ನಕಲಿ ಪ್ರಮಾಣಪತ್ರದ ಆಧಾರದ ಮೇಲೆ 193 ಅನರ್ಹ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಆರೋಪದ ಮೇಲೆ ವಿಶಾಖಪಟ್ಟಣಂನ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ.
2022-23ರ ಶೈಕ್ಷಣಿಕ ವರ್ಷದಲ್ಲಿ 124 ಅನರ್ಹ ವಿದ್ಯಾರ್ಥಿಗಳಿಗೆ ಮತ್ತು 2021-22ರಲ್ಲಿ 69 ವಿದ್ಯಾರ್ಥಿಗಳಿಗೆ ಪ್ರವೇಶಾತಿ ಸಂಬಂಧಿಸಿದಂತೆ ಪ್ರಾಂಶುಪಾಲ ಎಸ್ ಶ್ರೀನಿವಾಸ ರಾಜಾ ವಿರುದ್ಧ ಸಿಬಿಐ ಎರಡು ಎಫ್ಐಆರ್ಗಳನ್ನು ದಾಖಲಿಸಿದೆ.
ರಾಜಾ ಅವರು ಅನರ್ಹ ವಿದ್ಯಾರ್ಥಿಗಳ ಪೋಷಕರೊಂದಿಗೆ ಪಿತೂರಿ ನಡೆಸಿ ಅರ್ಜಿಗಳು ಮತ್ತು ಪ್ರಮಾಣಪತ್ರಗಳನ್ನು ಪರಿಶೀಲಿಸದೆ ಅವರಿಗೆ ವಿವಿಧ ತರಗತಿಗಳಿಗೆ ಪ್ರವೇಶವನ್ನು ಒದಗಿಸಿದ್ದಾರೆ ಮತ್ತು ಅವರ ಬ್ಯಾಂಕ್ ಖಾತೆಗೆ ಹಣವನ್ನು ವರ್ಗಾಯಿಸಿಕೊಂಡಿದ್ದಾರೆಂದು ಎಂದು ಸಂಸ್ಥೆ ಆರೋಪಿಸಿದೆ.
2022-23ಕ್ಕೆ ರಾಜಾ ಅವರು ಮಾಡಿದ ದಾಖಲಾತಿಗಳನ್ನು ಪರಿಶೀಲಿಸುವ ಸಲುವಾಗಿ ಸಿಬಿಐ ಘಟಕವು ಈ ವರ್ಷ ಮೇ 3 ಮತ್ತು 4 ರಂದು ವಾಲ್ಟೇರ್ನ ಕೇಂದ್ರೀಯ ವಿದ್ಯಾಲಯದಲ್ಲಿ ನಡೆಸಿದ ಜಂಟಿ ತಪಾಸಣೆಯಲ್ಲಿ ಈ ಅಕ್ರಮಗಳು ಪತ್ತೆಯಾಗಿದೆ.
ರಾಜಾ ಅವರು ಅನರ್ಹ ವಿದ್ಯಾರ್ಥಿಗಳ ಪೋಷಕರೊಂದಿಗೆ ಪಿತೂರಿ ರೂಪಿಸಿ ಅನರ್ಹ ವಿದ್ಯಾರ್ಥಿಗಳಿಗೆ ವಿವಿಧ ತರಗತಿಗಳಿಗೆ ಪ್ರವೇಶಾತಿ ನೀಡಿ ಹಣಕಾಸುಗಳನ್ನು ಪಡೆದಿದ್ದಾರೆ ಎಂದು ಸಿಬಿಐ ಎಫ್ಐಆರ್ನಲ್ಲಿ ಉಲ್ಲೇಖಿಸಿದೆ.
ಸಿಬಿಐ ಕೇಂದ್ರೀಯ ವಿದ್ಯಾಲಯದ ಆಯುಕ್ತರಿಂದ ಅನುಮತಿ ಪಡೆದ ನಂತರ ರಾಜಾ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ: ’ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯ ಅಂಗಡಿ’: ಡ್ಯಾನಿಶ್ ಅಲಿಯನ್ನು ಅಪ್ಪಿಕೊಂಡಿರುವ ಫೋಟೋ ಹಂಚಿಕೊಂಡ ರಾಹುಲ್