Homeಮುಖಪುಟಮತಯಂತ್ರಗಳನ್ನು ಹಾಳು ಮಾಡಲಾಗುತ್ತಿದೆ: ಆಮ್‌ ಆದ್ಮಿ ಪಕ್ಷ ಆರೋಪ

ಮತಯಂತ್ರಗಳನ್ನು ಹಾಳು ಮಾಡಲಾಗುತ್ತಿದೆ: ಆಮ್‌ ಆದ್ಮಿ ಪಕ್ಷ ಆರೋಪ

ಮೀಸಲು ಪಡೆಗಳು ಇವಿಎಂನೊಂದಿಗೆ ಹೋಗುವುದಿಲ್ಲವೇ? ಈ ಅಧಿಕಾರಿಯನ್ನು ಇವಿಎಂನೊಂದಿಗೆ ಬಾಬರ್‌ಪುರ ವಿಧಾನಸಭಾ ಕ್ಷೇತ್ರದ ಸರಸ್ವತಿ ವಿದ್ಯಾ ನಿಕೇತನ್ ಶಾಲೆಯಲ್ಲಿ ಜನರು ಹಿಡಿದಿದ್ದಾರೆ ಎಂದು ಆಪ್‌ ಸಂಸದರು ಆರೋಪಿಸಿದ್ದಾರೆ.

- Advertisement -
- Advertisement -

ದೆಹಲಿಯ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್‌ರವರು ವಿಧಾನಸಭಾ ಚುನಾವಣೆಯ ನಂತರ ಎಲೆಕ್ಟ್ರಾನಿಕ್ ಮತದಾನ ಯಂತ್ರಗಳನ್ನು ಹಾಳುಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ತಮ್ಮ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳಲು ಅವರು ಒಂದೆರಡು ವೀಡಿಯೊಗಳನ್ನು ಟ್ವೀಟ್ ಮಾಡಿದ್ದಾರೆ. ಮೀಸಲು ಪಡೆಗಳು ಇವಿಎಂನೊಂದಿಗೆ ಹೋಗುವುದಿಲ್ಲವೇ? ಈ ಅಧಿಕಾರಿಯನ್ನು ಇವಿಎಂನೊಂದಿಗೆ ಬಾಬರ್‌ಪುರ ವಿಧಾನಸಭಾ ಕ್ಷೇತ್ರದ ಸರಸ್ವತಿ ವಿದ್ಯಾ ನಿಕೇತನ್ ಶಾಲೆಯಲ್ಲಿ ಜನರು ಹಿಡಿದಿದ್ದಾರೆ” ಎಂದು ಟ್ವೀಟ್ ನಲ್ಲಿ ಬರೆದಿದ್ದಾರೆ.

ಅಲ್ಲದೇ ಮತದಾನ ಯಂತ್ರಗಳನ್ನು ಹಲವು ರಸ್ತೆಗಳಲ್ಲಿ ಸಾಗಿಸಲಾಗಿದೆಯೆಂದು ಆರೋಪಿಸಿದ ಅವರು, “ಈ ಇವಿಎಂಗಳನ್ನು ಎಲ್ಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ? ಇಲ್ಲಿ ಹತ್ತಿರದಲ್ಲಿ ಯಾವುದೇ ಕೇಂದ್ರಗಳಿಲ್ಲ. ಇದರ ಬಗ್ಗೆಯೂ ಚುನಾವಣಾ ಆಯೋಗ ತನಿಖೆ ನಡೆಸಬೇಕು” ಎಂದು ಆಗ್ರಹಿಸಿದ್ದಾರೆ.

ಆದರೆ ಮತದಾನಕ್ಕೆ ಬಳಸಿದ ಎಲ್ಲಾ ಇವಿಎಂಗಳನ್ನು ಪಕ್ಷದ ಏಜೆಂಟರ ಮುಂದೆ ಮೊಹರು ಮಾಡಲಾಗಿದೆ ಮತ್ತು ಮತದಾನ ಕೇಂದ್ರಗಳಿಂದ ನೇರವಾಗಿ ಸುರಕ್ಷತಾ ಕೊಠಡಿಗಳಿಗೆ ತರಲಾಗಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ.

“ಮತದಾನಕ್ಕಾಗಿ ಬಳಸಲಾದ ಎಲ್ಲಾ ಇವಿಎಂಗಳನ್ನು ಲೆಕ್ಕಹಾಕಲಾಗಿದೆ. ಇವಿಎಂಗಳನ್ನು ಪೊಲೀಸ್ ರಕ್ಷಣೆಯೊಂದಿಗೆ ಕೇಂದ್ರಗಳಲ್ಲಿ ಸುರಕ್ಷಿತವಾಗಿ ಸಂಗ್ರಹಿಸಲಾಗಿದೆ. ಪಕ್ಷದ ಏಜೆಂಟರು ಬಯಸಿದಲ್ಲಿ ಕೇಂದ್ರದ ಹೊರಗೆ ಉಳಿಯಲು ಅವಕಾಶವಿದೆ” ಎಂದು ಚುನಾವಣಾ ಅಧಿಕಾರಿಯೊಬ್ಬರು ಎನ್‌ಡಿಟಿವಿಗೆ ತಿಳಿಸಿದ್ದಾರೆ.

ಆದರೆ ನಿನ್ನೆ ಚುನಾವಣೆ ಕೊನೆಗೊಂಡಾಗಿನಿಂದ, ಇಎವಿಗಳಿಗೆ ಸಂಬಂಧಿಸಿದಂತೆ ಎಎಪಿ ತನ್ನ ಅನುಮಾನಗಳನ್ನು ವ್ಯಕ್ತಪಡಿಸಿದೆ. ಸಂಜೆ ತಡವಾಗಿ ಅಧಿಕಾರಿಗಳು ಇವಿಎಂಗಳನ್ನು “ಅನಧಿಕೃತ ರೀತಿಯಲ್ಲಿ” ತೆಗೆದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎಂದು ಆಪ್‌ ಪಕ್ಷ ಹೇಳಿದೆ.

ಉತ್ತರಪ್ರದೇಶದಲ್ಲಿ ಬಿಜೆಪಿ ಭರ್ಜರಿ ಜಯ ಸಾಧಿಸಿದ 2017 ರ ವಿಧಾನಸಭಾ ಚುನಾವಣೆಯ ನಂತರ ಇವಿಎಂ ಮತ್ತು ಇವಿಎಂ ಟ್ಯಾಂಪರಿಂಗ್ ಆರೋಪದ ಮೇಲೆ ಎಎಪಿ ಧ್ವನಿ ಎತ್ತಿದೆ. ಚುನಾವಣಾ ಆಯೋಗ ಅದನ್ನು ನಿರಾಕರಿಸಿದರೂ ಮತ್ತು ಯಂತ್ರಗಳನ್ನು ಹ್ಯಾಕ್ ಮಾಡುವಂತೆ ವಿರೋಧ ಪಕ್ಷಗಳಿಗೆ ಸವಾಲು ಹಾಕಿದರೂ ಆರೋಪಗಳು ಮುಂದುವರೆದಿದೆ. ಎಎಪಿ ಈ ಸವಾಲನ್ನು ಸ್ವೀಕರಿಸಲಿಲ್ಲ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮಧ್ಯಪ್ರದೇಶ: ಆಸ್ಪತ್ರೆಗೆ ದಾಖಲಿಸಿಕೊಳ್ಳಲು ನಿರಾಕರಿಸಿದ ವೈದ್ಯರು; ಆಟೋ ರಿಕ್ಷಾದಲ್ಲೆ ಹೆರಿಗೆ

0
ಮಧ್ಯಪ್ರದೇಶದ ನೀಮುಚ್ ಜಿಲ್ಲಾ ಆಸ್ಪತ್ರೆಯಲ್ಲಿ ಅರಿವಳಿಕೆ ವೈದ್ಯರ ಕೊರತೆಯಿಂದಾಗಿ ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ನಿರಾಕರಿಸಿದ್ದು, 30 ವರ್ಷದ ಮಹಿಳೆಯೊಬ್ಬರು ಆಟೋ ರಿಕ್ಷಾದಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗುವನ್ನು ತರುವಾಯ ಆಸ್ಪತ್ರೆಗೆ...