Homeಮುಖಪುಟಕಾಳಿ ದೇವಿ ಕುರಿತ ಹೇಳಿಕೆಗೆ ದೂರು: ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಹೇಳಿದ್ದೇನು?

ಕಾಳಿ ದೇವಿ ಕುರಿತ ಹೇಳಿಕೆಗೆ ದೂರು: ಟಿಎಂಸಿ ಸಂಸದೆ ಮಹುವಾ ಮೊಯಿತ್ರ ಹೇಳಿದ್ದೇನು?

- Advertisement -
- Advertisement -

ಕಾಳಿ ದೇವಿ ಕುರಿತು ಟಿಎಂಸಿ ಸಂಸದೆ ಮಹುವಾ ಮೊಯಿತ್ರ ನೀಡಿದ ಹೇಳಿಕೆಗಳು ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಬಿಜೆಪಿ ಆರೋಪಿಸಿದೆ. ಈ ಕುರಿತು ಕೋಲ್ಕತ್ತಾದಲ್ಲಿ ಬಿಜೆಪಿ ಮುಖಂಡ ಜಿತಿನ್ ಚಟರ್ಜಿ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.

ಇಂಡಿಯಾ ಟುಡೆಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸಂಸದೆ ಮಹುವಾ ಮೊಯಿತ್ರಾರವರು “ಜನರು ತಮ್ಮ ದೇವರನ್ನು ಹೇಗೆ ನೋಡುತ್ತಾರೆ, ಕಲ್ಪಿಸಿಕೊಳ್ಳುತ್ತಾರೆ ಎಂಬುದು ಅವರಿಗೆ ಬಿಟ್ಟದ್ದು. ಅವರು ತಮಗಿಷ್ಟ ಬಂದಂತೆ ತಮ್ಮ ದೇವರನ್ನು ಪೂಜಿಸಬಹುದು. ಉದಾಹರಣೆಗೆ ನೀವು ಭೂತಾನ್ ಅಥವಾ ಸಿಕ್ಕಿಂಗೆ ಹೋದರೆ, ಅವರು ಪೂಜೆ ಮಾಡುವಾಗ ತಮ್ಮ ದೇವರಿಗೆ ವಿಸ್ಕಿ ಅರ್ಪಿಸುತ್ತಾರೆ. ಆದರೆ ನೀವು ಉತ್ತರ ಪ್ರದೇಶಕ್ಕೆ ಹೋಗಿ ನಿಮ್ಮ ದೇವರಿಗೆ ವಿಸ್ಕಿಯನ್ನು ಪ್ರಸಾದವಾಗಿ ಅರ್ಪಿಸಿ ಎಂದು ಹೇಳಿದರೆ, ಅದು ಧರ್ಮನಿಂದನೆಯೆಂದು ಕರೆಸಿಕೊಳ್ಳುತ್ತದೆ” ಎಂದು ಹೇಳಿದ್ದರು.

ಮುಂದುವರಿದು, “ನನಗೆ ಕಾಳಿ ದೇವಿಯು ಮಾಂಸ ತಿನ್ನುವ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆಯಂತೆ ಕಾಣುತ್ತಾರೆ. ನೀವು ತಾರಾಪೀಠಕ್ಕೆ ಹೋದರೆ, ನೀವು ಧೂಮಪಾನ ಮಾಡುವ ಸಾಧುಗಳನ್ನು ನೋಡುತ್ತೀರಿ. ಆ ರಿತಿಯಾಗಿ ಅವರು ಕಾಳಿಯನ್ನು ಪೂಜಿಸುತ್ತಾರೆ. ನಾನು ಹಿಂದೂ ಧರ್ಮದಲ್ಲಿ, ಕಾಳಿ ಆರಾಧಕಳಾಗಿ ಕಾಳಿಯನ್ನು ಆ ರೀತಿಯಲ್ಲಿ ಕಲ್ಪಿಸಿಕೊಳ್ಳುವ ಹಕ್ಕಿದೆ; ಅದು ನನ್ನ ಸ್ವಾತಂತ್ರ್ಯ” ಎಂದು ಹೇಳಿದ್ದರು.

“ನಿಮ್ಮ ದೇವರನ್ನು ಸಸ್ಯಾಹಾರಿಯಾಗಿ ಮತ್ತು ಬಿಳಿ ಬಟ್ಟೆ ತೊಟ್ಟವರಂತೆ ಪೂಜಿಸಲು ನಿಮಗೆ ಎಷ್ಟು ಸ್ವಾತಂತ್ರ್ಯವಿದೆಯೋ ಹಾಗೆಯೇ ಮಾಂಸ ತಿನ್ನುವ ದೇವತೆಯಾಗಿ ಕಲ್ಪಿಸಿಕೊಳ್ಳುವ ಹಕ್ಕು ಸಹ ನನಗಿದೆ” ಎಂದು ಹೇಳಿದ್ದರು.

ಈ ಕುರಿತು ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿತ್ತು. ಅದರ ಬೆನ್ನಲ್ಲೆ ಟಿಎಂಸಿ ಪಕ್ಷ ಸಹ ಮಹುವಾ ಹೇಳಿಕೆಯನ್ನು ಖಂಡಿಸಿತ್ತು. ಆ ಕುರಿತು ಟ್ವೀಟ್ ಮಾಡಿ, “#IndiaTodayConclaveEast2022 ನಲ್ಲಿ ಮಹುವಾ ಮೊಯಿತ್ರಾರವರು ನೀಡಿದ ಹೇಳಿಕೆ ಮತ್ತು ಕಾಳಿ ದೇವಿಯ ಕುರಿತು ಅವರ ಅಭಿಪ್ರಾಯಗಳನ್ನು ಅವರ ವೈಯಕ್ತಿಕವಾದವುಗಳಾಗಿವೆ. ಅವಗಳನ್ನು ಯಾವುದೇ ರೀತಿಯಲ್ಲಿ ಅಥವಾ ರೂಪದಲ್ಲಿ ಪಕ್ಷವು ಅನುಮೋದಿಸುವುದಿಲ್ಲ. ಇಂತಹ ಹೇಳಿಕೆಗಳನ್ನು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ” ಎಂದು ಪಕ್ಷ ಟ್ವೀಟ್ ಮಾಡಿತು. ಆದಾದ ನಂತರ ಮಹುವಾ ಮೊಯಿತ್ರ ಪಕ್ಷದ ಟ್ವಿಟರ್ ಖಾತೆಯನ್ನು ಅನ್‌ಫಾಲೋ ಮಾಡಿದ್ದರು.

ಕೆಲದಿನಗಳ ಹಿಂದೆ ಸಿನಿಮಾ ನಿರ್ದೇಶಕಿಯೊಬ್ಬರು ಕಾಳಿ ದೇವಿ ಸಿಗರೇಟ್ ಸೇದುತ್ತಿರುವ ಫೋಟೊವನ್ನು ತಮ್ಮ ಸಿನಿಮಾಗೆ ಬಳಸಿಕೊಂಡಿದ್ದರು. ಈ ಕುರಿತು ವಿವಾದ ಉಂಟಾಗಿ ಅವರ ಮೇಲೆ ದೂರು ದಾಖಲಾಗಿತ್ತು. ಅವರನ್ನು ಮಹುವಾ ಮೊಹಿತ್ರ ಬೆಂಬಲಿಸುತ್ತಿದ್ದಾರೆ ಎಂದು ಬಿಜೆಪಿಗರು ಆರೋಪಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮಹುವಾ, “ನಿಮಗೆಲ್ಲ ಸಂಘಿ-ಸುಳ್ಳು ಹೇಳುವುದು ನಿಮ್ಮನ್ನು ಉತ್ತಮ ಹಿಂದೂಗಳನ್ನಾಗಿ ಮಾಡುವುದಿಲ್ಲ. ನಾನು ಯಾವುದೇ ಚಲನಚಿತ್ರ ಅಥವಾ ಪೋಸ್ಟರ್ ಅನ್ನು ಬೆಂಬಲಿಸಿಲ್ಲ ಅಥವಾ ಧೂಮಪಾನದ ಪದವನ್ನು ಉಲ್ಲೇಖಿಸಿಲ್ಲ. ಭೋಗ್ ಆಗಿ ಯಾವ ಆಹಾರ ಮತ್ತು ಪಾನೀಯವನ್ನು ನೀಡಲಾಗುತ್ತದೆ ಎಂಬುದನ್ನು ನೋಡಲು ತಾರಾಪೀಠದಲ್ಲಿರುವ ನನ್ನ ಮಾ ಕಾಳಿ ದೇವಾಲಯಕ್ಕೆ ಭೇಟಿ ನೀಡಿ ಎಂದು ಸಲಹೆ ನೀಡಿದ್ದೇನೆ ಅಷ್ಟೆ” ಎಂದು ಟ್ವೀಟ್ ಮಾಡಿದ್ದಾರೆ.

ಪ್ರಕರಣ ವಿವಾದದ ಸ್ವರೂಪ ಪಡೆದುಕೊಂಡ ಕೂಡಲೇ ಮಹುವಾ ಮೊಯಿತ್ರರವರು “ಜೈ ಮಾ ಕಾಳಿ, ಬಂಗಾಳಿಗರು ದೇವರನ್ನು ಯಾವುದೇ ಭಯವಿಲ್ಲದೆ ಆರಾಧನೆ ಮಾಡುತ್ತಾರೆಯೇ ಹೊರತು ತುಷ್ಟೀಕರಣ ಮಾಡುವುದಿಲ್ಲ” ಎಂದು ಮತ್ತೊಂದು ಟ್ವೀಟ್ ಮಾಡಿದ್ದಾರೆ.

ತಮ್ಮ ವಿರುದ್ಧ ದೂರು ನೀಡಿದ ಬಿಜೆಪಿ ವಿರುದ್ಧವೂ ಅವರು ಕಿಡಿಕಾರಿದ್ದಾರೆ. “ನಾನು ಕಾಳಿಯ ಆರಾಧಕಿ, ನನಗೆ ಯಾರ ಭಯವಿಲ್ಲ. ನಿಮ್ಮ ಅಜ್ಞಾನಿಗಳ, ನಿಮ್ಮ ಗೂಂಡಾಗಳ, ನಿಮ್ಮ ಪೊಲೀಸರ ಎಲ್ಲಕ್ಕಿಂತ ಹೆಚ್ಚಾಗಿ ನಿಮ್ಮ ಟ್ರೋಲ್ ಪಡೆಯ ಭಯ ನನಗಿಲ್ಲ” ಎಂದು ಅವರು ಟ್ವೀಟ್ ಮಾಡಿದ್ದಾರೆ.

ಮಹುವಾ ಮೊಯಿತ್ರಾರವರ ವಿರುದ್ದದ ದಾಳಿಗಳನ್ನು ಖಂಡಿಸಿರುವ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರ ಬೆಂಬಲಕ್ಕೆ ನಿಂತಿದ್ದಾರೆ. ನಮ್ಮ ಧಾರ್ಮಿಕ ಆಚರಣೆಗಳು ಇಡೀ ದೇಶಾದ್ಯಂತ ವಿಭಿನ್ನವಾಗಿವೆ ಎಂಬುದನ್ನು ಎಲ್ಲಾ ಹಿಂದೂಗಳು ತಿಳಿದಿದ್ದಾರೆ. ಅದನ್ನೆ ಮಹುವಾರವರು ಹೇಳಿದ್ದಾರೆ ಎಂದಿದ್ದಾರೆ.

ಅವೈದಿಕ ದೇವರುಗಳಿಗೆ ಮಾಂಸಾಹಾರವನ್ನು ಪ್ರಸಾದ, ನೈವೈದ್ಯವಾಗಿ ಅರ್ಪಿಸುವ ಪದ್ದತಿ ಕರ್ನಾಟಕದಲ್ಲಿಯೂ ನಡೆದುಕೊಂಡು ಬಂದಿದೆ. ಮಂಟೇಸ್ವಾಮಿ, ಮಾರಮ್ಮ ಸೇರಿದಂತೆ ಹಲವು ದೇವರುಗಳಿಗೆ ಕುರಿ-ಕೋಳಿಗಳನ್ನು ಬಲಿಕೊಟ್ಟು ಅಡುಗೆ ಮಾಡಿ ಬಡಿಸುವುದು ಎಲ್ಲರಿಗೂ ತಿಳಿದೇ ಇದೆ.

ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿದ ಲೇಖಕ, ಹೋರಾಟಗಾರ ಜಿ.ಎನ್ ನಾಗರಾಜುರವರು, “ಚೌಡಮ್ಮ, ಕಾಳಮ್ಮ, ಮಾರಮ್ಮ, ಊರಮ್ಮ ಇತ್ಯಾದಿ ನಮ್ಮ ಬಹಳಷ್ಟು ಅಮ್ಮ ದೇವತೆಗಳು ಮಾಂಸಾಹಾರಿಗಳು. ಬುಡಕಟ್ಟುಗಳ ಆರಾಧ್ಯ ದೇವತೆಗಳಾದ ಇವರು ಹಿಂದೆ ಸ್ವತಃ ಬೇಟೆ ಮತ್ತು ಯುದ್ದದಲ್ಲಿ ಭಾಗವಹಿಸುತ್ತಿದ್ದರು. ಆದ ಕಾರಣ ಇವರು ಮಾಂಸಾಹಾರಿಗಳು ಮತ್ತು ಆಯಾ ಬುಡಕಟ್ಟಿನ ಮದ್ಯವನ್ನು ಸೇವನೆ ಮಾಡುತ್ತಿದ್ದರು. ಇವೆಲ್ಲವೂ ಬುಡಕಟ್ಟು ಪದ್ದತಿಗಳಾಗಿವೆ” ಎಂದರು.

ಬುಡಕಟ್ಟು ಜನರು ತಮ್ಮ ಕುಲದೇವತೆಗಳೆಂದು ಪೂಜಿಸುತ್ತಾರೆ. ತಮ್ಮನ್ನು ಅಮ್ಮನ ಒಕ್ಕಲು ಎಂದು ಕರೆದುಕೊಳ್ಳುತ್ತಾರೆ. ಕಾಳೆ, ದುರ್ಗೆ, ಚಾಮುಂಡಿ ಎಲ್ಲರೂ ಇಂತಹ ಕುಲದೇವತೆಗಳೆ ಆಗಿದ್ದಾರೆ. ಅವರ ನಡುವೆಯೇ ಒಬ್ಬ ಪೂಜಾರಿ ಇದ್ದು ಪೂಜೆ ಸಲ್ಲಿಸುತ್ತಾರೆ. ದೇವಾಲಯದಲ್ಲಿಯೇ ಬಲಿ ಕೊಡಲಾಗುತ್ತಿತ್ತು. ಆದರೆ ಈ ದೇವಾಲಯಗಳಲ್ಲಿ ಕೆಲವು ಹೆಚ್ಚು ಆದಾಯ ತಂದ ನಂತರ ಅಲ್ಲಿ ಬ್ರಾಹ್ಮಣ ಪೂಜಾರಿಗಳು ಬಂದರು. ಕಾಲ ಅದನ್ನು ಸಸ್ಯಾಹಾರಿಗಳೆಂದು ಬಿಂಬಿಸುವುದು ಆರಂಭವಾಯಿತು. ಹಾಗಾಗಿ ಜನರು ದೇವಾಲಯದ ದೂರದಲ್ಲಿ ಬಲಿಕೊಡುವುದು ಇಂದಿಗೂ ನಡೆದುಕೊಂಡು ಬಂದಿದೆ. ನಮ್ಮ ಪುರುಷ ದೇವರುಗಳು ಸಹ ಮಾಂಸಾಹಾರಿಗಳೆ. ಸಸ್ಯಾಹಾರಿ ದೇವರುಗಳೆ ನನಗೆ ಕಂಡುಬರುವುದಿಲ್ಲ” ಎಂದರು.

ಕಾಳಿ ದೇವಿಯ ವಿಷಯಕ್ಕೆ ಬಂದರೆ ಅವರನ್ನು ಬಗೆ ಬಗೆಯಾಗಿ ಜನರು ಆರಾಧಿಸುತ್ತಾರೆ. ಕಪ್ಪು ಬಣ್ಣದ ಅರ್ಥ ನೀಡುವ ಕಾಳಿ ಬುಡಕಟ್ಟುಗಳ ಆರಾಧ್ಯ ದೈವ. ಕಾಳಿಯನ್ನು ಹೆಚ್ಚಾಗಿ ಪೂಜಿಸುವ ತಾಂತ್ರಿಕರು ಪಂಚಮಕರವನ್ನು ನಂಬಿದ್ದಾರೆ. ಅವರ ಪ್ರಕಾರ “ಮದ್ಯ, ಮಾಂಸ, ಮತ್ಸ್ಯ, ಮುದ್ರೆ ಮತ್ತು ಮೈಥುನ” ಇವೆಲ್ಲವ ಪೂಜ್ಯವಾಗಿವೆ, ಇವುಗಳಿಂದ ದೇವರು ಸಂಪ್ರೀತರಾಗುತ್ತಾರೆ ಎಂದು ನಂಬಿದ್ದಾರೆ.

ಇದನ್ನೂ ಓದಿ: ಭದ್ರಾವತಿ: ಬಜರಂಗದಳದ ದುಷ್ಕರ್ಮಿಗಳಿಂದ ದಾಂಧಲೆ; 6 ಮಂದಿ ವಿರುದ್ಧ ಎಫ್‌ಐಆರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಎಲ್ಲಾ ಪ್ರಣಿಗಳು ತಮ್ಮ ಹಸಿವಿಗಾಗಿ ಆಹಾರ ಸೇವನೆ ಮಾಡುತ್ತವೆ ,ನಾಯಿ,ಹಂದಿಗಳು ಜನರ ಹೊಲಸು ತಿನ್ನುವ ಕಾರಣ ಮಾನವ ಸಹ ಪ್ರಾಣಿ ಸಂಕುಲದ ಭಾಗ ಆಗಾಗಿ ಇವಳು ನಾಯಿ,ಹಂದಿ ತಿನ್ನುವ ಹೊಲಸನ್ನು ತಿನ್ನಲಿ ,ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಈ ರೀತಿಯ ಚೀನೀ ಬೆಂಬಲಿತ ಹೊಲಸು ತಿನ್ನುವ ಇಂತ ಕಮ್ಯೂನಿಸ್ಟ್ ಪಕ್ಷದ ಮೊಯಿತ್ರಾ ಸಂಸದರ ನಡವಳಿಕೆ ಅವರ ಕೊಳಕುತನ ನೋಡಿಸುತ್ತೇ

  2. ಎಲ್ಲಾ ಪ್ರಣಿಗಳು ತಮ್ಮ ಹಸಿವಿಗಾಗಿ ಆಹಾರ ಸೇವನೆ ಮಾಡುತ್ತವೆ ,ನಾಯಿ,ಹಂದಿಗಳು ಜನರ ಹೊಲಸು ತಿನ್ನುವ ಕಾರಣ ಮಾನವ ಸಹ ಪ್ರಾಣಿ ಸಂಕುಲದ ಭಾಗ ಆಗಾಗಿ ಇವಳು ನಾಯಿ,ಹಂದಿ ತಿನ್ನುವ ಹೊಲಸನ್ನು ತಿನ್ನಲಿ ,ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಈ ರೀತಿಯ ಚೀನೀ ಬೆಂಬಲಿತ ಹೊಲಸು ತಿನ್ನುವ ಇಂತ ಪಕ್ಷದ ಮೊಯಿತ್ರಾ ಸಂಸದರ ನಡವಳಿಕೆ ಅವರ ಕೊಳಕುತನ ನೋಡಿಸುತ್ತೇ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...