Homeಕರ್ನಾಟಕಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

ಸಂಸದ-ಶಾಸಕಿ ಎಡವಟ್ಟು ಬಂದರು ಯೋಜನೆ ಭಂಡಾಟಕ್ಕೆ ಕೆಂಡವಾದ ಕಾರವಾರ!!

- Advertisement -
- Advertisement -

ಕಾರವಾರದ ವಾಣಿಜ್ಯ ಬಂದರು ವಿಸ್ತರಿಸುವ “ಸಂಕಷ್ಟ ಮಾಲಾ” ಯೋಜನೆ ತಮ್ಮ ಬದುಕನ್ನೇ ಬರ್ಬಾದ್ ಮಾಡಿಬಿಡುತ್ತದೆಂಬ ಆತಂಕದಲ್ಲಿ ಸ್ಥಳೀಯರೆಲ್ಲಾ ಒಂದಾಗಿ ಬೀದಿಗಿಳಿದಿದ್ದಾರೆ! ವಿಶ್ವಕವಿ ರವೀಂದ್ರನಾಥ ಟ್ಯಾಗೋರ್ ಹೆಸರಿನ ಚಂದದ ಕಡಲ ತೀರ, ಬಡ ಬೆಸ್ತರ ತುತ್ತಿನಾಧಾರವಾಗಿದ್ದ ಕಸಬು ಮತ್ತು ಕಾರವಾರದ ನೆಮ್ಮದಿ-ಸ್ವಾಸ್ಥ್ಯ ಎಲ್ಲವನ್ನು ಒಂದೇ ಬಾರಿಗೆ ಆಪೋಷನ ಪಡೆಯುವ ಈ ಯೋಜನೆ ಬೇಡವೇ ಬೇಡವೆಂದು ಆಗ್ರಹಿಸಿ ಮೊನ್ನೆ (16-01-2020) ಹತ್ತಾರು ಸಾವಿರ ಮಂದಿ ಸೇರಿ ಕಾರವಾರ ಬಂದ್ ಮಾಡಿ ಆಳುವ ಖೂಳರಿಗೆ “ಸಣ್ಣ” ಎಚ್ಚರಿಕೆ ರವಾನಿಸಿದ್ದಾರೆ!! ಕರ್ಮಗೇಡಿ ಸಂಸದ ಅನಂತ್ಮಾಣಿ ಮತ್ತು ಶೋ ಮ್ಯಾಮ್ ಶಾಸಕಿ ರೂಪಾಲಿ ನಾಯ್ಕ್ ಒಣ ಪ್ರತಿಷ್ಠೆಯ ಸದ್ರಿ ಕಾಮಗಾರಿ ಕಾರವಾರ ತಾಲ್ಲೂಕಿನ ಅಷ್ಟೂ ಮೀನುಗಾರರನ್ನು ಜೀವನ್ಮರಣದ ಜಂಜಾಟವಾಗಿ ಕಾಡುತ್ತಿದೆ…

ಬರೋಬ್ಬರಿ 125 ಕೋಟಿ ರೂಪಾಯಿಗಳ ಈ ಪ್ರಾಜೆಕ್ಟ್ ಮೋದಿ ಮಾಮ ತನ್ನ ಪರಮಾಪ್ತ ಬಂದರು ದಂಧೆದಾರ ಆದಾನಿಗಾಗಿಯೇ ಕೈಗೆತ್ತಿಕೊಂಡಿರುವ “ಅಭಿವೃದ್ಧಿ” ಕಾಮಗಾರಿ. ಕೇಂದ್ರ-ರಾಜ್ಯ ಸರ್ಕಾರಗಳ ಸಹಭಾಗಿತ್ವದ ಕಾರವಾರ ಬಂದರು ವಿಸ್ತರಣೆಗೆ ಅಡಿಗಲ್ಲು ಹಾಕಿಸಿದ್ದು ಅಂದಿನ ಕಾಂಗ್ರೆಸ್ ಎಮ್ಮೆಲ್ಲೆ ಸತೀಶ್ ಸೈಲ್, ಪಕ್ಕಾ ಪಾಯ್ದೆಕೋರ ಉದ್ಯಮಿಯಾದ ಈ ಅದಿರು ಕಳ್ಳಸಾಗಾಣಿಕೆದಾರ ಅಂದು ಅದ್ಯಾವ ಕನಸು ಕಂಡಿದ್ದನೋ ಏನೋ? ಬಂದರು ಕಾಮಗಾರಿಯ ಅಲೆ ತಡೆಗೋಡೆಗೆ ಬೇಕಾದ ದೊಡ್ಡಗಾತ್ರದ ಶಿಲೆಕಲ್ಲು ಪೂರೈಕೆಯ ರಹಸ್ಯ ಬೇನಾಮಿ ಒಪ್ಪಂದ ಸೈಲ್ ಮಾಡಿಕೊಂಡಿದ್ದ. ಕಾಮಗಾರಿ ಗುತ್ತಿಗೆ ಪಡೆದಿರುವ ಮುಂಬೈನ ಡಿವಿಪಿ ಇನ್ಫ್ರಾ ಪ್ರಾಜೆಕ್ಟ್‍ಸ್ ಪ್ರೈ.ಲಿ. ಕೆಲಸ ಶುರುಹಚ್ಚಿಕೊಂಡ ಎರಡೇ ದಿನದಲ್ಲಿ ನೂರಾರು ಲೋಡ್ ಕಲ್ಲು ಬೀಚ್‍ಗೆ ಬಂದು ಬಿದ್ದಿದೆ. ಬಂದರು ಇಲಾಖೆ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆರಂಭಿಸಿದ ಕಾಮಗಾರಿ ಹೇಗಿತ್ತೆಂದರೆ, ಮೀನುಗಾರರು ಶಾಶ್ವತವಾಗಿ ಹೊಟ್ಟೆಪಾಡಿನ ಸಮುದ್ರ ಕೃಷಿ ಮಾಡಲಾಗದಂತಿತ್ತು!!

ಕಾರವಾರದಲ್ಲಿ ಮೀನುಗಾರ ಸಂಕುಲ ರಾಜಕೀಯವಾಗಿ ನಿರ್ಣಾಯಕ. ಎಡವಟ್ಟು ಕಾಮಗಾರಿ ಕಂಡದ್ದೇ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೆಸ್ತರೆಲ್ಲಾ ಅಹೋರಾತ್ರಿ ಪ್ರತಿಭಟನೆ ನಡೆಸತೊಡಗಿದರು. ಪೇಚಿಗೆ ಸಿಲುಕಿದ ಮಾಜಿ ಶಾಸಕ ಸೈಲ್ ತಕ್ಷಣ ಬಣ್ಣ ಬದಲಿಸಿಬಿಟ್ಟ. ಊರವರ ಹಿತೈಷಿ ಎಂಬಂತೆ ಪೋಸು ಕೊಡುತ್ತಾ ಬಂದರು ಕಾಮಗಾರಿ ವಿರುದ್ಧ ಹೇಳಿಕೆ ಒಗಾಯಿಸತೊಡಗಿದೆ. ಪ್ರತಿಭಟನಾಕಾರರ ಮಧ್ಯೆ ಸಾವಕಾಶವಾಗಿ ತೂರಿಕೊಂಡು ಬೀಚನ್ನು ಬೆಳಗ್ಗೆಯ ವಾಕಿಂಗ್, ಸಂಜೆಯ ವಿಹಾರ, ನೆಮ್ಮದಿಗಾಗಿ ಬಳಸುತ್ತಿದ್ದ ಜನರೂ ಮೀನುಗಾರರ ಜತೆ ಸೇರಿಕೊಂಡು ಪ್ರತಿಭಟನೆ ಬಿರುಸುಗೊಳಿಸಿದರು. ಬಂದರು ವಿರೋಧಿ ಹೋರಾಟಗಾರರ ಆಕ್ರೋಶ ತಮ್ಮ ನೋವಿಗೆ ಸ್ಪಂದಿಸದ ಸಂಸದ ಅನಂತ್ಮಾಣಿ ಮತ್ತು ಶಾಸಕಿ ರೂಪಾಲಿ ಮೇಲೆ ಕೇಂದ್ರೀಕೃತವಾಗಿತ್ತು. ಈ ಇಬ್ಬರು ನಾಲಾಯಕ್ ಜನಪ್ರತಿನಿಧಿಗಳ ಫೋಟೋಕ್ಕೆ ಪ್ರತಿಭಟನಾಕಾರರು ಚಪ್ಪಲಿ ಹಾರಹಾಕಿ, ಸಗಣಿ ಮೆತ್ತಿ ಸಹಜ ಸಿಟ್ಟು ವ್ಯಕ್ತಡಿಸಿದ್ದರು.

ಮೀನುಗಾರರ ಹುಡುಗ-ಹೊನ್ನಾವರದ ಪರೇಶ್ ಮೇಸ್ತನ ಸಂಶಯಾಸ್ಪದ ಸಾವನ್ನು ಸಾಬರಿಂದಾದ ಕೊಲೆ ಎಂದು ಬಿಂಬಿಸಿದ ಬಿಜೆಪಿಯ ಕೋಮು ರಾಜಕಾರಣದ ಫಲಾನುಭವಿಯಾದ ರೂಪಾಲಿಗೆ ಮೀನುಗಾರರ ತಿರುಗಿಬಿದ್ದದ್ದು ನಿದ್ದೆಗೆಡಿಸಿಬಿಟ್ಟಿತ್ತು. ಕಾರವಾರ ಬಂದ್ ದಿನ ರೂಪಾಲಿಗೆ ಕ್ಷೇತ್ರದಲ್ಲಿರುವ ಧೈರ್ಯವೇ ಇರಲಿಲ್ಲ. ಹಾಗಾಗಿ ಆಕೆ ರಾತ್ರೋರಾತ್ರಿ ಬೆಂಗಳೂರಿಗೆ ಓಡಿದ್ದಾರೆ. ಇತ್ತ ಜನರು ಪ್ರತಿಭಟನಾ ರ್ಯಾಲಿ ಹೊರಟಿದ್ದರೆ, ಅತ್ತ ಬೆಂಗಳೂರಲ್ಲಿ ರೂಪಾಲಿ ಮೇಡಮ್ಮು ಮೀನುಗಾರರ ಮಂತ್ರಿ ಶ್ರೀನಿವಾಸ ಪೂಜಾರಿ ಜತೆ ಕುಳಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದರು. ಬಂದರ ವಿಸ್ತರಣೆಯಿಂದ ಮೀನುಗಾರರಿಗೆ ತೊಂದರೆ ಆಗುವುದಿಲ್ಲ, ಬೀಚ್ ಬಂದರಿಗೆ ಬಳಕೆಯಾಗುವುದಿಲ್ಲ. ಮುಗ್ಧ ಮೀನುಗಾರರನ್ನು ಮಾಜಿ ಶಾಸಕರಾದ ಸೈಲ್ ಮತ್ತ ಅಸ್ನೋಟಿಕರ್ ದಾರಿ ತಪ್ಪಿಸುತ್ತಿದ್ದಾರೆಂದು ಪೂಜಾರಿ-ರೂಪಾಲಿ ಒಂದೇ ಸ್ವರದಲ್ಲಿ ಯುಗಳ ಆಲಾಪ ಮಾಡಿದ್ದಾರೆ. ಸುಳ್ಳು ಹೇಳಿ ತಮ್ಮ ಜನದ್ರೋಹ ಮುಚ್ಚಿಡಲು ಹವಣಿಸಿದ್ದಾರೆ.

ವಾಸ್ತವವೆಂದರೆ, ಬಂದರು ವಿರೋಧಿಗಳು ಸೈಲ್-ಅಸ್ನೋಟಿಕರ್‍ನನ್ನೂ ನಂಬುತ್ತಿಲ್ಲ. ಈ ಇಬ್ಬರು ಸಮಯಸಾಧಕರನ್ನು ಹೊರಗಿಟ್ಟೇ ಜನರು ಕಟ್ಟಿದ ಅಖಂಡ ಹೋರಾಟವಿದು. ಸೈಲ್-ಅಸ್ನೋಟಿಕರ್ ತಮ್ಮ ಅಸ್ತಿತ್ವಕ್ಕಾಗಿ ಹೋರಾಟದಲ್ಲಿ ಕಾಣಿಸಿಕೊಳ್ಳುತ್ತಿದ್ದಾರಷ್ಟೇ. ಆದರೆ ಜನರು ಮಾತ್ರ ಈ ಮಾಜಿದ್ವಯರಿಗೆ ಸಭೆಗಳಲ್ಲಿ ಭಾಷಣ ಮಾಡಲಿಕ್ಕೂ ಬಿಡುತ್ತಿಲ್ಲ. ಕಾರವಾರಕ್ಕೆ ಬಂದು ಜನರಿಗೆ ಮುಖ ತೋರಿಸುವ ನೈತಿಕ ಧೈರ್ಯವೂ ಇಲ್ಲದೆ ಚಡಪಡಿಸುತ್ತಿರುವ ಶಾಸಕಿಯಮ್ಮ ಒಂದೆಡೆಯಾದರೆ, ಮತ್ತೊಂದೆಡೆ ಹಲ್ಲೆಕೋರ ಮನಸ್ಥಿತಿಯ ಸಂಸದ ಅನಂತ್ಮಾಣಿ ಬಂದರು ವಿರೋಧಿಗಳನ್ನು ಆರಂಭಿದಲ್ಲೇ ಹೊಸಕಿ ಹಾಕಬೇಕು….. ನಂಗೆ ಮತ್ತೆ ಎಂಪಿ ಆಗೋ ಆಸೆಯಿಲ್ಲ….. ಬಂದರು ಕಟ್ಟಿಯೇ ತೀರುತ್ತೇನೆ….” ಎಂದೆಲ್ಲಾ ಅಭಿವೃದ್ಧಿ ಆಟಾಟೋಪ ಪ್ರದರ್ಶಿಸುತ್ತಿದ್ದಾನೆ.

ಮೀನುಗಾರರು ವಾರದಿಂದ ಮೀನುಗಾರಿಕೆ ಬಂದ್ ಮಾಡಿ ಧರಣಿ ಸತ್ಯಾಗ್ರಹ ಹೂಡುತ್ತಲೇ ಇದ್ದಾರೆ. ಶಾಸಕಿ ರೂಪಾಲಿ, ಸಂಸದ ಮಾಣಿಯ ಮಳ್ಳು ಮಾತುಗಾರಿಕೆಗೆ ನಗುತ್ತಿದ್ದಾರೆ. ಹೋರಾಟಗಾರರ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿ ಸಮಸ್ಯೆ ಪರಿಹರಿಸಬೇಕಾಗಿದ್ದ ಮಂತ್ರಿ, ಸಂಸದ, ಶಾಸಕಿ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಬಂದರು ಅಧಿಕಾರಿಗಳು ಜನರ ಮುಂದೆ ಹೇಳೋದೇ ಒಂದು ಮಾಡೋದು ಮಾತ್ರ ಮತ್ತೊಂದು. ಬಂದರು ಅಧಿಕಾರಿಗಳು ತಾತ್ಕಾಲಿಕ ಮೀನು ಮಾರುಕಟ್ಟೆ ಹಿಂದಿನಿಂದ ಕಾಮಗಾರಿ ಮಾಡಲಾಗುತ್ತದೆ ಎಂದಿದ್ದರು. ಆದರೆ ಕೆಲಸ ಆಗುತ್ತಿರುವುದು ಬೀಚ್‍ನ ದಕ್ಷಿಣಕ್ಕಿರುವ ಪ್ಯಾರಾಗೋಲಾದ ಕಡೆಯಿಂದ. ಉತ್ತರ ಬದಿಯನ್ನು ಹೊಟೇಲು, ಗಾರ್ಡನ್ ಎಂದೆಲ್ಲಾ ಹಂಚಲಾಗಿದೆ. ಹೀಗಾಗಿ ಉಳಿದಿರುವುದು ಬರೀ 1 ಕಿ.ಮೀ ಬೀಚಷ್ಟೇ. ಇದರಲ್ಲಿ ಅರ್ಧ ಅಡೆಗೋಡೆಗೆ ಬಳಿಸಿದರೆ ಬಡ ಬೆಸ್ತರಿಗೆ ಮೀನುಗಾರಿಕೆಗೆ ಅವಕಾಶವಿಲ್ಲ; ವಾಕಿಂಗ್, ವಿಹಾರ ಸಾಧ್ಯವೂ ಇಲ್ಲ.

ಬಂದರು ಕಾಮಕಾರಿ ಏಕಪಕ್ಷೀಯವಾಗಿ ದಾದಾಗಿರಿಯಿಂದ ಆಡಳಿತಗಾರರು ನಡೆಸಿದ್ದಾರೆ. ಬಂದರಿನಿಂದಾಗುವ ಅರ್ಥಿಕ, ಸಾಮಾಜಿಕ ಪರಿಸರ ಪರಿಣಾಮಗಳ ಅಧ್ಯಯನವೇ ನಡೆಸಲಾಗಿಲ್ಲ. ಸಾರ್ವಜನಿಕರಿಗೆ ಉದ್ದೇಶಿತ ಬಂದರಿನ ಮಾಹಿತಿ ನೀಡಲಾಗುತ್ತಿಲ್ಲ. ಮಹತ್ವದ ಸಂಗತಿಯೆಂದರೆ, ಈ ಯೋಜನೆಗೆ ಸಿಆರ್‍ಜೆಡ್ ಸಮಿತಿಯ ಅನುಮತಿಯೇ ಸಿಕ್ಕಿಲ್ಲ. ಮರುಪರಿಶೀಲನೆಗೆ ಸಮಿತಿ ಬಂದರು ಇಲಾಖೆಗೆ ಸೂಚಿಸಿತ್ತು. ಬಂದರು ವಿಸ್ತರಣೆ ಎಂದರೆ, ದೇಶ-ವಿದೇಶದ ಬೃಹತ್ ಸರಕು ಸಾಗಾಣಿಕಾ ಹಡಗುಗಳು ಬಂದು-ಹೋಗುವ ತಾಣ. ಇಂಥ ವಾಣಿಜ್ಯ ಬಂದರಿನ ಮಗ್ಗುಲಲ್ಲಿ ಮೀನುಗಾರಿಕರ ಜೆಟ್ಟಿ ಇರಲು ಸಾಧ್ಯವೇ ಇಲ್ಲ. ವಾಣಿಜ್ಯ ಬಂದರಿನ ಸುತ್ತ ಮಜಬೂತಾದ ಆವರಣ ಗೋಡೆ, ಅದರ ಮೇಲೆ ತಂತಿ ಮುಳ್ಳಿನ ಬೇಲಿ ಹಾಕಲಾಗುತ್ತದೆ. ಸಾರ್ವಜನಿಕರ ಚಲನವಲನ. ಮೀನುಗಾರಿಕೆ ಸುತ್ತಲಿನ ಪ್ರದೇಶದಲ್ಲಿ ನಿಶೇಧಿಸಲಾಗುತ್ತದೆ. ಕಾರವಾರದ ಬಂದರು ವಿಸ್ತರಣೆಯಾದರೆ, ಬೈತ್ಕೋಲ್ ಮೀನುಗಾರಿಕಾ ಬಂದರಿಗೆ ಗಂಡಾಂತರ ಖಂಡಿತಾ.

ಪಶ್ಚಿಮ ಘಟ್ಟಗಳ ತಪ್ಪಲಲ್ಲಿರುವ ಕಾರವಾರದ 43 ಕಿ.ಮೀ ಉದ್ದದ ಕಡಲತೀರದಲ್ಲಿ ನಿರ್ಧಿಷ್ಟ ಭಾಗಗಳಷ್ಟೇ ಮೀನುಗಾರಿಕೆ ಮತ್ತು ಮೀನುಗಾರಿಕ ವಾಸ್ತವ್ಯಕ್ಕೆ ಯೋಗ್ಯವಾದವುಗಳು. ಇದರಲ್ಲಿ 33 ಕಿ.ಮೀ ತೀರಪ್ರದೇಶ ನೌಕಾನೆಲೆಗೆ ಕೊಡುವಾಗ ಮೀನುಗಾರರನ್ನು ಒಕ್ಕಲೆಬ್ಬಿಸಲಾಗಿದೆ. ಈಗಿರುವ ವಾಣಿಜ್ಯ ಬಂದರಿಗಾಗಿ 1.5 ಕಿ.ಮೀ ಕಳೆದುಕೊಳ್ಳಲಾಗಿದೆ. ಇನ್ನೊಂದು ಕಿ.ಮೀ ಕಬಳಿಸಲು ಹೊಸ ಯೋಜನೆ ಬಾಯ್ತೆರೆದು ನಿಂತಿದೆ. ಪ್ರವಾಸೋದ್ಯಮದ ನೆಪದಲ್ಲಿ ಮುನ್ಸಿಪಾಲಿಟಿ ಗಾರ್ಡನ್, ರಾಕ್-ಗಾರ್ಡನ್, ಸಾಲುಮರದ ತಿಮ್ಮಕ್ಕ ಗಾರ್ಡನ್, ದೇವಭಾಗ ಜಂಗಲ್ ರೆಸಾರ್ಟ್, ತಿಳಮಾತಿ ಬೀಚ್, ಹೋಟೆಲ್, ರೆಸಾರ್ಟ್ ಲಾಬಿಗೆ ಹಂಚಿ ಮೀನುಗಾರರ ಆಶ್ರಯ-ಕಸಬು ತಪ್ಪಿಸಲಾಗಿದೆ. ಉಳಿದಿರುವ 3.5 ಕಿ.ಮೀ ತೀರ ಪ್ರದೇಶವನ್ನು 14,500 ಮೀನುಗಾರರ ಕುಟುಂಬಗಳು ಹಂಚಿಕೊಳ್ಳಬೇಕಿದೆ. ಅಲಿಗದ್ದಾ ತೀರದಲ್ಲಿ ದೋಣಿಗಳಿಡಲಿಕ್ಕೆ ಜಾಗವಿಲ್ಲ. ಭಾರತೀಯ ಕೋಸ್ಟ್ ಗಾರ್ಡ್, ಇಂಡಿಯನ್ ಆಯಿಲ್ ಕಂಪನಿಗಳು ಕಾರವಾರ ತೀರಕ್ಕೆ ಬರುವ ಯೋಜನೆಗಳ ಸರದಿಯಲ್ಲಿವೆ. ಬೆಸ್ತರ ಪಾಲಿಗೆ ಆಪದ್ಬಾಂಧವನಂತಿದ್ದ ಕಾರವಾರ ತೀರ ಪ್ರದೇಶವನ್ನೂ ವಾಣಿಜ್ಯ ಬಂದರು ವಿಸ್ತರಣೆಗೆ ಬಲಿಗೊಟ್ಟರೆ ಸ್ಥಳೀಯ ಮೀನುಗಾರರ ಪಾಡೇನು?

ಇದೆಲ್ಲ ಶಾಸಕಿ ರೂಪಾಲಿಯಮ್ಮ, ಅನಂತ್ಮಾಣಿಯ ಮತಾಂಧ ತಲೆಬುರುಡೆಗೆ ಅರ್ಥವಾಗುತ್ತಲ್ಲ. ಅಗತ್ಯವಿರುವ ಯಾವ ಸರ್ಕಾರಿ ಏಜೆನ್ಸಿಗಳ ಅನುಮತಿಯೂ ಇಲ್ಲದೆ ಅವಸರದಲ್ಲಿ ಶುರುವಾಗಿರುವ ಬಂದರು ಯೋಜನೆಯಿಂದ ಕಾರವಾರಿಗರಿಗೆ ಯಾವ ಲಾಭವೂ ಇಲ್ಲ. ಬಿಜೆಪಿಯ ಅಭಿವೃದ್ಧಿ ಪಂಡಿತರು ಉದ್ಯೋಗಾವಕಾಶವಿದೆ ಎಂದು ಬೊಂಬಾಡಾ ಬಜಾಯಿಸುತ್ತಿದ್ದಾರೆ. ಎಷ್ಟು ಉದ್ಯೋಗ? ಯಾವ ಉದ್ಯೋಗ? ಇದಕ್ಕೆಲ್ಲ ಉತ್ತರವಿಲ್ಲ. ಅಬ್ಬಬ್ಬಾ ಎಂದರೆ ಅಮಾಯಕರನ್ನು ಶೋಷಿಸುವ ಕೂಲಿ ಕೆಲಸ ಸಿಗಬಹುದು. ಬೃಹತ್ ಬಂದರಿನಲ್ಲಿ ಮಂಗಳೂರು-ಮುಂಬೈ ಬಂದರಿನಲ್ಲಾಗುವಂಥ ಭೂಗತ ಬಾನ್ಗಡಿ ಆಗಬಹುದು. ಸಣ್ಣ ಬಂದರಿರುವಾಗಲೇ ಅಂದಿನ ಶಾಸಕ ವಸಂತ ಅಸ್ನೋಟಿಕರ್ ಮತ್ತು ಭೂಗತ ದೊರೆ ದಿಲೀಪ್ ನಾಯ್ಕ್ ಆಮದನಿಗಾಗಿ ಹೊಡೆದಾಡಿ ಹತ್ಯೆಯಾಗಿದ್ದು ನೆನಪಿದೆಯಾ?!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...

ಪ್ರಧಾನಿ ಮೋದಿ ವಿರುದ್ಧ ನಿಂದನೆ: ನನಗೆ ಕೇವಲ 15 ವರ್ಷ ‘ಅನ್ಯರ ಪ್ರಭಾವಕ್ಕೆ ಒಳಗಾಗಿದ್ದೆ’ ಎಂದು ಕ್ಷಮೆ ಕೇಳಿದ ವಿದ್ಯಾರ್ಥಿನಿ ವಿಡಿಯೋ ವೈರಲ್

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿ ಭಾರಿ ಆಕ್ರೋಶಕ್ಕೆ ಗುರಿಯಾಗಿದ್ದ ಸಿಜೆಪಿ (CJP) ಪ್ರತಿಭಟನಾಕಾರ ಯುವತಿಯೊಬ್ಬಳು ಸೋಶಿಯಲ್ ಮೀಡಿಯಾದಲ್ಲಿ ಕ್ಷಮೆಯಾಚಿಸಿದ್ದಾಳೆ ಎನ್ನಲಾದ ವೀಡಿಯೊವೊಂದು ಹರಿದಾಡುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್...

ಸ್ಪೇನ್‌ಗೆ ನುಗ್ಗಿದ ಸಾವಿರಾರು ಮೊರಾಕನ್ನರು : ಬೃಹತ್ ವಲಸೆಯ ಹಿಂದೆ ಇಸ್ರೇಲ್ ಕುತಂತ್ರ?

ಮೊರಾಕೊದಿಂದ ಸ್ಪೇನ್‌ನ ಸಿಯುಟಾ ನಗರಕ್ಕೆ ಸಾವಿರಾರು ವಲಸಿಗರು ನುಗ್ಗಿದ ಬಿಕ್ಕಟ್ಟಿನ ಹಿಂದೆ ಇಸ್ರೇಲ್ ಕೈವಾಡವಿದೆ ಎಂಬ ಆರೋಪಗಳು ಕೇಳಿ ಬಂದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಸ್ರೇಲ್‌ನ ಕುತಂತ್ರ ಬುದ್ದಿಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ. ಇದೇ...

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...