Homeಮುಖಪುಟಲಾಕ್‌ಡೌನ್‌ ಸಮಯದಲ್ಲಿ ತನ್ನ ನೌಕರರ ಸಂಬಳ ಹೆಚ್ಚಿಸಿ ಮನೋಸ್ಥೈರ್ಯ ತುಂಬಿದ ಏಷ್ಯನ್‌ ಪೇಂಟ್ಸ್‌!

ಲಾಕ್‌ಡೌನ್‌ ಸಮಯದಲ್ಲಿ ತನ್ನ ನೌಕರರ ಸಂಬಳ ಹೆಚ್ಚಿಸಿ ಮನೋಸ್ಥೈರ್ಯ ತುಂಬಿದ ಏಷ್ಯನ್‌ ಪೇಂಟ್ಸ್‌!

- Advertisement -
- Advertisement -

ಕೊರೊನಾ ಲಾಕ್‌ಡೌನ್‌ ಕುಸಿಯುತ್ತಿದ್ದ ಭಾರತದ ಆರ್ಥಿಕತೆಯನ್ನು ಮತ್ತುಷ್ಟು ಪಾತಾಳಕ್ಕೆ ತಳ್ಳಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಲಕ್ಷಾಂತರ ಕಂಪನಿಗಳು ತನ್ನ ನೌಕರರನ್ನು ಕೆಲಸದಿಂದ ಕಿತ್ತೆಸೆದಿವೆ. ಇನ್ನಷ್ಟು ಕಂಪನಿಗಳು ಸಂಬಳ ನಿಲ್ಲಿಸಿವೆ ಅಥವಾ ಸಂಬಳ ಕಡಿತ ಮಾಡಿವೆ. ಆದರೆ ಏಷ್ಯನ್‌ ಪೇಂಟ್ಸ್‌ ಕಂಪನಿ ಮಾತ್ರ ಕಷ್ಟಕರ ಸಂದರ್ಭದಲ್ಲಿಯೂ ತನ್ನ ನೌಕರರ ಸಂಬಳ ಹೆಚ್ಚಿಸಿ ಅವರಿಗೆ ಮನೋಸ್ಥೈರ್ಯ ತುಂಬುವ ಮಾದರಿ ಕೆಲಸ ಮಾಡಿದೆ.

ಭಾರತದ ದೊಡ್ಡ ಮತ್ತು ಬ್ರಾಂಡ್‌ ಕಂಪನಿಯಾದ ಏಷ್ಯನ್‌ ಪೇಂಟ್ಸ್‌ ಪ್ರವಾಹದ ವಿರುದ್ಧ ಈಜಲು ಹೊರಟಿದೆ. ಕೆಲಸ ಕಳೆದುಕೊಂಡು ಭವಿಷ್ಯದ ಬಗ್ಗೆ ಚಿಂತಿತರಾಗಿರುವ ಕೋಟ್ಯಾಂತರ ನೌಕರರ ನಡುವೆ ಅದು ತನ್ನ ನೌಕರರಿಗೆ ನಾನಿದ್ದೇನೆ ಭಯಪಡಬೇಡಿ ಎಂಬ ಭರವಸೆ ನೀಡಿದೆ.

ಕಂಪನಿಯ ತನ್ನ ಎಲ್ಲಾ ನೌಕರರ ವಾರ್ಷಿಕ ಸಂಬಳವನ್ನು ಹೆಚ್ಚಿಸಿದೆ. ಎಲ್ಲರಿಗು ಉಚಿತ ವೈದ್ಯಕೀಯ ವಿಮೆ ಮಾಡಿಸಲು ಮುಂದಾಗಿದೆ. ತನ್ನ ಅಂಗಡಿಗಳ ನೈರ್ಮಲ್ಯೀಕರಣ ಜವಾಬ್ದಾರಿ ಹೊತ್ತಿದೆ. ಈಗಾಗಲೇ ತನ್ನ ಗುತ್ತಿಗೆದಾರರ ಖಾತೆಗೆ 40 ಕೋಟಿ ರೂಗಳನ್ನು ವರ್ಗಾಹಿಸಿದೆ. ಅಲ್ಲದೇ ಕಂಪನಿಯಿಂದ ಪಾವತಿಗಳಿಗೆ 45 ದಿನಗಳ ವಿಸ್ತರಣೆ ಮತ್ತು 45 ದಿನಗಳಲ್ಲಿ ಪಾವತಿ ಮಾಡಿದರೆ 2 ಪ್ರತಿಶತ ರಿಯಾಯಿತಿಯನ್ನು ಘೋಷಿಸಿದೆ.

ನಮ್ಮದು ಉತ್ತಮ ನಾಯಕತ್ವ ಹೊಂದಿರುವ ಮತ್ತು ನಮ್ಮ ಎಲ್ಲಾ ಪಾಲುದಾರರನ್ನು ನೋಡಿಕೊಳ್ಳುವ ಮಾದರಿ ಸಂಸ್ಥೆಯಾಗಿರಬೇಕು. ಇಂತಹ ಎಲ್ಲಾ ಉಪಕ್ರಮಗಳ ಬಗ್ಗೆ ನಾನು ನಿಯಮಿತವಾಗಿ ಮಂಡಳಿಯೊಂದಿಗೆ ಚರ್ಚಿಸಿ ಅವರ ಅನುಮೋದನೆಯನ್ನು ಪಡೆದುಕೊಂಡಿದ್ದೇನೆ. “ನಮ್ಮ ಪ್ರತಿಯೊಬ್ಬ ಉದ್ಯೋಗಿಯೊಂದಿಗೆ ಹೆಜ್ಜೆ ಹಾಕಲು, ಸಂವಹನ ನಡೆಸಲು ಮತ್ತು ಅನಿಶ್ಚಿತ ಮಾರುಕಟ್ಟೆಯಲ್ಲಿ ಅವರ ಕಳವಳಗಳನ್ನು ಹೋಗಲಾಡಿಸಲು ಇದು ಒಂದು ದೊಡ್ಡ ಅವಕಾಶವೆಂದು ನಾನು ನೋಡುತ್ತೇನೆ. ಪ್ರಬುದ್ಧ ಬ್ರಾಂಡ್ ಆಗಿ ಕೆಲಸಕ್ಕೆ ತೆಗೆದುಕೊಳ್ಳುವ/ಕೈಬಿಡುವುದು (Hire and Fire) ಏಷ್ಯನ್ ಪೇಂಟ್ಸ್ ಸಂಸ್ಕೃತಿಯಲ್ಲ. ಬದಲಿಗೆ ಉದ್ಯೋಗಿಗಳಿಗೆ ಭರವಸೆ ನೀಡಿದ್ದೇವೆ” ಎಂದು ಕಂಪನಿಯ ಸಿಇಒ ಅಮಿತ್ ಸಿಂಗಲ್ ಅಭಿಪ್ರಾಯಪಟ್ಟಿದ್ದಾರೆ.

ಅಷ್ಟು ಮಾತ್ರವಲ್ಲದೇ ಕಂಪನಿಯೂ ಕೋವಿಡ್‌ ಪರಿಹಾರ ನಿಧಿಗೆ (ಮಹಾರಾಷ್ಟ್ರ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ) 35 ಕೋಟಿ ರೂಗಳ ದೇಣಿಗೆ ನೀಡಿದೆ. ಹ್ಯಾಂಡ್‌ ಸ್ಯಾನಿಟೈಸರ್‌ ತಯಾರಿಸಿ ವಿತರಿಸಿದೆ.

ಏಷ್ಯನ್‌ ಪೇಂಟ್ಸ್‌ ಕಂಪನಿಯ ಮೊದಲ ತ್ರೈಮಾಸಿಕದ ಸಮಯದಲ್ಲಿ ಯಾವುದೇ ಲಾಭ ದೊರೆಯುವುದಿಲ್ಲ ಎಂದು ಕಂಪನಿಗೆ ನಿಚ್ಚಳವಾಗಿ ತಿಳಿದಿದೆ. ಆದರು ಅದು ತತ್‌ಕ್ಷಣದ ಲಾಭ ನಷ್ಟದ ಬಗ್ಗೆ ಯೋಚಿಸದೇ ದೂರಗಾಮಿ ಪರಿಣಾಮಗಳ ಬಗ್ಗೆ ಚಿಂತಿಸುತ್ತಿದೆ.

ಈ ಹಂತಗಳು ಕಂಪನಿಗೆ ತಕ್ಷಣದ ಹಣಕಾಸಿನ ಪ್ರಯೋಜನಗಳಿಗೆ ಕಾರಣವಾಗದಿದ್ದರೂ, ಉದ್ಯೋಗಿಗಳು ಮತ್ತು ಪಾಲುದಾರರಂತಹ ಪ್ರಮುಖ ಪಾಲುದಾರರೊಂದಿಗೆ ಸಂಬಂಧವನ್ನು ಗಟ್ಟಿಗೊಳಿಸುತ್ತವೆ. ಅವು ಖಂಡಿತವಾಗಿಯೂ ಕಂಪನಿಗೆ ಒಳ್ಳೆಯ ಹೆಸರು ತಂದುಕೊಡುವುದರ ಜೊತೆಗೆ ತನ್ನ ನೌಕರರು ಮತ್ತು ಗುತ್ತಿಗೆದಾರರಲ್ಲಿ ಮಾತ್ರವಲ್ಲದೇ ಗ್ರಾಹಕರಲ್ಲಿಯೂ ಸಹ ನಂಬಿಕೆಯನ್ನು ಹುಟ್ಟಿಸುತ್ತದೆ.

ಒಟ್ಟಿನಲ್ಲಿ ಕಂಪನಿ ನಷ್ಟದಲ್ಲಿದೆ ಎಂದು ಹಲವಾರು ಉದ್ಯಮಿಗಳು ತನ್ನ ಉದ್ಯೋಗಿಗಳನ್ನು ಕ್ಷಣಮಾತ್ರದಲ್ಲಿ ಕಿತ್ತೊಗೆಯುತ್ತಿದ್ದಾರೆ. ಇದು ಸರಿಯಾದ ಕ್ರಮವಲ್ಲ. ಸರ್ಕಾರವು ಅವರ ಪರ ನಿಲ್ಲಬೇಕು. ಇದಕ್ಕೆ ಏಷ್ಯನ್‌ ಪೇಂಟ್ಸ್‌ ಉತ್ತಮ ಮಾದರಿಯಾಗಿದೆ.


ಇದನ್ನೂ ಓದಿ: ಈ ಸಂದರ್ಭ ಒಂದು ತಿರುವು ಬಿಂದುವಾಗಬಲ್ಲುದು, ಮನಸ್ಸು ಮಾಡಿದರೆ…! 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

  1. ಏಶಿಯನ್ ಪೆಯಿಂಟ್ಸ್ ಮಾಲೀಕರಿಗೊಂದು ಸಲಾಂ. ಇವರ ನೀತಿ ಅನುಕರಣೆಗೆ ಅರ್ಹವಾಗಿದೆ.

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...