Homeಮುಖಪುಟನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

- Advertisement -
- Advertisement -

ಜೀವನ ಕಲೆಗಳು ಅಂಕಣ: 8  ಅನುಭೂತಿ (Empathy) -2

ಅನುಭೂತಿ ಎನ್ನುವುದು ಕೇವಲದುಃಖ ಅಥವಾ ಸಂತೋಷದ ಕ್ಷಣಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಷ್ಟೇ ಅಲ್ಲ, ಇದು ದೈನಂದಿನ ಕಲೆ. ಇದು ಮನೆ, ಶಾಲೆ/ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಯಾವಾಗಲೂ ಕಾಣುವಂತಾಗಬೇಕು. ನಿಮ್ಮ ಕೆಲಸ/ಕಲಿಕೆಯ ಸ್ಥಳದಲ್ಲಿ ಅನುಭೂತಿ ಕಾಣುತ್ತಿದೆಯೇ? ಅನುಭೂತಿಯ ವಾತಾವರಣದ ಕೊರತೆಯಿಂದಾಗಿ ಇರುವ ಜನರು ದೂರವಾಗುತ್ತಿದ್ದಾರೆಯೇ? ಶಾಲೆ/ಕಾಲೇಜು/ಕಚೇರಿಯಲ್ಲಿ ಒಬ್ಬರನ್ನೊಬ್ಬರು ಅವರ ಮೊದಲನೇ ಹೆಸರಿನಿಂದ ಸಂಬೋಧಿಸುತ್ತಾರೋ, ಅಡ್ಡನಾಮದಿಂದಲೋ, ಅವರ ಹುದ್ದೆಯಿಂದ ಕರೆಯುತ್ತಾರೋ, ಅವರಿಗೆ ಸ್ವಭಾವಕ್ಕನುಗುಣವಾಗಿ ಇಟ್ಟಿರುವ ಅನ್ವರ್ಥನಾಮದಿಂದಲೋ, ಯೋಚಿಸಿ ನೋಡಿ.

ಶಾಲೆ/ಕಾಲೇಜು/ಕಚೇರಿಗಳಲ್ಲಿ ಅನುಭೂತಿಯನ್ನು ವ್ಯವಸ್ಥಾಪಕ ಮಂಡಳಿಯ ಆದೇಶದಿಂದಾಗಲೀ, ಸರಕಾರದ ಒಂದು ಸುತ್ತೋಲೆಯಿಂದಾಗಲೀ ಸೃಷ್ಟಿಸಲಾಗುವುದಿಲ್ಲ. ಅನುಭೂತಿ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಬರುವುದಿಲ್ಲ. ಇದನ್ನು ಅಲ್ಲಿಯ ಸಹಪಾಠಿ/ಸಹೋದ್ಯೋಗಿಗಳೇ ಸೇರಿ ನಿರ್ಮಿಸಬೇಕು. ಪ್ರತಿಯೋರ್ವರೂ ವೈಯುಕ್ತಿಕ ಮಟ್ಟದಲ್ಲಿ ಅನುಭೂತಿಯನ್ನು ತೋರಿಸಿದ್ದೇ ಆದರೆ ಕೆಲಸದ ವಾತಾವರಣ ಮಾರನೆಯ ದಿನದಿಂದಲೇ ಬದಲಾಗಲು ಪ್ರಾರಂಭವಾಗುತ್ತದೆ.

“ಬಿಸಿನೆಸ್ ಸಾಲ್ವರ್ಸ್” 2017ರ ವರದಿಯ ಪ್ರಕಾರ ಅನುಭೂತಿ ಕೆಲಸಗಾರರ ಉತ್ಪಾದನಾ ಸಾಮರ್ಥ್ಯ, ಕರ್ತವ್ಯ ಹಾಗೂ ಕಂಪನಿಯ ಪರವಾಗಿ ಅವರ ನಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದೆ. ವರದಿಯ ಪ್ರಕಾರ:

ಅನುಭೂತಿಯ ವಾತಾವರಣ ಇರುವಂತಹ ಕಚೇರಿಯಲ್ಲಿ 77% ಕೆಲಸಗಾರರು ಹಣದ ಆಮಿಶ (ಓವರ್ ಟೈಂ) ಇಲ್ಲದೆ ಹೆಚ್ಚಿನ ಸಮಯ ಕೆಲಸಕ್ಕೆ ನೀಡಲು ಸಿದ್ಧರಾಗಿದ್ದರು. 60% ಕೆಲಸಗಾರರು ಕಂಪನಿಯ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದಲ್ಲಿ ಸಂಬಳ ಕಡಿತಕ್ಕೂ ಸಿದ್ಧರಾಗಿದ್ದರು. ಸಂದರ್ಶಿಸಿದ 92% ಮಾನವ ಸಂಪನ್ಮೂಲ ಅಧಿಕಾರಿಗಳು ಅನುಭೂತಿಯ ವಾತಾವರಣ ತಮ್ಮ ಕಂಪನಿಯ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ದೊಡ್ಡ ಕಾರಣ ಎಂದರು. 1980ರಿಂದ 1995ರವರೆಗೆ ಹುಟ್ಟಿದ 80% ಯುವಕರು ತಮ್ಮ ಕಚೇರಿಯಲ್ಲಿ ಅನುಭೂತಿಯ ವಾತಾವರಣವಿಲ್ಲದಿದ್ದರೆ ಕೆಲಸ ಬಿಡುವುದಾಗಿ ಹೇಳಿದರು. ನಿವೃತ್ತಿಯ ಅಂಚಿನಲ್ಲಿರುವ 66% ಜನರೂ ಕೂಡ ಇದೇ ಪ್ರತಿಕ್ರಿಯೆ ನೀಡಿದರು.

ಕಚೇರಿಯಲ್ಲಿ ಅನುಭೂತಿ ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅನುಭೂತಿಯ ವಾತಾವರಣವನ್ನು ಅಳೆಯಲು ಸುಲಭವಾದ ಮಾಪಕಯಂತ್ರಗಳಿಲ್ಲ. ಸರ್ವೇಕ್ಷಣೆ ಅಥವಾ ಮಾನವ ಸಂಪನ್ಮೂಲ ವಿಭಾಗದ ಕಾರ್ಯಾಗಾರ/ಪ್ರಶ್ನೆಪತ್ರಿಕೆಗಳಿಂದ ಸ್ವಲ್ಪ ಮಾಹಿತಿ ಸಿಗಬಹುದು ಆದರೆ ಹಲವು ಮುಖ್ಯ ಅಂಶಗಳು ಅಳೆಯಲು ಕೈಗೆ ಸಿಗುವುದಿಲ್ಲ.

ಕೆಳಗಿನ ಕಲೆಗಳು ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ನಡುವಣ ಸಂಬಂಧ ಹೆಚ್ಚಿಸಲು ಸಹಾಯಕವಾಗಬಹುದು.

1. ಕೇಳಿಸಿಕೊಳ್ಳುವ ಕಲೆಯನ್ನು ಬಲಪಡಿಸಿಕೊಳ್ಳಿ: ನಿಮ್ಮ ಸಹೋದ್ಯೋಗಿ/ಸಹಪಾಠಿ ಏನಾದರೂ ಹೇಳಲು ಬಯಸಿದಲ್ಲಿ ನೀವು ನಿಜವಾಗಿಯೂ ಅವರು ಹೇಳಿದ್ದನ್ನು ಕೇವಲ ಆಲಿಸುತ್ತಿದ್ದೀರೋ ಅಥವಾ ಗಮನವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದೀರೋ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇದು ಕೇವಲ ಆಡುವ ಮಾತಿಗೆ/ದೂರಧ್ವನಿ ಸಂಭಾಷಣೆಗೆ ಸೀಮಿತವಾಗಿಲ್ಲ, ಕಚೇರಿಯ ಎಸ್.ಎಂ.ಎಸ್./ಎ-ಮೇಲ್, ವಾಟ್ಸಾಪ್ ವೈಯುಕ್ತಿಕ/ಗುಂಪು ಸಂದೇಶಗಳೂ ಇದರಲ್ಲಿ ಸೇರಿವೆ.

2. ಸರಿಯಾದ ಪ್ರಶ್ನೆ ಕೇಳುವ ಕಲೆ ವೃದ್ಧಿಸಿಕೊಳ್ಳಿ: ಇದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಯ ನಿಜವಾದ ಸಮಸ್ಯೆ ಏನು ಎಂಬುದು ತಿಳಿಯುತ್ತದೆ. ನೀಡಿದ ಉತ್ತರ ಅಥವಾ ಅವರು ಕೇಳಿದ ಪ್ರಶ್ನೆ ನಿಮಗೆ ಅರ್ಥವಾಗದಿದ್ದಲ್ಲಿ ಅದನ್ನು ಬಿಡಿಸಿ ಹೇಳುವಂತೆ ತಿಳಿಸಿ.

3. ಅವರ ಸ್ಥಳದಲ್ಲಿ ನೀವಿದ್ದರೆ ನಿಮಗೆ ಏನನಿಸುತ್ತಿತ್ತು ಯೋಚಿಸಿ: ಇನ್ನೊಬ್ಬರ ಕಷ್ಟ ಅರಿತುಕೊಳ್ಳುವ ಪ್ರಯತ್ನ ನೀವು ಮಾಡಿತ್ತಿದ್ದೀರೆಂಬ ಸಂದೇಶ ಅವರಿಗೆ ಕೂಡಲೇ ರವಾನಿಸಿ. ಅವರನ್ನು ನೇರ ಮಾತುಕತೆಗೆ ಕರೆಯಿರಿ, ಸಮಯ ಸ್ಥಳ ನಿರ್ಧರಿಸಿ. ಮುಖಾಮುಖಿಯಾಗುವುದರಿಂದ ಹಲವು ಪ್ರಶ್ನೆಗಳು ತಾವಾಗಿಯೇ ಉತ್ತರಿಸಲ್ಪಡುತ್ತವೆ.

4. ಸಹೋದ್ಯೋಗಿ/ಸಹಪಾಠಿಗಳ ಬಗ್ಗೆ ಒಮ್ಮೆಲೇ ನಿಮ್ಮ ಉಹಾಪೋಹದ ನಿರ್ಧಾರಕ್ಕೆ ಬರಬೇಡಿ: ಹೇಳಿದ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ತಿಳಿದಾಗ ಅವರಿಗೆ ಇನ್ಯಾವ ತೊಂದರೆ ಇದೆ ತಿಳಿದುಕೊಳ್ಳಲು ಪ್ರಯತ್ನಿಸಿ.

5. ಸಮಸ್ಯೆಗಳನ್ನು ಬಗೆಹರಿಸುವಾಗ ಆದ್ಯತೆಯ ಮೇಲೆ ಗಮನ ಕೊಡಿ: ಎಲ್ಲಾ ಸಮಸ್ಯೆಗಳಿಗೂ ಒಂದೇ ಸಮನಾದ ತುರ್ತು ಇರುವುದಿಲ್ಲ. ಮೊದಲು ಬಂದ ಸಮಸ್ಯೆಗೆ ಮೊದಲು ಪರಿಹಾರ ಎನ್ನುವುದೂ ಸರಿಯಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ಅದರ ಪರಿಹಾರಕ್ಕೆ ಗಮನ/ಸಮಯ ನೀಡಿ.

6. ನಿಮ್ಮ ಸಹೋದ್ಯೋಗಿ/ಸಹಪಾಠಿಗಳನ್ನು ದೂರವಿಡಬೇಡಿ: ಆದರೆ ತೀರಾ ಸನಿಹತೆಯ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ವೈಯುಕ್ತಿಕ, ಕುಟುಂಬದ ಮಾಹಿತಿ ಇರಲಿ ಆದರೆ ನೀವು ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದೀರಿಎಂಬ ಭಾವನೆ ಅವರಿಗೆ ಬರದಿರಲಿ. ಅವರ ಇ-ಮೇಲ್ ಸಂದೇಶಕ್ಕೆ ಉತ್ತರಿಸುವಾಗ ಅವರ ಹೆಸರನ್ನು ಬಳಸಿ, ಅವರ ವಿಭಾಗದ ಹೆಸರಿಗೆ ಉತ್ತರಿಸಬೇಡಿ. ಕಚೇರಿಯಲ್ಲೂ ವೈಯುಕ್ತಿಕ ಮತ್ತು ಸಾಂಸ್ಥಿಕ ವಿಷಯಗಳನ್ನು ಬೆರೆಸಬೇಡಿ.

7. ವ್ಯಕ್ತಿಗಳಿಗೆ ಭಾವನೆಗಳಿರುತ್ತವೆ: ಕಂಪನಿಯ ಟಾರ್ಗೆಟ್, ಡೆಡ್ಲೈನ್, ಲಾಭ-ನಷ್ಟದ ಒತ್ತಡದಲ್ಲಿ ಮುಖ್ಯವಾಗಿ ತಂಡದ ಜನರಿಗೆ ಭಾವನೆಗಳಿರುತ್ತವೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ಮೇಲಿನ ಕಟು ಟಿಪ್ಪಣಿಗಳನ್ನು ಮೃದುವಾಗಿರಿಸಿ.

8. ಕೆಲವೊಮ್ಮೆ ತಲೆಯ ಬದಲಿಗೆ ಹೃದಯ ಉಪಯೋಗಿಸಿ: ಇಂಗ್ಲಿಷಿನಲ್ಲಿ ಇದನ್ನು “ಥಿಂಕ್ ವಿತ್ ಯುವರ್ ಹಾರ್ಟ್” ಎನ್ನುತ್ತಾರೆ.

9. ನಿಮ್ಮ ಸ್ವಂತ ಪೂರ್ವಾಗ್ರಹ: ನಿಮ್ಮ ಸಾಂಸ್ಕೃತಿಕ ಪಕ್ಷಪಾತವೇನಾದರೂ ಅನುಭೂತಿಗೆ ಅಡ್ಡ ಬರುತ್ತಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ಸಹೋದ್ಯೋಗಿಗಳಿಂದ ಪ್ರತ್ಯಾದಾನ: ಫೀಡ್-ಬ್ಯಾಕ್ ಸ್ವೀಕರಿಸಿ. ಕೆಲವು ನೇರವಾಗಿ ಬರದಿರಬಹುದು, ಅಪ್ರತ್ಯಕ್ಷವಾಗಿ ಬಂದ ಟೀಕೆ ಟಿಪ್ಪಣಿಗಳನ್ನೂ ಗುರುತುಹಾಕಿಕೊಳ್ಳಿ. ಅದೇ ರೀತಿ ನೀವು ನೀಡಿದ ಫೀಡ್-ಬ್ಯಾಕ್/ಟೀಕೆ/ಟಿಪ್ಪಣಿ ಹೇಗೆ ಕೆಲಸ ಮಾಡುತ್ತಿದೆ ಅದನ್ನೂ ತಿಳಿದುಕೊಳ್ಳಿ

11. ಸ್ಥಳ ಬದಲಾಯಿಸಿ: ಸಹೋದ್ಯೋಗಿ/ಸಹಪಾಠಿಗಳೊಂದಿಗೆ ಕಚೇರಿಯಿಂದ ಹೊರಗೆ ಪ್ರವಾಸಕ್ಕೆ ಹೋಗಿ. ಅವರನ್ನು ಅರಿತುಕೊಳ್ಳಲು ಸಮಯ ಮತ್ತು ಅವಕಾಶ ದೊರೆಯುತ್ತದೆ.

12. ಅನುಭೂತಿ ಒಂದು ರಾತ್ರಿಯಲ್ಲಿ ಆಗುವ ಬದಲಾವಣೆ ಅಲ್ಲ: ಇದು ನೂರಡಿಯ ವೇಗದ ಓಟವಲ್ಲ, 26 ಮೈಲಿಯ ಮ್ಯಾರಥಾನ್. ಒಬ್ಬ ವ್ಯಕ್ತಿ ಅಥವಾ ಒಂದು ಪರಿಸ್ಥಿತಿಯಲ್ಲಿ ಆದ ಕಹಿ ನೆನಪಿನಿಂದ ನಿಮ್ಮ ಮುಂದಿನ ಕೆಲಸ ಕೆಡದಂತೆ ಜಾಗೃತೆ ವಹಿಸಿ.

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜೋಸೆಫ್ ವಿಜಯ್‌ ಅವರ ಐತಿಹಾಸಿಕ ಗೆಲುವು: ರಾಜ್ಯಪಾಲರ ಸೋಲು ಮತ್ತು ದ್ರಾವಿಡ ನೆಲದ ರಾಜಕೀಯ: ಒಂದು ವಿಶ್ಲೇಷಣೆ

ತಮಿಳಗ ವೆಟ್ರಿ ಕಝಗಂ (TVK) ಪಕ್ಷವು ತಮಿಳುನಾಡು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿ ಸರ್ಕಾರ ರಚಿಸುವ ಜವಾಬ್ದಾರಿ ತೆಗೆದುಕೊಂಡಿದೆ. ಮೇ 13, 2026ರ ಬುಧವಾರ ನಡೆದ ನಾಟಕೀಯ ವಿಶ್ವಾಸ ಮತಯಾಚನೆಯಲ್ಲಿ 144 ಮತಗಳ ಬೆಂಬಲ...

FACT CHECK: ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದಂತೆ ಹಿಂದಿ ಹೇರಿಕೆ ವಿರುದ್ದ ಪ್ರತಿಭಟನೆ ಎಂದು ಹಳೆಯ ವಿಡಿಯೋ ಹಂಚಿಕೆ

ಹಿಂದಿ ಹೇರಿಕೆ ವಿರುದ್ದದ ಹೋರಾಟವು ತಮಿಳುನಾಡಿಗೆ ಹೊಸದೇನು ಅಲ್ಲ. ಆದರೆ ಚೆನ್ನೈನ ಜವಾಹರಲಾಲ್ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಅಧಿಕಾರ ವಹಿಸಿಕೊಂಡ ನಂತರ ...

ನೀಟ್: ಪ್ರಶ್ನೆಪತ್ರಿಕೆ ಸೋರಿಕೆಯ ಆತಂಕ ಮತ್ತು ಪ್ರಾದೇಶಿಕ ಹಿತಾಸಕ್ತಿಗಳ ಬಲಿ

ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವ ಆರೋಪದ ಮೇಲೆ ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ...

ಕೇಂದ್ರ ಸಚಿವ ಬಂಡಿ ಸಂಜಯ್ ಮಗನ ವಿರುದ್ಧ ಪೋಕ್ಸೋ ಕೇಸ್ : ಕ್ರಮ ಕೈಗೊಳ್ಳದೆ ಕಥೆ ಹೇಳುತ್ತಿರುವ ಪೊಲೀಸರು, ಅಂತರ ಕಾಯ್ದುಕೊಂಡ ಬಿಜೆಪಿ

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ, ತೆಲಂಗಾಣದ ಪ್ರಮುಖ ಬಿಜೆಪಿ ನಾಯಕ ಬಂಡಿ ಸಂಜಯ್ ಕುಮಾರ್ ಅವರ ಮಗ ಬಂಡಿ ಸಾಯಿ ಭಗೀರತ್ ವಿರುದ್ಧ 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ಪೋಕ್ಸೋ...

ಶಾಲೆ, ಪೂಜಾ ಸ್ಥಳ, ಬಸ್ ನಿಲ್ದಾಣಗಳ ಬಳಿ ಇರುವ 717 ಮದ್ಯದಂಗಡಿಗಳನ್ನು ಮುಚ್ಚಲು ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಆದೇಶ 

ಅಧಿಕಾರ ವಹಿಸಿಕೊಂಡ ನಂತರ ತಮ್ಮ ಮೊದಲ ಪ್ರಮುಖ ಆಡಳಿತಾತ್ಮಕ ನಿರ್ದೇಶನದಲ್ಲಿ, ಸಿ. ಜೋಸೆಫ್ ವಿಜಯ್ ಸೋಮವಾರ, ತಮಿಳುನಾಡು ಸರ್ಕಾರವು ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ಒಳಗೆ...

FACT CHECK: ಭಾರತೀಯರು ಚಿನ್ನ ಖರೀದಿಸಬೇಡಿ ಎಂದು 1967ರಲ್ಲೇ ಇಂದಿರಾ ಗಾಂಧಿ ಹೇಳಿದ್ರಾ?

ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತೆಲಂಗಾಣದ ಸಿಕಂದರಾಬಾದ್ ರ‍್ಯಾಲಿಯಲ್ಲಿ ಮಾತನಾಡುತ್ತಾ, ಆರ್ಥಿಕ ಬಿಕ್ಕಟ್ಟು ತಪ್ಪಿಸಲು "ಒಂದು ವರ್ಷ ಚಿನ್ನ ಖರೀದಿಸಬೇಡಿ" ಎಂದು ಜನರಲ್ಲಿ ಮನವಿ ಮಾಡಿದ್ದರು. ಇದರ ಬೆನ್ನಲ್ಲೇ, 1967ರಲ್ಲಿ ಅಂದಿನ ಪ್ರಧಾನಿ...

ಪಶ್ಚಿಮ ಬಂಗಾಳ| ಧ್ವನಿವರ್ಧಕಗಳ ನಿಯಂತ್ರಣಕ್ಕೆ ಆದೇಶಿಸಿದ ನೂತನ ಸಿಎಂ ಅಧಿಕಾರಿ; ಧಾರ್ಮಿಕ ಸಭೆ ನೆಪದಲ್ಲಿ ರಸ್ತೆ ತಡೆಗೆ ನಿಷೇಧ

ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಯನ್ನು ನಿಯಂತ್ರಿಸಲು ಮತ್ತು ಪ್ರಾರ್ಥನೆ ಅಥವಾ ಧಾರ್ಮಿಕ ಸಭೆ ನೆಪದಲ್ಲಿ ಸಾರ್ವಜನಿಕ ರಸ್ತೆಗಳನ್ನು ನಿರ್ಬಂಧಿಸದಂತೆ ನೋಡಿಕೊಳ್ಳಲು ಪೊಲೀಸ್ ಅಧಿಕಾರಿಗಳಿಗೆ ಹೊಸ ಸೂಚನೆಗಳನ್ನು...

ರಾಜಸ್ಥಾನದಲ್ಲಿ ನೀಟ್‌-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ; ಸಿಬಿಐ ತನಿಖೆಗೆ ಆದೇಶಿಸಿದ ಸರ್ಕಾರ

ಮೇ 3 ರಂದು ನಡೆಸಲಾದ ನೀಟ್ (ಯುಜಿ) 2026 ಅನ್ನು ರದ್ದುಗೊಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಮಂಗಳವಾರ (ಮೇ 12) ಘೋಷಿಸಿದೆ. ಪ್ರತ್ಯೇಕವಾಗಿ ತಿಳಿಸಲಾಗುವ ದಿನಾಂಕಗಳಲ್ಲಿ ಮರು ಪರೀಕ್ಷೆಯನ್ನು ನಡೆಸಲಾಗುವುದು, ಪರೀಕ್ಷೆಗೆ...

ಇತ್ಯರ್ಥವಾಗದ ಚುನಾವಣಾ ತಕರಾರು : ಮತ ಹಾಕಿದ ಜನರಿಗೆ ದಿನಕ್ಕೊಬ್ಬ ಶಾಸಕ

ರಾಜ್ಯದಲ್ಲಿ ಪ್ರಸ್ತುತ ಆಡಳಿತ ನಡೆಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೂರು ವರ್ಷಗಳನ್ನು ಪೂರೈಸಿದೆ. ಚುನಾವಣೆ ನಡೆಯಲು ಇನ್ನು ಎರಡು ವರ್ಷಗಳು ಬಾಕಿಯಿದೆ. ಅಂದರೆ, ಸರ್ಕಾರದ ಐದು ವರ್ಷಗಳ ಅವಧಿಯಲ್ಲಿ ಮುಕ್ಕಾಲು...

“ಸನಾತನವನ್ನು ನಿರ್ಮೂಲನೆ ಮಾಡಬೇಕು…”; ವಿಧಾನಸಭೆಯಲ್ಲೇ ತನ್ನ ಹಿಂದಿನ ಹೇಳಿಕೆ ಪುನರುಚ್ಚರಿಸಿದ ಉದಯನಿಧಿ ಸ್ಟಾಲಿನ್

ತಮಿಳುನಾಡು ವಿರೋಧ ಪಕ್ಷದ ನಾಯಕ ಮತ್ತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಮಂಗಳವಾರ ತಮಿಳುನಾಡು ವಿಧಾನಸಭೆಯಲ್ಲಿ ನಡೆದ ಅಧಿವೇಶನದಲ್ಲಿ, ಸನಾತನ ಧರ್ಮದ ನಿರ್ಮೂಲನೆಗೆ ಮತ್ತೊಮ್ಮೆ ಕರೆ ನೀಡಿದ್ದಾರೆ. ಸದನದಲ್ಲಿ ಮಾತನಾಡಿದ ಅವರು, "ಜನರನ್ನು ವಿಭಜಿಸುವ...