಾಗಾದರೆ, ಸೂಪರ್‌ನೋವಾ ಭೂಮಿಯ ಹತ್ತಿರ ಆಗುತ್ತಾ ಅಂತ ಪ್ರಶ್ನೆ ಕೇಳಿದರೆ, ಭೂಮಿಗೆ ಹತ್ತಿರವಿರುವ ನಕ್ಷತ್ರ ಸೂರ್ಯ. ಈ ಸೂರ್ಯನ ದ್ರವ್ಯರಾಶಿ ಚಂದ್ರಶೇಖರ ಮಿತಿಯ ಒಳಗಿರುವುದರಿಂದ, ಸೂರ್ಯ ಸೂಪರ್‌ನೋವಾ ನಕ್ಷತ್ರವಾಗುವುದಿಲ್ಲ. ಸೂರ್ಯನಿಂದ ಸೂಪರ್‌ನೋವಾದ ಭಯ ನಮಗಿಲ್ಲ. ಆದರೂ ವೈಜ್ಞಾನಿಕ ಅಧ್ಯಯನದ ಪ್ರಕಾರ, ಭೂಮಿಯ ಮೇಲೆ ಸೂಪರ್‌ನೋವಾದಿಂದ ಯಾವುದೇ ವಿಕೋಪಗಳಾಗದಿರುವುದಕ್ಕೆ ಸೂಪರ್‌ನೋವಾಗುವ ನಕ್ಷತ್ರಕ್ಕೂ ಭೂಮಿಗೂ ಇರಬೇಕಾದ ಕನಿಷ್ಟ ದೂರ 50-100 ಜೋತಿರ್ವರ್ಷಗಳು ಇರಬೇಕು. ಅಂದರೆ, ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಸಾಗುವ ಬೆಳಕು, 100 ವರ್ಷಗಳಿಗೆ ಎಷ್ಟು ಕಿಲೋಮೀಟರ್ ಸಾಗುತ್ತೋ ಅಷ್ಟೂ ಅಂತರ. ಈ ಅಂತರದ ಒಳಗೆ ಇದುವರೆಗೂ ಯಾವ ಸೂಪರ್‌ನೋವಾ ಆಗಿರುವುದು ನಮಗೆ ತಿಳಿದಿಲ್ಲ. ಆಗಿದ್ದರೆ, ಭೂಮಿಯು ಇವತ್ತಿನ ಸ್ಥಿತಿಯಲ್ಲಿರುತ್ತಿರಲಿಲ್ಲ.

ನಾಸಾದ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದಲ್ಲಿ ದಾಖಲಾಗಿದ್ದ ದತ್ತಾಂಶದ ಸಹಾಯದಿಂದ, ಸೂರ್ಯನಿಗಿಂತಲೂ ನೂರುಪಟ್ಟು ದೊಡ್ಡದಾದ ನಕ್ಷತ್ರದ ಸೂಪರ್‌ನೋವಾದ ಅತ್ಯಂತ ವಿವರಣಾತ್ಮಕ ಚಿತ್ರವನ್ನು ಈ ಬಾರಿ ರಚಿಸಲಾಗಿದೆ. ಇದು ಸೂಪರ್‌ನೋವಾದ ಅತೀ ಆರಂಭಿಕ ಹಂತದ ಚಿತ್ರವಾಗಿದೆ. ಈ ಸೂಪರ್‌ನೋವಾ ಭೂಮಿಯಿಂದ ಸರಿ ಸುಮಾರು 100 ಕೋಟಿ ಜೋತಿರ್ವರ್ಷ ದೂರದಲ್ಲಿ ನಡೆದಿದೆ ಎಂದು ಲೆಕ್ಕ ಹಾಕಲಾಗಿದೆ. ಇದರ ಅರ್ಥ ಏನೆಂದರೆ, ಆ 100 ಕೋಟಿ ವರ್ಷದ ಹಿಂದೆ ನಡೆದಿರುವ ಸೂಪರ್‌ನೋವಾವನ್ನು ನಾವು ಈಗ ನೋಡುತ್ತಿದ್ದೇವೆ ಎಂದು (ಅಂದರೆ ಆ ಬೆಳಕು ನಮ್ಮ ದೂರದರ್ಶಕವನ್ನು ಇಷ್ಟು ವರ್ಷಗಳ ನಂತರ ಮುಟ್ಟಿದೆ).

ಖಗೋಳ ವಿಜ್ಞಾನಿಗಳ ಪ್ರಕಾರ ಸಾಮಾನ್ಯವಾಗಿ 100 ವರ್ಷಗಳಲ್ಲಿ ಒಂದು ಗ್ಯಾಲಾಕ್ಸಿಯಲ್ಲಿನ ಒಂದು ನಕ್ಷತ್ರ ಸೂಪರ್‌ನೋವಾ ಆಗಬಹುದು ಎಂದು ಊಹಿಸಿದ್ದಾರೆ. ನಭೋಮಂಡಲದಲ್ಲಿ ಲಕ್ಷಾಂತರ, ಕೋಟ್ಯಾಂತರ ಗ್ಯಾಲಾಕ್ಸಿಗಳಿವೆ. ಯಾವ ಗ್ಯಾಲಾಕ್ಸಿಯಲ್ಲಾದರೂ ಸೂಪರ್‌ನೋವಾ ನಡೆಯುತ್ತಿರಬಹುದು. ಆದರೆ, ನಮ್ಮ ದೂರದರ್ಶಕಗಳು ಸರಿಯಾದ ಸಮಯದಲ್ಲಿ, ಸರಿಯಾದ ದಿಕ್ಕಿನಲ್ಲಿ ಆ ನಕ್ಷತ್ರವನ್ನು ವೀಕ್ಷಣೆ ಮಾಡಿದರೆ ಮಾತ್ರ ನಮಗೆ ಸೂಪರ್‌ನೋವಾವನ್ನು ಸೆರೆ ಹಿಡಿಯಬಹುದು ಮತ್ತು ಅಧ್ಯಯನ ಮಾಡಬಹುದಾಗಿದೆ.

ಈ ಸೂಪರ್‌ನೋವಾವನ್ನು ನಾವು ಏಕೆ ಅಧ್ಯಯನ ಮಾಡಬೇಕು?

ನಭೋಮಂಡಲದಲ್ಲಿ ಧಾತುಗಳು ಎಲ್ಲಾ ದಿಕ್ಕಿನಲ್ಲೂ ಹರಡಲು ಸಾಧ್ಯವಾಗಿರುವುದು ಸೂಪರ್‌ನೋವಾದಿಂದ ಮಾತ್ರ. ಜೊತೆಗೆ ಭಾರವಾದ ಧಾತುಗಳು ತಯಾರಾಗುವ ಕುಲುಮೆ ಸೂಪರ್‌ನೋವಾ. ಭೂಮಿಯಲ್ಲಿ ಸಿಗುವ ಭಾರವಾದ ಧಾತುಗಳ ಮೂಲವು ಸೂಪರ್‌ನೋವಾವೇ. ಅಂದರೆ, ಗ್ರಹಗಳಲ್ಲಿ ಜೀವಿಗಳ ಉಗಮಕ್ಕೂ ಈ ಮಹಾ ಸ್ಫೋಟವಾದ ಸೂಪರ್‌ನೋವಾನೇ ಕಾರಣ. ಭೂಮಿಯ ತರಹ ಅನ್ಯಗ್ರಹದ ಅನ್ವೇಷಣೆಗೆ, ಆ ಅನ್ಯಗ್ರಹದಲ್ಲಿ ಜೀವಿಗಳ ಇರುವಿಕೆಯ ಅಧ್ಯಯನಕ್ಕೆ ಈ ಸೂಪರ್‌ನೋವಾ ಅಧ್ಯಯನ ಬಹಳ ಮಹತ್ವದ್ದು. ನಮ್ಮ ಬ್ರಹ್ಮಾಂಡ ವಿಸ್ತಾರಗೊಳ್ಳುತ್ತಿದೆ (Expanding Unierse) ಎನ್ನುವುದನ್ನು ನಾವು ಕಂಡುಕೊಂಡಿದ್ದು ಸೂಪರ್‌ನೋವಾದಿಂದಲೇ. ಸೂಪರ್‌ನೋವಾದ ಅಧ್ಯಯನ ಎಂದರೆ, ವಿಶ್ವದ ಆರಂಭಿಕ ಹಂತದ ಅಧ್ಯಯನ. ಈ ವಿಶ್ವದ ಉಗಮದ ಬಗ್ಗೆಯೂ ಸೂಪರ್‌ನೋವಾ ನಮಗೆ ವಿವರ ನೀಡಬಹುದು. ಈ ಕಾರಣದಿಂದ ಖಗೋಳ ವಿಜ್ಞಾನದಲ್ಲಿ ಸೂಪರ್‌ನೋವಾದ ಅಧ್ಯಯನ ಬಹಳ ಮುಖ್ಯವಾದದ್ದು.

ಅಂದಹಾಗೆ, ಈ ಸೂಪರ್‌ನೋವಾ ಸೆರೆ ಹಿಡಿಯಲು ಬಳಸಿಕೊಂಡ ದೂರದರ್ಶಕದ ಹೆಸರು ಕೆಪ್ಲರ್ ಎಂದು. ಜೋಹಾನಸ್ ಕೆಪ್ಲರ್ ಒಬ್ಬ ಖಗೋಳ ವಿಜ್ಞಾನಿ. ಮೊದಲ ಬಾರಿಗೆ 1604ರಲ್ಲಿ ಸೂಪರ್‌ನೋವಾವನ್ನು ಆಕಾಶದಲ್ಲಿ ಗುರುತಿಸಿ ನೋಡಿದವನು. ರಾತ್ರಿ ಆಕಾಶದಲ್ಲೇ ಅತ್ಯಂತ ಪ್ರಕಾಶಮಾನವಾಗಿ ಹೊಳೆಯುತ್ತಿದ್ದ ಆ ಸೂಪರ್‌ನೋವಾಗೊಂಡ ನಕ್ಷತ್ರ ಬೆಳಗಿನ ಆಕಾಶದಲ್ಲೂ ಕಾಣುತ್ತಿದ್ದುದ್ದನ್ನು ಆತ ದಾಖಲಿಸಿದ್ದನು. ಈ ಕಾರಣದಿಂದ ನಾಸಾ ಅನ್ಯಗ್ರಹಗಳ ಅನ್ವೇಷಣೆಗೆಂದು ನಭೋಮಂಡಲಕ್ಕೆ ಹಾರಿಸಿದ್ದ ದೂರದರ್ಶಕವನ್ನು ಕೆಪ್ಲರ್ ಎಂದು ನಾಮಕರಣ ಮಾಡಿತು.


ಇದನ್ನೂ ಓದಿ: ಬೆಳ್ಳಿಚುಕ್ಕಿ; ಭೂಕಂಪನವಲ್ಲ; ಸ್ಫೋಟವಲ್ಲ; ಏನಿದು ಶಬ್ದ? ಸೂಪರ್‌ಸಾನಿಕ್ ಬೂಮ್!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...