ಶುಕ್ರವಾರ ಬೆಳಗ್ಗೆ ಬಾಂಬ್ ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಬೆಂಗಳೂರಿನ ಸುಮಾರು ಏಳು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ತೆರವುಗೊಳಿಸಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಶುಕ್ರವಾರ, ಏಪ್ರಿಲ್ 8 ರಂದು ಬೆಳಿಗ್ಗೆ 11.09 ಕ್ಕೆ ಶಾಲೆಯೊಂದಕ್ಕೆ ಕಳುಹಿಸಲಾದ ಇಮೇಲ್, ಶಾಲೆಗಳಲ್ಲಿ ‘ಅತ್ಯಂತ ಶಕ್ತಿಯುತ ಬಾಂಬ್’ ಅನ್ನು ಇರಿಸಲಾಗಿದೆ ಎಂದು ಹೇಳಿಕೊಂಡಿದೆ. ಇಮೇಲ್ಗಳು ಬಂದ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಶಾಲೆಗಳ ಆವರಣದಲ್ಲಿ ಬಾಂಬ್ ಸ್ಕ್ವಾಡ್ನಿಂದ ತಪಾಸಣೆ ನಡೆಸಲಾಗುತ್ತಿದೆ ಎಂದು TNM ವರದಿ ಹೇಳಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಶಾಲೆಯಲ್ಲಿ ಬಾಂಬ್ ಇಡಲಾಗಿದ್ದು, ಅದು ತಮಾಷೆಯ ವಿಷಯ ಅಲ್ಲ ಎಂದು ಇಮೇಲ್ ಹೇಳಿದೆ. “ಕೂಡಲೇ ಪೋಲಿಸ್ ಮತ್ತು ಸಪ್ಪರ್ಗಳಿಗೆ ಕರೆ ಮಾಡಿ. ನಿಮ್ಮನ್ನೂ ಒಳಗೊಂಡಂತೆ ನೂರಾರು ಜೀವಗಳು ನರಳಬಹುದು, ವಿಳಂಬ ಮಾಡಬೇಡಿ, ಈಗ ಎಲ್ಲವೂ ನಿಮ್ಮ ಕೈಯಲ್ಲಿದೆ” ಎಂದು ಇಮೇಲ್ ತಿಳಿಸಿದೆ.
“ಗೋವಿಂದಪುರ ವ್ಯಾಪ್ತಿಯಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಇಂಡಿಯನ್ ಪಬ್ಲಿಕ್ ಸ್ಕೂಲ್ ಮತ್ತು ಸೇಂಟ್ ವಿನ್ಸೆಂಟ್ ಪಲ್ಲೋಟ್ಟಿ ಶಾಲೆಯಿಂದ ಕರೆಗಳು ಬಂದಿವೆ . ಸ್ಥಳಕ್ಕೆ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದೆ” ಎಂದು ಪೂರ್ವ ವಲಯದ ಡಿಸಿಪಿ, ಭೀಮಾಶಂಕರ್ ಗುಳೇದ್ ಹೇಳಿದ್ದಾರೆ.
ಬಾಂಬ್ ಬೆದರಿಕೆಯ ಹಿಂದೆ ಇರುವವರು ಯಾರು ಎಂದು ಇನ್ನೂ ಗುರುತು ಪತ್ತೆಯಾಗಿಲ್ಲ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂಗಳಾದ ಎಚ್ಡಿಕೆ, ಸಿದ್ದರಾಮಯ್ಯ, ಸಾಹಿತಿ ಕುಂವೀ ಸೇರಿ 61+ ಜನರಿಗೆ ಕೊಲೆ ಬೆದರಿಕೆ