Homeಮುಖಪುಟಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ಉಪಚುನಾವಣೆ: ಗಾಳಿ ಬೀಸಿದತ್ತ ಹೋದ ಅಲೆಯಷ್ಟೇ ಅಲ್ಲ, ಆಡಳಿತದ ವಿರುದ್ಧದ ಭಾವನೆ ಘನೀಭವಿಸಿಲ್ಲ

ಇವೆಲ್ಲದರ ಹೊರತಾಗಿಯೂ ಕ್ರಿಯಾಶೀಲ ವಿರೋಧ ಪಕ್ಷಗಳು ಆಡಳಿತ ಪಕ್ಷದ ದುರಾಡಳಿತದ ವಿರುದ್ಧ ನಡೆಸುವ ’ಹೋರಾಟ’ವು ಮತಗಳಾಗಿ ಪರಿವರ್ತನೆಯಾಗಿ ಮಾಡಲು ಸಾಧ್ಯವಾಗುವುದೇ ರಾಜಕಾರಣ.

- Advertisement -
- Advertisement -

ಉಪಚುನಾವಣೆಯೆಂದರೆ ಆಡಳಿತ ಪಕ್ಷಕ್ಕೆ ಹೆಚ್ಚಿನ ಅನುಕೂಲವಿರುತ್ತದೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಇದರಲ್ಲಿ ಹುರುಳಿದೆಯಾದರೂ ಇದು ಅರ್ಧ ಸತ್ಯವಷ್ಟೇ. ಆಡಳಿತ ಪಕ್ಷಕ್ಕೆ ಓಟು ಹಾಕಿದರೆ ಲಾಭ ಎಂಬ ಮತದಾರರ ಸಾಮಾನ್ಯ ಆಲೋಚನೆಯ ಜೊತೆಗೆ, ಸಾರ್ವತ್ರಿಕ ಚುನಾವಣೆಯಲ್ಲಿ ಸ್ವಲ್ಪವಾದರೂ ನ್ಯೂಟ್ರಲ್ ಆಗಿರುವ ಅಧಿಕಾರಶಾಹಿ, ಉಪಚುನಾವಣೆಗಳ ಸಂದರ್ಭದಲ್ಲಿ ಸಂಪೂರ್ಣ ಆಡಳಿತ ಪಕ್ಷಕ್ಕೆ ಸಹಾಯ ಮಾಡುತ್ತದೆ. ಹಣ ಹಂಚಲು, ದಬ್ಬಾಳಿಕೆ ನಡೆಸಲು ಆಡಳಿತ ಪಕ್ಷಕ್ಕೆ ವಿಪರೀತ ಅವಕಾಶವಿರುತ್ತದೆ. ಹೀಗಾಗಿ ಆಡಳಿತ ಪಕ್ಷ ಗೆಲ್ಲುವುದು ಸುಲಭ. ಆದರೆ, ಕೆಲವೊಮ್ಮೆ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷವೊಂದರ ಪರ ಬೀಸಿದ ಗಾಳಿ ನಂತರ ಇಲ್ಲದೆಯೂ ಇರಬಹುದು. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ತೆರವುಗೊಳಿಸಿದ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಸೋತಿದ್ದು ಹಾಗೆಯೇ. ಯಡಿಯೂರಪ್ಪನವರ ಮೊದಲ ಅವಧಿಯಲ್ಲಿ ಆಪರೇಷನ್ ಕಮಲ ನಡೆದ ನಂತರ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿಲ್ಲ. ಆಡಳಿತ ಪಕ್ಷದ ದುರಾಡಳಿತದ ವಿರುದ್ಧದ ವಿರೋಧ ಪಕ್ಷಗಳ ಸಾಮರ್ಥ್ಯದ ಲಿಟ್ಮಸ್ ಟೆಸ್ಟ್ ಆಗಿಯೂ ಉಪಚುನಾವಣೆಗಳನ್ನು ನೋಡಬಹುದು. ಆ ಅರ್ಥದಲ್ಲಿ ಈ ಉಪಚುನಾವಣೆಗಳ ಫಲಿತಾಂಶವನ್ನು ನೋಡಿದರೆ ಬಿಜೆಪಿಯ ಆಡಳಿತದ ವಿರುದ್ಧದ ಅಲೆಯೇನೂ ದೇಶದಲ್ಲಿಲ್ಲ ಎಂದು ಹೇಳಬಹುದು. ಒಂದುವೇಳೆ ಆಡಳಿತದ ವಿರೋಧಿ ಭಾವನೆ ಇದ್ದರೂ, ಅದನ್ನು ಘನೀಭವಿಸುವಂತೆ ಮಾಡಲು ಬೇಕಾದ ಶಕ್ತಿ ವಿರೋಧ ಪಕ್ಷಗಳಿಗಿಲ್ಲ ಎಂಬುದಂತೂ ಸಾಬೀತಾಗಿದೆ.

ಬಿಹಾರದ ಚುನಾವಣೆಯನ್ನು ಪಕ್ಕಕ್ಕಿಟ್ಟು ನೋಡುವುದಾದರೆ, 11 ರಾಜ್ಯಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿದ್ದ 58 ಸ್ಥಾನಗಳಿಗೆ ನಡೆದ ಉಪಚುನಾವಣೆಗೆ ಹಲವು ರೀತಿಯ ಮಹತ್ವವಿತ್ತು. ಮಧ್ಯಪ್ರದೇಶದಲ್ಲಿ ಈ ಉಪಚುನಾವಣೆ ಒಂದು ಸರ್ಕಾರವನ್ನು ಬೀಳಿಸುವಷ್ಟು ಪ್ರಮುಖವಾಗಿತ್ತಾದರೆ, ಉಳಿದ ರಾಜ್ಯಗಳಲ್ಲಿ ಇದು ಅಧಿಕಾರ ಹಿಡಿಯಲು ಮಾನದಂಡವಾಗದಿದ್ದರೂ ಸಹ ಅಲ್ಲಿನ ವಿರೋಧ ಪಕ್ಷಗಳಿಗೆ ಮುಂದಿನ ರಾಜಕೀಯ ದಿಕ್ಸೂಚಿಯಾಗಲಿತ್ತು. ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ (ಇಲ್ಲಿನ ಒಂದು ಸ್ಥಾನ) ಕಾಂಗ್ರೆಸ್‌ನಿಂದ ಬಿಜೆಪಿಗೆ ವಲಸೆ ಹೋಗಲೆಂದು ರಾಜೀನಾಮೆ ಕೊಟ್ಟವರ ಕ್ಷೇತ್ರಗಳಲ್ಲಿ ಈ ಉಪಚುನಾವಣೆಗಳು ನಡೆದಿದ್ದವು.

ಛತ್ತೀಸ್‌ಗಢದ 1 ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಧ್ರುವ್ ಭಾರೀ ಮುನ್ನಡೆಯಲ್ಲಿ ಗೆದ್ದಿದ್ದಾರೆ. ಗುಜರಾತ್‌ನ 8 ಕ್ಷೇತ್ರಗಳಲ್ಲಿ 8 ಕ್ಷೇತ್ರಗಳನ್ನು ಬಿಜೆಪಿ ಗೆದ್ದುಕೊಂಡಿದೆ. ಹರಿಯಾಣದ 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಜಾರ್ಖಂಡ್‌ನ 2 ಕ್ಷೇತ್ರಗಳಲ್ಲಿ 1 ಕ್ಷೇತ್ರವನ್ನು ಜಾರ್ಖಂಡ್ ಮುಕ್ತಿ ಮೋರ್ಚಾ ಗೆದ್ದುಕೊಂಡಿದ್ದು, ಮತ್ತೊಂದನ್ನು ಕಾಂಗ್ರೆಸ್ ಗೆದ್ದುಕೊಂಡಿದೆ.

ಮಧ್ಯಪ್ರದೇಶದ 28 ಕ್ಷೇತ್ರಗಳಲ್ಲಿ ಬಿಜೆಪಿ 19 ಕ್ಷೇತ್ರಗಳನ್ನು ಗೆದ್ದುಕೊಂಡಿದ್ದು, 09 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮಾಜಿ ಕಾಂಗ್ರೆಸ್ ಮುಖಂಡ ಜ್ಯೋತಿರಾದಿತ್ಯ ಸಿಂಧ್ಯ ನೇತೃತ್ವದಲ್ಲಿ ಆಪರೇಶನ್ ಕಮಲ ಮಾಡಿ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಿ ಅಧಿಕಾರಕ್ಕೆ ಬಂದ ಶಿವರಾಜ್ ಸಿಂಗ್ ಚೌಹಾನ್ ಸರ್ಕಾರಕ್ಕೆ ಸದ್ಯಕ್ಕೆ ಯಾವುದೇ ಧಕ್ಕೆ ಇಲ್ಲ.

ಮಣಿಪುರದ 5 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. 1 ಕ್ಷೇತ್ರವನ್ನು ಸ್ವತಂತ್ರ ಅಭ್ಯರ್ಥಿ ಗೆದ್ದಿದ್ದಾರೆ. ನಾಗಾಲ್ಯಾಂಡ್‌ನ 2 ಕ್ಷೇತ್ರಗಳಲ್ಲಿ 1 ಸ್ವತಂತ್ರ ಅಭ್ಯರ್ಥಿ, 1 ನ್ಯಾಷನಲ್ ಡೆಮಾಕ್ರಟಿಕ್ ಪ್ರೊಗ್ರೆಸಿವ್ ಪಾರ್ಟಿ ಗೆದ್ದುಕೊಂಡಿದೆ. ಒರಿಸ್ಸಾದ 2 ಕ್ಷೇತ್ರಗಳಲ್ಲಿ ಬಿಜು ಜನತಾ ದಳ ಜಯ ಸಾಧಿಸಿದೆ. ತೆಲಂಗಾಣದ 1 ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಕಂಡಿದೆ. ಉತ್ತರ ಪ್ರದೇಶದ 7 ಕ್ಷೇತ್ರಗಳಲ್ಲಿ ಬಿಜೆಪಿ 6 ಗೆದ್ದುಕೊಂಡಿದ್ದು, ಸಮಾಜವಾದಿ ಪಕ್ಷ 1 ಕ್ಷೇತ್ರವನ್ನು ಗೆದ್ದುಕೊಂಡಿದೆ.

ಅಂದರೆ ಕೆಲವು ಅಪವಾದಗಳನ್ನು ಹೊರತುಪಡಿಸಿ ಬಹುತೇಕ ಕಡೆ ಆಡಳಿತಾರೂಢ ಪಕ್ಷಗಳೇ ಮುನ್ನಡೆ ಸಾಧಿಸಿವೆ. ಆದರೆ, ಮೇಲೆ ಹೇಳಿದ ಹಾಗೆ ಆಪರೇಷನ್ ಕಮಲವೆನ್ನುವುದು ಅನೈತಿಕ ರಾಜಕಾರಣ ಎಂದು ಮತದಾರರಿಗೆ ಅರ್ಥ ಮಾಡಿಸುವಲ್ಲಿ ವಿರೋಧ ಪಕ್ಷಗಳು ಸೋತಿವೆ. ಕೆಲವೇ ಸಮಯದ ಹಿಂದೆ ತಮ್ಮಲ್ಲೇ ಇದ್ದು, ಆಗ ತಮ್ಮ ಸಮರ್ಥನೆಗೆ ಒಳಗಾಗುತ್ತಿದ್ದ ಶಾಸಕ ಈಗ ಬಿಜೆಪಿ ಸೇರಿದಾಕ್ಷಣ ದೊಡ್ಡ ವಿಲನ್ ಹೇಗೆ ಎಂಬ ಮತದಾರರ ಪ್ರಶ್ನೆಗೆ ಉತ್ತರ ಕೊಡುವ ನೈತಿಕತೆ ಬಿಜೆಪಿಯೇತರ ಪಕ್ಷಗಳಲ್ಲಿ ಇಲ್ಲ. ಹಾಗಾಗಿ ಒಂದು ವೇಳೆ ದೊಡ್ಡ ಮೊತ್ತಕ್ಕೆ ಮಾರಿಕೊಂಡು ಪಕ್ಷಾಂತರ ಮಾಡಿದ್ದರೂ, ವಿರೋಧಿಗಳು ಸಾಚಾ ಅಲ್ಲ ಎಂಬ ಕಾರಣಕ್ಕೆ, ಮತದಾರರು ಹೆಚ್ಚಿನ ಹಣ ಡಿಮ್ಯಾಂಡ್ ಮಾಡಬಹುದು ಅಷ್ಟೇ. ಈಗ ನಡೆಯುತ್ತಿರುವುದು ಅದೇ ಆಗಿದೆ. ಜೊತೆಗೆ ಬಿಜೆಪಿಯ ಹಣಬಲವು ಗೆದ್ದಿದೆ ಎಂಬ ಮಾತು ಸಂಪೂರ್ಣ ಸುಳ್ಳಲ್ಲ; ಕಾಂಗ್ರೆಸ್ ಬಳಿ ಹಣವೇ ಇರಲಿಲ್ಲ ಎಂಬುದು ನಿಜವೂ ಅಲ್ಲ. ಆದರೆ ಹಣ ಹಂಚಿಕೆಯ ವಿಚಾರದಲ್ಲಿ ವ್ಯವಸ್ಥಿತ ಕೆಲಸ ಹಾಗೂ ಆಕ್ರಮಣಕಾರಿ ಸಾಧ್ಯತೆ ಬಿಜೆಪಿಗಷ್ಟೇ ಇರುತ್ತದೆ ಎಂಬುದು ವಾಸ್ತವ.

ಕರ್ನಾಟಕದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕಟ್‌ನಿಂದ ಆರ್.ಆರ್.ನಗರ ಕ್ಷೇತ್ರವನ್ನು ಗೆದ್ದಿದ್ದ ಮುನಿರತ್ನ ರಾಜೀನಾಮೆ ನೀಡಿ ಬಿಜೆಪಿಗೆ ಹೋದರು. ಚುನಾವಣಾ ಅಕ್ರಮ ಎದುರಿಸಿದ್ದರು ಎಂಬ ಆರೋಪಗಳ ಕಾರಣಕ್ಕೆ ಪ್ರಕರಣ ಎದುರಿಸುತ್ತಿದ್ದರಿಂದ ಅಂದು ಈ ಕ್ಷೇತ್ರದ ಉಪಚುನಾವಣೆ ನಡೆದಿರಲಿಲ್ಲ. ಮುನಿರತ್ನ ಮೇಲೆ ಮೊಕದ್ದಮೆ ಕೂಡ ದಾಖಲಾಗಿತ್ತು. ಆಗ ಆರೋಪ ಹೊತ್ತಿದ್ದ ಮುನಿರತ್ನ ಈ ಉಪಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಯಾಗಿ ಅರ್ಹರಾದರು.

ಮುನಿರತ್ನ ಮೇಲೆ ಪಕ್ಷಾಂತರದ ಕಳಂಕವಿತ್ತು, ಮತದಾರರ ಗುರುತಿನ ಚೀಟಿ ಸಂಗ್ರಹಿಸಿದ್ದರೆನ್ನುವ ಕಳಂಕ ಸೇರಿದಂತೆ ರಾಜ್ಯ ಸರ್ಕಾರ ಆಡಳಿತದ ವೈಫಲ್ಯತೆಯ ನಕಾರಾತ್ಮಕ ಅಂಶಗಳು ಯಥೇಚ್ಛವಾಗಿದ್ದರೂ ಸಹ ಉಪಚುನಾವಣೆಯ ಫಲಿತಾಂಶದಲ್ಲಿ ಮುನಿರತ್ನ ಭಾರೀ ಮತಗಳ ಅಂತರದಲ್ಲಿ ಗೆಲುವನ್ನು ದಾಖಲಿಸಿದ್ದಾರೆ. ಗೆಲುವಿನ ಅಂತರ 58,113 ಮತಗಳು.

ದಿವಂಗತ ಅಧಿಕಾರಿ ಡಿ.ಕೆ.ರವಿ ಪತ್ನಿ ಕುಸುಮಾ ಅವರನ್ನು ಕಣಕ್ಕಿಳಿಸಿದ್ದ ಕಾಂಗ್ರೆಸ್ ಪರವಾಗಿ ಪಕ್ಷದ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಂಡಂತೆ ಪ್ರಚಾರವನ್ನು ಬಿರುಸಾಗಿ ನಡೆಸಿದರೂ ಗೆಲುವಿನ ಹತ್ತಿರ ಕೂಡ ಸುಳಿಯಲು ಸಾಧ್ಯವಾಗದೆ ಎರಡನೇ ಸ್ಥಾನಕ್ಕೆ (67,798 ಮತಗಳು) ತೃಪ್ತಿಪಟ್ಟುಕೊಳ್ಳಬೇಕಾಗಿದೆ. ಇನ್ನು ಜೆಡಿಎಸ್ ಅಭ್ಯರ್ಥಿಗೆ ಬಂದಿರುವ ಮತಗಳನ್ನು ಗಮನಿಸಿದರೆ (10,251) ಬಿಜೆಪಿಯ ಜೊತೆ ಒಳಒಪ್ಪಂದ ನಡೆದಿದೆ ಎಂಬ ಗುಮಾನಿಗೆ ಇಂಬು ಕೊಡುವಂತಿದೆ.

ಆದರೆ ಆ ಒಪ್ಪಂದದ ಊಹಾಪೋಹದಂತೆ ಶಿರಾ ಕ್ಷೇತ್ರ ಜೆಡಿಎಸ್‌ಗೆ ಒಲಿಯಬೇಕಿತ್ತು. ಆದರೆ ಅಲ್ಲಿ ಜೆಡಿಎಸ್ ಮೂರನೇ ಸ್ಥಾನಕ್ಕೆ (35982) ತಳ್ಳಲ್ಪಟ್ಟಿದೆ. ತಮ್ಮ ಪ್ರಾಬಲ್ಯದ ಕ್ಷೇತ್ರದಲ್ಲಿಯೇ ಆ ಪಕ್ಷಕ್ಕೆ ಒದಗಿರುವ ದುಸ್ಥಿತಿಯನ್ನು ತಿಳಿಸುತ್ತದೆ. ಶಿರಾದ ಶಾಸಕರಾಗಿದ್ದ ಸತ್ಯನಾರಾಯಣ ಅವರ ಅಕಾಲಿಕ ಮರಣದಿಂದ ತೆರವಾಗಿದ್ದ ಕ್ಷೇತ್ರದಲ್ಲಿ, ಅನುಕಂಪದ ಅಲೆಯನ್ನು ಸದುಪಯೋಗಪಡಿಸಿಕೊಳ್ಳುವ ಸಲುವಾಗಿ ಅವರ ಪತ್ನಿ ಅಮ್ಮಾಜಮ್ಮ ಅವರನ್ನು ಜೆಡಿಎಸ್ ಕಣಕ್ಕಿಳಿಸಿತ್ತು. ದೇವೇಗೌಡ ಮತ್ತು ಕುಮಾರಸ್ವಾಮಿ ಕ್ಷೇತ್ರದಲ್ಲಿಯೇ ಬೀಡುಬಿಟ್ಟು ಗೆಲುವಿಗಾಗಿ ಶ್ರಮಿಸುತ್ತಿದ್ದಾರೆ ಎಂದು ಜೆಡಿಎಸ್ ಆತ್ಮವಿಶ್ವಾಸ ತೋರುತ್ತಿತ್ತು. ಇನ್ನು ಕಾಂಗ್ರೆಸ್‌ನಿಂದ ಹಿರಿಯ ಅನುಭವಿ ನಾಯಕರಾದ ಟಿ.ಬಿ.ಜಯಚಂದ್ರ (61,573) ಅವರನ್ನು ಕಣಕ್ಕಿಳಿಸಿ, ಕಾಂಗ್ರೆಸ್ ಮುಖಂಡರೆಲ್ಲ ಭಿನ್ನಾಭಿಪ್ರಾಯ ತೊರೆದು ಪಕ್ಷದ ಗೆಲುವಿಗೆ ಕೆಲಸ ಮಾಡುತ್ತಿದ್ದಾರೆ ಎಂದು ಪ್ರಚಾರ ಮಾಡಿತ್ತು. ಕ್ಷೇತ್ರಕ್ಕೆ ಅಷ್ಟು ಪರಿಚಯವೇ ಇರದ ಡಾ.ರಾಜೇಶ್ ಗೌಡರ (74,522) ಎದುರು ಅವರು 12,949 ಮತಗಳ ಅಂತರದಿಂದ ಜಯಚಂದ್ರ ಸೋಲುಂಡಿದ್ದಾರೆ.

ಕೊರೊನಾ ನಿರ್ವಹಣೆಯಲ್ಲಿ ಭ್ರಷ್ಟಾಚಾರದ ಆರೋಪ, ನೆರೆ ಪರಿಹಾರ ತರುವುದರಲ್ಲಿ ವಿಫಲವಾಗಿರುವ ಅಂಶ, ಜಿಎಸ್‌ಟಿ ಪಾಲಿನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದರೂ ಮುಖ್ಯಮಂತ್ರಿಗಳ ಮತ್ತು 25 ಬಿಜೆಪಿ ಸಂಸದರ ಜಾಣ ಮೌನ, ಸರ್ಕಾರಿ ವಲಯಗಳ ಖಾಸಗೀಕರಣ, ಸಿಎಎ-ಎನ್‌ಆರ್‌ಸಿ ವಿವಾದ, ಪ್ರತಿಗಾಮಿ ಕೃಷಿ ನೀತಿಗಳ ಸುಗ್ರೀವಾಜ್ಞೆ ಸೇರಿದಂತೆ ಹತ್ತಾರು ನಕಾರಾತ್ಮಕ ಅಂಶಗಳು ಸಾರ್ವತ್ರಿಕ ಚುನಾವಣೆಯಲ್ಲೇ ಚರ್ಚಾ ವಿಷಯಗಳಾಗದ ಮೇಲೆ, ಉಪಚುನಾವಣೆಯಲ್ಲಾದೀತೇ?

ಕಳೆದ ವಿಧಾನಸಭೆಯ ಅವಧಿಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಹಾಗೂ ಬಳ್ಳಾರಿ ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದೂ ಹಣಬಲ ಹಾಗೂ ಅಧಿಕಾರದ ಅನುಕೂಲದಿಂದಲೇ. ಅದೇ ಈಗಲೂ ಆಗಿದೆ. ಆದರೆ ಯಾವುದನ್ನು ಕಾಂಗ್ರೆಸ್ ಮಾಡುತ್ತದೋ, ಅದರ ಹತ್ತುಪಟ್ಟು ಅನೈತಿಕ ರಾಜಕಾರಣ ಮಾಡುವುದು ಬಿಜೆಪಿಯಿಂದ ಸಾಮರ್ಥ್ಯವಾಗಿದೆ. ಅದಕ್ಕೆ ಬಿ.ವೈ.ವಿಜಯೇಂದ್ರರಂತಹ ದಂಡನಾಯಕ ಸಿಕ್ಕಿದ್ದಾರೆ. ಕ್ಷೇತ್ರದ ಮೇಲೆ ಯಾವ ಹಿಡಿತವಿರದಿದ್ದರೂ, ಬಿಡುಬೀಸಾಗಿ ಖರ್ಚು ಮಾಡುವಷ್ಟು ಹಣವನ್ನು ಹೊತ್ತುಕೊಂಡು ಹೋಗಿ ಗೆಲ್ಲಿಸಿಕೊಂಡು ಬರುವವರಲ್ಲಿ ಜನಾರ್ದನರೆಡ್ಡಿ, ಶ್ರೀರಾಮುಲು, ಡಿ.ಕೆ.ಶಿವಕುಮಾರ್‌ರ ಜೊತೆಗೆ ಕರ್ನಾಟಕದಲ್ಲಿ ಇನ್ನೊಬ್ಬ ’ಹೊಸ ತಲೆಮಾರಿನ’ ನಾಯಕನಾಗಿ ವಿಜಯೇಂದ್ರ ಸಿಕ್ಕಿರುವುದು ಕರ್ನಾಟಕದ ಭಾಗ್ಯವೇ ಇರಬಹುದೇನೋ!? ಇವೆಲ್ಲವನ್ನೂ ದೌರ್ಭಾಗ್ಯವೆಂಬುದಕ್ಕಿಂತ, ಆಸ್ತಿಯೆಂಬಂತೆ ಪಕ್ಷಗಳು ಮಾತ್ರವಲ್ಲದೇ ಮತದಾರರೂ ಭಾವಿಸುತ್ತಿದ್ದಾರೆ ಎಂಬುದೇ ದುರಂತ.

ರಾಜರಾಜೇಶ್ವರಿನಗರದ ಗೆಲುವು ಬಿಜೆಪಿಗೆ ದೊಡ್ಡದೇನೂ ಆಗಿರಲಿಲ್ಲ. ಏಕೆಂದರೆ ಮುನಿರತ್ನರ ಬಗ್ಗೆ ಕ್ಷೇತ್ರದಲ್ಲಿ ಕೆಟ್ಟ ಹೆಸರೇನೂ ಇರಲಿಲ್ಲ. ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲೂ ಅವರು ಜನರಿಗೆ ಸಾಕಷ್ಟು ಕೆಲಸ ಮಾಡಿದರು ಎಂಬ ಭಾವನೆಯೇ ಇತ್ತು. ಕಾಂಗ್ರೆಸ್‌ಗೆ ಅಷ್ಟು ಬಲವಾದ ಅಭ್ಯರ್ಥಿಯೂ ಇರಲಿಲ್ಲ. ಆದರೆ, ಗೆಲುವಿನ ಅಂತರವು ಮುನಿರತ್ನರ ’ಸಾಧನೆ’ಯ ಜೊತೆಗೆ ಬಿಜೆಪಿ ಕಡೆಯಿಂದ ಆರ್.ಆರ್.ನಗರದ ದಂಡನಾಯಕ ಆರ್.ಅಶೋಕ್‌ರ ’ಶಕ್ತಿ’ಯ ಪ್ರದರ್ಶನವೂ ಆಗಿದೆ. ಈ ಭಾಗದ ’ಒಕ್ಕಲಿಗ’ ನಾಯಕ ಈಗ ತಾನೇ ಹೊರತು ಎಚ್.ಡಿ.ಕೆ ಅಥವಾ ಡಿ.ಕೆ.ಶಿ ಅಲ್ಲ ಎಂದು ಆರ್.ಅಶೋಕ್ ಗಟ್ಟಿಯಾಗಿ ಹೇಳಲು ಸಾಧ್ಯವಾಗಿರುವುದೂ ಈ ದೊಡ್ಡ ಅಂತರದಿಂದಲೇ ಆಗಿದೆ.

ಇವೆಲ್ಲದರ ಹೊರತಾಗಿಯೂ ಕ್ರಿಯಾಶೀಲ ವಿರೋಧ ಪಕ್ಷಗಳು ಆಡಳಿತ ಪಕ್ಷದ ದುರಾಡಳಿತದ ವಿರುದ್ಧ ನಡೆಸುವ ’ಹೋರಾಟ’ವು ಮತಗಳಾಗಿ ಪರಿವರ್ತನೆಯಾಗಿ ಮಾಡಲು ಸಾಧ್ಯವಾಗುವುದೇ ರಾಜಕಾರಣ. ಅದಕ್ಕೆ ಅಪಾರವಾದ ಸಾಧ್ಯತೆಯಿರುವುದು ಈಗಾಗಲೇ ಪ್ರತಿ ಬೂತ್ ಮಟ್ಟದಲ್ಲೂ ತಳವೂರಿರುವ ರಾಜಕೀಯ ಪಕ್ಷಗಳಿಗೆ. ಆದರೆ, ಈ ಪಕ್ಷಗಳೇ ಅದರಲ್ಲಿ ವಿಫಲವಾಗುತ್ತಿವೆ. ಅಂದರೆ ’ನಿಜವಾದ ರಾಜಕಾರಣ’ ಮಾಡುವುದರಲ್ಲಿ ಅವು ವಿಫಲವಾಗುತ್ತಿವೆ. ಇದಕ್ಕೆ ಎರಡು ಕಾರಣಗಳಿವೆ. ಎಲ್ಲಾ ಬಗೆಯ ಅನೈತಿಕತೆಯನ್ನೂ ಬಳಸಲು ಬಿಜೆಪಿ ಸ್ವಲ್ಪವೂ ಹಿಂಜರಿಯುವುದಿಲ್ಲ.

ಕರ್ನಾಟಕದಂತಹ ಹಣ ಚಲಾವಣೆ ವಿಪರೀತವಾಗುವ ರಾಜ್ಯಗಳಲ್ಲಿ ಅದು ನೆರವಿಗೆ ಬರುತ್ತದೆ. ಎರಡನೆಯದ್ದು ಧ್ರುವೀಕರಣ. ಜಾತಿ ಧ್ರುವೀಕರಣದಲ್ಲಿ ಉಳಿದವರೇನೂ ಪವಿತ್ರರಲ್ಲವಾದರೂ, ಅದನ್ನು ಮೈಕ್ರೋ ಲೆವೆಲ್‌ವರೆಗೆ (ಶಿರಾ ಚುನಾವಣೆಯಲ್ಲಿ ಮಾಡಿದಂತೆ) ತೆಗೆದುಕೊಂಡು ಹೋಗುವಲ್ಲೂ ಅವರು ಪಳಗಿದ್ದಾರೆ. ಇವೆರಡನ್ನೂ ಮಣಿಸಲು ಬೇಕಾದ ಸಾಮರ್ಥ್ಯ ಬೇರೆ ರೀತಿಯದ್ದು. ಅದು ಕಾಂಗ್ರೆಸ್‌ಗಾಗಲೀ, ಜೆಡಿಎಸ್‌ಗಾಗಲೀ ಇಲ್ಲವೆಂಬುದು ಈ ಉಪಚುನಾವಣೆಯಲ್ಲೂ ಎದ್ದು ಕಂಡಿತು.

  • ಪ್ರತಾಪ್ ವೇಲುಸ್ವಾಮಿ

ಇದನ್ನೂ ಓದಿ: ಬಿಹಾರ ಫಲಿತಾಂಶ ವಿಶ್ಲೇಷಣೆ: ನಿತೀಶ್ ಕಳೆದುಕೊಂಡದ್ದೇನು? ತೇಜಸ್ವಿ ಗಳಿಸಿದ್ದೇನು?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಜೆಪಿ ಸೇರಲು ಸಿದ್ದರಾದ ಭೂಪೇನ್ ಬೋರಾ : ಪ್ರಿಯಾಂಕಾ, ಡಿಕೆಶಿ ಸೇರಿದಂತೆ ‘ಕೈ ಟ್ರಬಲ್ ಶೂಟರ್‌ಗಳು’ ಅಸ್ಸಾಂಗೆ ದೌಡು

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಹಾರಲು ಸಿದ್ದರಾಗಿರುವ ನಡುವೆ ಪ್ರಿಯಾಂಕಾ ಗಾಂಧಿ, ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ನ ಟ್ರಬಲ್ ಶೂಟರ್‌ಗಳ ತಂಡ ಅಸ್ಸಾಂಗೆ ದೌಡಾಯಿಸಿದೆ. ಅಸ್ಸಾಂ ಕಾಂಗ್ರೆಸ್ ಅಭ್ಯರ್ಥಿಗಳ...

ಸರ್ಕಾರದ ಭರವಸೆಗೆ ಮಣಿಯದ ಸಾರಿಗೆ ಸಿಬ್ಬಂದಿ : ಮುಷ್ಕರ ಮುಂದುವರಿಸಲು ನಿರ್ಧಾರ

ಹಿಂಬಾಕಿ ಪಾವತಿ, ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ನಾಲ್ಕು ಸಾರಿಗೆ ನಿಗಮಗಳಾದ ಕೆಎಸ್‌ಆರ್‌ಟಿಸಿ, ಕೆಕೆಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಬಿಎಂಟಿಸಿಯ ನೌಕರರು ಇಂದು (ಫೆ.19) ಮುಷ್ಕರಕ್ಕೆ ಕರೆ ಕೊಟ್ಟಿದ್ದಾರೆ. ನೌಕರರ ಪ್ರತಿಭಟನೆ...

ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪತ್ನಿಯ ಕತ್ತು ಹಿಸುಕಿ ಕೊಂದ ನಿವೃತ್ತ ಇಸ್ರೋ ಉದ್ಯೋಗಿ ಬಂಧನ

ಬೆಂಗಳೂರು: ಆಘಾತಕಾರಿ ಘಟನೆಯೊಂದರಲ್ಲಿ, 72 ವರ್ಷದ ನಿವೃತ್ತ ಇಸ್ರೋ ಉದ್ಯೋಗಿಯೊಬ್ಬರು ವೈಟ್‌ಫೀಲ್ಡ್ ವಿಭಾಗದ ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಬುಧವಾರ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ವರದಿಯಾಗಿದೆ.  ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ನಲ್ಲಿ ಬೆಳಿಗ್ಗೆ...

ಮಧ್ಯಪ್ರದೇಶದಲ್ಲಿ ಶಾಸಕ ರಾಜಾ ಸಿಂಗ್‌ನಿಂದ ದ್ವೇಷ ಭಾಷಣ; ಪ್ರಚೋದನಕಾರಿ ‘ಶಿರಚ್ಛೇದನ’ ಹೇಳಿಕೆಗೆ ವಿರೋಧ

ತಮ್ಮ ಪ್ರಚೋದನಕಾರಿ ಹೇಳಿಕೆಗಳಿಂದಲೇ ಕುಖ್ಯಾತರಾಗಿರುವ ಹೈದರಾಬಾದ್‌ನ ಗೋಶಮಹಲ್ ಶಾಸಕ ಟಿ ರಾಜಾ ಸಿಂಗ್ ಸಾರ್ವಜನಿಕ ರ‍್ಯಾಲಿಯಲ್ಲಿ ಮತ್ತೊಮ್ಮೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಮಧ್ಯಪ್ರದೇಶದಲ್ಲಿ ಅವರು ಆಡಿದ ಮಾತುಗಳು ವಿವಾದಕ್ಕೆ ಕಾರಣವಾಗಿದೆ. "ಪ್ರತಿಯೊಬ್ಬ ಬಜರಂಗಿಗಳು...

ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಆರೋಪ; ‘ಬಡ್ತಿ ವಿಳಂಬವಾಗಿದೆ..’; ಎಂದ ದಲಿತ ಪ್ರಾಧ್ಯಾಪಕ

ಪಂಜಾಬ್ ವಿಶ್ವವಿದ್ಯಾಲಯದ ದಲಿತ ಸಹಾಯಕ ಪ್ರಾಧ್ಯಾಪಕ ಹರ್‌ಪ್ರೀತ್ ಸಿಂಗ್ ಅವರು ವಿಶ್ವವಿದ್ಯಾಲಯದಲ್ಲಿ ಜಾತಿ ಆಧಾರಿತ ತಾರತಮ್ಯ ಇದೆ ಎಂದು ಸಾರ್ವಜನಿಕವಾಗಿ ಆರೋಪಿಸಿದ್ದಾರೆ. ತನ್ನ ಜಾತಿಯ ಕಾರಣದಿಂದಾಗಿ ಉದ್ದೇಶಪೂರ್ವಕವಾಗಿ ಬಡ್ತಿ ವಿಳಂಬ ಮಾಡಲಾಗಿದೆ...

ಮಹಾರಾಷ್ಟ್ರ: ತಾಯಿ, ಸಹೋದರನ ಕಣ್ಣಿಗೆ ಮೆಣಸಿನ ಪುಡಿ ಎರೆಚಿ ಮದುವೆ ಸಿದ್ಧತೆಯಲ್ಲಿದ್ದ 21 ವರ್ಷದ ಯುವತಿಯ ಅಪಹರಣ

ಮುಂಬೈ: ಆಘಾತಕಾರಿ ಘಟನೆಯೊಂದರಲ್ಲಿ, ಮಹಾರಾಷ್ಟ್ರದ ಪುಣೆ ಜಿಲ್ಲೆಯ ಇಂದಾಪುರ ತಹಸಿಲ್‌ನ ಭಿಗ್ವಾನ್‌ನಲ್ಲಿ 21 ವರ್ಷದ ಯುವತಿಯನ್ನು ಆಕೆಯ ತಾಯಿ ಮತ್ತು ಸಹೋದರನ ಮುಂದೆಯೇ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ ಎಂದು ಆರೋಪಿಸಲಾಗಿದೆ.ಮದುವೆ ಸಿದ್ಧತೆಯಲ್ಲಿದ್ದ ಯುವತಿ...

KERALA SIR | ಬಿಜೆಪಿ ಮುಖಂಡನ ದೂರು: ಪೌರತ್ವ ಸಾಬೀತುಪಡಿಸುವಂತೆ ಮುಸ್ಲಿಂ ವ್ಯಕ್ತಿಗೆ ನೋಟಿಸ್!

ಬಿಜೆಪಿ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಲೋಕೇಶ್ ನೋಂಡಾ ಎಂಬಾತನ ದೂರಿನ ಮೇರೆಗೆ ಹಿರಿಯ ವಯಸ್ಸಿನ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಭಾರತೀಯ ಪೌರತ್ವ ಸಾಬೀತುಪಡಿಸುವಂತೆ ಚುನಾವಣಾ ನೋಂದಣಿ ಅಧಿಕಾರಿ (ಇಆರ್‌ಒ) ನೋಟಿಸ್ ಜಾರಿ ಮಾಡಿದ್ದು, ಆ...

ಚೀನಾ ನಿರ್ಮಿತ ರೋಬೋ ಡಾಗ್ ತಾವೇ ಅಭಿವೃದ್ಧಿಪಡಿಸಿದ್ದಾಗಿ ಹೇಳಿಕೊಂಡಿದ್ದ ಗ್ಯಾಲ್ಗೋಟಿಯಾ ವಿವಿ AI ಸಮ್ಮಿಟ್ ಎಕ್ಸ್‌ಪೋದಿಂದ ತೆರವು

ನವದೆಹಲಿ: ಚೀನಾ ನಿರ್ಮಿತ ರೋಬೋ ಡಾಗ್ ತಮ್ಮದೇ ಎಂದು ಪ್ರದರ್ಶಿಸಿದ್ದಕ್ಕಾಗಿ ಟೀಕೆಗೆ ಗುರಿಯಾದ ನಂತರ ಮತ್ತು ಕೇಂದ್ರ ಸರ್ಕಾರವು ವಿರೋಧ ಪಕ್ಷಗಳಿಂದ ಟೀಕೆಗೆ ಗುರಿಯಾದ ನಂತರ ನೋಯ್ಡಾ ಮೂಲದ ಗ್ಯಾಲ್ಗೋಟಿಯಾಸ್ ವಿಶ್ವವಿದ್ಯಾಲಯವನ್ನು ಬುಧವಾರ...

ಉತ್ತರ ಪ್ರದೇಶ| ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಟಿಟಿಇಯಿಂದ ಸೇನಾ ಆಕಾಂಕ್ಷಿಯ ಮೇಲೆ ಅತ್ಯಾಚಾರ

ಉತ್ತರ ಪ್ರದೇಶದ ಅಹಮದಾಬಾದ್-ಗೋರಖ್‌ಪುರ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಟಿಕೆಟ್ ಪರೀಕ್ಷಕನೊಬ್ಬ (ಟಿಟಿಇ) ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಸೇನಾ ನೇಮಕಾತಿಗೆ ತಯಾರಿ ನಡೆಸುತ್ತಿದ್ದ ಯುವತಿ ಆರೋಪಿಸಿದ್ದಾರೆ. ಇಂದಾರಾ ಮತ್ತು ಡಿಯೋರಿಯಾ ರೈಲು ನಿಲ್ದಾಣಗಳ ನಡುವೆ...

ನಾನು ಭಾರತಕ್ಕೆ ಯಾವಾಗ ಹಿಂತಿರುಗುತ್ತೇನೆಂದು ಹೇಳಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಗೆ ತಿಳಿಸಿದ ಮಲ್ಯ

ವಂಚನೆ ಮತ್ತು ಹಣ ವರ್ಗಾವಣೆಯ ಹಲವಾರು ಪ್ರಕರಣಗಳನ್ನು ಎದುರಿಸುತ್ತಿರುವ, ದೇಶದಿಂದ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ, "ಯುಕೆ ತೊರೆಯುವುದನ್ನು ನನಗೆ ಕಾನೂನುಬದ್ಧವಾಗಿ ನಿಷೇಧಿಸಲಾಗಿರುವುದರಿಂದ ಯಾವಾಗ ಭಾರತಕ್ಕೆ ಹಿಂತಿರುಗುತ್ತೇನೆ ಎಂದು ಹೇಳಲು ಸಾಧ್ಯವಿಲ್ಲ" ಎಂದು...