Homeಮುಖಪುಟಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

ಭಿಲ್ ಸಮುದಾಯ ಬೆಳೆಸಿದ ಬಾಓಬಾಬ್ ಮರಗಳು

- Advertisement -
- Advertisement -

ಬೃಹದಾಕಾರವಾಗಿ ಬೆಳೆಯುವ ಬಾಓಬಾಬ್ ಅಥವಾ ಕನ್ನಡದಲ್ಲಿ ದೊಡ್ಡ ಹುಣಸೆ, ಆನೆ ಹುಣಸೆ ಎಂದು ಕರೆಯಲ್ಪಡುವ ಮರಗಳು ತಮ್ಮ ವಿಚಿತ್ರವಾದ ಆಕಾರದಿಂದ ಎಲ್ಲರ ಗಮನವನ್ನೂ ಸೆಳೆಯುತ್ತವೆ. ಆಗಾಗ ಪತ್ರಿಕೆಗಳ ಲೇಖನಗಳಲ್ಲಿ ಅಥವಾ ಸಾಕ್ಷ್ಯಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಈ ಮರಗಳು ಮತ್ತೆ ಸುದ್ದಿಯಲ್ಲಿವೆ. ಮಧ್ಯಪ್ರದೇಶದ ಭಿಲ್ ಬುಡಕಟ್ಟು ಜನರು ವಾಸವಿರುವ ಮಂಡು ಎಂಬ ಊರು ಬಹುಶಃ ಭಾರತದಲ್ಲಿಯೇ ಅತಿ ಹೆಚ್ಚು ಬಾಓಬಾಬ್ ಮರಗಳನ್ನು ಹೊಂದಿದ ಪ್ರದೇಶವಾಗಿದೆ. ಈ ಪ್ರದೇಶದಿಂದ ಹನ್ನೊಂದು ಬಾಓಬಾಬ್ ಮರಗಳನ್ನು ಹೈದರಾಬಾದಿನ ಒಂದು ಸಸ್ಯಶಾಸ್ತ್ರೀಯ ಉದ್ಯಾನವನಕ್ಕೆ ಸ್ಥಳಾಂತರಿಸಲಾಗುತ್ತಿತ್ತು. ಆ ಉದ್ಯಾನವು, ’ಈ ಮರಗಳನ್ನು ಸಂರಕ್ಷಿಸಬೇಕಾಗಿದೆ ಹಾಗಾಗಿ ಅವುಗಳನ್ನು ಕಳುಹಿಸಿಕೊಡಿ’ ಎಂದು ಮಧ್ಯಪ್ರದೇಶದ ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿತ್ತು. ಅದರ ಅಂಗವಾಗಿಯೇ ಈ ಕಾರ್ಯಾಚರಣೆ ನಡೆಯುತ್ತಿತ್ತು. ಶತಮಾನಗಳಿಂದ ಈ ಮರಗಳ ಜೊತೆಗೇ ಸಹಜೀವನ ನಡೆಸಿರುವ ಭಿಲ್ ಬುಡಕಟ್ಟು ಜನ, ಈ ಹಠಾತ್ ಸ್ಥಳಾಂತರದಿಂದ ಸಹಜವಾಗಿಯೇ ಕೋಪಗೊಂಡಿದ್ದರು. ಯಾರಾದರೂ ಮರಗಳನ್ನು ಸಂರಕ್ಷಿಸುವದಿದ್ದರೆ ಅವುಗಳ ಸಸಿಗಳನ್ನು ತೆಗೆದುಕೊಂಡು ಹೋಗುತ್ತಾರೆ, ಆದರೆ ಈ ದೊಡ್ಡ ಮರಗಳನ್ನು ತೆಗೆದುಕೊಂಡು ಹೋಗುವ ಉದ್ದೇಶವಾದರೂ ಏನು ಎಂಬುದು ಅವರ ಪ್ರಶ್ನೆಯಾಗಿತ್ತು, ಅಲ್ಲದೆ, ತಲೆಮಾರುಗಳಿಂದ ಈ ಮರಗಳ ಜೊತೆಯೇ ಬದುಕಿ ಬಂದಿರುವ ತಮಗೆ, ಮುಂಬರುವ ದಿನಗಳಲ್ಲಿ ಎಲ್ಲಿ ಇವುಗಳ ಮೇಲಿನ ಹಕ್ಕು ತಪ್ಪಿಹೋಗುವುದೋ ಎಂಬ ಭಯವೂ ಕಾರಣವಿದ್ದಿತು. ಕಡೆಗೆ ಸರ್ಕಾರಿ ಅಧಿಕಾರಿಗಳು ಜನರನ್ನು ಶಾಂತಗೊಳಿಸಿ ಅವರಿಗೂ ಅನುಕೂಲವಾಗುವಂತೆ ಈ ಮರಗಳಿಗೆ ಭೌಗೋಳಿಕ ಸೂಚಿಯನ್ನು ಅಥವಾ ಜಿಯಾಗ್ರಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್‌ಅನ್ನು ಕೊಡಲು ಪ್ರಯತ್ನಿಸುವುದಾಗಿ ಹೇಳಿತು. ಸಾವಿರಾರು ವರ್ಷಗಳಿಂದ ನಾವು ರಕ್ಷಿಸಿಕೊಂಡು ಬಂದಿರುವ ಈ ಮರಗಳಿಗೆ ಜಿಐ ಟ್ಯಾಗ್‌ನ ಹಂಗು ಈಗೇಕೆ ಎಂಬ ಪ್ರಶ್ನೆಯೂ ಜನರಲ್ಲಿ ಮೂಡದಿರಲಿಲ್ಲ. ಜಿಐ ಟ್ಯಾಗ್‌ಅನ್ನು ಯಾವುದೇ ಪ್ರದೇಶದ ವಿಶೇಷ ಉತ್ಪನ್ನ, ತಿನಿಸು ಅಥವಾ ಸ್ಥಳೀಯವಾಗಿ ಬೆಳೆಯುವ ಸಸ್ಯ ಅಥವಾ ಬೆಳೆಗಳಿಗೆ ಕೊಡಲಾಗುತ್ತದೆ. ಉದಾಹರಣೆಗೆ ಕರ್ನಾಟಕದ ಬ್ಯಾಡಗಿ ಮೆಣಸಿನಕಾಯಿ, ಮೊಳಕಾಲ್ಮೂರು ಸೀರೆ, ಧಾರವಾಡ ಪೇಢಾ, ಚನ್ನಪಟ್ಟಣದ ಗೊಂಬೆ, ನಂಜನಗೂಡಿನ ರಸಬಾಳೆ ಮತ್ತು ಮೈಸೂರು ಸಿಲ್ಕ್ ಮುಂತಾದವಕ್ಕೆ ಜಿಐ ಟ್ಯಾಗ್ ಕೊಡಲಾಗಿದೆ. ಇದರಿಂದಾಗಿ ಆಯಾ ಉತ್ಪನ್ನಕ್ಕೆ ಮಾನ್ಯತೆಯು ದೊರಕಿ ಅದರ ಮಾರುಕಟ್ಟೆಯೂ ವಿಸ್ತರಿಸುತ್ತದೆ ಮತ್ತು ನಕಲಿಯ ವಿರುದ್ಧ ರಕ್ಷಣೆಯೂ ದೊರೆಯುತ್ತದೆ. ಆದರೆ ಭಾರತದ ಮೂಲದ್ದೇ ಅಲ್ಲದ ಮತ್ತು ಭಾರತದ ಇತರೆಡೆಗಳಲ್ಲಿಯೂ ಇರುವ ಈ ಮರಗಳಿಗೆ ಹೇಗೆ ಜಿಐ ಪಡೆಯುತ್ತಾರೆ ಎಂಬುದೂ ಸೂಕ್ತ ಪ್ರಶ್ನೆಯೇ ಆಗಿದೆ.

ಈ ಬಾಓಬಾಬ್ ಮರಗಳು ನಮ್ಮ ಕರ್ನಾಟಕದಲ್ಲಿಯೂ ಇವೆ. ಮೊದಲು ಸವಣೂರಿನ ಇವುಗಳದ್ದೇ ಹೆಸರಿನ ದೊಡ್ಡಹುಣಸೆ ಮಠದ ಆವರಣದಲ್ಲಿರುವ ಮೂರೇ ಮರಗಳು ಮಾತ್ರ ರಾಜ್ಯದಲ್ಲಿವೆ ಎಂದು ತಿಳಿಯಲಾಗಿತ್ತು; ಆದರೆ ಇವು ಬೆಂಗಳೂರಿನ ಲಾಲ್‌ಬಾಗ್ ಒಳಗೊಂಡಂತೆ ನಾಡಿನ ಬೇರೆ ಪ್ರದೇಶದಲ್ಲಿಯೂ ಇವೆ. ನಾನು ಕೆಲ ವರ್ಷಗಳ ಹಿಂದೆ ನನ್ನ ತಂದೆಯ ಜೊತೆ ಬೆಳಗಾವಿ ಜಿಲ್ಲೆಯ ಗಡಿ ಭಾಗದ ಒಂದು ಹಳ್ಳಿಗೆ ಭೇಟಿ ನೀಡಿದ್ದೆ. ಅಲ್ಲಿ ದೊಡ್ಡಹುಣಸೆ ಮರ ಇದೆ ಎಂದು ಪರಿಚಿತರೊಬ್ಬರಿಂದ ತಿಳಿದ ಸುದ್ದಿಯೇ ಈ ಭೇಟಿಗೆ ಕಾರಣವಾಗಿತ್ತು. ಆ ಮರವು ಸವಣೂರಿನ ಮರದಷ್ಟು ದೊಡ್ಡದಲ್ಲದಿದ್ದರೂ ಸುಮಾರು 42 ಅಡಿಗಳಷ್ಟು ಸುತ್ತಳತೆ ಹೊಂದಿದ ದೊಡ್ಡ ಮರವೇ ಆಗಿತ್ತು. ಈ ಮರವಷ್ಟೇ ಅಲ್ಲದೆ ಆ ಊರಿನ ಹೆಸರೂ ಅಚ್ಚರಿದಾಯಕವಾಗಿಯೇ ಇದೆ. ಬೊಳಶ್ಯಾನ ಹಟ್ಟಿ ಎಂಬ ಆ ಊರಿಗೆ ಆ ಹೆಸರು ಬರಲು ಕಾರಣ ಒಬ್ಬ ಸೂಫಿ ಸಂತ ಎಂದು ಹೇಳಲಾಗುತ್ತದೆ. ಶತಮಾನಗಳ ಹಿಂದೆ ಬುಲ್ಲೆಷಾ ಎಂಬ ಸಂತನೇ ಆ ಮರವನ್ನು ನೆಟ್ಟಿದ್ದು ಎಂದು ಹೇಳಲಾಗುತ್ತದೆ. ಈ ಪ್ರತೀತಿಯ ಕುರಿತು ಸಾಕ್ಷಿಯನ್ನು ಹುಡುಕಬೇಕಷ್ಟೆ. ಇದಷ್ಟೇ ಅಲ್ಲದೆ ಬೆಳಗಾವಿ ಜಿಲ್ಲೆಯ ನಿಡಸೋಸಿಯ ವಿರಕ್ತ ಮಠದಲ್ಲಿಯೂ ಬಾಓಬಾಬ್ ಮರವಿದೆ. ಇನ್ನು ಸವಣೂರಿನಲ್ಲಿರುವ ಮರಗಳು ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಮರಗಳಾಗಿವೆ. ಇವು ಸುಮಾರು 18 ಮೀಟರ್ ಸುತ್ತಳತೆ ಹೊಂದಿದ್ದು, ಸಾವಿರಾರು ವರ್ಷದಷ್ಟು ಹಳೆಯವಾಗಿವೆ. ಇವುಗಳು ಭಾರತಕ್ಕೆ ಬಂದದ್ದು ಬಹುಶಃ ಅರಬ್ ವ್ಯಾಪಾರಿಗಳಿಂದಲೇ ಇರಬೇಕು. ನಮ್ಮ ನಾಡಿನ ಮರಗಳಿಗೆ ಸೂಫಿ ಸಂತರ ನಂಟು ಇದ್ದರೆ, ಮಧ್ಯ ಪ್ರದೇಶದಲ್ಲಿ ಇವುಗಳಿಗೆ ಖೋರಾಸಾನಿ ಇಮ್ಲಿ (ಹುಣಸೆ) ಎಂದು ಕರೆಯುತ್ತಾರೆ. ಖೋರಾಸಾನ್ ಎಂಬುದು ಇರಾನಿನ ಒಂದು ಪ್ರದೇಶವಾಗಿದೆ.

ಇದನ್ನೂ ಓದಿ: ವಿಶ್ವ ಭೂಮಿ ದಿನ; ಪ್ರಾಜೆಕ್ಟ್ ಟೈಗರ್: ಹುಲಿ ಸಂರಕ್ಷಣೆಯ ಹಾದಿಯಲ್ಲಿ ಐವತ್ತು ವರ್ಷಗಳು

ಈ ಮರಗಳ ಮೂಲ ಆಫ್ರಿಕಾ ಖಂಡವಾಗಿದ್ದು ಒಟ್ಟು ಒಂಭತ್ತು ಪ್ರಬೇಧಗಳು ಕಂಡುಬರುತ್ತವೆ. ಅದರಲ್ಲಿಯ ಆರು ಪ್ರಬೇಧಗಳು ಮಡಗಾಸ್ಕರ್ ದ್ವೀಪದಲ್ಲಿ ಕಂಡುಬಂದರೆ ಎರಡು ಪ್ರಬೇಧಗಳು ಆಫ್ರಿಕಾದ ಮುಖ್ಯ ಭೂಮಿಯಲ್ಲಿ (mainland) ಕಂಡುಬರುತ್ತವೆ. ಇನ್ನುಳಿದ ಒಂದು ಪ್ರಬೇಧವು ದೂರದ ಆಸ್ಟ್ರೇಲಿಯಾದಲ್ಲಿ ಕಂಡುಬರುತ್ತದೆ. ಇದು ಅಲ್ಲಿ ಹೇಗೆ ಹೋಯಿತು ಎಂಬುದೇ ಸೋಜಿಗ. ಇದು ಭೂಖಂಡಗಳು ಬೇರ್ಪಟ್ಟಾಗ (continental drift) ಒಂದು ಪ್ರಬೇಧ ಅಲ್ಲಿ ವಿಕಾಸ ಹೊಂದಿರಬಹುದು; ಇಲ್ಲವೇ 70000 ವರ್ಷಗಳ ಹಿಂದೆ ಆಫ್ರಿಕಾದಿಂದ ಉಂಟಾದ ಮಾನವ ವಲಸೆಯ ಕಾರಣದಿಂದಾಗಿಯೂ ಅಲ್ಲಿ ಬಾಓಬಾಬ್ ಮರಗಳು ಪಸರಿಸಿ ಹೊಸ ಪ್ರಬೇಧವಾಗಿ ವಿಕಾಸವಾಗಿರಬಹುದು. ಇವುಗಳಲ್ಲಿ ನಮ್ಮ ದೇಶದಲ್ಲಿ ಕಂಡುಬರುವ ಮರಗಳು adansonia digitata ಎಂಬ ಬಾಓಬಾಬ್ ಮರಗಳ ಪ್ರಬೇಧಕ್ಕೆ ಸೇರಿವೆ. ಇವುಗಳ ಎಲೆಯ ಐದು ಕವಲುಗಳನ್ನು ಹೊಂದಿದ್ದು ಅವು ಕೈನ ಐದು ಬೆರಳುಗಳಂತೆ ಕಾಣುತ್ತವೆ, ಲ್ಯಾಟಿನ್ ಭಾಷೆಯಲ್ಲಿ ಡಿಜಿಟ್ ಅಂದರೆ ಬೆರಳು, ಹಾಗಾಗಿ ಇವಕ್ಕೆ digitata ಎಂಬ ಹೆಸರನ್ನು ಕೊಡಲಾಗಿದೆ.

ಈ ಮರವು ನೈಸರ್ಗಿಕವಾಗಿ ಒಣ ಕುರುಚಲು ಅಥವಾ ಮರುಭೂಮಿ ಪ್ರದೇಶದಲ್ಲಿ ಬೆಳೆಯುತ್ತದೆ. ಈ ಮರ ತನ್ನ ಗಾತ್ರ ಮತ್ತು ಆಕೃತಿಯಿಂದ ಗಮನ ಸೆಳೆಯುವುದು ಮಾತ್ರವಲ್ಲ, ಮರುಭೂಮಿ ಜನರ ಜೀವನಾಡಿಯಾಗಿದೆ. ಈ ಮರವನ್ನು ಜೀವದಾಯಿ ಮರವೆಂದೂ ಕರೆಯುತ್ತಾರೆ. ಇದು ಮಳೆ ಕಡಿಮೆಯಿರುವ ಒಣ ಪ್ರದೇಶದಲ್ಲಿ ಬೆಳೆಯುವದರಿಂದ, ಅಲ್ಲಿ ಮಳೆ ಬಂದ ಸಂದರ್ಭದಲ್ಲಿ ಅದು ತನ್ನ ಕಾಂಡದೊಳಗೆ ಸಾವಿರಾರು ಗ್ಯಾಲನ್‌ಗಳಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುತ್ತದೆ. ಬಿರುಬೇಸಿಗೆಯ ಕಾಲದಲ್ಲಿ ಪ್ರಾಣಿಪಕ್ಷಿಗಳು ಮತ್ತು ಅಲ್ಲಿನ ಜನರು ಈ ನೀರನ್ನು ಉಪಯೋಗಿಸುತ್ತಾರೆ. ಇದೇ ತರಹದ ವ್ಯವಸ್ಥೆಯನ್ನು ನಮ್ಮದೇ ನಾಡಿನ ಮತ್ತಿ ಮರವೂ ಮಾಡಿಕೊಂಡಿದೆ. ನಮ್ಮ ನಾಡಿನ ಸೋಲಿಗರು ಮತ್ತಿತರ ಮೂಲನಿವಾಸಿಗಳಿಗೆ ಇದು ಚಿರಪರಿಚಿತ. ಅಷ್ಟೇ ಅಲ್ಲದೆ ಈ ಮರದ ಹಣ್ಣು ಪೋಷಕಾಂಶಗಳ ಆಗರ. ಈ ಹಣ್ಣಿನಲ್ಲಿ ಇರುವಷ್ಟು ವಿಟಮಿನ್ ’ಸಿ’, ಬೇರೆ ಯಾವ ಹಣ್ಣಿನಲ್ಲಿಯೂ ಇಲ್ಲ. ಮುಂಚೆ ಸಮುದ್ರಯಾನ ಮಾಡುವವರು ವಿಟಮಿನ್ ’ಸಿ’ನ ಕೊರತೆಯಿಂದ ಉಂಟಾಗುವ ಸ್ಕರ್ವಿ ರೋಗದಿಂದ ರಕ್ಷಿಸಿಕೊಳ್ಳಲು ಈ ಮರದ ಹಣ್ಣನ್ನೇ ಉಪಯೋಗಿಸುತ್ತಿದ್ದರು. ಬಹುಶಃ ಇದೇ ಕಾರಣಕ್ಕೆ ಸಮುದ್ರಯಾನಿಗಳು ಈ ಮರದ ಬೀಜವನ್ನು ಎಲ್ಲೆಡೆ ಪ್ರಸಾರ ಮಾಡಿರಬಹುದು. ಇನ್ನೊಂದು ವಿಷಯವನ್ನು ಗಮನಿಸುವುದಾದರೆ ಎಲ್ಲೆಲ್ಲಿ ಗುಲಾಮರ ವ್ಯಾಪಾರ ನಡೆಯುತ್ತಿತ್ತೋ ಆ ಎಲ್ಲ ಮಾರ್ಗಗಳಲ್ಲಿ ಮತ್ತು ದೇಶಗಳಲ್ಲಿ ಈ ಮರಗಳು ಕಂಡುಬರುತ್ತವೆ. ಬಹುಶಃ ನಮ್ಮ ದೇಶದಲ್ಲೂ ಸಿದ್ದಿಗಳ ಆಗಮನ ಮತ್ತು ಈ ಮರಗಳ ಪ್ರಸರಣಕ್ಕೆ ಒಂದಕ್ಕೊಂದು ಸಂಬಂಧವಿದ್ದಿರಬಹುದು. ಈ ಮರಗಳು ಸಾವಿರಾರು ವರ್ಷಗಳ ಇತಿಹಾಸವನ್ನು ತಮ್ಮೊಳಗೆ ಇರಿಸಿಕೊಂಡು ಇನ್ನೂ ನಿಂತಿವೆ. ಇನ್ನು ಇಂತಹ ಮರಗಳ ರಕ್ಷಣೆಯ ಕುರಿತು ಹೇಳಬಹುದಾದರೆ, ಅವುಗಳನ್ನು ನಮ್ಮ ದೇಶದಲ್ಲಿ ಸ್ಮಾರಕ ವೃಕ್ಷವಾಗಿ ಉಳಿಸಿಕೊಳ್ಳಬಹುದು, ಆದರೆ ಬಹುಮುಖ್ಯವಾಗಿ, ಅವುಗಳ ನೈಸರ್ಗಿಕ ಅವಾಸದಲ್ಲಿ ಅವುಗಳ ರಕ್ಷಣೆ ಆಗಬೇಕಿದೆ.

ಗುರುಪ್ರಸಾದ್ ತಿಮ್ಮಾಪುರ

ಗುರುಪ್ರಸಾದ್ ತಿಮ್ಮಾಪುರ
ವೃತ್ತಿಯಲ್ಲಿ ಎಂಜಿನಿಯರ್ ಆಗಿರುವ ಗುರು ಪರಿಸರ, ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಸರ ಕಾಳಜಿಗೆ ಸಂಬಂಧಿಸಿದಂತೆ ಹಲವು ಲೇಖನಗಳನ್ನು ಬರೆದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...