ಉತ್ತರ ಪ್ರದೇಶದ ಬಾಂದಾ ಜಿಲ್ಲೆಯಲ್ಲಿ ಹ್ಯಾಂಡ್ ಪಂಪ್ನಿಂದ ನೀರು ತರಲು ಹೋದ 45 ವರ್ಷದ ದಲಿತ ವ್ಯಕ್ತಿಯೊಬ್ಬರಿಗೆ ಥಳಿಸಲಾಗಿದೆ. ಘಟನೆಯು ಶುಕ್ರವಾರ ನಡೆದಿದ್ದು, ಸರ್ಕಾರಿ ಹ್ಯಾಂಡ್ ಪಂಪ್ ಮುಟ್ಟಿದ್ದಕ್ಕಾಗಿ ತನಗೆ ತೆಂಡೂರ ಗ್ರಾಮದ ಜನರು ಥಳಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಹಚ್ಚಿರುವ ಕಿಚ್ಚು ಮುಸಲ್ಮಾನರನ್ನು ಮುಕ್ಕತೊಡಗಿದೆ. ಮುಂದಿನ ಸರದಿ ದಲಿತರದು, ಕ್ರೈಸ್ತರದು ಇದ್ದೀತು
ಹಲ್ಲೆಗೊಳಗಾದ ರಾಮಚಂದ್ರ ರೈದಾಸ್ ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದ್ದು, ಆರೋಪಿಗಳ ವಿರುದ್ದ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ನಲ್ಲಿ, “ಶುಕ್ರವಾರ ಬೆಳಿಗ್ಗೆ ಹ್ಯಾಂಡ್ ಪಂಪ್ನಿಂದ ನೀರು ತೆಗೆದುಕೊಳ್ಳಲು ಹೋದಾಗ ರಾಮ್ ದಯಾಳ್ ಯಾದವ್ ಕುಟುಂಬ ಸದಸ್ಯರು ತನ್ನ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ” ಎಂದು ಆರೋಪಿಸಲಾಗಿದೆ.
ಸರ್ಕಾರಿ ಹ್ಯಾಂಡ್ ಪಂಪ್ನಿಂದ ದಲಿತ ಕುಟುಂಬಗಳು ನೀರು ಪಡೆಯುವುದನ್ನು ಎರಡು ತಿಂಗಳ ಹಿಂದೆಯೆ ಯಾದವ್ ಸಮುದಾಯದ ರಾಮ್ ದಯಾಳ್ ಯಾದವ್ ನಿಷೇಧಿಸಿದ್ದರು ಎಂದು ಹಲ್ಲೆಗೊಳಗಾದ ರಾಮಚಂದ್ರ ರೈದಾಸ್ ಆರೋಪಿದ್ದಾಗಿ ಪೊಲೀಸ್ ಇನ್ಸ್ಪಕ್ಟರ್ ನರೇಂದ್ರ ಪ್ರತಾಪ್ ಸಿಂಗ್ ಹೇಳಿದ್ದಾರೆ.
ಆದರೆ ಈ ಬಹಿಷ್ಕಾರ ಪ್ರಕರಣದಲ್ಲಿ ಮಧ್ಯಪ್ರವೇಸಿದ್ದ ಅತಾರಾದ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಸಮಸ್ಯೆಯನ್ನು ಪರಿಹರಿಸಿದ್ದರು ಎನ್ನಲಾಗಿದೆ. ಅದಾಗ್ಯೂ ಹಲ್ಲೆ ನಡೆದಿದೆ. ಪ್ರಸುತ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ: ದಲಿತ ಸಮರ್ಥನೆಯ ಆದ್ಯಪ್ರವರ್ತಕನ ಪಾತ್ರವಹಿಸಿದ್ದ ಮೂಕನಾಯಕ