Homeಅಂಕಣಗಳುಬಿಬಿಸಿ ಸಾಕ್ಷ್ಯಚಿತ್ರ; ಪ್ರಶ್ನಿಸುವುದನ್ನೇ ದಮನಿಸುತ್ತಿರುವ ಪ್ರಭುತ್ವ

ಬಿಬಿಸಿ ಸಾಕ್ಷ್ಯಚಿತ್ರ; ಪ್ರಶ್ನಿಸುವುದನ್ನೇ ದಮನಿಸುತ್ತಿರುವ ಪ್ರಭುತ್ವ

- Advertisement -
- Advertisement -

ಕೊಲಿಜಿಯಂ ಮುಂತಾದ ವಿಷಯಗಳನ್ನು ಮುಂದುಮಾಡಿ ಒಂದು ಕಡೆಗೆ ಸುಪ್ರೀಂ ಕೋರ್ಟ್ ಮೇಲೆ ಪರೋಕ್ಷ ದಾಳಿ; ಮತ್ತೊಂದು ಕಡೆಗೆ ಸುಪ್ರೀಂ ಕೋರ್ಟ್ ತೀರ್ಪಿತ್ತಿರುವುದರಿಂದ ಗುಜರಾತಿನ 2002ರ ನರಮೇಧದ ಬಗ್ಗೆ ಯಾವ ಪ್ರಶ್ನೆಯನ್ನೂ ಕೇಳುವಂತಿಲ್ಲ ಎಂಬ ಸೆನ್ಸಾರ್. ’ವಿಶ್ವ ಮಾಧ್ಯಮ  ಸ್ವಾತಂತ್ರ್ಯ’ ದಿನದಂದು ’ಪ್ರಜಾಪ್ರಭುತ್ವಕ್ಕೆ ಅತ್ಯಗತ್ಯವಾದ ಮುಕ್ತ ಮತ್ತು ಕ್ರಿಯಾಶೀಲ ಮಾಧ್ಯಮಕ್ಕೆ ನಮ್ಮ ಅಚಲ ಬೆಂಬಲವನ್ನು ಒತ್ತಿಹೇಳುವ ದಿನವಿದು’ ಎಂದು ಪ್ರಧಾನಿ ಟ್ವೀಟ್ ಮಾಡುವುದು; ಅದೇ ಟ್ವಿಟರ್ ವೇದಿಕೆಯಲ್ಲಿ ತಮ್ಮನ್ನು ಪ್ರಶ್ನಿಸುವ ಯಾವುದೇ ಕಂಟೆಂಟ್‌ಅನ್ನು ಮುಲಾಜಿಲ್ಲದೆ ತೆಗಿಸಲು ಕಾರ್ಯಪ್ರವೃತ್ತರಾಗುವುದು. ವಿರೋಧ ಪಕ್ಷಗಳ ಬಗ್ಗೆ ಸುಳ್ಳೋಪಳ್ಳೋ ಏನು ಬೇಕಾದರೂ ಆಪಾದನೆ ಮಾಡುವುದು; ಆಡಳಿತ ರೂಢ ಬಿಜೆಪಿ ವಿರುದ್ಧವಿರುವ ಯಾವುದೇ ಸುದ್ದಿ ಅಥವಾ ವಿಡಿಯೋಗಳನ್ನು ’ಪಿಐಬಿ ಫ್ಯಾಕ್ಟ್‌ಚೆಕ್’ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಆನ್‌ಲೈನ್ ಸುದ್ದಿ ಮಾಧ್ಯಮಗಳಿಂದ ತೆಗೆಸುವುದು. ಅಂತಹ ಸುದ್ದಿಗಳನ್ನು ಹಂಚಿಕೊಳ್ಳುವ ವಿರೋಧ ಪಕ್ಷಗಳ ರಾಜಕೀಯ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರ ವಿರುದ್ಧ ವಿಚ್‌ಹಂಟ್‌ಗೆ ಇಳಿಯುವುದು. ಇದು ಪ್ರಸಕ್ತ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅನುಸರಿಸುತ್ತಿರುವ ಕುಟಿಲ ನೀತಿ. ಯುಕೆ ಮೂಲದ ಬಿಬಿಸಿ ಸುದ್ದಿ ಮಾಧ್ಯಮದವರು ಇತ್ತೀಚೆಗೆ ಬಿಡುಗಡೆ ಮಾಡಿದ ’ಇಂಡಿಯಾ: ದ ಮೋದಿ ಕೊಶ್ಚನ್’ ಸಾಕ್ಷ್ಯಚಿತ್ರವನ್ನು ದಮನ ಮಾಡಲು ಬಳಸುತ್ತಿರುವ ಅಧಿಕಾರ ದುರುಪಯೋಗವನ್ನು ನೋಡಿದರೆ ಇದು ಇನ್ನಷ್ಟು ನಿಚ್ಚಳವಾಗುತ್ತದೆ. ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ, ಐಟಿ ನಿಯಮಗಳು 2021ರ ತುರ್ತು ಅಧಿಕಾರವನ್ನು ಬಳಸಿ ಪ್ರಶ್ನೆಯಲ್ಲಿರುವ ಸಾಕ್ಷ್ಯಚಿತ್ರವನ್ನು ಯಾರೂ ಪ್ರಸಾರ ಮಾಡದಂತೆ ತಡೆ ಒಡ್ಡುತ್ತಿದೆ. ಅದಕ್ಕೆ ನಿಖರ ಕಾರಣಗಳನ್ನು ನೀಡಲು ಮಾತ್ರ ಇಲ್ಲಿಯವರೆಗೂ ಮುಂದಾಗಿಲ್ಲ!

ಮಾಹಿತಿ ಮತ್ತು ಪ್ರಸಾರ ಖಾತೆಯ ಹಿರಿಯ ಸಲಹೆಗಾರರಾಗಿರುವ ಕಾಂಚನ್ ಗುಪ್ತಾ ಅವರು ಜನವರಿ 21ರಂದು ನೀಡಿರುವ ಹೇಳಿಕೆಯ ಪ್ರಕಾರ, ’ಭಾರತದ ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಅಲ್ಲಗೆಳೆಯುವುದರಿಂದ’ ಮತ್ತು ’ಸಮರ್ಥನೆಯಿಲ್ಲದ ಆರೋಪಗಳನ್ನು ಮಾಡಿರುವುದರಿಂದ’ ಸರ್ಕಾರ ಈ ಸಾಕ್ಷ್ಯಚಿತ್ರವನ್ನು ಹಂಚಿಕೊಳ್ಳುವ ಎಲ್ಲಾ ಲಿಂಕ್‌ಗಳನ್ನು ತೆಗೆಯುವಂತೆ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದೆ ಎಂದಿದ್ದಾರೆ.

2002ರ ಗುಜರಾತ್ ನರಮೇಧದದ ಸಮಯದಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಕಾರ್ಯವೈಖರಿಯನ್ನು ವಿಮರ್ಶಿಸುವ ಈ ಸಾಕ್ಷ್ಯಚಿತ್ರ, ನರಮೇಧದ ಸಮಯದ ಹಲವು ದೃಶ್ಯಾವಳಿಗಳನ್ನು ಪೋಣಿಸಿ, ಹಲವರನ್ನು ಸಂದರ್ಶಿಸಿ (ನರೇಂದ್ರ ಮೋದಿಯವರನ್ನು ಸಮರ್ಥಿಸಿಕೊಳ್ಳುವವರನ್ನೂ ಸಂದರ್ಶಿಸಲಾಗಿದೆ), ಇಷ್ಟೆಲ್ಲಾ ಸಮಯ ಕಳೆದಮೇಲೂ ಉಳಿದಿರುವ ಪ್ರಶ್ನೆಗಳನ್ನು ವೀಕ್ಷಕರ ಮುಂದಿಡುತ್ತದೆ. ಇದು ಯಾವುದೇ ಪಕ್ಷದ ಪ್ರಾಯೋಜಿತ ಕಾರ್ಯಕ್ರಮವಾಗಿರದೆ, ಮಾಧ್ಯಮವೊಂದು ಸ್ವತಂತ್ರವಾಗಿ ನಡೆಸಿದ ವರದಿಗಾರಿಕೆ, ತನಿಖೆ ಮತ್ತು ಸಂದರ್ಶನಗಳ ಮೇಲೆ ಚಿತ್ರಿತವಾಗಿರುವ ಸಾಕ್ಷ್ಯಚಿತ್ರ. ಈ ಸಾಕ್ಷ್ಯಚಿತ್ರ ಮಾಡಿರುವ ಆರೋಪಗಳಿಗೆ ತಮ್ಮ ಪ್ರತಿಕ್ರಿಯೆಗಾಗಿ ಸರ್ಕಾರವನ್ನು ಕೇಳಿದಾಗ, ಸರ್ಕಾರ ಪ್ರತಿಕ್ರಿಯಿಸಲು ನಿರಾಕರಿಸಿದೆ ಎಂದು ಕೂಡ ಬಿಬಿಸಿ ಹೇಳಿದೆ. ಹೀಗಿರುವಾಗ, ಸುಪ್ರೀಂ ಕೋರ್ಟ್ ತೀರ್ಪನ್ನು ಮುಂದೆ ಮಾಡಿ ಈ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸುವುದು ಯಾವ ಪಂಚಾಯಿತಿ ನ್ಯಾಯ? ಪತ್ರಿಕೋದ್ಯಮದ ಮಾನದಂಡಗಳನ್ನು ಅನುಸರಿಸದೆ ಏಕಪಕ್ಷೀಯವಾದ ಸಾಕ್ಷ್ಯಚಿತ್ರವನ್ನು ಬಿಬಿಸಿ ನಿರ್ಮಿಸಿದ್ದರೆ ಆಗ ಸರ್ಕಾರ ತನ್ನ ಪ್ರಶ್ನೆಗಳನ್ನು ಬಿಬಿಸಿಗೆ ಎಸೆಯಬಹುದಿತ್ತು! ಆದರೆ ತಾನೇ ಪ್ರಶ್ನೆಗಳಿಂದ ನುಣುಚಿಕೊಂಡು ಸೆನ್ಸಾರ್ ಮೊರೆ ಹೋದರೆ ಏನನ್ನೋ ಮುಚ್ಚಿಡುವ ಪ್ರಯತ್ನದಂತೆ ಕಾಣುವುದಿಲ್ಲವೇ?

ಇದನ್ನೂ ಓದಿ: ಬಿಬಿಸಿ ಸಾಕ್ಷ್ಯಚಿತ್ರ ನಿಷೇಧ ವಿಚಾರ: ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ ಉಳಿಸಲು ಇದು ಸಕಾಲ ಎಂದ ಅಮೆರಿಕ

ಗುಜರಾತಿನ 2002ರ ನರಮೇಧಕ್ಕೆ ಅಂದಿನ ಮುಖ್ಯಮಂತ್ರಿ ಮೋದಿಯವರ ವೈಫಲ್ಯತೆ ಕಾರಣವಲ್ಲ ಅಥವಾ ಅದರಲ್ಲಿ ಅವರ ಪಾತ್ರವಿರಲಿಲ್ಲ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ನೀಡಿರಬಹುದು. ಆದರೆ ಪತ್ರಿಕೋದ್ಯಮದ ಕೆಲಸ ಹೊಸ ಸಾಕ್ಷ್ಯಗಳನ್ನು ಹುಡುಕುವುದು ಮತ್ತು ತನ್ನ ಪ್ರಶ್ನಿಸುವ ಮನೋಭಾವವನ್ನು ಸದಾ ಉಳಿಸಿಕೊಳ್ಳುವುದು. ಈ ನಿಟ್ಟಿನಲ್ಲಿ ಬಿಬಿಸಿ ಸಾಕ್ಷ್ಯಚಿತ್ರ ಸುಪ್ರೀಂ ಕೋರ್ಟ್ ತೀರ್ಪನ್ನೇನೂ ಮರೆಮಾಚದೆ, ತನ್ನ ವರದಿಗಾರಿಕೆಯ ಹಿನ್ನೆಲೆಯಲ್ಲಿ ಉಳಿದುಕೊಂಡಿರುವ ಪ್ರಶ್ನೆಗಳನ್ನು ಮತ್ತೆ ಕೇಳುವ ದಿಟ್ಟತನ ತೋರಿದೆ. ಇದಕ್ಕೆ ಮೋದಿಯವರೋ ಅಥವಾ ಸರ್ಕಾರದ ಪ್ರತಿನಿಧಿಗಳೋ ಉತ್ತರಿಸಬಹುದಿತ್ತು. ಆರೋಪ ಮತ್ತು ಅದಕ್ಕೆ ಸರ್ಕಾರ ನೀಡುವ ಉತ್ತರಗಳನ್ನು ತಾಳೆ ಹಾಕಿ ಡಾಕ್ಯುಮೆಂಟರಿಯನ್ನು ವೀಕ್ಷಿಸಿದ ಜನರು ತಮ್ಮ ತೀರ್ಮಾನಕ್ಕೆ ಬರಲು ಸಾಧ್ಯವಾಗುತ್ತಿತ್ತು. ಇದನ್ನು ಬಲವಂತದಿಂದ ನಿಯಂತ್ರಿಸುವ ಹುನ್ನಾರ ಮಾಧ್ಯಮಗಳ ಸ್ವಾತಂತ್ರ್ಯದ ಮೇಲೆ ನಡೆಸುವ ದಾಳಿಯಲ್ಲದೆ ಮತ್ತೇನು? ಕೋಮುವಾದಿಗಳು ಸುಟ್ಟುಹಾಕಿದ ಮಾಜಿ ಸಂಸದ ಎಶಾನ್ ಜಾಫ್ರಿಯವರ ಕೊಲೆಗೆ ನ್ಯಾಯ ಸಿಕ್ಕಿಲ್ಲ ಎಂದು ಕೇಳುವುದು ಅಪರಾಧವಾಗಿಹೋಗಿದೆಯೇ?

ಒಂದು ಕಡೆ ಸಲ್ಲದ ಕಾರಣಗಳಿಗೆ ದೀಪಿಕಾ ಪಡುಕೋಣೆ ಮತ್ತು ಶಾರುಖ್ ಖಾನ್ ನಟಿಸಿರುವ ’ಪಠಾನ್’ ಚಿತ್ರವನ್ನು ಬಹಿಷ್ಕಾರ ಮಾಡುವಂತೆ ಕೊಡುತ್ತಿರುವ ಕರೆಗಳನ್ನು ವಿರೋಧಿಸುವ ಪ್ರಾಥಮಿಕ ಕರ್ತವ್ಯವನ್ನೂ ಪಾಲಿಸುತ್ತಿಲ್ಲ; ಸಿನಿಮಾ ಪ್ರದರ್ಶನಕ್ಕೆ ಅಗತ್ಯ ರಕ್ಷಣೆ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸುವ ಮಾತುಗಳನ್ನೂ ಆಡದ ಕೇಂದ್ರ ಸರ್ಕಾರ ಈಗ ತನಗೆ ಅಪಥ್ಯವಾದ ಒಂದು ಸಾಕ್ಷ್ಯಚಿತ್ರವನ್ನು ಭಾರತದ ಜನತೆಯಿಂದ ಮರೆಮಾಚಲು ಸಕ್ರಿಯವಾಗಿದೆ. ಒಂದೊಂದು ಲಿಂಕಿನಿಂದಲೂ ಆ ಸಾಕ್ಷ್ಯಚಿತ್ರವನ್ನು ತೆಗೆದುಹಾಕುವ ಸೂಚನೆ ಬರುತ್ತಿದ್ದಂತೆ ಅದು ಬೇರೇಬೇರೆ ಲಿಂಕುಗಳಲ್ಲಿ ಪ್ರತ್ಯಕ್ಷವಾಗುತ್ತಿರುವುದಂತೂ ಸತ್ಯ. ಅಂತರ್ಜಾಲದಲ್ಲಿ ನಿರ್ಬಂಧಿಸುವುದು ಎಂದರೆ ಪ್ರವಾಹದ ಸಮಯದಲ್ಲಿ ಅಣೆಕಟ್ಟು ಕಟ್ಟಲು ಶ್ರಮಪಟ್ಟಂತೆ. ಹೊಸಹೊಸ ಲಿಂಕುಗಳನ್ನು ಸಂಸದರಾದ ಟಿಎಂಸಿ ನಾಯಕಿ ಮೊಹುವಾ ಮೊಯಿತ್ರಾ ಸೇರಿದಂತೆ ಹಲವು ಪ್ರಾಜ್ಞರು ಮತ್ತೆಮತ್ತೆ ಟ್ವೀಟ್ ಮಾಡಿದ್ದಾರೆ. ಹೈದರಾಬಾದ್ ಸೆಂಟ್ರಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಸಮೂಹ ಈ ಸಾಕ್ಷ್ಯಚಿತ್ರದ ಸಾರ್ವಜನಿಕ ಪ್ರದರ್ಶನವನ್ನು ಏರ್ಪಡಿಸಿತ್ತು. ಜೆಎನ್‌ಯು ಇದರ ಪ್ರದರ್ಶನ ಏರ್ಪಡಿಸಿದಾಗ ವಿದ್ಯುತ್‌ಚ್ಛಕ್ತಿ ನಿಲ್ಲಿಸಿದ ವರದಿಗಳಿವೆ. ಕೇರಳದಲ್ಲಿ ಕೆಲವು ಸಾರ್ವಜನಿಕ ಪ್ರದರ್ಶನಗಳು ನಡೆದಿವೆ. ಹೀಗೆ ಕೇಂದ್ರ ಸರ್ಕಾರದ ನಡೆಗೆ ಪ್ರತಿರೋಧವನ್ನು ಹಲವರು ತೋರಿಸುತ್ತಿದ್ದಾರೆ. ’ತಮ್ಮ ಸುರಕ್ಷತೆಯ ಬಗೆಗಿನ ಭಯದಿಂದ ಸುಮಾರು 30ಕ್ಕೂ ಹೆಚ್ಚು ಜನ ಈ ಸಾಕ್ಷ್ಯಚಿತ್ರದ ಸಂದರ್ಶನದಲ್ಲಿ ಭಾಗವಹಿಸಲು ನಿರಾಕರಿಸಿದರು’ ಎಂದು ಸಾಕ್ಷ್ಯಚಿತ್ರದಲ್ಲಿ ಒಂದು ಕಡೆ ಬರುತ್ತದೆ. ಮಾಧ್ಯಮವೊಂದರ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಜನ ಆತಂಕ ಪಡುವ ಸ್ಥಿತಿ ಭಾರತದಲ್ಲಿದೆ ಎಂಬುದು ಜಗತ್ತಿಗೆ ಈ ದೇಶದ ಬಗ್ಗೆ ಎಂತಹ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂಬುದರ ಬಗ್ಗೆ ಒಕ್ಕೂಟ ಸರ್ಕಾರಕ್ಕೆ ಅರಿವಿದೆಯೇ? ಈ ಭಯವನ್ನು ಮೀರಿದ ಯುವಜನರು ಎಚ್‌ಸಿಯು ಅಂತಹ ಜಾಗದಲ್ಲಿ ಸಾರ್ವಜನಿಕ ಪ್ರದರ್ಶನ ಏರ್ಪಡಿಸುತ್ತಾರೆ ಎಂಬ ಸಂಗತಿಯಾದರೂ ಈ ಸರ್ಕಾರದ ಮಂದಿಗೆ ವಿವೇಕ ನೀಡಲಿ. ದಮನಕಾರಿ ದುರುಳತನ ಕೊನೆಯಾಗಲಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...