Homeಕರ್ನಾಟಕವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ

ವಿಜಯಪುರ ಜಿಲ್ಲೆಯಲ್ಲಿ ಕಾಂಗ್ರೆಸ್-ಬಿಜೆಪಿ-ಜೆಡಿಎಸ್ ನಡುವೆ ಗೆಲುವಿಗಾಗಿ ತೀವ್ರ ಪೈಪೋಟಿ

- Advertisement -
- Advertisement -

ವಿಜಯಪುರ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಘೋಷಣೆಯಾಗಿದ್ದು, ಅಭ್ಯರ್ಥಿಗಳ ಫಲಿತಾಂಶದ ಪೂರ್ಣ ವಿವರಗಳು ಈ ಕೆಳಗಿನಂತಿವೆ.

ವಿಜಯಪುರ ನಗರ

ಕಾಂಗ್ರೆಸ್- ಅಮಿತ್ ಮುಶ್ರಫ್-ಹಿನ್ನಡೆ

ಬಿಜೆಪಿ- ಬಸನಗೌಡ ಪಾಟೀಲ್ ಯತ್ನಾಳ- ಮುನ್ನಡೆ

ಜೆಡಿಎಸ್- ಬಂದೇನವಾಜ್-ಹಿನ್ನಡೆ

ಹಿನ್ನೆಲೆ:- 2018ರಲ್ಲಿ ಬಿಜೆಪಿಯು ಕಾಂಗ್ರೆಸಿನಿಂದ ಗೆಲುವು ಕಸಿದುಕೊಂಡಿತು. ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್‌, ಕಾಂಗ್ರೆಸ್ಸಿನ ಅಬ್ದುಲ್ ಹಮೀದ್ ಮುಶ್ರಿಫ್‌ರನ್ನು 6,413 ಮತಗಳಿಂದ ಮಣಿಸಿದರು.

******

ಬಬಲೇಶ್ವರ

ಕಾಂಗ್ರೆಸ್- ಎಂಬಿ ಪಾಟೀಲ್-ಮುನ್ನಡೆ

ಬಿಜೆಪಿ- ವಿಜುಗೌಡ ಪಾಟೀಲ್-ಹಿನ್ನಡೆ

ಜೆಡಿಎಸ್- ಬಸವರಾಜ್ ಹೊನೆವಾಡ-ಹಿನ್ನಡೆ

ಹಿನ್ನೆಲೆ:- 2004ರಲ್ಲಿ ಹಾಗೂ 2008ರಲ್ಲಿ ಕ್ಷೇತ್ರದ ಮರುವಿಂಗಡನೆಯ ವೇಳೆ ಬದಲಾದ ಬಬಲೇಶ್ವರ ವಿಧಾನಸಭೆಯಿಂದ, 2013 ಹಾಗೂ 2018ರಿಂದ ಸತತ ಮೂರು ಬಾರಿ ಎಂ ಬಿ ಪಾಟೀಲ್ ಹ್ಯಾಟ್ರಿಕ್ಗೆಲುವು ಸಾಧಿಸಿದ್ದಾರೆ.

******

ಮುದ್ದೇಬಿಹಾಳ

ಕಾಂಗ್ರೆಸ್- ಅಪ್ಪಾಜಿ ನಾಡಗೌಡ-ಮುನ್ನಡೆ

ಬಿಜೆಪಿ- ಎಎಸ್ ಪಾಟೀಲ್ ನಡಹಳ್ಳಿ-ಹಿನ್ನಡೆ

ಜೆಡಿಎಸ್- ಬಸವರಾಜ ಭಜಂತ್ರಿ-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಸಿ ಎಸ್ ನಾಡಗೌಡ ಅವರು, ಬಿಜೆಪಿಯ ಬಿರಾದಾರ್ ಮಂಗಳಾ ಶಾಂತಗೌಡ್ರು ಅವರನ್ನು 2403 ಕಡಿಮೆ ಮತಗಳ ಅಂತರದಿಂದ ಸೋಲಿಸಿ ನಾಲ್ಕನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಐದನೇ ಬಾರಿ ಕೆಜೆಪಿಯಿಂದ ಸ್ಪರ್ಧಿಸಿದ್ದ ಮಾಜಿ ಸಚಿವೆ ವಿಮಲಾಬಾಯಿ ಜಗದೇವರಾವ್ ದೇಶಮುಖ ಅವರನ್ನು 12202 ಮತಗಳ ಅಂತರದಿಂದ ಮಣಿಸಿದರು.

2018ರಲ್ಲಿ ಐದನೆ ಬಾರಿ ಶಾಸಕರಾಗಿ ಆಯ್ಕೆಯಾಗುವ ಕಾಂಗ್ರೆಸ್‌ನ ಸಿ ಎಸ್ ನಾಡಗೌಡ ಅವರ ಕನಸು ಕೈಗೂಡಲಿಲ್ಲ. ಕ್ಷೇತ್ರದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬಿಜೆಪಿಯಿಂದ ಅಮೀನಪ್ಪ ಗೌಡ ಪಾಟೀಲ್ 8633 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

******

ದೇವರ ಹಿಪ್ಪರಗಿ

ಕಾಂಗ್ರೆಸ್- ಶರಣಪ್ಪ ಟಿ ಸುಣಗಾರ-ಹಿನ್ನಡೆ

ಬಿಜೆಪಿ- ಸೋಮನಗೌಡ ಪಾಟೀಲ್-ಹಿನ್ನಡೆ

ಜೆಡಿಎಸ್- ರಾಜುಗೌಡ ಪಾಟೀಲ್-ಮುನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡನೆಯಾದ ನಂತರ ಕಾಂಗ್ರೆಸ್‌ನ ಎ ಎಸ್ ಪಾಟೀಲ್ ನಡಹಳ್ಳಿ ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು 30,893 ಮತಗಳ ಭಾರಿ ಮತಗಳ ಅಂತರದಿಂದ ಸೋಲಿಸಿ ಮೊದಲ ಬಾರಿ ವಿಧಾನಸಭೆ ಪ್ರವೇಶಿಸಿದರು.

2013ರಲ್ಲಿ ಎ ಎಸ್ ಪಾಟೀಲ್ ನಡಹಳ್ಳಿಗೆ ಬಿಜೆಪಿಯ ಸೋಮನಗೌಡ ಪಾಟೀಲ್ ತೀವ್ರ ಪೈಪೋಟಿ ನೀಡಿದರೂ 8,096 ಮತಗಳ ಅಂತರದಲ್ಲಿ ಸೋತರು.

2018ರಲ್ಲಿ ಬಿಜೆಪಿಯ ಸೋಮನಗೌಡ ಪಾಟೀಲ್ ಜೆಡಿಎಸ್ ಅಭ್ಯರ್ಥಿ ರಾಜುಗೌಡ ಪಾಟೀಲ್ ಅವರಿಗೆ ತೀವ್ರ ಪೈಪೋಟಿ ನೀಡಿ ಕೇವಲ 3,353 ಮತಗಳ ಅಂತರದಲ್ಲಿ ದೇವರ ಹಿಪ್ಪರಿಗಿಯಲ್ಲಿ ಮೊದಲ ಬಾರಿಗೆ ಕಮಲವನ್ನು ಅರಳಿಸಿದರು.

ಎ ಎಸ್ ಪಾಟೀಲ ನಡಹಳ್ಳಿ ಕೂಡ ಕಾಂಗ್ರೆಸ್‌ನಿಂದ 2008 ಮತ್ತು 2013ರಲ್ಲಿ ಈ ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದಿದ್ದಾರೆ.

*******

ಬಸವನ ಬಾಗೇವಾಡಿ

ಕಾಂಗ್ರೆಸ್- ಶಿವಾನಂದ ಪಾಟೀಲ್-ಹಿನ್ನಡೆ

ಬಿಜೆಪಿ- ಎಸ್‌ಕೆ ಬೆಳ್ಳುಬ್ಬಿ-ಹಿನ್ನಡೆ

ಜೆಡಿಎಸ್- ಸೋಮನಗೌಡ ಪಾಟೀಲ್-ಮುನ್ನಡೆ

ಹಿನ್ನೆಲೆ:- 2018ರಲ್ಲಿ ಜೆಡಿಎಸ್‌ನ ಅಪ್ಪುಗೌಡ ತೀವ್ರ ಪೈಪೋಟಿಯ ನಡುವೆಯೂ 3,186 ಮತಗಳ ಕಡಿಮೆ ಅಂತರದಲ್ಲಿ ಕಾಂಗ್ರೆಸ್‌ನ ಶಿವಾನಂದ ಪಾಟೀಲರು ಗೆಲುವು ಸಾಧಿಸುವ ಮೂಲಕ ಬಸವನ ಬಾಗೇವಾಡಿಯಿಂದ ಮೂರನೇ ಬಾರಿ ಶಾಸಕರಾದರು. 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಶಿವಾನಂದ ಪಾಟೀಲರು ಕರ್ನಾಟಕ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ಹಾಗೂ 2018ರ ಹೆಚ್ ಡಿ ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿದ್ದರು.

*******

ನಾಗಠಾಣ (ಎಸ್‌ಸಿ ಮೀಸಲು)

ಕಾಂಗ್ರೆಸ್- ವಿಠಲ ಕಟಕದೊಂಡ-ಕಾಂಗ್ರೆಸ್

ಬಿಜೆಪಿ- ಸಂಜೀವ್ ಐಹೊಳೆ-ಹಿನ್ನಡೆ

ಜೆಡಿಎಸ್- ದೇವಾನಂದ ಚವ್ಹಾಣ-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ನಾಗಠಾಣದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿಯಿಂದ ವಿಠಲ ಧೋಂಡಿಬಾ ಕಟಕದೊಂಡ ಶಾಸಕರಾದರು. 2013ರಲ್ಲಿ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರನ್ನು ಕೇವಲ 667 ಮತಗಳಿಂದ ಮಣಿಸಿ ಎರಡನೇ ಬಾರಿಗೆ ಕಾಂಗ್ರೆಸ್‌ನ ರಾಜು ಅಲಗೂರ ಗೆಲುವು ಸಾಧಿಸಿದರು. 2018ರಲ್ಲಿ ಕಾಂಗ್ರೆಸ್‌ನ ವಿಠಲ ಧೋಂಡಿಬಾ ಕಟಕದೊಂಡ ಅವರ ವಿರುದ್ಧ ಜೆಡಿಎಸ್‌ನ ದೇವಾನಂದ ಚವ್ಹಾಣ ಅವರು 4207 ಮತಗಳ ಅಂತರದಿಂದ ಗೆಲುವು ಕಂಡರು.

*******

ಇಂಡಿ

ಕಾಂಗ್ರೆಸ್- ಯಶವಂತರಾಯಗೌಡ ಪಾಟೀಲ್-ಮುನ್ನಡೆ

ಬಿಜೆಪಿ- ಕಾಸುಗೌಡ ಬಿರಾದಾರ್-ಹಿನ್ನಡೆ

ಜೆಡಿಎಸ್- ಬಿಡಿ ಪಾಟೀಲ್-ಹಿನ್ನಡೆ

ಹಿನ್ನೆಲೆ:- 2008ರಲ್ಲಿ ಕ್ಷೇತ್ರ ಪುನರ್ವಿಂಗಡಣೆಯಾದ ನಂತರ ಅಂದಿನ ಚುನಾವಣೆಯಲ್ಲಿ ಡಾ ಸಾರ್ವಭೌಮ ಬಗಲಿಯವರು ಬಿಜೆಪಿಯಿಂದ ಜಯಗಳಿಸಿದ್ದರು. ಬಿಜೆಪಿಗೆ ಇದೊಂದೇ ಬಾರಿ ಇಲ್ಲಿ ಮತದಾರರು ಗೆಲುವು ನೀಡಿದ್ದರು. ನಂತರ ನಡೆದ 2013 ಚುನಾವಣೆಯಲ್ಲಿ ಕೆಜಿಪಿಯಿಂದ ಸ್ಪರ್ಧಿಸಿದ್ದ ರವಿಕಾಂತ್ ಪಾಟೀಲರನ್ನು ಕಾಂಗ್ರೆಸ್‌ನ ಯಶವಂತರಾಯ ಗೌಡ ವಿಟಾಲ ಗೌಡ ಪಾಟೀಲ್ ಅವರು 33,302 ಮತಗಳ ಭಾರಿ ಅಂತರದಿಂದ ಸೋಲಿಸಿ ಗೆಲುವು ಕಂಡಿದ್ದರು. 2018ರಲ್ಲಿ ಜೆಡಿಎಸ್‌ನ ಬಿ ಡಿ ಪಾಟೀಲ್ ಅವರನ್ನು 9,938 ಮತಗಳ ಅಂತರದಿಂದ ಮಣಿಸಿ ಕಾಂಗ್ರೆಸ್‌ನ ಯಶವಂತರಾಯ ಗೌಡ ವಿಟಾಲ ಗೌಡ ಪಾಟೀಲ್ ಅವರು ಪುನರಾಯ್ಕೆಯಾದರು.

*******

ಸಿಂದಗಿ

ಕಾಂಗ್ರೆಸ್- ಅಶೋಕ ಮನಗೂಳಿ-ಮುನ್ನಡೆ

ಬಿಜೆಪಿ- ರಮೇಶ ಭೂಸನೂರ-ಹಿನ್ನಡೆ

ಜೆಡಿಎಸ್- ವಿಜಯಶ್ರೀ ಪಾಟೀಲ್-ಹಿನ್ನಡೆ

ಹಿನ್ನೆಲೆ:- ಸಿಂದಗಿ ವಿಧಾನಸಭಾ ಕ್ಷೇತ್ರದ ಇತಿಹಾಸದಲ್ಲಿ 1962 ಹಾಗೂ 1967ರಲ್ಲಿ ಸತತ ಎರಡು ಬಾರಿ ಗೆಲುವು ಕಂಡಿದ್ದ ಸಿ ಎಂ ದೇಸಾಯಿ ಅವರನ್ನು ಹೊರತುಪಡಿಸಿದರೆ ಉಳಿದ ಯಾವ ಅಭ್ಯರ್ಥಿಯು ಸತತವಾಗಿ ಜಯ ಗಳಿಸಿರಲಿಲ್ಲ. 2008 ಮತ್ತು 2013ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ರಮೇಶ್ ಭೂಸನೂರ ಎರಡೂ ಬಾರಿಯೂ ಗೆಲುವು ಪಡೆದು ಕಮಲ ಪಕ್ಷಕ್ಕೆ ಹ್ಯಾಟ್ರಿಕ್‌ ಜಯ ಕರುಣಿಸಿದರು.

2013ರಲ್ಲಿ ಎಂ ಸಿ ಮನಗೊಳಿ ತೀವ್ರ ಪೈಪೋಟಿ ನೀಡಿದರೂ 752 ಮತಗಳಿಂದ ಸಿ ಎಂ ದೇಸಾಯಿ ಶಾಸಕರಾಗಿ ಆಯ್ಕೆಯಾದರು.

1994ರಲ್ಲಿ ಗೆದ್ದಿದ್ದು ಬಿಟ್ಟರೆ, 1999ರಿಂದ ಸತತ ನಾಲ್ಕು ಬಾರಿ ಸೋತಿದ್ದ ಜೆಡಿಎಸ್‌ನ ಎಂ ಸಿ ಮನಗೊಳಿ 2018ರಲ್ಲಿ ಬಿಜೆಪಿಯ ರಮೇಶ್ ಭೂಸನೂರ ವಿರುದ್ಧ 9305 ಮತಗಳ ಅಂತರದಲ್ಲಿ ಎರಡನೇ ಬಾರಿಗೆ ಜಯ ದಾಖಲಿಸಿದರು. ಮನಗೂಳಿಯವರು ಒಟ್ಟು ಏಳು ಬಾರಿ ಸ್ಪರ್ಧಿಸಿದ್ದು, ಐದು ಬಾರಿ ಸೋತು ಎರಡು ಬಾರಿ ಗೆಲುವು ಪಡೆದಿರುವುದು ವಿಶೇಷ.

*******

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಖರ್ಗೆ ಭಾಷಣ ಸ್ಥಳದ ‘ಶುದ್ಧೀಕರಣ’: ಬಿಜೆಪಿ-RSS, ಸಂಘ ಪರಿವಾರದ ವಿಷಪೂರಿತ ಮನಸ್ಥಿತಿ ಮಾಜಿ ಸಿಎಂ ಸಿದ್ದರಾಮಯ್ಯ

ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ, ಬಲಪಂಥೀಯ ಸಂಘಟನೆಯೊಂದು ಆ ಮೈದಾನದಲ್ಲಿ 'ಶುದ್ಧೀಕರಣ' ಕೈಗೊಂಡಿರುವುದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ರೋಶ...

ಸೋನಿಯಾ ಗಾಂಧಿ ಆತ್ಮಕಥೆ ವಿವಾದ | ಮೋದಿ, ಆರ್‌ಎಸ್‌ಎಸ್, ಚೀನಾ ನುಸುಳುವಿಕೆ ಕುರಿತ ಭಾಗಗಳನ್ನು ತೆಗೆದುಹಾಕಲು ಪೆಂಗ್ವಿನ್ ಇಂಡಿಯಾ ಕೋರಿತ್ತು : ಕಾಂಗ್ರೆಸ್ ಆರೋಪ

ಪ್ರಧಾನಿ ನರೇಂದ್ರ ಮೋದಿ, ಆರ್‌ಎಸ್‌ಎಸ್ ಮತ್ತು ಅವರ ಅಧಿಕಾರಾವಧಿಯಲ್ಲಿ ನಡೆದ ಭಾರತೀಯ ಭೂಪ್ರದೇಶದ ಮೇಲಿನ ಚೀನಾದ ಆಕ್ರಮಣದ ನಿರ್ವಹಣೆಗೆ ಸಂಬಂಧಿಸಿದ ಭಾಗಗಳನ್ನು ಹಿರಿಯ ನಾಯಕಿ ಸೋನಿಯಾ ಗಾಂಧಿ ಅವರ "ಬೆಲಾಂಗಿಂಗ್: ಎ ಜರ್ನಿ...

ಪಶ್ಚಿಮ ಬಂಗಾಳ| ದುರ್ಗಾಪೂಜೆ ಸಂದರ್ಭದಲ್ಲಿ ಮಾಂಸ ಮಾರಾಟ ನಿಷೇಧ ಆದೇಶ ಹೊರಡಿಸಿದ ವಿಎಚ್‌ಪಿ; ಬಲಪಂಥೀಯ ಸಂಘನೆಯ ಅಧಿಕಾರ ಪ್ರಶ್ನಿಸಿದ ವಿಪಕ್ಷಗಳು

ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆ ಆಚರಣೆಗೆ ಸಂಬಂಧಿಸಿದಂತೆ ಬಲಪಂಥೀಯ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಹೊರಡಿಸಿರುವ ಮಾರ್ಗಸೂಚಿಯು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಪೂಜಾ ಮಂಟಪಗಳ ಸುತ್ತಮುತ್ತ ಸಸ್ಯಾಹಾರಿ ಅಲ್ಲದ ಮಾಂಸ ಮತ್ತು ಮೀನು...

ನ್ಯೂಯಾರ್ಕ್‌ನಲ್ಲಿ ಮೋಹನ್ ಭಾಗವತ್ ಕಾರ್ಯಕ್ರಮ: RSS ಮತ್ತು ಸಂಸ್ಥೆಯ ನಂಟಿನ ರಹಸ್ಯ ಬಯಲು

ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸರಸಂಘಚಾಲಕ ಮೋಹನ್ ಭಾಗವತ್ ಅವರು ಶನಿವಾರ ನ್ಯೂಯಾರ್ಕ್‌ನ ಪ್ರಸಿದ್ಧ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ ‘ಯೂನಿವರ್ಸಲ್ ಒನ್‌ನೆಸ್ ಸೆಲೆಬ್ರೇಷನ್ಸ್’ ಎಂಬ ಬೃಹತ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ವರದಿಗಳ ಪ್ರಕಾರ,...

ಮೋಹನ್ ಭಾಗವತ್ ನ್ಯೂಯಾರ್ಕ್ ಕಾರ್ಯಕ್ರಮಕ್ಕೆ ವಿರೋಧ : ಅಮೆರಿಕದ 61 ಸಂಘಟನೆಗಳಿಂದ ಪ್ರತಿಭಟನೆ

ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್ ಭಾಗವತ್ ಭಾಷಣ ಮಾಡಲಿರುವ, ಶನಿವಾರ (ಆ.29) ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಆಯೋಜಿಸಲಾಗಿರುವ 'ಯೂನಿವರ್ಸಲ್ ಒನ್ನೆಸ್ ಸೆಲೆಬ್ರೇಷನ್ಸ್' ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ಅವರು...

ಶಿವಮೊಗ್ಗ| ಈದ್-ಎ-ಮಿಲಾದ್ ರ್‍ಯಾಲಿಯಲ್ಲಿ ಪ್ಯಾಲೆಸ್ತೀನ್ ಧ್ವಜ ಪ್ರದರ್ಶನ: ಮೂವರ ವಿರುದ್ಧ ಪ್ರಕರಣ ದಾಖಲು

ಶಿವಮೊಗ್ಗದ ಆರ್‌ಎಂಎಲ್ ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಗಾಗಿ ನಿರ್ಮಿಸಲಾಗಿದ್ದ ಕಟೌಟ್ ಒಂದರ ಮೇಲೆ ಫೆಲೆಸ್ತೀನ್ ಧ್ವಜವನ್ನು ಪ್ರದರ್ಶಿಸಿದ ಆರೋಪದ ಮೇಲೆ ಪೊಲೀಸರು ಮೂವರು ಮುಸ್ಲಿಂ ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಆರೋಪಿಗಳನ್ನು ನಿಹಾಲ್ ಉರುಫ್ ಬೆಕ್ಕು,...

ಕೋಲ್ಕತ್ತಾದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ FIR: ಹೈಕೋರ್ಟ್ ಆದೇಶ ಉಲ್ಲಂಘನೆ ಆರೋಪ

ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತ್ತಾ ಪೊಲೀಸರು ಸ್ವಯಂಪ್ರೇರಿತ (Suo Motu) ದೂರು ದಾಖಲಿಸಿಕೊಂಡಿದ್ದಾರೆ. ಶುಕ್ರವಾರ ಕೋಲ್ಕತ್ತಾದಲ್ಲಿ ನಡೆದ ಟಿಎಂಸಿ ವಿದ್ಯಾರ್ಥಿ...

ಈದ್ ಮಿಲಾದ್ ಸಂದರ್ಭದಲ್ಲಿ ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನ; ಭಜರಂಗದಳ ಕಾರ್ಯಕರ್ತನ ವಿರುದ್ಧ ಪ್ರಕರಣ ದಾಖಲು

ಈದ್-ಎ-ಮಿಲಾದ್ ಪೋಸ್ಟರ್‌ಗಳ ವಿಚಾರವಾಗಿ ಗುಂಪುಗಳ ನಡುವೆ ಶತ್ರುತ್ವ ಸೃಷ್ಟಿಸಲು ಮತ್ತು ಸಾರ್ವಜನಿಕ ಶಾಂತಿಗೆ ಭಂಗ ತರಲು ಯತ್ನಿಸಿದ ಆರೋಪದ ಮೇಲೆ ಕಲಬುರಗಿಯಲ್ಲಿ ಭಜರಂಗದಳದ ಕಾರ್ಯಕರ್ತನೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ನಗರದಲ್ಲಿ ಈದ್-ಎ-ಮಿಲಾದ್ ಆಚರಣೆಯ ಭಾಗವಾಗಿ...

ವೆನೆಜುವೆಲಾ ತೈಲ ನಿಕ್ಷೇಪಗಳ ಮೇಲೆ ಅಮೆರಿಕ ನಿಯಂತ್ರಣ: ಜಾಗತಿಕ ರಾಜಕಾರಣದಲ್ಲಿ ತಲ್ಲಣ!

ವಾಷಿಂಗ್ಟನ್/ಕಾರಕಾಸ್: ವಿಶ್ವದಲ್ಲೇ ಅತಿ ಹೆಚ್ಚು ಕಚ್ಚಾ ತೈಲ ನಿಕ್ಷೇಪ ಹೊಂದಿರುವ ವೆನೆಜುವೆಲಾ ದೇಶದ 65 ಬಿಲಿಯನ್ ಬ್ಯಾರೆಲ್‌ಗಿಂತ ಹೆಚ್ಚು ಸಾಬೀತಾದ ತೈಲ ನಿಕ್ಷೇಪಗಳ ಮೇಲೆ ಬಹುಮತ ನಿಯಂತ್ರಣ ಸಾಧಿಸುವ ಒಪ್ಪಂದವನ್ನು ಅಮೆರಿಕ ಮಾಡಿಕೊಂಡಿದೆ....

ನೈತಿಕ ಹೊಣೆ ಹೊತ್ತು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ; ಇದು ಬಿಜೆಪಿಯ ಗೆಲುವಲ್ಲ: ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್

ಸಚಿವರಾಗಿದ್ದ ಬಿ. ನಾಗೇಂದ್ರ ಅವರು ಸಾರ್ವಜನಿಕ ಜೀವನದಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಇದು ಬಿಜೆಪಿಯ ಗೆಲುವೂ ಅಲ್ಲ, ವಿಪಕ್ಷ ನಾಯಕರ ಹೋರಾಟದ ಗೆಲುವೂ ಅಲ್ಲ. ಇದೊಂದು ದಲಿತ ಸಮುದಾಯ ನಾಯಕರ...