Homeಕರ್ನಾಟಕಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್...

ಲಿಂಗಾಯಿತರು ನನಗೆ ಮತ ಕೊಡದಿದ್ದರೂ ಪರವಾಗಿಲ್ಲ, ಬಸವ ತತ್ವದ ಮೇಲೆ ನಡೆದರೆ ಸಾಕು: ಶಾಸಕ ಬಿ.ನಾರಾಯಣರಾವ್ ಸಂದರ್ಶನ

- Advertisement -
- Advertisement -

‘ಇಷ್ಟು ಕೋಟಿ ರೊಕ್ಕ ಕೊಟ್ಟರ ಅದನ್ನ ಎಲ್ಲಿಡೋದು ಅಂತ ನಮಗ ಗೊತ್ತಾಗವಲ್ದು ರೀ’ ಎಂದು ವಿಧಾನಸಭೆಯಲ್ಲಿ ಬಿ.ನಾರಾಯಣರಾವ್ ಅವರು ಮಾತನಾಡಿದಾಗ ಕರ್ನಾಟಕದ ಮತದಾರ ಬಂಧುಗಳಿಗೆ ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಗೊತ್ತಾಗಲಿಲ್ಲ. ಮಾತಾಡುತ್ತಿದ್ದ ವ್ಯಕ್ತಿ ಪ್ರಾಮಾಣಿಕವಾಗಿದ್ದಂತೆ ಎಲ್ಲರಿಗೂ ಅನ್ನಿಸುತ್ತಿತ್ತಾದರೂ, ಇಂದಿನ ರಾಜಕಾರಣದಲ್ಲಿ ಇಂತಹ ಒಬ್ಬ ಶಾಸಕ ಇರಲು ಸಾಧ್ಯವೇ ಎಂಬ ಗುಮಾನಿಯೂ ಇತ್ತು. ನಾರಾಯಣರಾವ್‍ರನ್ನು ಬಲ್ಲವರಿಗೆ ಅಂತಹ ಅನುಮಾನವೇನೂ ಇಲ್ಲ. ‘80ರ ದಶಕದಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸ್ಥಾಪನೆಯಾಗಬೇಕೆಂದು ಒತ್ತಾಯಿಸಿ ಬೀದರ್‌ನಿಂದ ಬೆಂಗಳೂರಿನವರೆಗೆ ಸೈಕಲ್ ಜಾಥಾ ಮಾಡಿದ ಉತ್ಸಾಹಿ ಅವರು. ಬಸವಕಲ್ಯಾಣದ ಹಿಂದುಳಿದ ಜಾತಿಯ ಅವರು ನಿರಂತರವಾಗಿ ರಾಜಕಾರಣದಲ್ಲಿದ್ದರೂ ಅಧಿಕಾರದ ಹತ್ತಿರಕ್ಕೆ ಎಂದೂ ಬಂದಿರಲಿಲ್ಲ. ಆ ನಂತರ ದೇವೇಗೌಡರೊಮ್ಮೆ ತಮ್ಮ ಪಕ್ಷದಿಂದ ‘89ರಲ್ಲಿ ಎಂಎಲ್‍ಎ ಟಿಕೆಟ್ ಕೊಟ್ಟಿದ್ದರಾದರೂ ಯಶಸ್ವಿಯಾಗಲಿಲ್ಲ. 2013ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತು, 2018ರಲ್ಲಿ ಗೆದ್ದರು. ಬಸವಕಲ್ಯಾಣ ಅಭಿವೃದ್ಧಿ ಪ್ರಾಧಿಕಾರದ ಅತಿಥಿಗೃಹದಲ್ಲಿ ಪತ್ರಿಕೆಯ ತಂಡಕ್ಕೆ ನಾರಾಯಣರಾವ್ ಮಾತಿಗೆ ಸಿಕ್ಕರು.

ಚಿತ್ರಕೃಪೆ: ಯೋಯೋ ಟಿವಿ

ಪತ್ರಿಕೆ: ವಿಧಾನಸಭೆಯಲ್ಲಿ ನೀವು ಮಾತಾಡಿದ್ದನ್ನು ಕೇಳಿದವರೆಲ್ಲರೂ ಆಶ್ಚರ್ಯಪಟ್ಟರು. ನಿಮ್ಮಂತಹ ವ್ಯಕ್ತಿಗಳು ರಾಜಕಾರಣ ಮಾಡುವ ಪರಿಸ್ಥಿತಿ ಇದೆಯೇ? ನೀವು ಬಯಸುವಂತಹ ಬದಲಾವಣೆ ರಾಜಕಾರಣದಲ್ಲಿ ಸಾಧ್ಯವೇ?

ಬಿ.ನಾರಾಯಣರಾವ್: ಯಾರು ಬದಲಾವಣೆ ಆಗುತ್ತಾರೋ ಬಿಡುತ್ತಾರೋ ಅದು ನಮಗೆ ಸಂಬಂಧಿಸಿಲ್ಲ. ನಾವು, ನಮ್ಮಂತಹ ನಿಷ್ಠಾವಂತರು ಪ್ರಾಮಾಣಿಕರು, ಜನಪರ ಕಾಳಜಿಯಿಟ್ಟು ಹೋರಾಟ ಮಾಡಿದಂತವರು ಬದಲಾಗಬಾರದು.

ಯಾರು ಏನ್ ಮಾಡ್ತರೋ ಬಿಡ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಮಹಾತ್ಮಗಾಂಧಿ ಎಲ್ಲರಿಗಿಂತ ಭಿನ್ನವಾದ ನಾಯಕತ್ವ ಕೊಟ್ಟರು. ಹಾಗಾಗಿ ನಮ್ಮಂತವರು ಅಲ್ಲೊಬ್ಬರು ಇಲ್ಲೊಬ್ಬರು ಉಳಿದುಕೊಂಡಿದ್ದೇವೆ. ಇದು ಬದಲಾವಣೆ ಆಗುವುದಿಲ್ಲ ಅಂತ ನಾವು ಕೆಟ್ಟವರ ಜೊತೆ ಹೋಗೋಕ್ಕಾಗಲ್ಲ.

ಪತ್ರಿಕೆ: ಅನರ್ಹ ಶಾಸಕರು – ಮಾರಿಕೊಂಡು ಹೋದವರನ್ನು ನಿಮ್ಮ ಪಕ್ಷದವರು, ನೀವು ಬೈದಿರಿ. ಆದರೆ ಅಂತಹವರಿಗೆ ಟಿಕೆಟ್ ಕೊಟ್ಟಿದ್ದೇ ನಿಮ್ಮ ಪಕ್ಷವಲ್ಲವೇ?

ವಿಧಾನಸಭೆಯಲ್ಲೇ ನಾನು ಸಿದ್ದರಾಮಯ್ಯ, ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಮೂರು ಜನರಿಗೆ ಸೇರಿಸಿ ಹೇಳಿದ್ದೀನಿ. ಚುನಾವಣೆಗೆ ಕೇವಲ ಹದಿನೈದು ದಿನ ಇದ್ದಾಗ, ಹಣವಂತರು, ಸಾರಾಯಿ ಮಾರುವವರು, ರಿಯಲ್ ಎಸ್ಟೇಟ್‍ನವರು ಕಪ್ಪು ಹಣ ಉಳ್ಳವರಿಗೆ ಟಿಕೆಟ್ ಕೊಟ್ಟಿದ್ದೇ ಈ ಅನಾಹುತಕ್ಕೆ ನಿಜವಾದ ಕಾರಣ.

ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯನು ಕಟ್ಟಿ,
ಸವಿಜೇನು ಹಾಲು ತುಪ್ಪವನ್ನು ಎರೆದರೆ
ಕಹಿಯಲ್ಲದೇ ಸಿಹಿಯಾಗಬಲ್ಲುದೇ
ನಮ್ಮ ಕೂಡಲ ಸಂಗಮದೇವ

ಎಂದು ಬಸವಣ್ಣನವರು 800 ವರ್ಷಕ್ಕಿಂತ ಮುಂಚೆಯೇ ಹೇಳಿದ ಕಟುಸತ್ಯವನ್ನು ಉಲ್ಲೇಖಿಸಿದ್ದೆ. ಬೇವು ಬೀಜ ಬಿತ್ತಿದರೆ ಬೇವೇ ಸಿಗುತ್ತದೆ. ಮಾವು ಬಿತ್ತಿದರೆ ಮಾವೇ ಸಿಗುತ್ತದೆ ಎಂಬುದು ಇವರಿಗೆ ಗೊತ್ತಿಲ್ಲವೇ?

ಪತ್ರಿಕೆ: ನೀವು ಬಸವ ತತ್ವದ ಕುರಿತು ಇಷ್ಟೊಂದು ಮಾತಾಡುತ್ತೀರಿ. ಆದರೆ ಅದೇಕೆ ಬೆಳೆದು ನಿಲ್ಲಲಿಲ್ಲ?

ಬಿ.ನಾರಾಯಣರಾವ್: ಬಸವ ತತ್ವ ದ್ರಾವಿಡಿಯನ್ ಭಾಗದಲ್ಲಿ ನಮ್ಮ ದಕ್ಷಿಣದಲ್ಲಿ ಹುಟ್ಟಿರುವುದರಿಂದ ಇದು ಬೆಳೆದಿಲ್ಲ. ವಿಂಧ್ಯಪರ್ವತದ ಆಚೆ ಹುಟ್ಟಿದ ಧರ್ಮಗಳು – ಉದಾಹರಣೆಗೆ ಬುದ್ಧ ಧರ್ಮ ಇವತ್ತು ವಿಶ್ವವ್ಯಾಪಿಯಾಗಿಲ್ಲವೇ? ಮಹಾವೀರನ ಧರ್ಮವೂ ಬೆಳೆದಿದೆ. ಮೂರ್ನಾಲ್ಕು ಧರ್ಮಗಳು ವಿಂಧ್ಯ ಪರ್ವತದ ಆಚೆ ಹುಟ್ಟಿದವು ವಿಶ್ವವ್ಯಾಪಿಯಾಗಿವೆ.

ವಿಂಧ್ಯಪರ್ವತ ಈಚೆ ಹುಟ್ಟಿರುವುದು ಒಂದೇ ಒಂದು ಧರ್ಮ ಅದು ಬಸವಣ್ಣನವರ ನೇತೃತ್ವದಲ್ಲಿ ಲಿಂಗಾಯಿತ ಧರ್ಮ. ಅಂಥ ಒಂದು ಧರ್ಮಕ್ಕೆ ರಾಜಕೀಯ ರಕ್ಷಣೆ ಸಿಕ್ಕಿಲ್ಲ. ರಾಜಾಶ್ರಯ ಸಿಕ್ಕಿಲ್ಲ. ಇದು ಒಂದೇ ಧರ್ಮಕ್ಕೆ ರಾಜಾಶ್ರಯ ಸಿಕ್ಕಿಲ್ಲ. ಬೌದ್ಧ ಧರ್ಮಕ್ಕೂ ರಾಜಾಶ್ರಯ ಸಿಕ್ಕಿತ್ತು.

ಪತ್ರಿಕೆ: ಲಿಂಗಾಯಿತ ಸಮುದಾಯದ ಯಡಿಯೂರಪ್ಪನವರು ಸಿಎಂ ಆಗಿದ್ದಾರೆ.. ಅದು ರಾಜಾಶ್ರಯ ಸಿಕ್ಕ ಹಾಗಲ್ಲವೇ?
ಬಿ.ನಾರಾಯಣರಾವ್: ಯಡಿಯೂರಪ್ಪನವರು ಎಷ್ಟು ಕೆಲಸ ಮಾಡುತ್ತಾರೋ ಅಷ್ಟನ್ನು ನಾವು ಸ್ವಾಗತಿಸುತ್ತೇವೆ. ಅವರ ಮನಸ್ಸು ಬಸವಣ್ಣನವರ ಬಗ್ಗೆ ತುಡಿತ ಇದ್ರೂ, ಕಾಳಜಿ ಇದ್ರೂ ಕೂಡ ಅವರು ವೈದಿಕ ವ್ಯವಸ್ಥೆಯ ಭಾಗವಾಗಿರುವುದರಿಂದ ಅವರು ಪೂರ್ಣ ಪ್ರಮಾಣದಲ್ಲಿ ಮಾಡಲಿಕ್ಕೆ (ಆ ವ್ಯವಸ್ಥೆ) ಬಿಡುವುದಿಲ್ಲ. ವೈದಿಕ ವ್ಯವಸ್ಥೆಯನ್ನು ಸಮಾಧಾನಪಡಿಸಲಿಕ್ಕೇನೇ ಅವರ ಒಂದು ಜೀವಮಾನ ಹೋಯ್ತು.

ಪ: ನೀವು ವ್ಯಕ್ತಿಗತ ನೆಲೆಯಲ್ಲಿ ಮಾತಾಡುತ್ತಿದ್ದೀರಿ. ಆದರೆ, ಸಮಗ್ರ ಬದಲಾವಣೆ ಬರಬೇಕಾದರೆ ಒಂದು ಪಕ್ಷ, ಸಂಘಟನೆ ಸರಿಯಿರಬೇಕು. ನಿಮ್ಮ ಪಕ್ಷವೂ ಸರಿಯಿಲ್ಲ. ಹೀಗಿದ್ದ ಮೇಲೆ ಸಮಾಜ ಬದಲಾವಣೆ ಹೇಗೆ ಸಾಧ್ಯ?

ಬಿ.ನಾರಾಯಣರಾವ್: ಹಾಗಂತ ನಾವು ಮನುವಾದಿಗಳ ಜೊತೆ, ಬಿಜೆಪಿ ಗುರುತಿಸಿಕೊಳ್ಳಲು ಆಗುವುದಿಲ್ಲ. ಅದು ನಾಗ್ಪುರದಿಂದ ನಡೆಯುವ ಪಕ್ಷ. ಆರ್‌ಎಸ್‍ಎಸ್‍ನವರ ಕೈಯಲ್ಲಿ ಅದರ ಜುಟ್ಟಿದೆ. ಮೋದಿ ಕೂಡ ಅವರ ಕೈಗೊಂಬೆ. ಯಡಿಯೂರಪ್ಪನವರು ಸಹ ಕೈಗೊಂಬೆಯೇ.. ಅವರು ಪೇಟಿ ಬಾರಿಸುತ್ತಾರೆ ಇವರು ಕುಣಿತಾರೆ. ಕಾನೂನುಗಳು ನಾಗ್ಪುರದಲ್ಲಿ ತಯಾರಾಗ್ತಾವೆ. ಅವರು ಪುಟ ಓದೋದು ಪಾರ್ಲಿಮೆಂಟಲ್ಲಿ. ಇದು ಕಟುಸತ್ಯ. ಎರಡು ಮಾತಿಲ್ಲ. ಈಗ ನಾವು ಇದ್ದುದರಲ್ಲಿ ಇಲ್ಲಿರಬೇಕು.. ಜೆಡಿಎಸ್ ಒಂದು ಕುಟುಂಬದ ಪಕ್ಷ ಆಗಿಬಿಟ್ಟಿದೆ. ಬಿಜೆಪಿಗೆ ನಾವು ಹೋಗುವಂತಿಲ್ಲ. ಕಾಂಗ್ರೆಸ್ಸೂ ಕೂಡ ನೈತಿಕವಾಗಿ ಅಷ್ಟೇನು ಒಳ್ಳೆದಿಲ್ಲ. ಅಲ್ಲಿ ಕೂಡ ಜನಪರ ಕಾಳಜಿ ಇರುವವರು ಒಂದು ಕಡೆ ಇದ್ದಾರೆ, ವೈದಿಕ ವ್ಯವಸ್ಥೆಯನ್ನು ಒಪ್ಪಿ ಕೊಂಡಿರುವವರು ಸಹ ಇದ್ದಾರೆ. ಅಲ್ಲಿ ಎಲ್ಲಾ ಸಾಚಾ ಇಲ್ಲ. ಇದಕ್ಕಿಂತ ಒಳ್ಳೆಯ ವ್ಯವಸ್ಥೆ ಬರಬೇಕೆಂಬ ತುಡಿತ ನಮಗೂ ಇದೆ.

ಪ: ಕರ್ನಾಟಕ ರಾಜ್ಯ ಕಾಂಗ್ರೆಸ್ ನಾಯಕತ್ವದಲ್ಲಿ ಕಚ್ಚಾಟ ನಡೆಯುತ್ತಿದೆ. ವಿರೋಧ ಪಕ್ಷದ ನಾಯಕ ಸಹಾ ಇಲ್ಲ. ಈ ದುರಂತಕ್ಕೆ ಏನು ಹೇಳುತ್ತೀರಿ?

ಬಿ.ನಾರಾಯಣರಾವ್: ಅದೆಲ್ಲಾ 9ನೇ ತಾರೀಖಿಗೆ ಮುಕ್ತಾಯವಾಗುತ್ತದೆ ಸರ್. ಒಂದು ಹೇಳುತ್ತೇನೆ. ಈ ರಾಜ್ಯದಲ್ಲಿ ಜನನಾಯಕರಿರುವುದು ಇಬ್ಬರೆ. ಮೂರು ಪಕ್ಷ ಇವೆ ಮೂರು ಜನ ಇದ್ದಾರೆ. ಕಾಂಗ್ರೆಸ್‍ಗೆ ಸಿದ್ದರಾಮಯ್ಯ, ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್‍ಗೆ ದೇವೇಗೌಡ. ಈಗ ಅವರದು – ಜೆಡಿಎಸ್‍ದು ಮುಗಿದಿದೆ. ಇನ್ನು ಯಡಿಯೂರಪ್ಪನವರದು ಎಷ್ಟು ದಿನ ನೋಡಬೇಕು. ಜನರಿಗೆ ನಾಟಕ ನೋಡಬೇಕಾಗಿದೆ. ಜೆಡಿಎಸ್ ನಾಟಕ ಮುಗಿದಿದೆ. ಈಗ ಬಿಜೆಪಿದು ಇದೆ. ಇದು ಎಷ್ಟು ದಿನ ನಡೆಯುತ್ತದೆ ನೋಡಬೇಕು. ಇದು ಮುಗಿದರೆ ಅನಿವಾರ್ಯವಾಗಿ ಕಾಂಗ್ರೆಸ್ ಬರಲೇಬೇಕು ಸರ್. ಇವೂ ಮೂರು ಬೇಡ ಅಂದ್ರೆ ಮತ್ತೊಂದು ಹುಟ್ಟಿದ್ದರೆ ಅದಕ್ಕೆ ಸೇರಬೇಕು.

ಪ: ಲಿಂಗಾಯಿತರು ಬಸವತತ್ವ ವಿರೋಧಿ ಸಿದ್ಧಾಂತ ಹೊಂದಿರುವ ಬಿಜೆಪಿಗೆ ಮತ ಕೊಡುತ್ತಾರಲ್ಲಾ. ಅದರ ಬಗ್ಗೆ ನೀವೇನು ಹೇಳುತ್ತೀರಿ?

ಬಿ.ನಾರಾಯಣರಾವ್: ಲಿಂಗಾಯಿತರು ಕಾಂಗ್ರೆಸ್‍ಗೆ ಮತ ಕೊಡದಿದ್ದರೂ ಪರವಾಗಿಲ್ಲ. ಆದರೆ ಬಸವಣ್ಣನವರಿಗೆ ಅನ್ಯಾಯ ಮಾಡದಂತೆ ಅವರ ತತ್ವದ ಮೇಲೆ ಅವರು ನಡೆದರೆ ಸಾಕು. ಅವರಿಗೆ ಶರಣು ಶರಣಾರ್ಥಿ. ತಮಗಿಷ್ಟ ಬಂದವರಿಗೆ ಮತ ಹಾಕುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ ಬಸವ ವಿರೋಧಿಯಾಗಿ, ಬಸವಣ್ಣನವರ ತತ್ವಕ್ಕೆ ವಿರುದ್ಧವಾಗಿ ನಡೆದುಕೊಳ್ಳಬಾರದು. ಬಸವಣ್ಣನವರು ಯಾವ ವ್ಯವಸ್ಥೆಯ ವಿರುದ್ಧ ಹೋರಾಟ ಮಾಡಿದ್ದಾರೋ ಆ ವ್ಯವಸ್ಥೆಯ ಒಳಗೆ ಹೋಗಬಾರದು ಅಷ್ಟೇ.

ಸಂದರ್ಶನ:
ಡಾ.ವಾಸು.ಎಚ್.ವಿ ಮತ್ತು
ಸಿದ್ದಪ್ಪ ಮೂಲಗೆ


ಕೊರೊನಾ: ಬಸವಕಲ್ಯಾಣ ಶಾಸಕ ಬಿ.ನಾರಾಯಣರಾವ್ ನಿಧನ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ನಾರಾಯಣ ರಾವ್ ಅವರ ಅನಿಸಿಕೆಗಳು ವಾಸ್ತವಿಕವಾಗಿವೆ. ಈಗ ಈಗಿರುವ ಮೂರೂ ಪಕ್ಷಗಳ ಬದಲಿಗೆ ಇನ್ನೊಂದು ಪಕ್ಷ ದೆಹಲಿ ಅವಶ್ಯಕತೆಯಿದೆ. ದುದೈ೯ವವೆಂರರೆ ಅಂತಹ ಪಕ್ಷವನ್ನು ಕಟ್ಟುವ, ಬೆಳೆಸುವ ನಾಯಕನಿಲ್ಲ. ಹಾಗೆ ನೋಡಿದರೆ ಹಳೆಯ ಜನತಾ ದಳ ಭರವಸೆಯ ಪಕ್ಷ ವಾಗಿತ್ತು. ಆದರೆ ಪುನರ್ ಜೀವನವಾಗಬೇಕಾಗಿದೆ.

  2. ಹಳೇಪಕ್ಶಗಳಿಗೆ ಅಂಟಿಕೊಳ್ಳುವುದು ಸರಿಯಲ್ಲ.
    ದರ್ಮದ ಹಂಗಿಲ್ಲದ, ಕುಟುಂಬ ರಾಜಕಾರಣದ ಹಂಗಿಲ್ಲದ ಕನ್ನಡನೆಲೆಯ ಹೊಸಕೂಟ ಗಟ್ಟಿಯಾಗಬೇಕು.

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...