Homeಮುಖಪುಟಹುದ್ದೆ ತೊರೆಯುವ ಬಗ್ಗೆಯೂ ಯೋಚಿಸಿದೆ..ರಾಜ್ಯಸಭೆ ಅಧಿವೇಶನದ ವೇಳೆ ಕೆರಳಿದ ಸ್ಪೀಕರ್‌

ಹುದ್ದೆ ತೊರೆಯುವ ಬಗ್ಗೆಯೂ ಯೋಚಿಸಿದೆ..ರಾಜ್ಯಸಭೆ ಅಧಿವೇಶನದ ವೇಳೆ ಕೆರಳಿದ ಸ್ಪೀಕರ್‌

- Advertisement -
- Advertisement -

ನಿನ್ನೆ ರಾಜ್ಯಸಭೆ ಅಧಿವೇಶನದ ವೇಳೆ ಹೈಡ್ರಾಮವೇ ನಡೆದಿದೆ. ಚರಣ್‌ ಸಿಂಗ್‌ ಅವರನ್ನು ‘ಭಾರತ ರತ್ನ’ ಗೌರವಕ್ಕೆ ಆಯ್ಕೆ ಮಾಡಿರುವುದರ ಬಗ್ಗೆ ಮಾತನಾಡಲು ಅವರ ಮೊಮ್ಮಗ, ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಸಿಂಗ್‌ ಅವರಿಗೆ ಸ್ಪೀಕರ್‌ ಅವಕಾಶ ನೀಡಿದ್ದರು, ಇದಕ್ಕೆ ಕಾಂಗ್ರೆಸ್‌ ಸಂಸದರು ಆಕ್ಷೇಪಿಸಿದ್ದಕ್ಕೆ ಕೆರಳಿದ ಉಪರಾಷ್ಟ್ರಪತಿ ಮತ್ತು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ತೀವ್ರ ವಿಷಾದವನ್ನು ವ್ಯಕ್ತಪಡಿಸಿದ್ದಾರೆ ಮತ್ತು ತಾನು ರಾಜೀನಾಮೆ ನೀಡಲು ಯೋಚಿಸಿದ್ದೆ ಎಂದು ಹೇಳಿಕೊಂಡಿದ್ದಾರೆ.

ಈ ಬೆಳವಣಿಗೆಯು ತನ್ನ ಚಿಕ್ಕ ಮಗನ ಸಾವಿಗಿಂತ ಹೆಚ್ಚು ನೋವುಂಟುಮಾಡಿದೆ ಎಂದ ಧಂಖರ್, ರಮೇಶ್ ಅವರು ‘ಸ್ಮಶಾನದಲ್ಲಿ ಹಬ್ಬ ಮಾಡುವ ವ್ಯಕ್ತಿ’ ಮತ್ತು ಈ ದುರ್ವರ್ತನೆಯಿಂದಾಗಿ ಅವರು ಮೇಲ್ಮನೆ ಸದಸ್ಯರಾಗಿರಲು ಯೋಗ್ಯರಲ್ಲ ಎಂದು ಹೇಳಿದ್ದಾರೆ.

ಜಯಂತ್ ಸಿಂಗ್ ಅವರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುವಾಗ ಸಭಾಪತಿ ಸೂಚಿಸಿಲ್ಲ ಅಥವಾ ಭಾರತ ರತ್ನ ನೀಡುವ ಸರ್ಕಾರದ ನಿರ್ಧಾರದ ಬಗ್ಗೆ ಮಾತನಾಡುವ ಬಗ್ಗೆ ಸದನದ ವ್ಯವಹಾರ ಪತ್ರಗಳಲ್ಲಿ ಪಟ್ಟಿ ಮಾಡಿಲ್ಲ ಎಂಬುದು ಜೈರಾಮ್‌ ರಮೇಶ್‌ ವಾದವಾಗಿತ್ತು. ಜೈರಾಮ್ ರಮೇಶ್ ಅವರು ರಾಷ್ಟ್ರೀಯ ಲೋಕದಳದ ಜಯಂತ್ ಸಿಂಗ್ ಅವರಿಗೆ ನೀವು ಎಲ್ಲಿಗೆ ಹೋಗಲು ಬಯಸಿದ್ದೀರಿ? ಸುಳಿವು ಪ್ರಕಾರ ನೀವು ಲೋಕಸಭೆ ಚುನಾಣೆಯಲ್ಲಿ ಪ್ರತಿಪಕ್ಷಗಳೊಂದಿಗೆ ಸಂಬಂಧವನ್ನು ಕಡಿದುಕೊಳ್ಳಲು ಬಿಜೆಪಿಯ ಜೊತೆ ಹೊಂದಾಣಿಕೆ ಮಾಡಲು ಮುಂದಾಗಿದ್ದೀರಿ ಎಂದು ಹೇಳಿದ್ದಾರೆ.

ಇದು ಧಂಖರ್ ಅವರನ್ನು ಕೆರಳಿಸಿದ್ದು, ರಮೇಶ್ ಅವರು ಸದನದಲ್ಲಿ ಇರಲು ಅನರ್ಹರು ಎಂದರು. ನಂತರ ಆರ್ಥಿಕತೆ ಕುರಿತ ಸರ್ಕಾರದ ಶ್ವೇತಪತ್ರದ ಮೇಲಿನ ಚರ್ಚೆಯ ನಂತರ ಸಭಾಪತಿ ಮತ್ತೆ ಜೈರಾಮ್‌ ರಮೇಶ್‌ ಮೇಲೆ ವಾಗ್ದಾಳಿ ನಡೆಸಿದ್ದಾರೆ.

ಜಯಂತ್‌ಗೆ ಜೈರಾಮ್ ರಮೇಶ್ ಹೇಳಿದ್ದನ್ನು ನಾನು ಕೇಳಿದೆ. ನೀವು (ರಮೇಶ್) ಸ್ಮಶಾನದಲ್ಲಿ ಔತಣ ಮಾಡುವ ವ್ಯಕ್ತಿ. ಈ ದುರ್ನಡತೆಗಾಗಿ ನೀವು (ರಮೇಶ್) ಈ ಸದನದ ಭಾಗವಾಗಲು ಅರ್ಹರಲ್ಲ ಎಂಬುದು ಸತ್ಯ ಎಂದು ಸ್ಪೀಕರ್‌ ಹೇಳಿದ್ದಾರೆ, ಈ ಬಗ್ಗೆ ಕಾಂಗ್ರೆಸ್ ಸಂಸದರು ಪ್ರತಿಭಟಿಸುತ್ತಿದ್ದಂತೆ ಧಂಖರ್ ಅವರು ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ಈ ವೇಳೆ ಮಾತನಾಡಿದ ಖರ್ಗೆ, ನಾಯಕರಿಗೆ ಭಾರತ ರತ್ನ ನೀಡಿ ಗೌರವಿಸುವ ಸರ್ಕಾರದ ನಿರ್ಧಾರದ ಬಗ್ಗೆ ಯಾವುದೇ ಚರ್ಚೆ ಇಲ್ಲ. ನಾನು ಎಲ್ಲರಿಗೂ ವಂದಿಸುತ್ತೇನೆ. ಆದರೆ ಸದಸ್ಯರು ಸಮಸ್ಯೆಯನ್ನು ಪ್ರಸ್ತಾಪಿಸಲು ಬಯಸಿದರೆ, ನೀವು (ಅಧ್ಯಕ್ಷರು) ‘ಯಾವ ನಿಯಮದ ಅಡಿಯಲ್ಲಿ’ ಎಂದು ಕೇಳುತ್ತೀರಿ. ಯಾವ ನಿಯಮದ ಅಡಿಯಲ್ಲಿ ಅವರಿಗೆ (ಜಯಂತ್ ಸಿಂಗ್) ಮಾತನಾಡಲು ಅವಕಾಶ ನೀಡಿದ್ದೀರಿ ಎಂದು (ನಾನು ತಿಳಿಯ ಬಯಸುತ್ತೇನೆ). ನಮಗೂ ಅನುಮತಿ ಕೊಡಿ. ಒಂದು ಕಡೆ ನೀವು ನಿಯಮಗಳ ಬಗ್ಗೆ ಮಾತನಾಡುತ್ತೀರಿ, ನಿಮಗೆ ವಿವೇಚನೆ ಇದೆ, ಆ ವಿವೇಚನೆಯನ್ನು ವಿವೇಚನೆಯಿಂದ ಬಳಸಬೇಕೇ ಹೊರತು ನಿಮಗೆ ಬೇಕಾದಾಗ ಅಲ್ಲ ಎಂದು ಖರ್ಗೆ ಹೇಳಿದರು. ಸಭಾಪತಿ ನಿಯಮಾವಳಿಗಳನ್ನು ಪಾಲಿಸುತ್ತಿಲ್ಲ ಎಂದು ಪ್ರತಿಪಾದಿಸಿದ ಅವರು, ಸದನದ ಅಜೆಂಡಾದಲ್ಲಿ ಭಾರತ ರತ್ನದ ಬಗ್ಗೆ ಚರ್ಚೆಯನ್ನು ಸೇರಿಸಿದ್ದರೆ, ಎಲ್ಲರೂ ಅದರಲ್ಲಿ ಭಾಗವಹಿಸುತ್ತಿದ್ದರು ಎಂದು ಹೇಳಿದರು.

ಖರ್ಗೆಯವರು ಎತ್ತಿರುವ ಆಕ್ಷೇಪಗಳಿಗೆ ಧಂಖರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಮತ್ತು ಕಾಂಗ್ರೆಸ್ ನಾಯಕರು ಚರಣ್ ಸಿಂಗ್ ಮತ್ತು ಅವರ ಪರಂಪರೆಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು. ಇದೇ ವೇಳೆ ಚೌಧರಿ ಚರಣ್ ಸಿಂಗ್ ಅವರಿಗೆ ಭಾರತ ರತ್ನ ನೀಡುವುದನ್ನು ಕಾಂಗ್ರೆಸ್ ವಿರೋಧಿಸುತ್ತಿದೆ ಎಂದು ಕೇಂದ್ರ ಸಚಿವ ಪರಶೋತ್ತಮ್ ರೂಪಾಲಾ ಹೇಳಿದ್ದಾರೆ. ವಿರೋಧ ಪಕ್ಷದ ನಾಯಕ ಅಧ್ಯಕ್ಷರಿಗೆ ಸವಾಲು ಹಾಕುತ್ತಿದ್ದಾರೆ ಮತ್ತು ಅದೂ ಇಂತಹ ಸಂದರ್ಭದಲ್ಲಿ, ಇದು ಕಾಂಗ್ರೆಸ್‌ನ ಅಸಲಿ ಮುಖ ಎಂದು ಹೇಳಿದ್ದಾರೆ.

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು ಖರ್ಗೆಯವರು ಪೀಠಕ್ಕೆ ಅಗೌರವ ತೋರಿದ್ದಕ್ಕಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ. ಧಂಖರ್ ಅವರು ಜಯಂತ್ ಸಿಂಗ್ ಅವರಿಂದ ಒಂದೆರಡು ನಿಮಿಷಗಳ ಕಾಲ ಮಾತನಾಡುವ ಬಗ್ಗೆ ಸ್ವೀಕರಿಸಿದ ಮನವಿಯನ್ನು ಓದಿದ್ದಾರೆ.

ಶ್ವೇತಪತ್ರದ ಮೇಲಿನ ಚರ್ಚೆಯ ನಂತರ ಧಂಖರ್ ಮತ್ತೆ ಮಾತನಾಡಿ, ಇಂದು ನನಗೆ ನೋವಿನ ದಿನವಾಗಿತ್ತು.  ನೋವಿನಿಂದ ನಾನು ನಿಮ್ಮ ಗಮನಕ್ಕೆ ಒಂದು ವಿಷಯವನ್ನು ಹಂಚಿಕೊಳ್ಳಲು ಮತ್ತು ಚರ್ಚಿಸಲು ಬಯಸುತ್ತೇನೆ. ಅವರ ವರ್ತನೆಯು ‘ಅನಿರೀಕ್ಷಿತ’, ‘ನಾಚಿಕೆಗೇಡಿನ’ ಮತ್ತು ‘ನೋವು’ ತಂದಿದೆ ಎಂದು ಹೇಳಿದ್ದಾರೆ. ಇದು ನಮ್ಮ ಘನತೆಗೆ ವಿರುದ್ಧವಾಗಿತ್ತು. ಈ ಅವಧಿಯಲ್ಲಿ ನಮ್ಮ ನಡುವಳಿಕೆ ತೀರಾ ಕೆಳಮಟ್ಟದ್ದಾಗಿದ್ದು, ನನಗೆ ನಾಚಿಕೆಯಾಗುತ್ತಿದೆ. ನನ್ನ ಮನಸ್ಸಿನಲ್ಲಿ ವಿವಿಧ ಆಲೋಚನೆಗಳು ಬಂದವು, ನಾನು ಹುದ್ದೆಯನ್ನು ತೊರೆಯುವ ಬಗ್ಗೆಯೂ ಯೋಚಿಸಿದೆ, ರೈತನ ಮಗನಾಗಿ ಕಷ್ಟದ ದಿನಗಳನ್ನು ಕಂಡಿದ್ದೇನೆ. ನನ್ನ ಬೆಳೆದ ಮಗನನ್ನು ಕಳೆದುಕೊಂಡೆ. ಆದರೆ ಇಂದಿನ ನೋವು ಅದಕ್ಕಿಂತ ಹೆಚ್ಚು ಇತ್ತು. ಜಯಂತ್ ಚೌಧರಿ ಮಾತನಾಡುವಾಗ ಜೈರಾಮ್ ರಮೇಶ್ ಹೇಳಿದ್ದೇನು? ನೀವು ಎಲ್ಲಿಗೆ ಹೋಗಬೇಕೋ ಅಲ್ಲಿಗೆ ಹೋಗು ಎಂದು ಹೇಳುವುದನ್ನು ನಾನು ಕೇಳಿದ್ದೇನೆ. ನೀವು ಸ್ಮಶಾನದಲ್ಲಿ ಹಬ್ಬ ಮಾಡಬೇಡಿ, ಇದನ್ನು ನಿರ್ಲಕ್ಷಿಸಲಾಗುವುದಿಲ್ಲ.  ರಾಜಕೀಯ ವಾದಗಳನ್ನು ಬದಿಗಿಟ್ಟು, ನಾಯಕರ ಗೌರವದ ವಿಚಾರದಲ್ಲಿ ನಾವು ಸಂವೇದನಾಶೀಲರಾಗಿರಬೇಕು ಎಂದು ಹೇಳಿದರು. ನನಗೆ ತುಂಬಾ ದುಃಖವಾಗಿದೆ, ನಾವು ಒಂದೇ ಧ್ವನಿಯಲ್ಲಿ ಅದನ್ನು ಖಂಡಿಸಬೇಕು. ವೈಯಕ್ತಿಕವಾಗಿ ನಾನು ಇದನ್ನು ಖಂಡಿಸುತ್ತೇನೆ ಮತ್ತು ನೀವೆಲ್ಲರೂ ಇದನ್ನು ಖಂಡಿಸಬೇಕೆಂದು ನಾನು ವಿನಂತಿಸುತ್ತೇನೆ. ಸದನದಲ್ಲಿ ನಾವು ಅತ್ಯಂತ ಕೆಳಮಟ್ಟಕ್ಕೆ ತಲುಪಿದ್ದೇವೆ, ಅದನ್ನು ಮತ್ತಷ್ಟು ಕೆಳಗಿಳಿಯಲು ಬಿಡಬಾರದು ಎಂದು ಹೇಳಿದ್ದಾರೆ.

ಇದನ್ನು ಓದಿ: ಪತ್ರಕರ್ತ ನಿಖಿಲ್ ವಾಗ್ಲೆ ಮೇಲೆ ದಾಳಿ: 10 ಬಿಜೆಪಿ ಕಾರ್ಯಕರ್ತರ ಬಂಧನ

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನ ಬದಲಿಸಿ ಮನುಸ್ಮೃತಿ ತರಲು SIR ಷಡ್ಯಂತ್ರ: ನಟ ಕಿಶೋರ್

ದೇಶದ ಬಹುಕೋಟಿ ಉದ್ಯಮಿ ಗೌತಮ್ ಅದಾನಿಯದ್ದೇ ಇರಲಿ ಅಥವಾ ಒಬ್ಬ ಬಡ ರೈತನದ್ದೇ ಇರಲಿ, ಪ್ರಜಾಪ್ರಭುತ್ವದಲ್ಲಿ ಎಲ್ಲರ ಮತವೂ ಒಂದೇ ಸಮ. ಪ್ರಜೆಗಳನ್ನೆಲ್ಲ ಸಮಾನವಾಗಿ ಕಾಣುವ ಏಕೈಕ ಅಸ್ತ್ರ ಎಂದರೆ ಅದು ಮತದಾನದ...

Nepal: ಭೀಕರ ಪ್ರವಾಹಕ್ಕೆ ಸವಾಲೆಸೆದು ನಿಂತ ‘ಗ್ರೀನ್ ಹೌಸ್’ ಸ್ಟೋರಿ

'ನಮ್ಮ ಬದುಕು ಇಷ್ಟಕ್ಕೇ ಅಂತ್ಯವಾಯಿತು ಎನಿಸುವ ಕ್ಷಣಗಳು ಎದುರಾದಾಗ ಮನಸ್ಸಿನಲ್ಲಿ ಏನು ಓಡಬಹುದು? ಪ್ರವಾಹ ಬಂದಾಗ ನನಗೂ ಅದೇ ಅನಿಸಿತ್ತು' ಇದು ನೇಪಾಳದ ನುವಾಕೋಟ್ ಜಿಲ್ಲೆಯ ತ್ರಿಶೂಲಿ ನದಿಯಲ್ಲಿ ಹರಿದುಬಂದ ಭೀಕರ ಪ್ರವಾಹದಿಂದ...

NEET: ದೇಶಾದ್ಯಂತ ಪ್ರತಿಭಟನಾಕಾರರ ವಿರುದ್ದ ದಾಖಲಾಗಿದ್ದ ಎಲ್ಲಾ FIRಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ಮರುಪರೀಕ್ಷೆ ಮತ್ತು ಪ್ರಶ್ನೆ ಪತ್ರಿಕೆ ಸೋರಿಕೆ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ಯ (CJP) ಪ್ರತಿಭಟನಾಕಾರರ ವಿರುದ್ಧ ದಾಖಲಾಗಿದ್ದ ಎಲ್ಲಾ FIR ಗಳನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿದೆ. ಕೇಂದ್ರ ಸರ್ಕಾರವು ಈ...

ಚುನಾವಣಾ ಆಯೋಗ ಚಲೋ: ನಟ ಪ್ರಕಾಶ್ ರಾಜ್ ಸೇರಿದಂತೆ ನೂರಾರು SIR ಸಂತ್ರಸ್ತರು, ಹೋರಾಟಗಾರರನ್ನು ವಶಕ್ಕೆ ಪಡೆದ ಪೊಲೀಸರು

ಕರ್ನಾಟಕ ರಾಜ್ಯದ ಅರ್ಹ ಮತದಾರರ ‘ಮತಹರಣ’ ಖಂಡಿಸಿ ‘ಎಸ್‌ಐಆರ್ ವಿರೋಧಿ ಒಕ್ಕೂಟ’ ಹಮ್ಮಿಕೊಂಡಿದ್ದ ‘ಚುನಾವಣಾ ಆಯೋಗ ಚಲೋ’ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಬಹುಭಾಷಾ ನಟ ಪ್ರಕಾಶ್ ರಾಜ್, ಕಿಶೋರ್ ಹಾಗೂ ಪ್ರಮುಖ ನಾಯಕರು ಸೇರಿದಂತೆ...

‘ಚುನಾವಣಾ ಆಯೋಗ ಚಲೋ’: ‘ಮುಚ್ಚಿದ ಬಾಗಿಲಿನ ಮಾತುಕತೆ ಬೇಡ, ಎಲ್ಲವೂ ಸಾರ್ವಜನಿಕರ ಮುಂದೆಯೇ ಇತ್ಯರ್ಥವಾಗಬೇಕು’: ನೂರ್ ಶ್ರೀಧರ್ ಆಗ್ರಹ

ಬೆಂಗಳೂರು: ಕರ್ನಾಟಕದಲ್ಲಿ ನಡೆದ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ರಾಜ್ಯದ ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬೃಹತ್ ಕಳವಳವನ್ನು ಸೃಷ್ಟಿಸಿದೆ. ಕೇಂದ್ರ ಚುನಾವಣಾ ಆಯೋಗವು ಬಿಡುಗಡೆ ಮಾಡಿರುವ ನೂತನ ಕರಡು ಮತದಾರರ...

SIR ಎಂಬುದು ಪ್ರಜಾಪ್ರಭುತ್ವವನ್ನು ಹಾಳುಮಾಡುವ ದೊಡ್ಡ ಸಂಚು ಮತ್ತು ಮೋಸ: ಪ್ರಕಾಶ್ ರಾಜ್

"ನಾನು ಸಣ್ಣವನಿದ್ದಾಗ ಮುಕ್ಕೂಟಿ ಕನ್ನಡಿಗರು ಎನ್ನುತ್ತಿದ್ದರು. ದಶಕಗಳ ನಂತರ ಪಂಚಕೋಟಿ ಕನ್ನಡಿಗರಾಗಿ, ಈಗ ಶತಕೋಟಿ ಆಗಬೇಕಿತ್ತು. ಆದರೆ ಮತದಾರರ ಪಟ್ಟಿ ವಿಶೇಷ ಸಾಂದ್ರ ಪರಿಷ್ಕರಣೆ (SIR) ಹೆಸರಿನಲ್ಲಿ ಮತ್ತೆ ಮುಕ್ಕೂಟಿಗೆ ತಂದು ನಿಲ್ಲಿಸಲಾಗುತ್ತಿದೆ....

‘ಚುನಾವಣಾ ಆಯೋಗ ಚಲೋ’: ಎಸ್ಐಆರ್ ಅನ್ಯಾಯವನ್ನು ಪ್ರಶ್ನಿಸಲು ನಾವು ಚುನಾವಣಾ ಆಯೋಗಕ್ಕೆ ಮುತ್ತಿಗೆ ಹಾಕುತ್ತಿದ್ದೇವೆ: ಯೂಸುಫ್ ಕನ್ನಿ

ಬೆಂಗಳೂರು: ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಹೆಸರಿನಲ್ಲಿ ಅರ್ಹ ನಾಗರಿಕರ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ‘ಎಸ್‌ಐಆರ್ ವಿರೋಧಿ ಕರ್ನಾಟಕ’ ವೇದಿಕೆಯು 2026 ಸೆಪ್ಟಂಬರ್ 01, ಮಂಗಳವಾರ ಹಮ್ಮಿಕೊಂಡಿದ್ದ...

SIR:‘ನಾವು ಕಳ್ಳರಲ್ಲ, ಈ ದೇಶದ ಮೂಲ ನಿವಾಸಿಗಳು’ SIR ಸಂತ್ರಸ್ತರ ಜೊತೆ ಪ್ರಕಾಶ್ ರಾಜ್ ಸಂವಾದ

"ನಾವು ಈ ದೇಶದ ನಾಗರಿಕರು, ಕಳ್ಳರಲ್ಲ. ಮತದಾರರ ಪಟ್ಟಿಯಿಂದ ಹೆಸರು ಡಿಲೀಟ್ ಮಾಡಿ ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ತರಲಾಗುತ್ತಿದೆ. ನಮ್ಮ ಹಕ್ಕನ್ನು ಉಳಿಸಿಕೊಳ್ಳಲು ನಾವು ಹೋರಾಟ ನಡೆಸುತ್ತಿದ್ದೇವೆ," ಎಂದು ಬಹುಭಾಷಾ ನಟ ಹಾಗೂ...

‘ವಿದೇಶದಲ್ಲಿ ಚಿನ್ನ ಖರೀದಿಸಬೇಡಿ, ವಿವಾಹವಾಗಬೇಡಿ’: ಭಾರತೀಯರಿಗೆ ಮೋದಿ ಮನವಿ

ಭಾರತೀಯರು ಅನಗತ್ಯವಾಗಿ ವಿದೇಶಿ ಪ್ರವಾಸ ಕೈಗೊಳ್ಳುವುದನ್ನು, ವಿದೇಶಗಳಲ್ಲಿ ವಿವಾಹವಾಗುವುದನ್ನು ಹಾಗೂ ಅಗತ್ಯವಿಲ್ಲದಿದ್ದರೆ ವಿದೇಶದಿಂದ ಚಿನ್ನ ಖರೀದಿಸುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಸ್ವಾವಲಂಬನೆಗೆ ಉತ್ತೇಜನ ನೀಡುವುದರ...

ಧಾರವಾಡ | ಪ್ರಕಾಶ್ ರಾಜ್ ಭಾಗವಹಿಸಿದ್ದ ಸಮುದಾಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನ : ದೂರು ದಾಖಲು

ಭಾನುವಾರ (ಆ.30) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಸಭಾ ಭವನದಲ್ಲಿ ಆಯೋಜಿಸಿದ್ದ ಸಮುದಾಯ ಸಂಘಟನೆಯ ಕಾರ್ಯಕ್ರಮಕ್ಕೆ ಅಡ್ಡಿಪಡಿಸಲು ಯತ್ನಿಸಿ ಗಲಾಟೆ ಎಬ್ಬಿಸಿದ ಬಿಜೆಪಿ-ಸಂಘಪರಿವಾರದ ಬೆಂಬಲಿಗರ ವಿರುದ್ಧ ದೂರು ದಾಖಲಿಸಲಾಗಿದೆ. ಸಮುದಾಯ ಸಂಘಟನೆಯ ಧಾರವಾಡದ...