ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದ ಹತ್ತು ಸಚಿವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಇಂದು ಖಾತೆ ಹಂಚಿಕೆ ಮಾಡಿ ರಾಜ್ಯಪಾಲರಿಗೆ ಪಟ್ಟಿ ಸಲ್ಲಿಸಿದ್ದಾರೆ. ಪಟ್ಟಿ ಹೀಗಿದೆ.
ರಮೇಶ್ ಜಾರಕಿಹೊಳಿ : ಜಲಸಂಪನ್ಮೂಲ ಖಾತೆ
ಎಸ್ ಟಿ ಸೋಮಶೇಖರ್ : ಸಹಕಾರ
ಡಾ.ಸುಧಾಕರ್ : ವೈದ್ಯಕೀಯ ಶಿಕ್ಷಣ
ಭೈರತಿ ಬಸವರಾಜ್ : ನಗರಾಭಿವೃದ್ಧಿ(ಬೆಂಗಳೂರು ಹೊರತು ಪಡಿಸಿ)
ಗೋಪಾಲಯ್ಯ : ಸಣ್ಣ ಕೈಗಾರಿಕೆ
ಶಿವರಾಂ ಹೆಬ್ಬಾರ್ : ಕಾರ್ಮಿಕ
ಬಿ.ಸಿ.ಪಾಟಿಲ್ : ಅರಣ್ಯ
ಕೆ.ಸಿ.ನಾರಾಯಣಗೌಡ : ಸಣ್ಣ ನೀರಾವರಿ
ಶ್ರೀಮಂತ ಪಾಟಿಲ್ : ಜವಳಿ
ಆನಂದ್ ಸಿಂಗ್ : ಆಹಾರ ಮತ್ತು ನಾಗರಿಕ ಪೂರೈಕೆ
ಇಂಧನ ಮತ್ತು ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನು ಯಾರಿಗೂ ನೀಡಿಲ್ಲ. ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ತಮ್ಮ ಬಳಿ ಕೃಷಿ ಖಾತೆಯನ್ನು ಉಳಿಸಿಕೊಂಡಿದ್ದಾರೆ. ರಮೇಶ್ ಕುಮಟಳ್ಳಿ ಅವರಿಗೆ ಪ್ರಬಲ ನಿಗಮ ಮಂಡಳಿ ನೀಡಲು ತೀರ್ಮಾನಿಸಿದ್ದಾರೆ. ನೂತನ ಸಚಿವರುಗಳು ಹಿಂದಿನ ಸಮ್ಮಿಶ್ರ ಸರಕಾರದ ವಿರುದ್ಧ ಬಂಡೆದ್ದು ಸರಕಾರವನ್ನು ಉರುಳಿಸಿ, ಬಿಜೆಪಿ ಸರಕಾರ ರಚಿಸುವಲ್ಲಿ ನೆರವಾಗಿದ್ದರು.