Homeಮುಖಪುಟನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳೊಂದಿಗೆ ಅನುಭೂತಿಯಿಂದಿದ್ದೀರಾ? ಇದರಿಂದಾಗುವ ಪ್ರಯೋಜನ ಗೊತ್ತೆ?

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

- Advertisement -
- Advertisement -

ಜೀವನ ಕಲೆಗಳು ಅಂಕಣ: 8  ಅನುಭೂತಿ (Empathy) -2

ಅನುಭೂತಿ ಎನ್ನುವುದು ಕೇವಲದುಃಖ ಅಥವಾ ಸಂತೋಷದ ಕ್ಷಣಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವುದಷ್ಟೇ ಅಲ್ಲ, ಇದು ದೈನಂದಿನ ಕಲೆ. ಇದು ಮನೆ, ಶಾಲೆ/ಕಾಲೇಜು ಹಾಗೂ ಕೆಲಸದ ಸ್ಥಳದಲ್ಲಿ ಯಾವಾಗಲೂ ಕಾಣುವಂತಾಗಬೇಕು. ನಿಮ್ಮ ಕೆಲಸ/ಕಲಿಕೆಯ ಸ್ಥಳದಲ್ಲಿ ಅನುಭೂತಿ ಕಾಣುತ್ತಿದೆಯೇ? ಅನುಭೂತಿಯ ವಾತಾವರಣದ ಕೊರತೆಯಿಂದಾಗಿ ಇರುವ ಜನರು ದೂರವಾಗುತ್ತಿದ್ದಾರೆಯೇ? ಶಾಲೆ/ಕಾಲೇಜು/ಕಚೇರಿಯಲ್ಲಿ ಒಬ್ಬರನ್ನೊಬ್ಬರು ಅವರ ಮೊದಲನೇ ಹೆಸರಿನಿಂದ ಸಂಬೋಧಿಸುತ್ತಾರೋ, ಅಡ್ಡನಾಮದಿಂದಲೋ, ಅವರ ಹುದ್ದೆಯಿಂದ ಕರೆಯುತ್ತಾರೋ, ಅವರಿಗೆ ಸ್ವಭಾವಕ್ಕನುಗುಣವಾಗಿ ಇಟ್ಟಿರುವ ಅನ್ವರ್ಥನಾಮದಿಂದಲೋ, ಯೋಚಿಸಿ ನೋಡಿ.

ಶಾಲೆ/ಕಾಲೇಜು/ಕಚೇರಿಗಳಲ್ಲಿ ಅನುಭೂತಿಯನ್ನು ವ್ಯವಸ್ಥಾಪಕ ಮಂಡಳಿಯ ಆದೇಶದಿಂದಾಗಲೀ, ಸರಕಾರದ ಒಂದು ಸುತ್ತೋಲೆಯಿಂದಾಗಲೀ ಸೃಷ್ಟಿಸಲಾಗುವುದಿಲ್ಲ. ಅನುಭೂತಿ ಮೇಲಿನಿಂದ ಕೆಳಕ್ಕೆ ಜಾರಿಕೊಂಡು ಬರುವುದಿಲ್ಲ. ಇದನ್ನು ಅಲ್ಲಿಯ ಸಹಪಾಠಿ/ಸಹೋದ್ಯೋಗಿಗಳೇ ಸೇರಿ ನಿರ್ಮಿಸಬೇಕು. ಪ್ರತಿಯೋರ್ವರೂ ವೈಯುಕ್ತಿಕ ಮಟ್ಟದಲ್ಲಿ ಅನುಭೂತಿಯನ್ನು ತೋರಿಸಿದ್ದೇ ಆದರೆ ಕೆಲಸದ ವಾತಾವರಣ ಮಾರನೆಯ ದಿನದಿಂದಲೇ ಬದಲಾಗಲು ಪ್ರಾರಂಭವಾಗುತ್ತದೆ.

“ಬಿಸಿನೆಸ್ ಸಾಲ್ವರ್ಸ್” 2017ರ ವರದಿಯ ಪ್ರಕಾರ ಅನುಭೂತಿ ಕೆಲಸಗಾರರ ಉತ್ಪಾದನಾ ಸಾಮರ್ಥ್ಯ, ಕರ್ತವ್ಯ ಹಾಗೂ ಕಂಪನಿಯ ಪರವಾಗಿ ಅವರ ನಿಷ್ಠೆಯ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದಿದೆ. ವರದಿಯ ಪ್ರಕಾರ:

ಅನುಭೂತಿಯ ವಾತಾವರಣ ಇರುವಂತಹ ಕಚೇರಿಯಲ್ಲಿ 77% ಕೆಲಸಗಾರರು ಹಣದ ಆಮಿಶ (ಓವರ್ ಟೈಂ) ಇಲ್ಲದೆ ಹೆಚ್ಚಿನ ಸಮಯ ಕೆಲಸಕ್ಕೆ ನೀಡಲು ಸಿದ್ಧರಾಗಿದ್ದರು. 60% ಕೆಲಸಗಾರರು ಕಂಪನಿಯ ಆರ್ಥಿಕ ಸ್ಥಿತಿ ಚೆನ್ನಾಗಿರದಿದ್ದಲ್ಲಿ ಸಂಬಳ ಕಡಿತಕ್ಕೂ ಸಿದ್ಧರಾಗಿದ್ದರು. ಸಂದರ್ಶಿಸಿದ 92% ಮಾನವ ಸಂಪನ್ಮೂಲ ಅಧಿಕಾರಿಗಳು ಅನುಭೂತಿಯ ವಾತಾವರಣ ತಮ್ಮ ಕಂಪನಿಯ ಕೆಲಸಗಾರರನ್ನು ಹಿಡಿದಿಟ್ಟುಕೊಳ್ಳಲು ದೊಡ್ಡ ಕಾರಣ ಎಂದರು. 1980ರಿಂದ 1995ರವರೆಗೆ ಹುಟ್ಟಿದ 80% ಯುವಕರು ತಮ್ಮ ಕಚೇರಿಯಲ್ಲಿ ಅನುಭೂತಿಯ ವಾತಾವರಣವಿಲ್ಲದಿದ್ದರೆ ಕೆಲಸ ಬಿಡುವುದಾಗಿ ಹೇಳಿದರು. ನಿವೃತ್ತಿಯ ಅಂಚಿನಲ್ಲಿರುವ 66% ಜನರೂ ಕೂಡ ಇದೇ ಪ್ರತಿಕ್ರಿಯೆ ನೀಡಿದರು.

ಕಚೇರಿಯಲ್ಲಿ ಅನುಭೂತಿ ಸೃಷ್ಟಿಸುವುದು ಅಷ್ಟು ಸುಲಭದ ಮಾತಲ್ಲ. ಅನುಭೂತಿಯ ವಾತಾವರಣವನ್ನು ಅಳೆಯಲು ಸುಲಭವಾದ ಮಾಪಕಯಂತ್ರಗಳಿಲ್ಲ. ಸರ್ವೇಕ್ಷಣೆ ಅಥವಾ ಮಾನವ ಸಂಪನ್ಮೂಲ ವಿಭಾಗದ ಕಾರ್ಯಾಗಾರ/ಪ್ರಶ್ನೆಪತ್ರಿಕೆಗಳಿಂದ ಸ್ವಲ್ಪ ಮಾಹಿತಿ ಸಿಗಬಹುದು ಆದರೆ ಹಲವು ಮುಖ್ಯ ಅಂಶಗಳು ಅಳೆಯಲು ಕೈಗೆ ಸಿಗುವುದಿಲ್ಲ.

ಕೆಳಗಿನ ಕಲೆಗಳು ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ನಡುವಣ ಸಂಬಂಧ ಹೆಚ್ಚಿಸಲು ಸಹಾಯಕವಾಗಬಹುದು.

1. ಕೇಳಿಸಿಕೊಳ್ಳುವ ಕಲೆಯನ್ನು ಬಲಪಡಿಸಿಕೊಳ್ಳಿ: ನಿಮ್ಮ ಸಹೋದ್ಯೋಗಿ/ಸಹಪಾಠಿ ಏನಾದರೂ ಹೇಳಲು ಬಯಸಿದಲ್ಲಿ ನೀವು ನಿಜವಾಗಿಯೂ ಅವರು ಹೇಳಿದ್ದನ್ನು ಕೇವಲ ಆಲಿಸುತ್ತಿದ್ದೀರೋ ಅಥವಾ ಗಮನವಿಟ್ಟು ಅರ್ಥಮಾಡಿಕೊಳ್ಳಲು ಪ್ರಯತ್ನ ಪಡುತ್ತಿದ್ದೀರೋ ಎಂದು ನಿಮ್ಮನ್ನು ನೀವೇ ಪ್ರಶ್ನಿಸಿಕೊಳ್ಳಿ. ಇದು ಕೇವಲ ಆಡುವ ಮಾತಿಗೆ/ದೂರಧ್ವನಿ ಸಂಭಾಷಣೆಗೆ ಸೀಮಿತವಾಗಿಲ್ಲ, ಕಚೇರಿಯ ಎಸ್.ಎಂ.ಎಸ್./ಎ-ಮೇಲ್, ವಾಟ್ಸಾಪ್ ವೈಯುಕ್ತಿಕ/ಗುಂಪು ಸಂದೇಶಗಳೂ ಇದರಲ್ಲಿ ಸೇರಿವೆ.

2. ಸರಿಯಾದ ಪ್ರಶ್ನೆ ಕೇಳುವ ಕಲೆ ವೃದ್ಧಿಸಿಕೊಳ್ಳಿ: ಇದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಯ ನಿಜವಾದ ಸಮಸ್ಯೆ ಏನು ಎಂಬುದು ತಿಳಿಯುತ್ತದೆ. ನೀಡಿದ ಉತ್ತರ ಅಥವಾ ಅವರು ಕೇಳಿದ ಪ್ರಶ್ನೆ ನಿಮಗೆ ಅರ್ಥವಾಗದಿದ್ದಲ್ಲಿ ಅದನ್ನು ಬಿಡಿಸಿ ಹೇಳುವಂತೆ ತಿಳಿಸಿ.

3. ಅವರ ಸ್ಥಳದಲ್ಲಿ ನೀವಿದ್ದರೆ ನಿಮಗೆ ಏನನಿಸುತ್ತಿತ್ತು ಯೋಚಿಸಿ: ಇನ್ನೊಬ್ಬರ ಕಷ್ಟ ಅರಿತುಕೊಳ್ಳುವ ಪ್ರಯತ್ನ ನೀವು ಮಾಡಿತ್ತಿದ್ದೀರೆಂಬ ಸಂದೇಶ ಅವರಿಗೆ ಕೂಡಲೇ ರವಾನಿಸಿ. ಅವರನ್ನು ನೇರ ಮಾತುಕತೆಗೆ ಕರೆಯಿರಿ, ಸಮಯ ಸ್ಥಳ ನಿರ್ಧರಿಸಿ. ಮುಖಾಮುಖಿಯಾಗುವುದರಿಂದ ಹಲವು ಪ್ರಶ್ನೆಗಳು ತಾವಾಗಿಯೇ ಉತ್ತರಿಸಲ್ಪಡುತ್ತವೆ.

4. ಸಹೋದ್ಯೋಗಿ/ಸಹಪಾಠಿಗಳ ಬಗ್ಗೆ ಒಮ್ಮೆಲೇ ನಿಮ್ಮ ಉಹಾಪೋಹದ ನಿರ್ಧಾರಕ್ಕೆ ಬರಬೇಡಿ: ಹೇಳಿದ ಕೆಲಸ ಸರಿಯಾಗಿ ಮಾಡುತ್ತಿಲ್ಲ ಎಂದು ತಿಳಿದಾಗ ಅವರಿಗೆ ಇನ್ಯಾವ ತೊಂದರೆ ಇದೆ ತಿಳಿದುಕೊಳ್ಳಲು ಪ್ರಯತ್ನಿಸಿ.

5. ಸಮಸ್ಯೆಗಳನ್ನು ಬಗೆಹರಿಸುವಾಗ ಆದ್ಯತೆಯ ಮೇಲೆ ಗಮನ ಕೊಡಿ: ಎಲ್ಲಾ ಸಮಸ್ಯೆಗಳಿಗೂ ಒಂದೇ ಸಮನಾದ ತುರ್ತು ಇರುವುದಿಲ್ಲ. ಮೊದಲು ಬಂದ ಸಮಸ್ಯೆಗೆ ಮೊದಲು ಪರಿಹಾರ ಎನ್ನುವುದೂ ಸರಿಯಲ್ಲ. ಆದ್ದರಿಂದ ಸಮಸ್ಯೆಯ ಗಂಭೀರತೆಗೆ ಅನುಗುಣವಾಗಿ ಅದರ ಪರಿಹಾರಕ್ಕೆ ಗಮನ/ಸಮಯ ನೀಡಿ.

6. ನಿಮ್ಮ ಸಹೋದ್ಯೋಗಿ/ಸಹಪಾಠಿಗಳನ್ನು ದೂರವಿಡಬೇಡಿ: ಆದರೆ ತೀರಾ ಸನಿಹತೆಯ ಅವಶ್ಯಕತೆಯೂ ಇಲ್ಲ. ಅವರ ಬಗ್ಗೆ ವೈಯುಕ್ತಿಕ, ಕುಟುಂಬದ ಮಾಹಿತಿ ಇರಲಿ ಆದರೆ ನೀವು ಅವರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದೀರಿಎಂಬ ಭಾವನೆ ಅವರಿಗೆ ಬರದಿರಲಿ. ಅವರ ಇ-ಮೇಲ್ ಸಂದೇಶಕ್ಕೆ ಉತ್ತರಿಸುವಾಗ ಅವರ ಹೆಸರನ್ನು ಬಳಸಿ, ಅವರ ವಿಭಾಗದ ಹೆಸರಿಗೆ ಉತ್ತರಿಸಬೇಡಿ. ಕಚೇರಿಯಲ್ಲೂ ವೈಯುಕ್ತಿಕ ಮತ್ತು ಸಾಂಸ್ಥಿಕ ವಿಷಯಗಳನ್ನು ಬೆರೆಸಬೇಡಿ.

7. ವ್ಯಕ್ತಿಗಳಿಗೆ ಭಾವನೆಗಳಿರುತ್ತವೆ: ಕಂಪನಿಯ ಟಾರ್ಗೆಟ್, ಡೆಡ್ಲೈನ್, ಲಾಭ-ನಷ್ಟದ ಒತ್ತಡದಲ್ಲಿ ಮುಖ್ಯವಾಗಿ ತಂಡದ ಜನರಿಗೆ ಭಾವನೆಗಳಿರುತ್ತವೆ ಎಂಬುದನ್ನು ಮರೆಯಬೇಡಿ. ಆದ್ದರಿಂದ ನಿಮ್ಮ ಸಹೋದ್ಯೋಗಿ/ಸಹಪಾಠಿಗಳ ಮೇಲಿನ ಕಟು ಟಿಪ್ಪಣಿಗಳನ್ನು ಮೃದುವಾಗಿರಿಸಿ.

8. ಕೆಲವೊಮ್ಮೆ ತಲೆಯ ಬದಲಿಗೆ ಹೃದಯ ಉಪಯೋಗಿಸಿ: ಇಂಗ್ಲಿಷಿನಲ್ಲಿ ಇದನ್ನು “ಥಿಂಕ್ ವಿತ್ ಯುವರ್ ಹಾರ್ಟ್” ಎನ್ನುತ್ತಾರೆ.

9. ನಿಮ್ಮ ಸ್ವಂತ ಪೂರ್ವಾಗ್ರಹ: ನಿಮ್ಮ ಸಾಂಸ್ಕೃತಿಕ ಪಕ್ಷಪಾತವೇನಾದರೂ ಅನುಭೂತಿಗೆ ಅಡ್ಡ ಬರುತ್ತಿದೆಯೇ, ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

10. ಸಹೋದ್ಯೋಗಿಗಳಿಂದ ಪ್ರತ್ಯಾದಾನ: ಫೀಡ್-ಬ್ಯಾಕ್ ಸ್ವೀಕರಿಸಿ. ಕೆಲವು ನೇರವಾಗಿ ಬರದಿರಬಹುದು, ಅಪ್ರತ್ಯಕ್ಷವಾಗಿ ಬಂದ ಟೀಕೆ ಟಿಪ್ಪಣಿಗಳನ್ನೂ ಗುರುತುಹಾಕಿಕೊಳ್ಳಿ. ಅದೇ ರೀತಿ ನೀವು ನೀಡಿದ ಫೀಡ್-ಬ್ಯಾಕ್/ಟೀಕೆ/ಟಿಪ್ಪಣಿ ಹೇಗೆ ಕೆಲಸ ಮಾಡುತ್ತಿದೆ ಅದನ್ನೂ ತಿಳಿದುಕೊಳ್ಳಿ

11. ಸ್ಥಳ ಬದಲಾಯಿಸಿ: ಸಹೋದ್ಯೋಗಿ/ಸಹಪಾಠಿಗಳೊಂದಿಗೆ ಕಚೇರಿಯಿಂದ ಹೊರಗೆ ಪ್ರವಾಸಕ್ಕೆ ಹೋಗಿ. ಅವರನ್ನು ಅರಿತುಕೊಳ್ಳಲು ಸಮಯ ಮತ್ತು ಅವಕಾಶ ದೊರೆಯುತ್ತದೆ.

12. ಅನುಭೂತಿ ಒಂದು ರಾತ್ರಿಯಲ್ಲಿ ಆಗುವ ಬದಲಾವಣೆ ಅಲ್ಲ: ಇದು ನೂರಡಿಯ ವೇಗದ ಓಟವಲ್ಲ, 26 ಮೈಲಿಯ ಮ್ಯಾರಥಾನ್. ಒಬ್ಬ ವ್ಯಕ್ತಿ ಅಥವಾ ಒಂದು ಪರಿಸ್ಥಿತಿಯಲ್ಲಿ ಆದ ಕಹಿ ನೆನಪಿನಿಂದ ನಿಮ್ಮ ಮುಂದಿನ ಕೆಲಸ ಕೆಡದಂತೆ ಜಾಗೃತೆ ವಹಿಸಿ.

ನಿಮ್ಮ ಸಹೋದ್ಯೋಗಿಗಳಿಂದ ಸಹಾಯ ಎದುರು ನೋಡುವುದಕ್ಕಿಂತ ಮುಂಚೆ ನೀವು ಅವರಿಗೆ ಎಷ್ಟು ಸಹಾಯ ನೀಡುತ್ತಿದ್ದೀರೆಂಬುದನ್ನು ಅವಲೋಕಿಸಿ. ಅನುಭೂತಿ ಎರಡು ದಿಕ್ಕಿನ ದಾರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕರಾವಳಿ ಸಮಸ್ಯೆಗೆ ಶಾಶ್ವತ ಪರಿಹಾರದ ಭರವಸೆ: ಸಚಿವ ಕೆ.ಎಸ್.ಬಸವಂತಪ್ಪ

ರಾಜ್ಯದ ಕರಾವಳಿ ಭಾಗದಲ್ಲಿ ಮೀನುಗಾರಿಕೆ ಕ್ಷೇತ್ರದ ಅಭಿವೃದ್ಧಿ ಕುಂಠಿತವಾಗುತ್ತಿರುವ ಕುರಿತು ಕಳವಳ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಲು ಸರ್ಕಾರ ಮುಂದಾಗಿದೆ. ಕರಾವಳಿ ವ್ಯಾಪ್ತಿಯ ಬಂದರುಗಳು, ಮೀನು ಮಾರುಕಟ್ಟೆಗಳು, ಬ್ರೇಕ್‌ವಾಟರ್‌ಗಳು ಹಾಗೂ ಜೆಟ್ಟಿಗಳಿಗೆ...

SIR ಪ್ರಕ್ರಿಯೆಯಲ್ಲಿ ಯಾರ ಹೆಸರು ಬಿಟ್ಟುಹೋಗಬಾರದು: PRC ನೀಡಲು ವಿಳಂಬ ಬೇಡ ಡಾ. ಜಿ. ಪರಮೇಶ್ವರ್

ಉದ್ಯೋಗ ಅಥವಾ ವಿವಿಧ ಕಾರಣಗಳಿಂದಾಗಿ ತಮ್ಮ ಸ್ವಂತ ಊರು ತೊರೆದು ಬೇರೆಡೆಗೆ ಸ್ಥಳಾಂತರಗೊಂಡು ನೆಲೆಸಿರುವ ರಾಜ್ಯದ ಯಾವುದೇ ನಾಗರಿಕರು ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಿಂದ ಹೊರಗುಳಿಯಬಾರದು ಎಂದು ಉಪಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಾದ...

ಬಿಹಾರ ಪ್ರವಾಹದ ನಡುವೆ ಮೋದಿ ಹುಟ್ಟುಹಬ್ಬದ ಪ್ರಯುಕ್ತ ದೀಪೋತ್ಸವ; ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮಕ್ಕೆ ತೇಜಸ್ವಿ ಯಾದವ್ ಆಕ್ಷೇಪ

ಬಿಹಾರದಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿರುವ ನಡುವೆಯೇ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಸೆಪ್ಟೆಂಬರ್ 17ರಂದು ‘ಆಶೀರ್ವಾದ್ ಕಾ ದಿಯಾ’ ಕಾರ್ಯಕ್ರಮ ಆಯೋಜಿಸಿರುವುದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ರಾಜ್ಯದ 15 ಜಿಲ್ಲೆಗಳಲ್ಲಿ...

ಉಮರ್ ಖಾಲಿದ್ ಅವರನ್ನು ‘ದೇಶಪ್ರೇಮಿ’ ಎಂದ ಬಿ.ಕೆ. ಹರಿಪ್ರಸಾದ್; ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ (ಎನ್‌ಎಲ್‌ಎಸ್‌ಐಯು) ಯೂನಿವರ್ಸಿಟಿಯಲ್ಲಿ ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದದ ನಡುವೆ, ಅವರನ್ನು "ರಾಷ್ಟ್ರಪ್ರೇಮಿ" ಎಂದು ಕರೆದಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ...

ಇಂದಿರಾ ಗಾಂಧಿಯಂತೆ ನೇರವಾಗಿ ನಿಲ್ಲಿ, ಟ್ರಂಪ್ ಮುಂದೆ ಮಂಡಿಯೂರುತ್ತಿದ್ದೀರಿ: ‘UPI ಟ್ಯಾಕ್ಸ್’ ಬಗ್ಗೆ ಮೋದಿ ವಿರುದ್ಧ ರಾಹುಲ್ ವಾಗ್ದಾಳಿ!

ಯುಪಿಐ (UPI) ವಹಿವಾಟುಗಳಿಗೆ ಸಂಬಂಧಿಸಿದಂತೆ ಜಾರಿಯಾಗುತ್ತಿರುವ ಹೊಸ 'ಮರ್ಚೆಂಟ್ ಡಿಸ್ಕೌಂಟ್ ರೇಟ್' (MDR) ವ್ಯವಸ್ಥೆ ಇದೀಗ ತೀವ್ರ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಇದನ್ನು "ಬ್ಯಾಂಕ್‌ಗಳು ವಿಧಿಸುವ ಸೇವಾ ಶುಲ್ಕ" ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದ್ದರೂ,...

ಲಿಯೋನೆಲ್ ಮೆಸ್ಸಿ ಕೇರಳ ಭೇಟಿ ಪ್ರಕರಣ: ಕೊಚ್ಚಿಯ ‘ರಿಪೋರ್ಟರ್ ಟಿವಿ’ ಕಚೇರಿಯಲ್ಲಿ ಪೊಲೀಸರಿಂದ ಶೋಧ

ಮಲಯಾಳಂ ಸುದ್ದಿ ವಾಹಿನಿ 'ರಿಪೋರ್ಟರ್ ಟಿವಿ'ಯ ಕೊಚ್ಚಿ ಪ್ರಧಾನ ಕಚೇರಿಯಲ್ಲಿ ಬುಧವಾರ (ಸೆ.16) ಮುಂಜಾನೆ ಪೊಲೀಸ್ ತಂಡವೊಂದು ಶೋಧ ಕಾರ್ಯ ನಡೆಸಿದ್ದು, ಇದರಿಂದಾಗಿ ತನ್ನ ಸುದ್ದಿ ಪ್ರಸಾರ ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ವಾಹಿನಿ...

‘ಏಕರೂಪತೆ ಸಮಾನತೆಯಲ್ಲ’: 2029ಕ್ಕೂ ಮುನ್ನ 21 ರಾಜ್ಯಗಳಲ್ಲಿ ಯುಸಿಸಿ ಜಾರಿ ಘೋಷಿಸಿದ ಅಮಿತ್ ಶಾಗೆ ಪ್ರತಿಪಕ್ಷಗಳ ತೀವ್ರ ತಿರುಗೇಟು

ನವದೆಹಲಿ/ಮುಂಬೈ: 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಗಳಿರುವ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ತರಲಾಗುವುದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ...

KPSC ಅಧ್ಯಕ್ಷರ ಪುತ್ರಿಯ ನಕಲಿ ಪ್ರಮಾಣಪತ್ರ ಹಗರಣ: ಅಕ್ರಮಕ್ಕೆ ಸಾಥ್ ನೀಡಿದ್ದ ಅಧಿಕಾರಿಯ ಜಾಮೀನು ಅರ್ಜಿ ವಜಾ

ಕೆಪಿಎಸ್‌ಸಿ (KPSC) ಅಧ್ಯಕ್ಷರ ಪುತ್ರಿಗೆ ಅಕ್ರಮವಾಗಿ ನಕಲಿ ಆದಾಯ ಪ್ರಮಾಣಪತ್ರ ನೀಡಿದ ಆರೋಪ ಎದುರಿಸುತ್ತಿರುವ ಕಂದಾಯ ಅಧಿಕಾರಿಯ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಬೆಂಗಳೂರಿನ ನಗರ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಮಂಗಳವಾರ ವಜಾಗೊಳಿಸಿದೆ....

ಬಂಗಾಳದಲ್ಲಿ ಬಿಜೆಪಿ ಸರ್ಕಾರದ ನಿರ್ಬಂಧ; ನೆಲಕಚ್ಚಿದ ದನದ ಮಾಂಸ ವ್ಯಾಪಾರ

ಪಶು ಹತ್ಯೆಯ ಕುರಿತು ಮುಖ್ಯಮಂತ್ರಿ ಸುವೇಂಧು ಅಧಿಕಾರಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಸೂಚನೆ ಹೊರಡಿಸಿದ ನಂತರ, ಮಾಂಸದ ವ್ಯಾಪಾರಿ ಮುಷ್ತಾಕ್ ಕಳೆದ ಮೂರು ತಿಂಗಳಿನಿಂದ ಒಂದು ಪೈಸೆಯನ್ನೂ ಗಳಿಸಿಲ್ಲ. "ಚುನಾವಣೆಯ ಕಾರಣದಿಂದ...

ತೀವ್ರಗೊಂಡ ಸೌದಿ-ಹೌತಿ ಸಂಘರ್ಷ : ಮಕ್ಕಾ ಗುರಿಯಾಗಿಸಿದ್ದ ಡ್ರೋನ್ ಹೊಡೆದುರುಳಿಸಿದ್ದೇವೆ ಎಂದ ಸೌದಿ; ತಳ್ಳಿಹಾಕಿದ ಹೌತಿ

ಯೆಮನ್‌ನ ರೆಬೆಲ್ ಗ್ರೂಪ್ ಹೌತಿ ಮತ್ತು ಸೌದಿ ಬೆಂಬಲಿತ ಪಡೆಗಳ ಸಂಘರ್ಷ ತೀವ್ರಗೊಂಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಮುಸ್ಲಿಮರ ಪವಿತ್ರ ನಗರ ಮಕ್ಕಾದಲ್ಲಿ ಸೌದಿ ಅರೇಬಿಯಾದ ನಾಗರಿಕ ರಕ್ಷಣಾ (ಸಿವಿಲ್ ಡಿಫೆನ್ಸ್) ಇಲಾಖೆಯು...