Homeಕರ್ನಾಟಕದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

ದಲಿತನೆಂಬ ಕಾರಣಕ್ಕೆ ಸಂಸದರಿಗೇ ಗೊಲ್ಲರಹಟ್ಟಿ ಗ್ರಾಮ ಪ್ರವೇಶಕ್ಕೆ ನಿರಾಕರಣೆ: ಎಲ್ಲೆಡೆ ತೀವ್ರ ಆಕ್ರೋಶ..

- Advertisement -
- Advertisement -

ಚಿತ್ರದುರ್ಗದ ಸಂಸದರಾದ ಎ.ನಾರಾಯಣಸ್ವಾಮಿಯವರನ್ನು ದಲಿತರೆಂಬ ಕಾರಣಕ್ಕೆ ಪಾವಗಡದ ಪೆಮ್ಮನಹಳ್ಳಿಯ ಗೊಲ್ಲರಹಟ್ಟಿಯ ಪ್ರವೇಶ ನಿರಾಕರಿಸಿರುವ ಘಟನೆಗೆ ಎಲ್ಲೆಡೆ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿದೆ. ಇದನ್ನು ಅಸ್ಪೃಶ್ಯತೆ ಅನ್ನದೇ ಮತ್ತೆ ಏನನ್ನಬೇಕು ಎಂದು ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

ನಮ್ಮ ದೇಶದ ಪ್ರಜೆಗಳು ಜಾತಿಯ ವಿಚಾರದಲ್ಲಿ ಎಷ್ಟು ವಿಷ ರಕ್ತ ಹೊಂದಿದ್ದಾರೆ ಎಂಬುದನ್ನು ಸೂಚಿಸುತ್ತದೆ .
ಒಬ್ಬ ಸಂಸದರಿಗೆ ಗ್ರಾಮದ ಒಳಗೆ ಪ್ರವೇಶ ನಿರಾಕರಣೆ ಮಾಡಿದರೆ ಇನ್ನು ಸಾಮಾನ್ಯ ಪ್ರಜೆಗಳ ಸ್ಥಿತಿ ಹೇಗೆ ಊಹಿಸಲು ಸಾದ್ಯವಿಲ್ಲ !!! ಎಂದು ಹನುಮಂತ ನಂದಿಹಾಳ್ ರವರು ಪ್ರತಿಕ್ರಿಯಿಸಿದ್ದಾರೆ.

ವಿಕಾಸ್ ಆರ್.ಮೌರ್ಯ ರವರು ಫೇಸ್ ಬುಕ್ ನಲ್ಲಿ ಹೀಗೆ ಬರೆದಿದ್ದಾರೆ.

ಇದಕ್ಕೇ #ಪೂನಾ_ಪ್ಯಾಕ್ಟ್ ದಲಿತರ ಬದುಕನ್ನೇ ಕಿತ್ತುಕೊಂಡಿತು ಎನ್ನುವುದು

ಸಂಸದ ನಾರಾಯಣಸ್ವಾಮಿಯವರನ್ನು ಗೊಲ್ಲರು ತಮ್ಮ ಹಟ್ಟಿಗೆ ಬಿಟ್ಟುಕೊಳ್ಳದೆ ಸಂಸದರು ಅಂಗಲಾಚಿದರೂ ಒಪ್ಪದೇ ಹಟ್ಟಿಯಿಂದ ಹೊರಗೇ ಎಲ್ಲವನ್ನು ವಿಚಾರಿಸಿ ಅಟ್ಟಿದ್ದಾರೆ. ಸಂವಿಧಾನದ ಕಲಂ 17 ಅಸ್ಪೃಶ್ಯತೆ ನಿಷೇಧಿಸಲಾಗಿದೆ ಎನ್ನುತ್ತದೆ. ಆದರೆ ಈ ಘಟನೆಯಲ್ಲಿ ಕಾನೂನು ನಯಾಪೈಸೆಯ ಕೆಲಸ ಮಾಡಿಲ್ಲ, ಮಾಡಲ್ಲ. ಇದು ನಿಜ ಭಾರತದ ಸ್ಥಿತಿ. ಇರಲಿ. ಇಲ್ಲಿ ಸಂಸದರು ಆ ಅಮಾನವೀಯ ಜನರ ವಿರುದ್ಧ ಕ್ರಮ ಏಕೆ ಕೈಗೊಳ್ಳಲಿಲ್ಲ? ಅದಕ್ಕೆ ಕಾರಣ ಅವರೇ ಹೇಳಿದ್ದಾರೆ. ಶೇ. 80 ಗೊಲ್ಲ ಸಮುದಾಯ ಅವರಿಗೆ ಮತ ನೀಡಿ ಗೆಲ್ಲಿಸಿದೆ. ಹೀಗಿರುವಾಗ ಸಂಸದರೇನಾದರೂ ಕಾನೂನು ರೀತಿಯ ಕ್ರಮ ಕೈಗೊಂಡರೆ ಮುಂದಿನ ಬಾರಿ ಅವರು ಸೋಲುವುದು ಖಚಿತ.

ಈ ಕಾರಣಕ್ಕಾಗಿಯೇ ಅಂಬೇಡ್ಕರರು 1933 ರ ಪೂನಾ ಒಪ್ಪಂದವನ್ನು ಕಂಠಮಟ್ಟ ವಿರೋಧಿಸಿದ್ದು. ಏಕೆಂದರೆ ದುಂಡು ಮೇಜಿನ ಸಭೆಯಲ್ಲಿ ದಲಿತರಿಗೆ ಎರಡು ಓಟು ನೀಡುವ ಹಕ್ಕು ಸಿಕ್ಕಿತ್ತು. ಆಂದರೆ ದಲಿತ ಮೀಸಲು ಕ್ಷೇತ್ರಗಳಲ್ಲಿ ದಲಿತರಿಂದ ದಲಿತರಿಗಾಗಿ ದಲಿತರಿಗೋಸ್ಕರ ಆರಿಸಿ ಬರುವ ದಲಿತರನ್ನು ಅಯ್ಕೆ ಮಾಡಲು ಒಂದು ಓಟು. ಅದೇ ಕ್ಷೇತ್ರದಲ್ಲಿ ದಲಿತೇತರರನ್ನು ಆಯ್ಕೆ ಮಾಡಲು ಒಂದು ಓಟು. ಇದನ್ನೇ ಪ್ರತ್ಯೇಕ ಮತಕ್ಷೇತ್ರವೆನ್ನುವರು. ಇವತ್ತು ಸಿಖ್ ಜನಾಂಗ ಬಲಿಷ್ಟವಾಗಿರುವುದಕ್ಕೆ ಕಾರಣ ಅವರಿಗೆ ದಕ್ಕಿದ ಪ್ರತ್ಯೇಕ ಮತಕ್ಷೇತ್ರವೇ ಆಗಿದೆ. ಆದರೆ ಇದು ದಲಿತರಿಗೆ ಸಿಗಲಿಲ್ಲ. ಇದಕ್ಕೆ ನೇರವಾಗಿ ಗಾಂಧಿಯವರನ್ನು ನಾವು ಹೊಣೆ ಮಾಡುತ್ತೇವೆ. ಅದು ಸತ್ಯವಾದರೂ ಅವರಷ್ಟೇ ಹೊಣೆಗಾರರು ಅವರಿಗೆ ಬೇಷರತ್ ಬೆಂಬಲ ನೀಡಿದ ಅಖಿಲ ಭಾರತ ಹಿಂದೂ ಮಹಾಸಭಾ, ಸರ್ದಾರ್ ವಲ್ಲಭಬಾಯಿ ಪಟೇಲ್ ಹಾಗೂ ಗಾಂಧಿವಾದಿ ದಲಿತರು.

ಅಂಬೇಡ್ಕರರು ಜುಲೈ 1947 ರವರೆಗೂ ಹಾಗೂ ಸಂವಿಧಾನ ಸಭೆಯಲ್ಲೂ ಮತ್ತೆ ದಲಿತರಿಗೆ ಪ್ರತ್ಯೇಕ ಮತಕ್ಷೇತ್ರ ಸಿಗಬೇಕೆಂದು ಹೋರಾಡಿದರು. ಆದರೆ ಗಾಂಧಿವಾದಿ ದಲಿತರು ಹಾಗೂ ಕಾಂಗ್ರೆಸ್ ಅದನ್ನು ಕಂಠಮಟ್ಟ ವಿರೋಧಿಸಿ ಮೂಲೆಗುಂಪು ಮಾಡಿದರು. ಅವರ ಮುಂದೆ ಅಂಬೇಡ್ಕರ್ ಸೋಲೊಪ್ಪಲೇಬೇಕಾಯಿತು.

ಇಂದು ಯಾವುದೇ ದಲಿತ ಜನಪ್ರತಿನಿದಿ ಲೋಕಸಭೆಗೆ ಅಗಲೀ, ವಿಧಾನಸಭೆಗೆ ಆಗಲೀ ಆರಿಸಿ ಬರುತ್ತಿರುವುದು ದಲಿತೇತರರ ಓಟಿನಿಂದ. ದಲಿತರ ಓಟುಗಳಿಗೆ ಇಲ್ಲಿ ಬಿಡಿಗಾಸಿನ ಬೆಲೆಯಿಲ್ಲ. ಯಾವ ದಲಿತ ಅಥವಾ ಯಾವ ಜಾತಿಯ ದಲಿತ, ಶಾಸಕ ಅಥವಾ ಸಂಸದ ಆಗಬೇಕೆನ್ನುವುದನ್ನು ತೀರ್ಮಾನ ಮಾಡುವವರು ದಲಿತೇತರರೇ ಆಗಿರುವಾಗ ಯಾವ ದಲಿತ ರಾಜಕೀಯ ನಾಯಕ ತಾನೇ ದಲಿತೇತರರ ಓಟೆಂಬ ಭಿಕ್ಷೆಯ ವಿರುದ್ಧ ನಿಲ್ಲುತ್ತಾನೆ? ತನ್ನ ಸ್ವಾಭಿಮಾನವನ್ನು ತಾನೇ ಕೊಲೆ ಮಾಡಿಕೊಂಡು ಶಾಸಕ, ಸಂಸದನಾಗುತ್ತಾನೆ. ಅಷ್ಟೆ.

“ನನ್ನ ಮುತ್ತಾತಂದಿರು ಮತಾಂತರ ಆದದ್ದಕ್ಕೆ ಕಾರಣ ಇದು. ಅಂದು ಕೀಳು ಜಾತಿ ಅಂತ ಅವಮಾನಿಸಿದಿರಿ, ಇಂದು ದೇಶ ವಿರೋಧಿಗಳು ಅಂತ ಅನುಮಾನಿಸುತ್ತಿದ್ದೀರಿ” ಎಂದು ಅಬ್ದುಲ್ ಮುನೀರ್ ಪ್ರತಿಕ್ರಿಯಿಸಿದ್ದಾರೆ.

ಈ ಸಂಸದರಿಗೆ ದೇಶದ ಜ್ವಲಂತ ಸಮಸ್ಯೆ ಯಾವುದು ಎಂದು ಮನದಟ್ಟು ಮಾಡಿಕೊಟ್ಟ ಆ ಹಳ್ಳಿಗರಿಗೆ ವಂದನೆಗಳು. ಇನ್ನಾದರೂ ಅವರು ಸಂಸತ್ತಿನಲ್ಲಿ ಈ ಸಮಸ್ಯೆಯ ಬಗ್ಗೆ ದನಿ ಎತ್ತಬೇಕು. ಆಗಿಲ್ಲವೆಂದರೆ ಊರ ಹೊರಗೆ ಕುರ್ಚಿ ಹಾಕಿ ಕಾರ್ಯಕ್ರಮ ನಡೆಸಲಿ. ಅದೂ ಆಗಿಲ್ಲವೆಂದರೆ ರಾಜೀನಾಮೆ ನೀಡಿ ಹೋರಾಟಕ್ಕೆ ಮುಂದಾಗಲಿ ಎಂದು ಸಂತೋಷ್ ಗುಡ್ಡಿಯಂಗಡಿಯವರು ಪ್ರತಿಕ್ರಿಯಿಸಿದ್ದಾರೆ.

ಬೆಳಗ್ಗೆಯಿಂದ ಒಂದಷ್ಟು ಗೊಲ್ಲ ಸಮುದಾಯದ ಸ್ನೇಹಿತರು ಪೋನ್ ಮಾಡಿ ಸಂಸದರಿಗೆ ತಟ್ಟಿದ ಅಸ್ಪೃಶ್ಯತೆ ಬಗ್ಗೆ ತೀವ್ರ ಸಂಕಟ ಹೊರಹಾಕಿದರು..ಅರಿವು ,ಬದ್ದತೆ ಇರುವ ಆ ಸಮುದಾಯದ ಗೆಳೆಯರೊಂದಿಗೆ ನಾವೆಲ್ಲರೂ ಸೇರಿ ಜಾಗೃತಿ ಮೂಡಿಸುವ ಅಥವಾ ಮನಸ್ಸು ಗಳನ್ನ ಪರಿವರ್ತಿಸುವ ಕೆಲಸ ಈ ಕ್ಷಣದ ತುರ್ತು…
ಶಿಕ್ಷೆಯಿಂದ ಎಲ್ಲಾ ಬದಲಾಗುವಂತಿದ್ದರೆ ಹೆಚ್ಚೂಕಮ್ಮಿ ಮೌಡ್ಯ ಇರುವ ಎಲ್ಲಾ ಗೊಲ್ಲರಟ್ಟಿಯವರ ಮೇಲೆ ಎರಡೂ ದಲಿತ ದೌರ್ಜನ್ಯ ಪ್ರಕರಣಗಳು ದಾಖಲಗುತ್ತಿದ್ದವು .
ಹಟ್ಟಿಗಳ ಪರಿವರ್ತನೆ ಗೆ ಇದು ರೈಟ್ ಟೈಮ್ ಎಂದು ಕೊಟ್ಟ ಶಂಕರ್ ರವರು ತಿಳಿಸಿದ್ದಾರೆ.

ಈ ವಿಚಾರ ಪತ್ರಿಕೆ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಕೂಡಲೇ ಗೊಲ್ಲರಹಟ್ಟಿಯ ಜನ ಎಚ್ಚೆತ್ತುಕೊಂಡಿದ್ದಾರೆ. “ನಮ್ಮ ನಡವಳಿಕೆಗಳಿಂದ ಸಂಸದರಿಗೆ ನೋವಾಗಿದ್ದರೆ ದಯವಿಟ್ಟು ಕ್ಷಮಿಸಿ, ನೀವು ಮತ್ತೊಮ್ಮೆ ನಮ್ಮ ಹಟ್ಟಿಗೆ ಬಂದು ನಮ್ಮ ಸಮಸ್ಯೆ ಆಲಿಸಿ, ನಮಗೆಲ್ಲಾ ಮನೆ ಕಟ್ಟಿಕೊಡಿ” ಎಂದು ಮನವಿ ಮಾಡಿದ್ದಾರೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...