ಹಿಂದೂ ಧರ್ಮದ ಶಾಸ್ತ್ರ ಮತ್ತು ಗ್ರಂಥಗಳ ದುರುಪಯೋಗ ತಡೆಗೆ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ( ಸಿಪಿಐ) ಸಂಗೋಷ್ಠಿ ಆಯೋಜಿಸಿದೆ. ಮೂರು ದಿನಗಳ ಸಂಗೋಷ್ಠಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ವೇದ ಮತ್ತು ಉಪನಿಷತ್ತು ವಿಷಯವನ್ನು ಆಧರಿಸಿ ಸಂಗೋಷ್ಠಿ ನಡೆಯಲಿದೆ.
ಸಿಪಿಐ ಮಹಾಸಚಿವ ಡಿ.ರಾಜಾ ಮಾತನಾಡಿ, ಅಕ್ಟೋಬರ್ 25ರಿಂದ ಮೂರು ದಿನಗಳವರೆಗೆ ವೇದ, ಉಪನಿಷತ್ತುಗಳ ಮೇಲೆ ಸಂಗೋಷ್ಠಿಗಳು ನಡೆಯಲಿವೆ. ಕೆಲ ರಾಜಕೀಯ ನಾಯಕರು ಮತ್ತು ಪಕ್ಷಗಳು ಸಾಂಪ್ರದಾಯಿಕ ಲಾಭ ಪಡೆಯಲು, ಹಿಂದೂ ಧರ್ಮ ಶಾಸ್ತ್ರ ಮತ್ತು ಗ್ರಂಥಗಳ ದುರ್ಬಳಕೆ ಮಾಡಿಕೊಳ್ಳುವುದನ್ನು ತಪ್ಪಿಸಲು ಸಂಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಮೂರು ದಿನ ನಡೆಯಲಿರುವ ಸಂಗೋಷ್ಠಿಗೆ ಭಾರತೀಯಂ-2019 ಎಂದು ಹೆಸರಿಡಲಾಗಿದೆ. ಕೇರಳದ ಕಣ್ಣೂರಿನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಎನ್.ಇ ಬಲರಾಮ್ ಸ್ಮೃತಿಯ ತತ್ವಾವಧಾನದಲ್ಲಿ ವೇದ, ಉಪನಿಷತ್ತು, ಸಂಸ್ಕೃತಿ, ಕಲೆ, ಸಾಹಿತ್ಯಕ್ಕೆ ಸಂಬಂಧಿಸಿದ ಗೋಷ್ಠಿಗಳು ನಡೆಯಲಿವೆ. ಅನೇಕ ವಿದ್ವಾಂಸರು, ಗಣ್ಯರು ಹಲವು ವಿಚಾರಗಳ ಮೇಲೆ ವಿಷಯ ಮಂಡಿಸಲಿದ್ದಾರೆ. ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಡಿ.ರಾಜಾ ಗೋಷ್ಠಿಯ ಉದ್ಘಾಟನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪುರಾಣವನ್ನು ಇತಿಹಾಸವನ್ನಾಗಿಸಲು, ಮನುವಾದಿಗಳು ಪ್ರಯತ್ನಿಸುತ್ತಿರುವ ಈ ವಿಷಮ ಪರಿಸ್ಥಿತಿಯಲ್ಲಿ ಸಿ.ಪಿ.ಐ.ನ ಈ ಕ್ರಮ ಸ್ವಾಗತಾರ್ಹ.