ಧರ್ಮದರ್ಶಿಯೊಬ್ಬ ದೇವಾಲಯ ಪ್ರವೇಶಿಸಿದ ದಲಿತ ಮಹಿಳೆಗೆ ಕಾಲಿನಿಂದ ಒದ್ದು, ಮನಬಂದಂತೆ ಥಳಿಸಿ, ತಲೆಗೂದಲು ಹಿಡಿದು ಹೊರಗೆಳೆದುಹಾಕಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ಅಮಾನುಷ ಘಟನೆಯು ಡಿಸೆಂಬರ್ 21 ರಂದು ನಡೆದಿದ್ದು, ಇಂದು ಶುಕ್ರವಾರ ಬೆಳಕಿಗೆ ಬಂದಿದೆ. ಸಂತ್ರಸ್ತೆ ಹೇಮಾವತಿ ಎಂಬುವವರು ಆರೋಪಿ ಮುನಿಕೃಷ್ಣ ಎಂಬ ಲಕ್ಷ್ಮಿ ನಾರಾಯಣಸ್ವಾಮಿ ದೇವಾಲಯದ ಧರ್ಮದರ್ಶಿಯ ವಿರುದ್ಧ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಮಹಿಳೆಗೆ ಮನಬಂದಂತೆ ಥಳಿಸಲಾಗಿದೆ. ಕಾಲಿನಿಂದ ಒದೆಯಲಾಗಿದೆ. ಕೂದಲು ಹಿಡಿದು ಹೊರಗೆಳೆದುಹಾಕಲಾಗಿದೆ. ಅಲ್ಲದೆ ಕಟ್ಟಿಗೆ ತೆಗೆದುಕೊಂಡು ಹೊಡೆದಿರುವ ಸಿಸಿಕ್ಯಾಮರ ದೃಶ್ಯಗಳನ್ನು ನೋಡಬಹುದಾಗಿದೆ.
This is from #Bengaluru, #Karnataka.
Dalit women Assaulted By Temple Administration Board Member, And Restrict Her to Entered Gods Darshan.
Victim Filed Complaints Against Accused at Amrtuhalli Police Station.#Bangalore #Amrtuhalli #Dalit #Casteism #DalitLivesMatter pic.twitter.com/OUnhdaXXcx
— Hate Detector 🔍 (@HateDetectors) January 6, 2023
ಈ ವಿಡಿಯೋ ಆಧರಿಸಿ ಧರ್ಮದರ್ಶಿ ಮುನಿಕೃಷ್ಣ ವಿರುದ್ಧ ಐಪಿಸಿ ಸೆಕ್ಷನ್ 354ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದಲಿತ ದೌರ್ಜನ್ಯ ತಡೆ ಕಾಯ್ದೆಯನ್ನು ಹೇರಿಲ್ಲ ಎಂದು ವರದಿಯಾಗಿದೆ.
ಆದರೆ ಆರೋಪಿ ತಾನು ಜಾತಿ ದೌರ್ಜನ್ಯ ನಡೆಸಿಲ್ಲ ಎಂದು ಪೊಲೀಸರ ಬಳಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆ ಮಹಿಳೆಯು ತಾನು ವೆಂಕಟೇಶ್ವರ ಸ್ವಾಮಿಯು ನನ್ನ ಪತಿಯಾಗಿದ್ದಾರೆ. ಹಾಗಾಗಿ ನಾನು ಆ ಮೂರ್ತಿಯ ಪಕ್ಕದಲ್ಲಿ ಕುಳಿತುಕೊಳ್ಳಲು ಬಿಡಿ ಎಂದು ಹಠ ಮಾಡಿದರು. ಅದಕ್ಕೆ ಅವಕಾಶ ಕೊಡದಿದ್ದಾಗ ಆಕೆ ಅರ್ಚಕರಿಗೆ ಉಗಿದರು. ಅಲ್ಲಿಂದ ಹೊರಹೋಗಲು ನಿರಾಕರಿಸಿದಾಗ ಬಲವಂತವಾಗಿ ಥಳಿಸಿ ಹೊರಗೆಳೆದು ಹಾಕಲಾಯಿತು ಎಂದು ಆರೋಪಿ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Is this Hinduism or Hindutva?
Savarna Hindu priest thrashed a SC woman for trying to enter a temple and worship the deities in Bengaluru.
Untouchability in Hindu places is very common. So our people should respect their self-respect and stop going there. pic.twitter.com/ZMb3jVuXbT
— Suraj Kumar Bauddh (@SurajKrBauddh) January 6, 2023
ಇದನ್ನೂ ಓದಿ; ಕರ್ನಾಟಕದಲ್ಲಿ ಯಾವ ಯಾವ ಕೆಟಗರಿಯಲ್ಲಿ ಎಷ್ಟೆಷ್ಟು ಜಾತಿಗಳಿವೆ? ಮೀಸಲಾತಿಯ ಪಾಲೆಷ್ಟಿದೆ? – ಪೂರ್ಣ ವಿವರ ಇಲ್ಲಿದೆ