ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆ ಇಂದು ರಾಜಸ್ಥಾನದಲ್ಲಿ ಸಾಗಿದ್ದು, ಕಾಂಗ್ರೆಸ್ ಕಾರ್ಯಕರ್ತರು ಭಾರೀ ಸಂಖ್ಯೆಯಲ್ಲಿ ಯಾತ್ರೆಯಲ್ಲಿ ಭಾಗವಹಿಸಿದ್ದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ರಾಜಸ್ಥಾನದ ಬನ್ಸ್ವಾರಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯಯಲ್ಲಿ ಮಾತನಾಡಿ, ಯುವ ಪೀಳಿಗೆಗೆ 5 ಭರಸವೆಗಳನ್ನು ಘೋಷಿಸಿದ್ದಾರೆ. ರ್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯ ನಾಯಕರು ಮಾತನಾಡಿದ್ದಾರೆ.
ರ್ಯಾಲಿ ವೇಳೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿದ ರಾಹುಲ್ ಗಾಂಧಿ, ದೇಶದಲ್ಲಿ 30 ಲಕ್ಷ ಸರ್ಕಾರಿ ಉದ್ಯೋಗಗಳು ಖಾಲಿ ಇವೆ. ಕೇಂದ್ರದಲ್ಲಿ ಅಧಿಕಾರ ಸ್ವೀಕರಿಸಿದ ನಂತರ ಆದ್ಯತೆಯ ಮೇರೆಗೆ 30 ಲಕ್ಷ ಉದ್ಯೋಗಗಳನ್ನು ಒದಗಿಸುತ್ತೇವೆ. ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಶಿಷ್ಯವೇತನವನ್ನು ನೀಡಲಾಗುವುದು, ಕಾಂಗ್ರೆಸ್ ಭಾರತದ ಎಲ್ಲಾ ಯುವಕರಿಗೆ ಶಿಷ್ಯವೇತನಕ್ಕೆ( ತರಬೇತಿ ವೇಳೆ ನೀಡುವ ವೇತನ) ಅವಕಾಶಗಳನ್ನು ಒದಗಿಸುತ್ತದೆ. ಸರ್ಕಾರಿ ಕಚೇರಿಗಳು ಮತ್ತು ಖಾಸಗಿ ಕಂಪನಿಗಳಲ್ಲಿ ಪದವೀಧರರು ಮತ್ತು ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಈ ಶಿಷ್ಯವೇತನ ನೀಡಲಾಗುವುದು. MNREGAದಂತೆಯೇ ಇದನ್ನು ನಾವು ಕಾನೂನಾಗಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಭರವಸೆಯನ್ನು ನೀಡಿದ್ದಾರೆ. ಈ ಶಿಷ್ಯವೇತನದ ಅಡಿಯಲ್ಲಿ, ಯುವಕರಿಗೆ ಒಂದು ವರ್ಷ ತರಬೇತಿ ನೀಡಲಾಗುವುದು ಮತ್ತು ತರಬೇತಿ ಸಮಯದಲ್ಲಿ ರೂ.1 ಲಕ್ಷ ಸ್ಟೈಫಂಡ್ ನೀಡಲಾಗುವುದು ಎಂದು ರಾಹುಲ್ ಗಾಂಧಿ ಭರವಸೆಯನ್ನು ನೀಡಿದ್ದಾರೆ.
ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಕಾಂಗ್ರೆಸ್ ಸರ್ಕಾರ ಕಟ್ಟುನಿಟ್ಟಾಗಿ ಕ್ರಮವನ್ನು ಕೈಗೊಳ್ಳಲಿದೆ ಎಂದು ರಾಹುಲ್ ಗಾಂಧಿ ಹೇಳಿದ್ದು, ಪೇಪರ್ ಸೋರಿಕೆ ಸಮಸ್ಯೆಯನ್ನು ತಡೆಯಲು, ಪೇಪರ್ ಸೋರಿಕೆ ವಿರುದ್ಧ ಕಾಂಗ್ರೆಸ್ ಕಾನೂನು ತರಲಿದೆ. ಅಲ್ಲದೆ, ಸರ್ಕಾರವು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಮಾತ್ರ ನಡೆಸುತ್ತದೆ, ಯಾವುದೇ ಹೊರಗುತ್ತಿಗೆ ಇರುವುದಿಲ್ಲ ಎಂದು ಹೇಳಿದ್ದಾರೆ.
ಗಿಗ್ ಕಾರ್ಮಿಕರಿಗೆ(ಗಿಗ್ ಕೆಲಸಗಾರರು ಸ್ವತಂತ್ರ ಗುತ್ತಿಗೆದಾರರು, ಆನ್ಲೈನ್ ಪ್ಲಾಟ್ಫಾರ್ಮ್ ಕೆಲಸಗಾರರು, ಗುತ್ತಿಗೆ ಸಂಸ್ಥೆಯ ಕೆಲಸಗಾರರು ಮತ್ತು ತಾತ್ಕಾಲಿಕ ಕೆಲಸಗಾರರು) ಸ್ಟಾರ್ಟ್ಅಪ್ ನಿಧಿಗಳು ಮತ್ತು ಸಾಮಾಜಿಕ ಭದ್ರತೆಯ ಭರವಸೆ ನೀಡಿದ್ದು, ಗಿಗ್ ಕಾರ್ಮಿಕರ ಸಾಮಾಜಿಕ ಭದ್ರತೆಗೆ ದೇಶಾದ್ಯಂತ ಕಾನೂನನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ.
ಸಣ್ಣ ಉದ್ಯಮಗಳನ್ನು ಪ್ರಾರಂಭಿಸಲು ಸಿದ್ಧರಿರುವ ಯುವಕರನ್ನು ಬೆಂಬಲಿಸಲು ನಾವು ರೂ. 5000 ಕೋಟಿಗಳೊಂದಿಗೆ ಆರಂಭಿಕ ನಿಧಿಯನ್ನು ರಚಿಸುತ್ತೇವೆ. ಈ ಸ್ಟಾರ್ಟಪ್ ದೇಶದ ಪ್ರತಿಯೊಂದು ಜಿಲ್ಲೆಗೂ ವಿಸ್ತರಣೆಯನ್ನು ನಾವು ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
युवा देश की नींव है, और मज़बूत नींव ही एक मज़बूत भारत का निर्माण करेगी। कांग्रेस युवाओं को एक बेहतर भविष्य देने के लिए प्रतिबद्ध है।
राहुल गांधी की ये पांच गारंटियां युवाओं को अपनी तक़दीर ख़ुद लिखने के काबिल बनाएंगी। ये राहुल गांधी का बेरोज़गारी पर हल्ला बोल है!… pic.twitter.com/NdBc4bTgaj
— Bharat Jodo Nyay Yatra (@bharatjodo) March 7, 2024
ಇದನ್ನು ಓದಿ: SFI ನಾಯಕ ಅಭಿಮನ್ಯು ಹತ್ಯೆ ಪ್ರಕರಣ: ನ್ಯಾಯಾಲಯದಿಂದ ದಾಖಲೆಗಳು ನಾಪತ್ತೆ!