Homeಕರ್ನಾಟಕಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

ಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

- Advertisement -
- Advertisement -

ಕಾರವಾರದ ವಾಣಿಜ್ಯ ಬಂದರು ವಿಸ್ತರಿಸುವ “ಸಂಕಷ್ಟ ಮಾಲಾ” ಯೋಜನೆ ತಮ್ಮ ಬದುಕನ್ನೇ ಬರ್ಬಾದ್ ಮಾಡಿಬಿಡುತ್ತದೆಂಬ ಆತಂಕದಲ್ಲಿ ಸ್ಥಳೀಯರೆಲ್ಲಾ ಒಂದಾಗಿ ಬೀದಿಗಿಳಿದಿದ್ದಾರೆ! ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಹೆಸರಿನ ಚಂದದ ಕಡಲ ತೀರ, ಬಡ ಬೆಸ್ತರ ತುತ್ತಿನಾಧಾರವಾಗಿದ್ದ ಕಸಬು ಮತ್ತು ಕಾರವಾರದ ನೆಮ್ಮದಿ-ಸ್ವಾಸ್ಥ್ಯ ಎಲ್ಲವನ್ನು ಒಂದೇ ಬಾರಿಗೆ ಆಪೋಷನ ಪಡೆಯುವ ಈ ಯೋಜನೆ ಬೇಡವೇ ಬೇಡವೆಂದು ಆಗ್ರಹಿಸಿ ಮೊನ್ನೆ (16-01-2020) ಹತ್ತಾರು ಸಾವಿರ ಮಂದಿ ಸೇರಿ ಕಾರವಾರ ಬಂದ್ ಮಾಡಿ ಆಳುವ ಖೂಳರಿಗೆ “ಸಣ್ಣ” ಎಚ್ಚರಿಕೆ ರವಾನಿಸಿದ್ದಾರೆ!! ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಶೋ ಮ್ಯಾಮ್ ಶಾಸಕಿ ರೂಪಾಲಿ ನಾಯ್ಕ್ ಒಣ ಪ್ರತಿಷ್ಠೆಯ ಸದ್ರಿ ಕಾಮಗಾರಿ ಕಾರವಾರ ತಾಲ್ಲೂಕಿನ ಅಷ್ಟೂ ಮೀನುಗಾರರನ್ನು ಜೀವನ್ಮರಣದ ಜಂಜಾಟವಾಗಿ ಕಾಡುತ್ತಿದೆ…

ಬರೋಬ್ಬರಿ 125 ಕೋಟಿ ರೂಪಾಯಿಗಳ ಈ ಪ್ರಾಜೆಕ್ಟ್ ಮೋದಿ ಮಾಮ ತನ್ನ ಪರಮಾಪ್ತ ಬಂದರು ದಂಧೆದಾರ ಆದಾನಿಗಾಗಿಯೇ ಕೈಗೆತ್ತಿಕೊಂಡಿರುವ “ಅಭಿವೃದ್ಧಿ” ಕಾಮಗಾರಿ. ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕಾರವಾರ ಬಂದರು ವಿಸ್ತರಣೆಗೆ ಅಡಿಗಲ್ಲು ಹಾಕಿಸಿದ್ದು ಅಂದಿನ ಕಾಂಗ್ರೆಸ್ ಎಮ್ಮೆಲ್ಲೆ ಸತೀಶ್ ಸೈಲ್, ಪಕ್ಕಾ ಪಾಯ್ದೆಕೋರ ಉದ್ಯಮಿಯಾದ ಈ ಅದಿರು ಕಳ್ಳಸಾಗಾಣಿಕೆದಾರ ಅಂದು ಅದ್ಯಾವ ಕನಸು ಕಂಡಿದ್ದನೋ ಏನೋ? ಬಂದರು ಕಾಮಗಾರಿಯ ಅಲೆ ತಡೆಗೋಡೆಗೆ ಬೇಕಾದ ದೊಡ್ಡಗಾತ್ರದ ಶಿಲೆಕಲ್ಲು ಪೂರೈಕೆಯ ರಹಸ್ಯ ಬೇನಾಮಿ ಒಪ್ಪಂದ ಸೈಲ್ ಮಾಡಿಕೊಂಡಿದ್ದ. ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್‍ಸ್ ಪ್ರೈ.ಲಿ. ಕೆಲಸ ಶುರುಹಚ್ಚಿಕೊಂಡ ಎರಡೇ ದಿನದಲ್ಲಿ ನೂರಾರು ಲೋಡ್ ಕಲ್ಲು ಬೀಚ್‍ಗೆ ಬಂದು ಬಿದ್ದಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆರಂಭಿಸಿದ ಕಾಮಗಾರಿ ಹೇಗಿತ್ತೆಂದರೆ, ಮೀನುಗಾರರು ಶಾಶ್ವತವಾಗಿ ಹೊಟ್ಟೆಪಾಡಿನ ಸಮುದ್ರ ಕೃಷಿ ಮಾಡಲಾಗದಂತಿತ್ತು!!

ಕಾರವಾರದಲ್ಲಿ ಮೀನುಗಾರ ಸಂಕುಲ ರಾಜಕೀಯವಾಗಿ ನಿರ್ಣಾಯಕ. ಎಡವಟ್ಟು ಕಾಮಗಾರಿ ಕಂಡದ್ದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಸ್ತರೆಲ್ಲಾ ಅಹೋರಾತ್ರಿ ಪ್ರತಿಭಟನೆ ನಡೆಸತೊಡಗಿದರು. ಪೇಚಿಗೆ ಸಿಲುಕಿದ ಮಾಜಿ ಶಾಸಕ ಸೈಲ್ ತಕ್ಷಣ ಬಣ್ಣ ಬದಲಿಸಿಬಿಟ್ಟ. ಊರವರ ಹಿತೈಷಿ ಎಂಬಂತೆ ಪೋಸು ಕೊಡುತ್ತಾ ಬಂದರು ಕಾಮಗಾರಿ ವಿರುದ್ಧ ಹೇಳಿಕೆ ಒಗಾಯಿಸತೊಡಗಿದೆ. ಪ್ರತಿಭಟನಾಕಾರರ ಮಧ್ಯೆ ಸಾವಕಾಶವಾಗಿ ತೂರಿಕೊಂಡು ಬೀಚನ್ನು ಬೆಳಗ್ಗೆಯ ವಾಕಿಂಗ್, ಸಂಜೆಯ ವಿಹಾರ, ನೆಮ್ಮದಿಗಾಗಿ ಬಳಸುತ್ತಿದ್ದ ಜನರೂ ಮೀನುಗಾರರ ಜತೆ ಸೇರಿಕೊಂಡು ಪ್ರತಿಭಟನೆ ಬಿರುಸುಗೊಳಿಸಿದರು. ಬಂದರು ವಿರೋಧಿ ಹೋರಾಟಗಾರರ ಆಕ್ರೋಶ ತಮ್ಮ ನೋವಿಗೆ ಸ್ಪಂದಿಸದ ಸಂಸದ ಅನಂತ್ಮಾಣಿ ಮತ್ತು ಶಾಸಕಿ ರೂಪಾಲಿ ಮೇಲೆ ಕೇಂದ್ರೀಕೃತವಾಗಿತ್ತು. ಈ ಇಬ್ಬರು ನಾಲಾಯಕ್ ಜನಪ್ರತಿನಿಧಿಗಳ ಫೋಟೋಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಾರಹಾಕಿ, ಸಗಣಿ ಮೆತ್ತಿ ಸಹಜ ಸಿಟ್ಟು ವ್ಯಕ್ತಡಿಸಿದ್ದರು.

ಮೀನುಗಾರರ ಹುಡುಗ-ಹೊನ್ನಾವರದ ಪರೇಶ್ ಮೇಸ್ತನ ಸಂಶಯಾಸ್ಪದ ಸಾವನ್ನು ಸಾಬರಿಂದಾದ ಕೊಲೆ ಎಂದು ಬಿಂಬಿಸಿದ ಬಿಜೆಪಿಯ ಕೋಮು ರಾಜಕಾರಣದ ಫಲಾನುಭವಿಯಾದ ರೂಪಾಲಿಗೆ ಮೀನುಗಾರರ ತಿರುಗಿಬಿದ್ದದ್ದು ನಿದ್ದೆಗೆಡಿಸಿಬಿಟ್ಟಿತ್ತು. ಕಾರವಾರ ಬಂದ್ ದಿನ ರೂಪಾಲಿಗೆ ಕ್ಷೇತ್ರದಲ್ಲಿರುವ ಧೈರ್ಯವೇ ಇರಲಿಲ್ಲ. ಹಾಗಾಗಿ ಆಕೆ ರಾತ್ರೋರಾತ್ರಿ ಬೆಂಗಳೂರಿಗೆ ಓಡಿದ್ದಾರೆ. ಇತ್ತ ಜನರು ಪ್ರತಿಭಟನಾ ರ್ಯಾಲಿ ಹೊರಟಿದ್ದರೆ, ಅತ್ತ ಬೆಂಗಳೂರಲ್ಲಿ ರೂಪಾಲಿ ಮೇಡಮ್ಮು ಮೀನುಗಾರರ ಮಂತ್ರಿ ಶ್ರೀನಿವಾಸ ಪೂಜಾರಿ ಜತೆ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಬಂದರ ವಿಸ್ತರಣೆಯಿಂದ ಮೀನುಗಾರರಿಗೆ ತೊಂದರೆ ಆಗುವುದಿಲ್ಲ, ಬೀಚ್ ಬಂದರಿಗೆ ಬಳಕೆಯಾಗುವುದಿಲ್ಲ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರಾದ ಸೈಲ್ ಮತ್ತ ಅಸ್ನೋಟಿಕರ್ ದಾರಿ ತಪ್ಪಿಸುತ್ತಿದ್ದಾರೆಂದು ಪೂಜಾರಿ-ರೂಪಾಲಿ ಒಂದೇ ಸ್ವರದಲ್ಲಿ ಯುಗಳ ಆಲಾಪ ಮಾಡಿದ್ದಾರೆ. ಸುಳ್ಳು ಹೇಳಿ ತಮ್ಮ ಜನದ್ರೋಹ ಮುಚ್ಚಿಡಲು ಹವಣಿಸಿದ್ದಾರೆ.

ವಾಸ್ತವವೆಂದರೆ, ಬಂದರು ವಿರೋಧಿಗಳು ಸೈಲ್-ಅಸ್ನೋಟಿಕರ್‍ನನ್ನೂ ನಂಬುತ್ತಿಲ್ಲ. ಈ ಇಬ್ಬರು ಸಮಯಸಾಧಕರನ್ನು ಹೊರಗಿಟ್ಟೇ ಜನರು ಕಟ್ಟಿದ ಅಖಂಡ ಹೋರಾಟವಿದು. ಸೈಲ್-ಅಸ್ನೋಟಿಕರ್ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಷ್ಟೇ. ಆದರೆ ಜನರು ಮಾತ್ರ ಈ ಮಾಜಿದ್ವಯರಿಗೆ ಸಭೆಗಳಲ್ಲಿ ಭಾಷಣ ಮಾಡಲಿಕ್ಕೂ ಬಿಡುತ್ತಿಲ್ಲ. ಕಾರವಾರಕ್ಕೆ ಬಂದು ಜನರಿಗೆ ಮುಖ ತೋರಿಸುವ ನೈತಿಕ ಧೈರ್ಯವೂ ಇಲ್ಲದೆ ಚಡಪಡಿಸುತ್ತಿರುವ ಶಾಸಕಿಯಮ್ಮ ಒಂದೆಡೆಯಾದರೆ, ಮತ್ತೊಂದೆಡೆ ಹಲ್ಲೆಕೋರ ಮನಸ್ಥಿತಿಯ ಸಂಸದ ಅನಂತ್ಮಾಣಿ ಬಂದರು ವಿರೋಧಿಗಳನ್ನು ಆರಂಭಿದಲ್ಲೇ ಹೊಸಕಿ ಹಾಕಬೇಕು….. ನಂಗೆ ಮತ್ತೆ ಎಂಪಿ ಆಗೋ ಆಸೆಯಿಲ್ಲ….. ಬಂದರು ಕಟ್ಟಿಯೇ ತೀರುತ್ತೇನೆ….” ಎಂದೆಲ್ಲಾ ಅಭಿವೃದ್ಧಿ ಆಟಾಟೋಪ ಪ್ರದರ್ಶಿಸುತ್ತಿದ್ದಾನೆ.

ಮೀನುಗಾರರು ವಾರದಿಂದ ಮೀನುಗಾರಿಕೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ಹೂಡುತ್ತಲೇ ಇದ್ದಾರೆ. ಶಾಸಕಿ ರೂಪಾಲಿ, ಸಂಸದ ಮಾಣಿಯ ಮಳ್ಳು ಮಾತುಗಾರಿಕೆಗೆ ನಗುತ್ತಿದ್ದಾರೆ. ಹೋರಾಟಗಾರರ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದ ಮಂತ್ರಿ, ಸಂಸದ, ಶಾಸಕಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಬಂದರು ಅಧಿಕಾರಿಗಳು ಜನರ ಮುಂದೆ ಹೇಳೋದೇ ಒಂದು ಮಾಡೋದು ಮಾತ್ರ ಮತ್ತೊಂದು. ಬಂದರು ಅಧಿಕಾರಿಗಳು ತಾತ್ಕಾಲಿಕ ಮೀನು ಮಾರುಕಟ್ಟೆ ಹಿಂದಿನಿಂದ ಕಾಮಗಾರಿ ಮಾಡಲಾಗುತ್ತದೆ ಎಂದಿದ್ದರು. ಆದರೆ ಕೆಲಸ ಆಗುತ್ತಿರುವುದು ಬೀಚ್‍ನ ದಕ್ಷಿಣಕ್ಕಿರುವ ಪ್ಯಾರಾಗೋಲಾದ ಕಡೆಯಿಂದ. ಉತ್ತರ ಬದಿಯನ್ನು ಹೊಟೇಲು, ಗಾರ್ಡನ್ ಎಂದೆಲ್ಲಾ ಹಂಚಲಾಗಿದೆ. ಹೀಗಾಗಿ ಉಳಿದಿರುವುದು ಬರೀ 1 ಕಿ.ಮೀ ಬೀಚಷ್ಟೇ. ಇದರಲ್ಲಿ ಅರ್ಧ ಅಡೆಗೋಡೆಗೆ ಬಳಿಸಿದರೆ ಬಡ ಬೆಸ್ತರಿಗೆ ಮೀನುಗಾರಿಕೆಗೆ ಅವಕಾಶವಿಲ್ಲ; ವಾಕಿಂಗ್, ವಿಹಾರ ಸಾಧ್ಯವೂ ಇಲ್ಲ.

ಬಂದರು ಕಾಮಕಾರಿ ಏಕಪಕ್ಷೀಯವಾಗಿ ದಾದಾಗಿರಿಯಿಂದ ಆಡಳಿತಗಾರರು ನಡೆಸಿದ್ದಾರೆ. ಬಂದರಿನಿಂದಾಗುವ ಅರ್ಥಿಕ, ಸಾಮಾಜಿಕ ಪರಿಸರ ಪರಿಣಾಮಗಳ ಅಧ್ಯಯನವೇ ನಡೆಸಲಾಗಿಲ್ಲ. ಸಾರ್ವಜನಿಕರಿಗೆ ಉದ್ದೇಶಿತ ಬಂದರಿನ ಮಾಹಿತಿ ನೀಡಲಾಗುತ್ತಿಲ್ಲ. ಮಹತ್ವದ ಸಂಗತಿಯೆಂದರೆ, ಈ ಯೋಜನೆಗೆ ಸಿಆರ್‍ಜೆಡ್ ಸಮಿತಿಯ ಅನುಮತಿಯೇ ಸಿಕ್ಕಿಲ್ಲ. ಮರುಪರಿಶೀಲನೆಗೆ ಸಮಿತಿ ಬಂದರು ಇಲಾಖೆಗೆ ಸೂಚಿಸಿತ್ತು. ಬಂದರು ವಿಸ್ತರಣೆ ಎಂದರೆ, ದೇಶ-ವಿದೇಶದ ಬೃಹತ್ ಸರಕು ಸಾಗಾಣಿಕಾ ಹಡಗುಗಳು ಬಂದು-ಹೋಗುವ ತಾಣ. ಇಂಥ ವಾಣಿಜ್ಯ ಬಂದರಿನ ಮಗ್ಗುಲಲ್ಲಿ ಮೀನುಗಾರಿಕರ ಜೆಟ್ಟಿ ಇರಲು ಸಾಧ್ಯವೇ ಇಲ್ಲ. ವಾಣಿಜ್ಯ ಬಂದರಿನ ಸುತ್ತ ಮಜಬೂತಾದ ಆವರಣ ಗೋಡೆ, ಅದರ ಮೇಲೆ ತಂತಿ ಮುಳ್ಳಿನ ಬೇಲಿ ಹಾಕಲಾಗುತ್ತದೆ. ಸಾರ್ವಜನಿಕರ ಚಲನವಲನ. ಮೀನುಗಾರಿಕೆ ಸುತ್ತಲಿನ ಪ್ರದೇಶದಲ್ಲಿ ನಿಶೇಧಿಸಲಾಗುತ್ತದೆ. ಕಾರವಾರದ ಬಂದರು ವಿಸ್ತರಣೆಯಾದರೆ, ಬೈತ್ಕೋಲ್ ಮೀನುಗಾರಿಕಾ ಬಂದರಿಗೆ ಗಂಡಾಂತರ ಖಂಡಿತಾ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಕಾರವಾರದ 43 ಕಿ.ಮೀ ಉದ್ದದ ಕಡಲತೀರದಲ್ಲಿ ನಿರ್ಧಿಷ್ಟ ಭಾಗಗಳಷ್ಟೇ ಮೀನುಗಾರಿಕೆ ಮತ್ತು ಮೀನುಗಾರಿಕ ವಾಸ್ತವ್ಯಕ್ಕೆ ಯೋಗ್ಯವಾದವುಗಳು. ಇದರಲ್ಲಿ 33 ಕಿ.ಮೀ ತೀರಪ್ರದೇಶ ನೌಕಾನೆಲೆಗೆ ಕೊಡುವಾಗ ಮೀನುಗಾರರನ್ನು ಒಕ್ಕಲೆಬ್ಬಿಸಲಾಗಿದೆ. ಈಗಿರುವ ವಾಣಿಜ್ಯ ಬಂದರಿಗಾಗಿ 1.5 ಕಿ.ಮೀ ಕಳೆದುಕೊಳ್ಳಲಾಗಿದೆ. ಇನ್ನೊಂದು ಕಿ.ಮೀ ಕಬಳಿಸಲು ಹೊಸ ಯೋಜನೆ ಬಾಯ್ತೆರೆದು ನಿಂತಿದೆ. ಪ್ರವಾಸೋದ್ಯಮದ ನೆಪದಲ್ಲಿ ಮುನ್ಸಿಪಾಲಿಟಿ ಗಾರ್ಡನ್, ರಾಕ್-ಗಾರ್ಡನ್, ಸಾಲುಮರದ ತಿಮ್ಮಕ್ಕ ಗಾರ್ಡನ್, ದೇವಭಾಗ ಜಂಗಲ್ ರೆಸಾರ್ಟ್, ತಿಳಮಾತಿ ಬೀಚ್, ಹೋಟೆಲ್, ರೆಸಾರ್ಟ್ ಲಾಬಿಗೆ ಹಂಚಿ ಮೀನುಗಾರರ ಆಶ್ರಯ-ಕಸಬು ತಪ್ಪಿಸಲಾಗಿದೆ. ಉಳಿದಿರುವ 3.5 ಕಿ.ಮೀ ತೀರ ಪ್ರದೇಶವನ್ನು 14,500 ಮೀನುಗಾರರ ಕುಟುಂಬಗಳು ಹಂಚಿಕೊಳ್ಳಬೇಕಿದೆ. ಅಲಿಗದ್ದಾ ತೀರದಲ್ಲಿ ದೋಣಿಗಳಿಡಲಿಕ್ಕೆ ಜಾಗವಿಲ್ಲ. ಭಾರತೀಯ ಕೋಸ್ಟ್ ಗಾರ್ಡ್, ಇಂಡಿಯನ್ ಆಯಿಲ್ ಕಂಪನಿಗಳು ಕಾರವಾರ ತೀರಕ್ಕೆ ಬರುವ ಯೋಜನೆಗಳ ಸರದಿಯಲ್ಲಿವೆ. ಬೆಸ್ತರ ಪಾಲಿಗೆ ಆಪದ್ಬಾಂಧವನಂತಿದ್ದ ಕಾರವಾರ ತೀರ ಪ್ರದೇಶವನ್ನೂ ವಾಣಿಜ್ಯ ಬಂದರು ವಿಸ್ತರಣೆಗೆ ಬಲಿಗೊಟ್ಟರೆ ಸ್ಥಳೀಯ ಮೀನುಗಾರರ ಪಾಡೇನು?

ಇದೆಲ್ಲ ಶಾಸಕಿ ರೂಪಾಲಿಯಮ್ಮ, ಅನಂತ್ಮಾಣಿಯ ಮತಾಂಧ ತಲೆಬುರುಡೆಗೆ ಅರ್ಥವಾಗುತ್ತಲ್ಲ. ಅಗತ್ಯವಿರುವ ಯಾವ ಸರ್ಕಾರಿ ಏಜೆನ್ಸಿಗಳ ಅನುಮತಿಯೂ ಇಲ್ಲದೆ ಅವಸರದಲ್ಲಿ ಶುರುವಾಗಿರುವ ಬಂದರು ಯೋಜನೆಯಿಂದ ಕಾರವಾರಿಗರಿಗೆ ಯಾವ ಲಾಭವೂ ಇಲ್ಲ. ಬಿಜೆಪಿಯ ಅಭಿವೃದ್ಧಿ ಪಂಡಿತರು ಉದ್ಯೋಗಾವಕಾಶವಿದೆ ಎಂದು ಬೊಂಬಾಡಾ ಬಜಾಯಿಸುತ್ತಿದ್ದಾರೆ. ಎಷ್ಟು ಉದ್ಯೋಗ? ಯಾವ ಉದ್ಯೋಗ? ಇದಕ್ಕೆಲ್ಲ ಉತ್ತರವಿಲ್ಲ. ಅಬ್ಬಬ್ಬಾ ಎಂದರೆ ಅಮಾಯಕರನ್ನು ಶೋಷಿಸುವ ಕೂಲಿ ಕೆಲಸ ಸಿಗಬಹುದು. ಬೃಹತ್ ಬಂದರಿನಲ್ಲಿ ಮಂಗಳೂರು-ಮುಂಬೈ ಬಂದರಿನಲ್ಲಾಗುವಂಥ ಭೂಗತ ಬಾನ್ಗಡಿ ಆಗಬಹುದು. ಸಣ್ಣ ಬಂದರಿರುವಾಗಲೇ ಅಂದಿನ ಶಾಸಕ ವಸಂತ ಅಸ್ನೋಟಿಕರ್ ಮತ್ತು ಭೂಗತ ದೊರೆ ದಿಲೀಪ್ ನಾಯ್ಕ್ ಆಮದನಿಗಾಗಿ ಹೊಡೆದಾಡಿ ಹತ್ಯೆಯಾಗಿದ್ದು ನೆನಪಿದೆಯಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...