Homeಕರ್ನಾಟಕಬಂಟ್ವಾಳ: ಸೇತುವೆಯಿಂದ ನದಿಗೆ ಹಾರಿ ಕಲ್ಲಡ್ಕದ ಯುವಕ ಆತ್ಮಹತ್ಯೆ; ಕೊರೊನಾ ಭಯವನ್ನು ಮೀರಿ ಉಸಿರುಕೊಡಲು ಪ್ರಯತ್ನಿಸಿದ...

ಬಂಟ್ವಾಳ: ಸೇತುವೆಯಿಂದ ನದಿಗೆ ಹಾರಿ ಕಲ್ಲಡ್ಕದ ಯುವಕ ಆತ್ಮಹತ್ಯೆ; ಕೊರೊನಾ ಭಯವನ್ನು ಮೀರಿ ಉಸಿರುಕೊಡಲು ಪ್ರಯತ್ನಿಸಿದ ಯುವಕ!

- Advertisement -
- Advertisement -

ಬಂಟ್ವಾಳದ ಪಾಣೆಮಂಗಳೂರು ಬಳಿಯ ನೇತ್ರಾವತಿ ಸೇತುವೆಯಿಂದ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿದ ಘಟನೆ ನಡೆದಿದೆ. ನದಿಗೆ ಹಾರಿದ ಯುವಕನನ್ನು ಮೇಲಕ್ಕೆತ್ತಿ ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ಯುವಕನನ್ನು ಕಲ್ಲಡ್ಕ ಬಳಿಯ ಕೊಳಕೀರು ನಿವಾಸಿ ಚಂದ್ರಹಾಸ ಮೂಲ್ಯ ಇವರ ಮಗನಾದ ನಿಶಾಂತ್ (28) ಎಂದು ಗುರುತಿಸಲಾಗಿದೆ. ಯುವಕ ದ್ವಿಚಕ್ರ ವಾಹನದಲ್ಲಿ ಬಂದು ಸೇತುವೆಯಿಂದ ಹಾರಿದ್ದಾರೆ ಎನ್ನಲಾಗಿದೆ.

ನಿಶಾಂತ್ ಹಾರಿದ್ದನ್ನು ಗಮನಿಸಿದ ಗೂಡಿನಬಳಿಯ ಯುವಕರಾದ ಝಿಯಾದ್ ಗೂಡಿನಬಳಿ, ಮಹೊಮ್ಮದ್ ಗೂಡಿನಬಳಿ, ಶಮೀರ್ ಗೂಡಿನಬಳಿ, ಮುಖ್ತಾರ್ ಅಕ್ಕರಂಗಡಿ, ತೌಸೀಫ್ ಗೂಡಿನಬಳಿ ಮುಂತಾದವರು ತಕ್ಷಣ ನದಿಗೆ ಧುಮುಕಿ ನದಿಯಿಂದ ಅವರನ್ನು ಮೇಲಕ್ಕೆತ್ತಿ ವಾಹನದಲ್ಲಿ ಹಾಕಿಕೊಂಡು ಬಂಟ್ವಾಳದ ಆಸ್ಪತ್ರೆಗೆ ದಾಖಲಿಸಿದರಾದರೂ ಅಲ್ಲಿ ಅವರು ಮೃತಪಟ್ಟಿದ್ದಾರೆ.

Posted by Naanu Gauri on Sunday, May 24, 2020

ಈ ಬಗ್ಗೆ ನಾನುಗೌರಿ.ಕಾಮ್ ನೊಂದಿಗೆ ಮಾತನಾಡಿದ ಝಿಯಾದ್ ಗೂಡಿನಬಳಿ, “ಯುವಕನೊಬ್ಬ ಸೇತುವೆಯಿಂದ ಹಾರಿದ ಎಂದು ತಿಳಿದೊಡನೆ ನಾವು ಐದು ಮಂದಿ ನದಿಗೆ ಧುಮುಕಿ ಅವರನ್ನು ದಡಕ್ಕೆ ತಂದು, ಬಾಯಿಯ ಮೂಲಕ ಕೃತಕ ಉಸಿರಾಟ ಕೊಟ್ಟು ಹಾಗೂ ಇತರ ಪ್ರಥಮ ಚಿಕಿತ್ಸೆ ಕೊಟ್ಟು ಅಲ್ಲಿಂದ ಆಸ್ಪತ್ರೆಗೆ ದಾಖಲಿಸಿದ್ದೇವೆ”

ನದಿಗೆ ಧುಮುಕಿ ಯುವಕನನ್ನು ಉಳಿಸಲು ಪ್ರಯತ್ನಿಸಿದ ತಂಡದಲ್ಲಿದ್ದ ಝಿಯಾದ್ ಗೂಡಿನಬಳಿ

“ಕೆಲವರು ಕೊರೊನಾ ಸಮಯದಲ್ಲಿ ಬಾಯಿಯ ಮೂಲಕ ಉಸಿರಾಟ ಕೊಡಬೇಡಿ ಎಂದರೂ, ಜೀವವೊಂದನ್ನು ಉಳಿಸುವ ಭರದಲ್ಲಿ ಅದ್ಯಾವುದನ್ನೂ ಗಣನೆಗೆ ತೆಗೆದುಕೊಳ್ಳದೆ ಪ್ರಥಮ ಚಿಕಿತ್ಸೆ ಕೊಟ್ಟು ಆಸ್ಪತ್ರೆಗೆ ದಾಖಲಿಸಿದರೂ ನಮ್ಮ ಕೈಯಲ್ಲಿ ಜೀವವೊಂದನ್ನು ಉಳಿಸಲು ಆಗಲಿಲ್ಲ ಎನ್ನುವುದೇ ಅತ್ಯಂತ ದುಃಖದ ವಿಷಯ” ಎಂದು ಝಿಯಾದ್ ಬೇಸರಪಟ್ಟರು.

ಆತ್ಮಹತ್ಯೆಗೆ ಇನ್ನೂ ಕಾರಣ ತಿಳಿದು ಬಂದಿಲ್ಲ, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಬಂಟ್ವಾಳ ನಗರ ಠಾಣೆಯ ಹೆಡ್ ಕಾನ್ಸ್ಟೇಬಲ್ ಸುರೇಶ್ ತಿಳಿಸಿದ್ದಾರೆ.


ಓದಿ: ಸಿಎಎ ವಿರೋಧಿಗಳ ಬೇಟೆ ಮುಂದುವರಿಕೆ; ಇಬ್ಬರು JNU ವಿದ್ಯಾರ್ಥಿನಿಯರ ಬಂಧನ


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕೋವಿಡ್ ಭ್ರಷ್ಟ ಸುಧಾಕರ್ ಪರವಾಗಿ ಮತ ಕೇಳಲು ಪ್ರಧಾನಿ ಮೋದಿ ಚಿಕ್ಕಬಳ್ಳಾಪುರಕ್ಕೆ ಬರುತ್ತಿದ್ದಾರೆ :...

0
ಪ್ರಧಾನಿ ಮೋದಿಯವರು ಹತ್ತು ವರ್ಷದಲ್ಲಿ ಕೊಟ್ಟ ಒಂದೂ ಆಶ್ವಾಸನೆಯನ್ನೂ ಈಡೇರಿಸದೆ ಭಾರತೀಯರ ನಂಬಿಕೆಗಳಿಗೆ ದ್ರೋಹ ಬಗೆದಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಾಗೇಪಲ್ಲಿಯಲ್ಲಿ ನಡೆದ ಪ್ರಜಾಧ್ವನಿ-2 ಬೃಹತ್ ಜನ ಸಮಾವೇಶದಲ್ಲಿ...