Homeಮುಖಪುಟನವಜಾತ ಶಿಶುಗಳ ಸಾವು : ಸರ್ಕಾರಗಳ ಹೊಣೆಗೇಡಿತನಕ್ಕೆ ಸಾಕ್ಷಿ

ನವಜಾತ ಶಿಶುಗಳ ಸಾವು : ಸರ್ಕಾರಗಳ ಹೊಣೆಗೇಡಿತನಕ್ಕೆ ಸಾಕ್ಷಿ

ನಮ್ಮ ಪ್ರಧಾನಿಗಳು ಮಕ್ಕಳ ಮುಂದೆ ಪಾಕಿಸ್ತಾನ ದ್ವೇಷದ ಮಾತುಗಳನ್ನಾಡುತ್ತಾರೆ. ಆದರೆ ಹಸಿವಿನ ಸೂಚ್ಯಂಕದಲ್ಲಿ ನಮ್ಮ ಪ್ರಗತಿ ಪಾಕಿಸ್ತಾನ ಮತ್ತು ಬಾಂಗ್ಲಾಗಳಿಗಿಂತ ಕಳಪೆ. ನವಜಾತ ಶಿಶುಗಳ ರಕ್ಷಣೆಯಲ್ಲಿ ಪಾಕಿಸ್ತಾನ ನಮಗಿಂತ ಕೊಂಚ ಮುಂದಿದೆ ಎಂಬ ಅಂಶಗಳನ್ನು ಮರೆಯದಿರೋಣ.

- Advertisement -
- Advertisement -

ಹೊಸ ವರ್ಷದ ದಿನದಂದು ಭಾರತದಲ್ಲಿ 67,385 ಶಿಶುಗಳು ಜನಿಸಿದ್ದು, ವಿಶ್ವದಲ್ಲೇ ಇದು ಅಧಿಕ. ಆದರೆ, ಇದೇ ಹೊತ್ತಿನಲ್ಲಿ ರಾಜಸ್ತಾನದ ಕೋಟಾದ ಜೆಕೆ ಲೊನ್ ಸರ್ಕಾರಿ ಆಸ್ಪತ್ರೆಯಲ್ಲಿ ಡಿಸೆಂಬರ್ ತಿಂಗಳೊಂದರಲ್ಲೇ 100ಕ್ಕೂ ಹೆಚ್ಚು ಶಿಶುಗಳು ಸಾವನ್ನಪ್ಪಿರುವ ಆಘಾತಕಾರಿ ಘಟನೆ ನಡೆದಿದೆ. ಅದಕ್ಕಿಂತ ಆಘಾತಕಾರಿಯಾದದ್ದು, ಈ ವಿಷಯ ಎತ್ತಿಕೊಂಡು ರಾಜಕೀಯ ಮಾಡುತ್ತಿರುವುದು.

ರಾಜಸ್ತಾನದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟ್ ಮಾಡಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನವಜಾತ ಶಿಶುಗಳ ಸಾವಿನ ಪ್ರಮಾಣ ಇನ್ನೂ ಹೆಚ್ಚಿತ್ತು ಎಂದು ಹೇಳಿದ್ದಾರೆ. ಇಲ್ಲಿ ಆಸ್ಪತ್ರೆಗಳ ಸುಧಾರಣೆಗೆ ತುರ್ತು ಯೋಜನೆ ರೂಪಿಸುವ ಬದಲು ರಾಜಕೀಯ ಮೇಲುಗೈ ಪಡೆಯುವ ಕೀಳು ಪೈಪೋಟಿ ಶುರುವಾದಂತಿದೆ.

ಬಿಜೆಪಿ ಆಡಳಿತದ ಅವಧಿಯಲ್ಲೂ ಅಲ್ಲಿ ನವಜಾತ ಶಿಶುಗಳ ಪ್ರಮಾಣ ಜಾಸ್ತಿಯೇ ಇತ್ತು ಎಂಬುದೂ ಸತ್ಯ. ಆದರೆ ಈಗ ಪರಸ್ಪರ ದೋಷಾರೂಪಣೆ ಮಾಡುತ್ತ ಕೂಡುವ ಬದಲು ಕೇಂದ್ರದ ನೆರವಿನೊಂದಿಗೆ ನವಜಾತ ಶಿಶುಗಳ ರಕ್ಷಣೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಅಲ್ಲಿ ಇನ್‌ಕ್ಯುಬೇಟರ್ ಮತ್ತು ಐಸಿಯು ಘಟಕಗಳ ಕೊರತೆಯಿದೆ, ಇರುವ ಘಟಕಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ.

ಕಳೆದ ವರ್ಷ ಉತ್ತರಪ್ರದೇಶದಲ್ಲಿ ಒಂದೇ ಆಸ್ಪತ್ರೆಯಲ್ಲಿ ವಾರದೊಪ್ಪತ್ತಿನಲ್ಲಿ ಹಲವಾರು ನವಜಾತ ಶಿಶುಗಳು ಸಾವನ್ನಪ್ಪಿದ್ದವು ಎಂಬುದನ್ನು ಇಲ್ಲಿ ನೆನೆಯಬಹುದು. ದಕ್ಷಿಣದ ರಾಜ್ಯಗಳಿಗೆ ಹೋಲಿಸಿದರೆ ಉತ್ತರದ ರಾಜ್ಯಗಳಲ್ಲಿ ಅದರಲ್ಲೂ ಭಿಮಾರು ರಾಜ್ಯಗಳಲ್ಲಿ ಈ ಸಮಸ್ಯೆ ತೀವ್ರವಾಗಿದೆ ಎಂಬುದೂ ಇಲ್ಲಿ ಉಲ್ಲೇಖಾರ್ಹ.

ನವಜಾತ ಶಿಶುಗಳ ರಕ್ಷಣೆಗಾಗಿ ವಿಶ್ವಸಂಸ್ಥೆ ಹಲವು ಕಾರ್ಯಕ್ರಮ ರೂಪಿಸಿದೆ, ಧನ ಸಹಾಯವನ್ನೂ ನೀಡುತ್ತಿದೆ. ಆದರೆ, ವಿಶ್ವದಾದ್ಯಂತ ನಿರೀಕ್ಷಿತ ಗುರಿ ಮುಟ್ಟುವುದಕ್ಕೆ ಸ್ಥಳೀಯ ಆಡಳಿತಗಳಿಂದ ಸಾಧ್ಯವಾಗಿಲ್ಲ.
ಕಡಿಮೆ ತೂಕ, ಅವಧಿಪೂರ್ವ ಜನನ, ಸುಸೂತ್ರವಾಗದ ಹೆರಿಗೆಗಳು ಮತ್ತು ಸಿಫ್ರಸ್‌ನಂತಹ ಕಾಯಿಲೆಗಳು ನವಜಾತ ಶಿಶುಗಳನ್ನು ಬಲಿ ತೆಗೆದುಕೊಳ್ಳುತ್ತಿವೆ. ಶುದ್ಧ ನೀರು, ಸ್ವಚ್ಛತೆ ಮತ್ತು ಪೌಷ್ಟಿಕಾಂಶಗಳ ಕೊರತೆ ಮತ್ತು ಪ್ರಾಥಮಿಕ ಆರೋಗ್ಯ ಸೇವೆಗಳ ಅಲಭ್ಯತೆ ಅಥವಾ ಕೊರತೆಯೇ ಇದಕ್ಕೆಲ್ಲ ಮೂಲ ಕಾರಣ. ಈ ಸೌಲಭ್ಯಗಳನ್ನು ಒದಗಿಸುವತ್ತ ನಮ್ಮ ಸರ್ಕಾರಗಳು ತುರ್ತ ಗಮನ ನೀಡಬೇಕಾಗಿದೆ.

ಇಡೀ ವಿಶ್ವದಲ್ಲೇ ನವಜಾತ ಶಿಶುಗಳ ಸಾವಿನ ಪ್ರಮಾಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ ಎಂಬುದು ನಾಚಿಕೆಯ ಮತ್ತು ಕಳವಳದ ಸಂಗತಿ.

ನಮ್ಮ ಪ್ರಧಾನಿಗಳು ಮಕ್ಕಳ ಮುಂದೆ ಪಾಕಿಸ್ತಾನ ದ್ವೇಷದ ಮಾತುಗಳನ್ನಾಡುತ್ತಾರೆ. ಆದರೆ ಹಸಿವಿನ ಸೂಚ್ಯಂಕದಲ್ಲಿ ನಮ್ಮ ಪ್ರಗತಿ ಪಾಕಿಸ್ತಾನ ಮತ್ತು ಬಾಂಗ್ಲಾಗಳಿಗಿಂತ ಕಳಪೆ. ನವಜಾತ ಶಿಶುಗಳ ರಕ್ಷಣೆಯಲ್ಲಿ ಪಾಕಿಸ್ತಾನ ನಮಗಿಂತ ಕೊಂಚ ಮುಂದಿದೆ ಎಂಬ ಅಂಶಗಳನ್ನು ಮರೆಯದಿರೋಣ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮಹಿಳೆಯ ಅಪಹರಣ ಪ್ರಕರಣ: ಹೆಚ್‌.ಡಿ ರೇವಣ್ಣ ನಾಲ್ಕು ದಿನ ಎಸ್‌ಐಟಿ ವಶಕ್ಕೆ

0
ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆ ಎನ್ನಲಾದ ಮನೆ ಕೆಲಸದ ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧಿತರಾಗಿರುವ ಶಾಸಕ ಹೆಚ್‌.ಡಿ ರೇವಣ್ಣ ಅವರನ್ನು  ನಾಲ್ಕು ದಿನಗಳ ಕಾಲ ವಿಶೇಷ ತನಿಖಾ ತಂಡ (ಎಸ್‌ಐಟಿ) ವಶಕ್ಕೆ ನೀಡಿ...