ಸಾರ್ವಜನಿಕ ವಲಯದ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ SC, ST ಮತ್ತು OBCಗಳ ಮೀಸಲಾತಿಯನ್ನು ದುರ್ಬಲಗೊಳಿಸುವುದು ಮತ್ತು ಕೊನೆಗೊಳಿಸುವುದು ಬಿಜೆಪಿ-ಆರ್ಎಸ್ಎಸ್ನ ಕಾರ್ಯಸೂಚಿಯಾಗಿದೆ ಎಂದು ಪ್ರಕಾಶ್ ಅಂಬೇಡ್ಕರ್ ಅವರು ಆರೋಪಿಸಿದ್ದಾರೆ.
ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ಮಹಾರಾಷ್ಟ್ರ ಸರ್ಕಾರವು, ಸರ್ಕಾರಿ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಿಗೆ ಗುತ್ತಿಗೆ ಸಿಬ್ಬಂದಿಯನ್ನು ನೇಮಿಸಲು 9 ಖಾಸಗಿ ಏಜೆನ್ಸಿಗಳನ್ನು ನೋಂದಾಯಿಸಲು ನಿರ್ಧರಿಸಿದ್ದು, ಸರ್ಕಾರಿ ವಲಯದಲ್ಲಿ SCಗಳು, STಗಳು ಮತ್ತು OBCಗಳಿಗೆ ಮೀಸಲಾತಿಗಳನ್ನು ಕೊನೆಗೊಳಿಸುವ ಹಲವು ತಂತ್ರಗಳಲ್ಲಿ ಇದು ಒಂದಾಗಿದೆ ಎಂದು ಹೇಳಿದ್ದಾರೆ.
ಬಿಜೆಪಿ-ಆರ್ಎಸ್ಎಸ್ನ ಮೀಸಲಾತಿ ವಿರೋಧಿ ಸಂಘವು ಭಾರತದ ದಲಿತರು, ಆದಿವಾಸಿಗಳು ಮತ್ತು ಒಬಿಸಿಗಳು ಶಿಕ್ಷಣ ಪಡೆಯುವುದು, ಸಾಮಾಜಿಕ ಆರ್ಥಿಕ ಉನ್ನತಿ ಸಾಧಿಸುವುದು ಮತ್ತು ಸವರ್ಣಿಯರಿಗೆ ಹೆಗಲಿಗೆ ಹೆಗಲು ಕೊಟ್ಟು ಬೆಳೆಯುವುದನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ನಾನು ಪುನರಾವರ್ತಿಸುತ್ತೇನೆ, ಈ ನೀತಿಯು ಶುದ್ಧ ರೂಪದಲ್ಲಿ ಜಾತಿವಾದವಾಗಿದೆ ಮತ್ತು ಮೀಸಲಾತಿಗಳನ್ನು ದುರ್ಬಲಗೊಳಿಸುವ ಮತ್ತು ಕೊನೆಗೊಳಿಸುವ ಗುರಿಯನ್ನು ಹೊಂದಿದೆ ಎಂದು ಪ್ರಕಾಶ್ ಅಂಬೇಡ್ಕರ್ ಅವರು ಹೇಳಿದ್ದಾರೆ.
BJP-RSS’ agenda is to dilute and END reservations of the SCs, STs and OBCs in the public sector — educations and jobs.
The Eknath Shinde-led Shiv Sena and BJP Maharashtra government’s decision to enrol 9 PRIVATE AGENCIES to provide contractual staffers for various posts in… pic.twitter.com/BppMwVPbnq
— Prakash Ambedkar (@Prksh_Ambedkar) September 18, 2023
ಇದನ್ನು ಓದಿ: ಅಣ್ಣಾಮಲೈ ವಿರುದ್ಧ ಆಕ್ರೋಶ: ಬಿಜೆಪಿ ಜೊತೆಗಿನ ಮೈತ್ರಿ ಮುರಿದ ಎಐಎಡಿಎಂಕೆ