ಕೊರೊನಾ ಸಾಂಕ್ರಾಮಿಕ ಹಿನ್ನೆಲೆ ಹಠಾತ್ತನೆ ಘೋಷಿಸಲಾದ ರಾಷ್ಟ್ರವಾಪಿ ಲಾಕ್ಡೌನ್ನಿಂದ ತೀವ್ರ ತೊಂದರೆಗೆ ಒಳಗಾದವರು ಬಿಹಾರ, ಉತ್ತರಪ್ರದೇಶದ ವಲಸೆ ಕಾರ್ಮಿಕರು. ಆಗ ವಲಸೆ ಕಾರ್ಮಿಕರು, ಜನ ಸಾಮಾನ್ಯರು ಆಢಳಿತರೂಢ ಎನ್ಡಿಎ ಸರ್ಕಾರದ ವಿರುದ್ಧ ಹಿಡಿ ಶಾಪ ಹಾಕಿದ್ದರು. ಆ ಸಮಯದಲ್ಲಿ ಇವರ ಸಹಾಯಕ್ಕೆ ನಿಂತು ತಮ್ಮ ತಮ್ಮ ಸ್ವಂತ ಸ್ಥಳಗಳಿಗೆ ಮರಳಲು ಸಹಾಯ ಮಾಡಿ ನಿಜ ಹೀರೋ ಎನಿಸಿಕೊಂಡಿದ್ದು ನಟ ಸೋನು ಸೂದ್. ಅವರೀಗ ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶದ ಬಗ್ಗೆ ನಟ ಸೋನು ಸೂದ್ ವಿವರಿಸಿದ್ದು ಹೀಗೆ, “ಬಿಹಾರದ ಜನರು ಸರ್ಕಾರ ಲಾಕ್ಡೌನ್ ಸಮಯದಲ್ಲಿ ಅವರಿಗೆ ಏನು ಮಾಡಿತೋ ಅದರಲ್ಲೂ ಏನೋ ಒಳ್ಳೆಯದನ್ನೇ ನೋಡಿರಬೇಕು” ಎಂದು ಹೇಳಿದ್ದಾರೆ.
“ಜನರು ಏನನ್ನಾದರೂ ಒಳ್ಳೆಯದನ್ನು ನಿರೀಕ್ಷಿಸುತ್ತಿರಬಹುದು. ನಮ್ಮ ಭಾರತದಲ್ಲಿ ಜನರು ಸಾಕಷ್ಟು ಭರವಸೆ ಹೊಂದಿದ್ದಾರೆ. ಜನ ಕೆಲವೊಮ್ಮೆ ಎಂಥವರಿಗೂ ಎರಡನೇ, ಮೂರನೆಯ ಅವಕಾಶವನ್ನು ನೀಡುತ್ತಾರೆ. ಜೊತೆಗೆ ತಮ್ಮ ಜೀವನಕ್ಕೆ ಭದ್ರ ಬುನಾದಿ ಬೇಕೆಂದು ಬಯಸುತ್ತಾರೆ” ಎಂದು ಸೂದ್ ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ: ಶ್ರಮಿಕ್ ರೈಲುಗಳಲ್ಲಿ ಕಳೆದ 48 ಗಂಟೆಗಳಲ್ಲಿ 9 ವಲಸೆ ಕಾರ್ಮಿಕರು ಮೃತ : ಕೇಂದ್ರದ ವಿರುದ್ಧ ಆಕ್ರೋಶ
ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜನತಾದಳ (ಯುನೈಟೆಡ್) 43 ಸ್ಥಾನಗಳನ್ನು ಗೆದ್ದಿದ್ದರೂ ಸಹ, ಮಿತ್ರಪಕ್ಷ ಬಿಜೆಪಿಯ 74 ಸ್ಥಾನಗಳೊಂದಿಗೆ, ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) 125 ಸ್ಥಾನಗಳೊಂದಿಗೆ ಅಧಿಕಾರಕ್ಕೆ ಮರಳಿದೆ.
ಮುಂಬೈ ಮತ್ತು ಮಹಾರಾಷ್ಟ್ರದ ಇತರ ಭಾಗಗಳಿಂದ ಬಸ್ಸುಗಳನ್ನು ಬಾಡಿಗೆಗೆ ಪಡೆಯುವ ಮೂಲಕ ಹೆಚ್ಚಿನ ಸಂಖ್ಯೆಯ ವಲಸಿಗರು ಅದರಲ್ಲೂ ಮುಖ್ಯವಾಗಿ ಬಿಹಾರ ಮತ್ತು ಉತ್ತರ ಪ್ರದೇಶಕದ ಕಾರ್ಮಿಕರು ತಮ್ಮ ಊರಿಗೆ ಮರಳಲು ಸೋನು ಸೂದ್ ಸಹಾಯ ಮಾಡಿದ್ದರು. “ನಾನು ಬಿಹಾರದ ಬಹಳಷ್ಟು ಜನರೊಂದಿಗೆ ಸಂಪರ್ಕ ಹೊಂದಿದ್ದೇನೆ. ನೀವು ಶಿಕ್ಷಣ ಅಥವಾ ಮೂಲಸೌಕರ್ಯ ಸೌಲಭ್ಯಗಳ ಬಗ್ಗೆ ಮಾತನಾಡಿದರೇ ನಿಜಕ್ಕೂ ಅವರು ತೀರಾ ಕೆಟ್ಟ ಸ್ಥಿತಿಯಲ್ಲಿದ್ದಾರೆ” ಎಂದು ನಟ ಎನ್ಡಿಟಿವಿ ಜೊತೆಗೆ ಮಾತನಾಡುತ್ತಾ ತಿಳಿಸುತ್ತಾರೆ.
ಇದನ್ನೂ ಓದಿ: ನಟ ಸೋನು ಸೂದ್ ಮಾನವೀಯ ಕಾರ್ಯಕ್ಕೆ ವಿಶ್ವಸಂಸ್ಥೆಯ ಗೌರವ
“ಯಾರು ಗೆದ್ದರು ಎಂಬುದು ಮುಖ್ಯವಲ್ಲ, ಐದು ವರ್ಷಗಳ ನಂತರ ನಾವು ಬೇರೆ ಬಿಹಾರವನ್ನು ಹೊಂದಿರಬೇಕು ಎಂಬುದು ಮುಖ್ಯ ಎಂದು ನಾನು ಭಾವಿಸುತ್ತೇನೆ ಮತ್ತು ನಂಬುತ್ತೇನೆ. ಜನರು ತಾವು ಆಯ್ಕೆ ಮಾಡಿದ ಸರ್ಕಾರದ ಬಗ್ಗೆ ಅವರು ಹೆಮ್ಮೆ ಪಡಬೇಕು” ಎಂದು ತಿಳಿಸಿದರು.
ಕೊರೊನಾವೈರಸ್ ಬಿಕ್ಕಟ್ಟಿನ ಸಂದರ್ಭದಲ್ಲಿ ಜನರ ನೆರವಿಗೆ ನಿಂತ ಸೋನು ಸೂದ್ ಪ್ರಯತ್ನಗಳಿಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅವರ ಮಾನವೀಯ ಪ್ರಯತ್ನಗಳಿಗಾಗಿ ವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (ಯುಎನ್ಡಿಪಿ) ದಿಂದ ಎಸ್ಡಿಜಿ ವಿಶೇಷ ಮಾನವೀಯ ಕ್ರಿಯಾ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಸಹಾಯದ ಅಗತ್ಯವಿರುವವರಿಗೆ ಸಹಾಯ ಮಾಡಲು ಲಾಕ್ಡೌನ್ ಸಮಯದಲ್ಲಿ ಟೋಲ್-ಫ್ರೀ ಸಹಾಯವಾಣಿಯನ್ನು ಸಹ ಪ್ರಾರಂಭಿಸಿದ್ದರು.