Homeಕರ್ನಾಟಕಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು... ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ...

ಚುಚ್ಚಿದರೆ ತೀವ್ರ ನೋವು, ಬಡವರ ಪಾಲಿಗೆ ಹೂವು… ನೀರಿಲ್ಲದಿದ್ದರೂ ಜಾಲಿಯಾಗಿ ಬೆಳೆಯುವ ಜಾಲಿ…

- Advertisement -
- Advertisement -

| ಶಿವಾ |

ಕರ್ನಾಟಕ ಪ್ರಗತಿರಂಗದ ಸಭೆಗಳಲ್ಲಿ ಪಾಲ್ಗೊಳ್ಳಲು ಬಳ್ಳಾರಿ ಜಿಲ್ಲೆಯ ವಿವಿಧ ಪಟ್ಟಣ, ಹಳ್ಳಿಗಳನ್ನು ಸುತ್ತಿ ಬಂದಿದ್ದ ಪಿ. ಲಂಕೇಶರು, ‘ಮರೆಯುವ ಮುನ್ನ’ದಲ್ಲಿ ಬಳ್ಳಾರಿಯ ಜಾಲಿಮುಳ್ಳುಗಳ ಕುರಿತೇ ಒಂದು ಆಹ್ಲಾದಕರ ಟಿಪ್ಪಣಿ ಬರೆದಿದ್ದರು. ಈ ಮುಳ್ಳು ಜಾಲಿ ಗಿಡವೇ ಇಲ್ಲಿನ ಬಡವರಿಗೆ ಉರುವಲು, ದೇಹಭಾಧೆ ತೀರಿಸಿಕೊಳ್ಳಲು ಮರೆ… ಎಂಬರ್ಥದಲ್ಲಿ ಬರೆದು, ಜನರು ಸ್ಥಳೀಯ ವಾತಾವರಣದಲ್ಲಿ ಬದುಕು ಕಟ್ಟಿಗೊಳ್ಳುವ ಹಿಂದಿನ ವಾಸ್ತವವನ್ನು ತೆರದಿದಿಟ್ಟಿದ್ದರು. ಉತ್ತರ ಕರ್ನಾಟಕದ ತುಂಬ ಹರಡಿರುವ ಈ ಮುಳ್ಳು ಜಾಲಿಯ ‘ಜೀವಪರತೆ’ಯನ್ನು ಇಲ್ಲಿ ನೀಡಲಾಗಿದೆ…

ಇದು ಜಾಲಿ ! ಎಲ್ಲೆಂದರಲ್ಲಿ ಜಾಲಿಯಾಗಿ ಬೆಳೆಯುವ ಜಾತಿಯ ಮುಳ್ಳು ಪೊದೆಯಿದು.
ಉತ್ತರ ಕರ್ನಾಟಕ ಬಹುತೇಕ ಭಾಗಗಳಲ್ಲಿ ಇದು ಬೇರು ಬಿಟ್ಟು, ತನ್ನದೆಯಾದ ದಟ್ಟ ಪೊದೆಯಾಕಾರದ ಕಾಡನ್ನು ಬೆಳೆಯುವ ಛಾತಿಯನ್ನು ಹೊಂದಿದೆ. ಬಯಲು ಪ್ರದೇಶದಲ್ಲಿ ಹಾಗೂ ನದಿದಡ, ಹಳ್ಳಕೊಳ್ಳ, ಕೋಟೆ, ಕಂದಕ ಸೇರಿದಂತೆ ಖಾಲಿ ಪ್ರದೇಶದಲ್ಲಿ ನೀರಿಲ್ಲದೆ, ಸಂರಕ್ಷಣೆಯಿಲ್ಲದೆ ಬೆಳೆಯುವ ಜಾಲಿ, ಬಹುಪಯೋಗಿ ಮುಳ್ಳಿನ ಕಂಟಿಯಾಗಿದೆ.

ಜಾಲಿ ಜಾತಕ:
ಸ್ವತಂತ್ರ ಪೂರ್ವದಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಬ್ರಿಟಿಷ್ ಅಧಿಕಾರಿಗಳು ಭಾರತಕ್ಕೆ ಬರುವಾಗ ತಮ್ಮ ಹಡಗುಗಳಿಗೆ ಇಂಧನ ಪೂರೈಸಲು ಮತ್ತು ಅಗ್ಗಿಷ್ಟಿಕೆಯನ್ನು ಉರಿಸಿಕೊಳ್ಳಲು ಈ ಜಾಲಿಯ ಮರವನ್ನು ಆಶ್ರಯಿಸುತ್ತಿದ್ದರು. ಮೂಲತಃ ಇದು ದಕ್ಷಿಣ ಆಫ್ರಿಕಾದ ಅಮೇಜಾನ್ ಕಾಡುಗಳಲ್ಲಿ ಕಂಡು ಬರುವ, ಕ್ಯಾಕ್ಟಸ್ ಮುಳ್ಳು ಜಾತಿಯ ಸಸ್ಯ ಸಂಕುಲವಿದು.

ರಾಜ್ಯದ ಬಳ್ಳಾರಿ ಭಾಗದಲ್ಲಿ ಈ ಜಾಲಿ ಮರವು ಮೊದಲ ಬಾರಿಗೆ ಬೇರು ಬಿಟ್ಟ ಉದಾಹರಣೆಯಿದೆ. ಈಗಲೂ ಈ ಮುಳ್ಳು ಪೊದೆಯನ್ನು ಬಳ್ಳಾರಿ ಜಾಲಿಯಂದು ಉತ್ತರ ಕರ್ನಾಟಕದ ರೈತರು ಗುರುತಿಸುತ್ತಾರೆ. ಬಳ್ಳಾರಿ ಜಾಲಿ, ಇದು ಮೂಲತಃ ಹಂದಿ ಸಾಕಾಣಿಕೆಗೆ ಬಳಕೆಯಾಗುವ ಪೊದೆಯಾಗಿದೆ. ಜಾಲಿಗಿಡದ ಹೊಂಬಣ್ಣದ ಹಣ್ಣಾದ ಕಾಯಿಗಳು ಬೆಲ್ಲದ ರುಚಿಯನ್ನು ಹೊಂದಿರುತ್ತವೆ. ಅದರೊಳಗಿರುವ ಬೀಜಗಳು ವಿಷಕಾರಿಯಾಗಿರುತ್ತವೆ. ಇದರ ಕಾಯಿಗಳನ್ನು ಹಂದಿಗಳಿಗೆ ಆಹಾರವಾಗಿ ಬಳಸಲಾಗುತ್ತದೆ. ಇದರೊಂದಿಗೆ ಜಾಲಿಗಿಡ, ರೈತರ ಪಾಲಿಗೆ ಹೊಲದ ಬದುಗಳಲ್ಲಿ ಜೀವಂತ ಬೇಲಿಯಾಗಿದೆ. ಗ್ರಾಮೀಣ ಪ್ರದೇಶದ ಬಡವರು ಇದನ್ನು ಉರುವಲಾಗಿ ಬಳಸುತ್ತಾರೆ.

ಬಹುಪಯೋಗಿ ಜಾಲಿ ಜಾಲ:
ಜಾಲಿ ಅನೇಕ ಪ್ರಭೇದಗಳನ್ನು ಒಳಗೊಂಡಿದೆ. ದೊಡ್ಡ ಜಾಲಿ, ಸಣ್ಣ ಜಾಲಿ, ರಾಮಜಾಲಿ, ಕರಿಜಾಲಿ, ಹಿಕ್‍ಜಾಲಿ, ಜೀನಿಕಂಟಿ ಎಂದು ಕರೆಯಲ್ಪಡುತ್ತದೆ. ಬಿದರಿನಂತೆ ಇದು ಮೆದುವಾಗಿ ಬಾಗುವ ಗುಣವನ್ನು ಹೊಂದಿದೆ. ಹಸಿ ಕಟ್ಟಿಗೆಯನ್ನು ಬಿಲ್ಲಿನಂತೆ ಬಾಗಿಸಬಹುದು. ಬಲಿತ ಕಟ್ಟಿಗೆಯನ್ನು ಉರುವಲು ಇದ್ದಿಲನ್ನಾಗಿ ಪರಿವರ್ತಿಸುತ್ತಾರೆ.

ಉತ್ತರ ಕರ್ನಾಟಕ ಸೇರಿದಂತೆ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ, ತೆಲಗಿ, ಜಾಯವಾಡಗಿ ಹಾಗೂ ಇಂಡಿ ತಾಲೂಕಿನ ಭತಗುಣಕಿ, ನಂದ್ರಾಳ, ಹಲಸಂಗಿ, ಅಜನಾಳ, ಹೊರ್ತಿ, ಬುದಿಹಾಳ, ಬೇನೂರ ಆಸು ಪಾಸಿನ ಗ್ರಾಮಗಳಲ್ಲಿ ಜಾಲಿಕಟ್ಟಿಗೆಯಿಂದ ಇದ್ದಿಲು ತಯಾರಿಸಲಾಗುತ್ತದೆ.

ಕಾಶ್ಮೀರದಿಂದ ಕನ್ಯಾಕುಮಾರಿಗೆ:
ಬರದ ಭೂಮಿಯಲ್ಲಿ ಬರಬರನೇ ಮೇಲೆದ್ದು, ದಟ್ಟ ಪೊದೆಯಾಗಿ ಬೆಳೆಯುವ ಈ ಜಾಲಿ ಗಿಡಗಳು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೂ ಹರಡಿಕೊಂಡಿವೆ. ನೀರು ಹಾಗೂ ಸಂರಕ್ಷಣೆಯ ಅವಶ್ಯಕತೆ ಇಲ್ಲದೆ, ಬಯಲು ಪ್ರದೇಶದ ಸಿಕ್ಕ ಸಿಕ್ಕಲ್ಲಿ ಬೆಳೆದು ನಿಲ್ಲುವ ಜಾಲಿಗಿಡ, ತನ್ನದೆ ಆದ ವಿಶೇಷತೆಯನ್ನು ಹೊಂದಿ, ಭಾರತೀಯರ ಮನೆ, ಮನದಲ್ಲಿ ಅಚ್ಚಾಗಿ ಉಳಿದುಕೊಂಡಿದೆ.

ವರ್ಷದ ಹನ್ನೆರಡು ತಿಂಗಳು ಬೆಳೆದು ನಿಲ್ಲುವ ಈ ಜಾಲಿ ಗಿಡ, ಜಮ್ಮು- ಕಾಶ್ಮೀರದ ಬಾರಾಮುಲ್ಲಾ, ಅನಂತನಾಗ, ನೇಪಾಳ ಗಡಿಭಾಗದ ಗೋರಕಪುರ, ಗೌರಿಪಾಂಟಾ ಹಾಗೂ ಪಾಕಿಸ್ತಾನ, ಬಾಂಗ್ಲಾ ದೇಶಗಳಲ್ಲೂ ಕಂಡು ಬರುತ್ತದೆ.
ಅಲ್ಲದೆ ಶ್ರೀಲಂಕಾ, ಮಾಲ್‍ಡ್ವೀಸ್ ದ್ವೀಪಗಳು ಸೇರಿದಂತೆ ದಕ್ಷಿಣ ಆಫ್ರಿಕಾದ ಅಮೇಜಾನ್ ತಪ್ಪಲು ಪ್ರದೇಶಗಳಲ್ಲೂ ವ್ಯಾಪಿಸಿಕೊಂಡಿದೆ.

ವಿಷಕಾರಿ ನಂಜು ಮುಳ್ಳು:
ಈ ಜಾಲಿಗಿಡ ತನ್ನ ಮೈತುಂಬಾ ಮುಳ್ಳುಗಳನ್ನು ತುಂಬಿಕೊಂಡರೂ ಎಲೆಗಳು ಮಾತ್ರ ಚಿಕ್ಕದಾಗಿರುತ್ತವೆ. ಕಾಯಿಗಳಂತೂ ಗೇಣುದ್ದ ಸಪೂರವಾಗಿ ಬೆಳೆದಿರುತ್ತವೆ. ಜಾಲಿ ಮುಳ್ಳು ಮನುಷ್ಯನ ಕೈ, ಕಾಲಿಗೆ ಚುಚ್ಚಿದರೆ, ನಂಜಾಗಿ ತೀವ್ರ ನೋವುಂಟು ಮಾಡುತ್ತದೆ.
ಈ ಸಸ್ಯ ಗಿಡವಾಗಿ, ಮರವಾಗಿ ಬೆಳೆದರೂ ಕೂಡ, ತಂಪಾದ ನೆರಳು ನೀಡುವುದಿಲ್ಲ. ಈ ಗಿಡಗಳ ಸುತ್ತಮುತ್ತ ವಾತಾವರಣ ಬಿಸಿಯಾಗಿರುವುದು ಸಾಮಾನ್ಯ. ಆದರೂ ಈ ಜಾಲಿಗಿಡ ದೇಶದ ತುಂಬಾ ಕಂಡು ಬರುವುದು ವಿಶೇಷ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...