Homeಅಂಕಣಗಳು1856ರಲ್ಲೇ ಸಮಾನತೆಯ ಪ್ರಶ್ನೆ ಎತ್ತಿದ್ದ ಧಾರವಾಡದ ಎರ್‍ಲೂ ಬಿನ್ ನಾರಾಯಣ್

1856ರಲ್ಲೇ ಸಮಾನತೆಯ ಪ್ರಶ್ನೆ ಎತ್ತಿದ್ದ ಧಾರವಾಡದ ಎರ್‍ಲೂ ಬಿನ್ ನಾರಾಯಣ್

- Advertisement -
- Advertisement -

ಮೀಸಲಾತಿಯನ್ನು ಹೆಚ್ಚುಸಿವಂತೆ, ಶೋಷಿತ ಸಮುದಾಯಗಳಿಗೆ ಒದಗುತ್ತಿರುವ ಮೀಸಲಾತಿ ವರ್ಗಕ್ಕೆ ತಮ್ಮನ್ನೂ ಸೇರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಕರ್ನಾಟಕದ ಹಲವು ಜಾತಿ ಸಮುದಾಯಗಳ ಮುಖಂಡರು, ಮಠಾಧೀಶರುಗಳು ಎದ್ದು ನಿಂತಿದ್ದಾರೆ. ಶಾಸನಬದ್ಧವಾಗಿ ನೀಡಲಾಗಿರುವ ಮೀಸಲಾತಿಯ ಕಲ್ಪನೆಯ ಬಗ್ಗೆಯೇ ಒಂದು ಕಾಲದಲ್ಲಿ ವಿರೋಧ ಮಾಡಿದ್ದ ಸಮುದಾಯಗಳು ಕೂಡ ಇಂದು ಮೀಸಲಾತಿ ಹೆಚ್ಚಳಕ್ಕೆ ಹಪಾಹಪಿಸುತ್ತಿರುವುದು ವಿಪರ್ಯಾಸ. ಸಾಮಾಜಿಕ ಸಮಾನತೆಯ ಕಲ್ಪನೆಯನ್ನು ನಿಜ ಅರ್ಥದಲ್ಲಿ ತನ್ನೊಳಗೆ ಬಿಟ್ಟುಕೊಳ್ಳದೆ, ಇಂದಿಗೂ ಭ್ರಾತೃತ್ವ ಭಾವನೆಯನ್ನು ಬೆಳೆಸಿಕೊಳ್ಳದೆ ಹೋಗಿದ್ದರೂ ಮತ್ತು ಈ ಸಮುದಾಯಗಳು, ತಮ್ಮ ಜಾತಿಯ ಜನರ ಒಳಿತನ್ನು ಯೋಚಿಸುತ್ತಿರುವಂತೆ ಬಿಂಬಿಸಿದರೂ, ಒಟ್ಟಾರೆಯಾಗಿ ಇದು ಪ್ರಜಾಪ್ರಭುತ್ವ ನಿರೀಕ್ಷಿಸುವ ಸಮಾನತೆಯ ಕನಸಿನ ಸೋಲು ಎಂಬುದನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ. ಮುಂದುವರೆಯುವ ಮುಂಚೆ ಸಮಾನತೆಯ ಕೂಗು ಹಾಕಿದ್ದ ಧಾರವಾಡದ ವ್ಯಕ್ತಿಯೊಬ್ಬರನ್ನು ಸ್ಮರಿಸಿಕೊಳ್ಳೋಣ.

1856ರಲ್ಲಿ ಧಾರವಾಡ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು. ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ಅದೇ ಇಸವಿಯಲ್ಲಿ ಮಹಾರ್ ಸಮುದಾಯಕ್ಕೆ ಸೇರಿದ್ದ ಎರ್‍ಲೂ ಬಿನ್ ನಾರಾಯಣ್, ಸರ್ಕಾರ ನಡೆಸುತ್ತಿರುವ ಮರಾಠಿ ಶಾಲೆಯಲ್ಲಿ, ತನ್ನ ಜಾತಿಯ ಕಾರಣಕ್ಕಾಗಿ ನೇಮಕಾತಿ ಸಿಗದೆ ಶಿಕ್ಷಣ ನಿರಾಕರಿಸುತ್ತಿದ್ದರ ಬಗ್ಗೆ ಅಂದಿನ ಮೊದಲನೇ ಅಸಿಸ್ಟೆಂಟ್ ಕಲೆಕ್ಟರ್ ಸ್ಟುವರ್ಟ್ ಎಂ ಐ ಗೋರ್ಡೋನ್ ಅವರ ಮುಖಾಂತರ, ಅಂದಿನ ಬಾಂಬೆ ಪ್ರೆಸಿಡೆನ್ಸಿ ಗವರ್ನರ್ ಆಗಿದ್ದ ಲಾರ್ಡ್ ಎಲ್ಫಿನ್‌ಸ್ಟೋನ್ ಅವರಿಗೆ ಪೆಟಿಶನ್ ಕಳುಹಿಸಿದ್ದರು.

ತಾವು ಮುಕ್ತ ಶಿಕ್ಷಣ ನೀತಿಯ ಪ್ರತಿಪಾದಕರು ಮತ್ತು ನೆಲದ ಕಾನೂನು ಪಾಲಕರು ಎಂದು ಬ್ರಿಟಿಷ್ ಆಡಳಿತ ವ್ಯವಸ್ಥೆ ಕರೆದುಕೊಂಡಿದ್ದರೂ, ಭಾರತದ ಮೇಲ್ಜಾತಿಗಳ ಹಿಡಿತದಲ್ಲಿದ್ದ ಶಿಕ್ಷಣವನ್ನು, ಶೋಷಿತರಿಗೂ ವಿಸ್ತರಿಸಲು ಸಾಧ್ಯವಾಗದೆ ಸೋತ ಕಥೆ ಎರ್‍ಲೂ ಬಿನ್ ನಾರಾಯಣ್ ಅವರದ್ದು. ಎರ್‍ಲೂ ಬಿನ್ ನಾರಾಯಣ್ ಅವರ ಹಿನ್ನೆಲೆಯಲ್ಲಿ ಮಹಾರ್ ಮತ್ತು ಇತರ ಶೋಷಿತರನ್ನು ಶಾಲೆಗಳಿಗೆ ಸೇರಿಸಿಕೊಳ್ಳುವ ಪ್ರಶ್ನೆ ಪಡುವಣ-ಬಡಗಣವನ್ನೆಲ್ಲಾ ಸುತ್ತಿ ಕೊನೆಗೆ ಅಲ್ಲಿಗೇ ಬಂದು ನಿಲ್ಲುತ್ತದೆ. ಮೊದಲಿಗೆ ಈ ಪ್ರಶ್ನೆ ಅಂದಿನ ಭಾರತ ಸರ್ಕಾರಕ್ಕೆ (GOI) ತೆರಳುತ್ತದೆ. ಸರ್ಕಾರದ ಗೃಹಸಚಿವಾಲಯದ ಕಾರ್ಯದರ್ಶಿ ಈ ವಿಷಯದಲ್ಲಿ ಯಾವುದೇ ಹೊಸ ನಿರ್ಧಾರಕ್ಕೆ ಮುಂದಾಗದೆ ಯಥಾಸ್ಥಿತಿಯನ್ನು ಮುಂದುವರೆಸುವ ಬಾಂಬೆ ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿ “ಬೆಂಗಾಳ ಪ್ರಸೆಡೆನ್ಸಿಯಲ್ಲಿ ಆಗಿದ್ದರೆ ಆ ಹುಡುಗನಿಗೆ ನೇಮಕಾತಿಯನ್ನು ನಿರಾಕರಿಸುತ್ತಿರಲಿಲ್ಲ ಎಂಬ ಅಂಶವನ್ನು ಸೇರಿಸುತ್ತಾರೆ.

ಈ ರೀತಿ ಈ ವಿಷಯದ ಸುತ್ತ ಅಂದಿನ ಭಾರತ ಸರ್ಕಾರದ ಉನ್ನತ ವಲಯಗಳಲ್ಲಿ ಕೆಲವು ವಾದವಿವಾದಗಳು ನಡೆಯುತ್ತವಾದರೂ, ಶೋಷಕ ಮೇಲ್ಜಾತಿಗಳ ಜೊತೆಗೆ ಈ ವಿಷಯದಲ್ಲಿ ಜಟಾಪಟಿಗೆ ಬೀಳುವುದಕ್ಕೆ ಹೆದರಿ, ನೆಲೆಯೂರಿದ್ದ ತಾರತಮ್ಯದ ನಿಯಮಗಳನ್ನು ಮೀರಲು ಸೋತು, ಶಾಲೆಗೆ ಮಹಾರ್ ಜಾತಿಯ ಬಾಲಕನಿಗೆ ನೇಮಕಾತಿ ನೀಡಲು ಬ್ರಿಟಿಷ್ ಸರ್ಕಾರ ನಿರಾಕರಿಸುತ್ತದೆ. ಇದರ ಬಗ್ಗೆ ಬರೆದಿರುವ ಅರವಿಂದ ಗಣಚಾರಿಯವರು ದಾಖಲಿಸುವಂತೆ, ’ನ್ಯಾಯ ಮತ್ತು ಸಮತೆ’ಯ ಬಗ್ಗೆ ಬ್ರಿಟಿಷರು ಎಷ್ಟೇ ಕೊಚ್ಚಿಕೊಂಡರೂ ತಮ್ಮ ರಾಜಕೀಯ ಅನುಕೂಲಕ್ಕಾಗಿ ಯಾವುದೇ ಪರಂಪರೆಯನ್ನು ಮುರಿಯಲು ಅವರು ಸಿದ್ಧರಿರಲಿಲ್ಲ ಎನ್ನುತ್ತಾರೆ.

ಈ ಪ್ರಕರಣ ಕರ್ನಾಟಕ ಮತ್ತು ಡಾ. ಬಿ ಆರ್ ಅಂಬೇಡ್ಕರ ಅವರ ಸಂಬಂಧಕ್ಕೆ ಕಾರಣವಾಗಿತ್ತು ಎಂಬುದು ಕೂಡ ಕುತೂಹಲಕಾರಿ ಸಂಗತಿ. ಎರ್‍ಲೂ ಬಿನ್ ನಾರಾಯಣ್ ಅವರು 1856ರಲ್ಲಿಯೇ ನ್ಯಾಯಕ್ಕಾಗಿ ಮೊರೆ ಇಟ್ಟಿದ್ದ ವಿಷಯವನ್ನು 1920ರಲ್ಲಿ ತಿಳಿಯುವ ಡಾ. ಬಿ ಆರ್ ಅಂಬೇಡ್ಕರ್ ಅವರು, 1927ರಲ್ಲಿ ನಾರಾಯಣ್ ಅವರ ಕುಟುಂಬವನ್ನು ಹುಡುಕಿಕೊಂಡು ಧಾರವಾಡಕ್ಕೆ ಬರುತ್ತಾರೆ. ಆದರೆ ನಾರಾಯಣ್ ಅವರ ಕುಟುಂಬದ ಬಗ್ಗೆ ಪತ್ತೆಹಚ್ಚಲು ಸಾಧ್ಯವಾಗದೆ ಹಿಂದಿರುಗುತ್ತಾರೆ.

ನಂತರ 1929ರಲ್ಲಿ ಅಂಬೇಡ್ಕರ್ ಅವರ ಪತ್ನಿ ರಮಾಭಾಯಿ ಅವರ ಅರೋಗ್ಯದ ಸಮಸ್ಯೆಯುಂಟಾದಾಗ, ಪರಿಸರ ಬದಲಾವಣೆಗಾಗಿ ಅಂಬೇಡ್ಕರ್ ಮತ್ತು ರಮಾಭಾಯಿಯವರು ಧಾರವಾಡದಲ್ಲಿ ಕೆಲವು ತಿಂಗಳುಗಳ ಕಾಲ ನೆಲೆಸುತ್ತಾರೆ. ಅಲ್ಲದೆ ಈ ಸಮಯವನ್ನು ದಕ್ಷಿಣ ಭಾರತದಲ್ಲಿ ದಲಿತರ ಸ್ವಾಭಿಮಾನದ ಚಳವಳಿಯನ್ನು ಹುಟ್ಟುಹಾಕಲು ಅಸಮಾನತೆಯ ವಿರುದ್ಧ ಹೋರಾಟ ನಡೆಸಲು ಬಳಸಿಕೊಂಡಿದ್ದು ಈಗ ಇತಿಹಾಸ.

ದಲಿತರ ಸಹಕಾರಿ ಒಕ್ಕೂಟಗಳನ್ನು ನಿರ್ಮಿಸುವುದಕ್ಕೆ, 1929ರಲ್ಲಿ ಕೊಪ್ಪಡಕೇರಿಯಲ್ಲಿ ದಮನಿತ ವರ್ಗದ ಹಾಸ್ಟೆಲ್ ಸ್ಥಾಪಿಸುವುದಕ್ಕೆ ಮತ್ತು ಅಂಬೇಡ್ಕರ್ ತಾವೇ ನಿರ್ವಾಹಕ ಟ್ರಸ್ಟಿಯಾಗಿ ಹಾಸ್ಟೆಲ್ ನಡೆಸುವುದಕ್ಕೆ ಮೇಲಿನ ಘಟನೆ ಕಾರಣವಾಯಿತು. 1931ರಲ್ಲಿ ಮತ್ತೆ ಧಾರವಾಡಕ್ಕೆ ಆಗಮಿಸುವ ರಮಾಭಾಯಿಯವರು ಹಾಸ್ಟೆಲ್ ಆರ್ಥಿಕ ಸಮಸ್ಯೆಯಲ್ಲಿದ್ದನ್ನು ಕಂಡು ತಮ್ಮ ಚಿನ್ನಾಭರಣಗಳನ್ನು ಮಾರಿ ಸಹಾಯ ಮಾಡಿದ್ದು ಕೂಡ ಇತಿಹಾಸದ ಪುಟಗಳಲ್ಲಿ ಮರೆಯಲಾಗದ ಅಧ್ಯಾಯವಾಗಿ ಉಳಿದಿದೆ.

ಹೀಗೆ, ಸಾಮಾಜಿಕ ಸಮಾನತೆಗಾಗಿ, ಘನತೆಗಾಗಿ ದಲಿತರು ಮತ್ತು ಇತರ ಶೋಷಿತ ವರ್ಗ ಹೋರಾಡಿದ್ದಕ್ಕೆ ದೀರ್ಘ ಇತಿಹಾಸವಿದೆ. ಇದನ್ನು ಮಾನದಂಡವಾಗಿರಿಸಿಕೊಂಡೇ ಸಂವಿಧಾನದಲ್ಲಿ ಮೀಸಲಾತಿಯನ್ನು ಶಾಸನಬದ್ಧಗೊಳಿಸಿದ್ದು. ಮೀಸಲಾತಿ ಕೇವಲ ಆರ್ಥಿಕ ಸಮಾನತೆಯನ್ನು ಸರಿಪಡಿಸುವ ವಿಧಾನವಾಗಿರಲಿಲ್ಲ.

ಶತಶತಮಾನಗಳಿಂದ ಅನುಭವಿಸಿದ್ದ ಹಿಂಸೆ, ದೌರ್ಜನ್ಯ, ಶೋಷಣೆಯನ್ನು ತಡೆಯಲು ಮತ್ತು ಸರಿಪಡಿಸುವುದಕ್ಕೋಸ್ಕರ, ಎಲ್ಲ ಸಮುದಾಯಗಳಿಗೆ ಪ್ರತಿನಿಧಿತ್ವವನ್ನು ನೀಡಲು ಮಾಡಿದ ವ್ಯವಸ್ಥೆ ಅದಾಗಿತ್ತು.

ಇದರ ಹೊರತಾಗಿಯೂ ಇಂದಿಗೂ ಶೋಷಿತ ಸಮುದಾಯಗಳಿಗೆ ಅವರಿಗೆ ಸಿಕ್ಕಬೇಕಿದ್ದ ಪ್ರತಿನಿಧಿತ್ವ ದೊರಕಿಲ್ಲ ಎಂಬುದು ಅಂಕಿಅಂಶಗಳಲ್ಲೇ ಅಡಕವಾಗಿದೆ. ಸಣ್ಣ ಪುಟ್ಟ ಸರ್ಕಾರಿ ಕೆಲಸಗಳು ಮತ್ತು ಶಿಕ್ಷಣದಲ್ಲಿ ಒಂದಷ್ಟು ಪ್ರಗತಿಯನ್ನು ಸಾಧಿಸಲು ಶೋಷಿತ ಸಮುದಾಯಗಳಿಗೆ ಸಾಧ್ಯವಾಗಿರುವ ಸಮಯದಲ್ಲಿ, ಮೇಲ್ಜಾತಿಗಳು ಅದರ ವಿರುದ್ಧ ಬಂಡಾಯ ಎದ್ದಿರುವುದು ಪ್ರಜಾಪ್ರಭುತ್ವದ ಮತ್ತು ಈ ದೇಶವನ್ನು ಕಟ್ಟಿ ಬೆಳೆಸಲು ಪ್ರಯತ್ನಿಸಿದ ಧೀಮಂತರಿಗೆ ಮಾಡುವ ಅವಮಾನವಲ್ಲದೇ ಮತ್ತೇನು?

ಇವತ್ತು ಮೇಲ್ಜಾತಿಯ ಮುಖಂಡರು, ಆ ಜಾತಿಗಳ ಮಠಾಧೀಶರುಗಳು ತಮ್ಮ ಸಮುದಾಯದ ಜನರಿಗೆ ಶಿಕ್ಷಣ ನೀಡುವ ಅಗತ್ಯವಿದೆ. ಯಾವ ಶಿಕ್ಷಣ? ವ್ಯವಹಾರಕ್ಕಾಗಿ ದೊಡ್ಡ ದೊಡ್ಡ ಶಿಕ್ಷಣ ಸಂಸ್ಥೆಗಳನ್ನು ತೆರೆದು, ತಮ್ಮ ಜಾತಿಯ ಮಕ್ಕಳಿಗೆ ಹಾಸ್ಟೆಲ್‌ಗಳನ್ನು ತೆರೆದು ನೀಡುವ ಸೌಲಭ್ಯಗಳು ಮಾತ್ರವಲ್ಲ ಆ ಶಿಕ್ಷಣ. ದೇಶದ ಭವಿಷ್ಯಕ್ಕಾಗಿ ಎಲ್ಲ ಸಮುದಾಯಗಳನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಒಂದೇ ಮಟ್ಟಕ್ಕೆ ತರಬೇಕಾದ ಜವಾಬ್ದಾರಿಯ ಶಿಕ್ಷಣ ಅದಾಗಬೇಕಿದೆ. ಶತಮಾನಗಳಿಂದ ಸಾಮಾಜಿಕವಾಗಿ ತಮಗೆ ಸಿಕ್ಕಿರುವ ಸವಲತ್ತುಗಳನ್ನು ನೆನಪಿಸಿಕೊಂಡು, ಎಲ್ಲರನ್ನೂ ಒಳಗೊಳ್ಳುವ ಮತ್ತು ಸಾಮಾಜಿಕ ಸಮಾನತೆಯ ಕಡೆಗೆ ಕೊಂಡೊಯ್ಯಬೇಕಾದ ಅಗತ್ಯದ ಬಗ್ಗೆ ತಮ್ಮ ಸಮುದಾಯದ ಜನರನ್ನು ಸೆನ್ಸಿಟಿವ್ ಮಾಡುವುದಕ್ಕೆ, ತಮ್ಮ ಆಧ್ಯಾತ್ಮವನ್ನು ಈ ಮಠಾಧೀಶರು ಬಳಸಿಕೊಳ್ಳಬೇಕಿತ್ತು. ಆದರೆ ಸ್ವಜಾತಿ ಪ್ರೇಮವನ್ನು ಮೀರದ, ತಮಗಿಂತಲೂ ಶೋಷಿತರ ಪಾಲನ್ನು ಕಬಳಿಸಲು ನಡೆಸಿರುವ ಈ ಮೀಸಲಾತಿ ಹೋರಾಟವನ್ನು ಎಲ್ಲ ಪಾಜ್ಞರೂ ಒಕ್ಕೊರಲಿನಿಂದ ವಿರೋಧಿಸಬೇಕಿದೆ. ಸಾಮಾಜಿಕ ಸಮಾನತೆಯ ಕನಸು ನನಸಾದ ಮೇಲೆ ತಮ್ಮ ಸಮುದಾಯದ ಜನಗಳ ಆರ್ಥಿಕ ಸಮಾನತೆಗೆ ಇಂತಹ ಮೀಸಲಾತಿ ಕೇಳುವ ಸಮಯ ಮುಂದೆ ಬಂದೀತು! ಆದರೆ ಆ ಸಮಾನತೆಗೆ ಶ್ರಮಿಸಬೇಕಿರುವುದು ಹಿಂದಿನಿಂದ ಸವಲತ್ತು ಪಡೆದುಕೊಂಡು ಬಂದಿರುವ ಸಮುದಾಯಗಳೇ.


ಇದನ್ನೂ ಓದಿ: 2ಎ ಮೀಸಲಾತಿಗಾಗಿ ಬೃಹತ್ ರ‍್ಯಾಲಿ: ಪಂಚಮಸಾಲಿ ಸಮುದಾಯದ 10 ಲಕ್ಷ ಜನ ಸೇರುವ ನಿರೀಕ್ಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪಶ್ಚಿಮ ಬಂಗಾಳ| ಚುನಾವಣಾ ಫಲಿತಾಂಶದ ಬಳಿಕ ಮುಸ್ಲಿಂ ಸಮುದಾಯದ ಮನೆ- ಅಂಗಡಿಗಳ ಮೇಲೆ ದಾಳಿ: ಎಪಿಸಿಆರ್

ಪಶ್ಚಿಮ ಬಂಗಾಳದ ಇತ್ತೀಚಿನ ಚುನಾವಣಾ ಫಲಿತಾಂಶದ ಬಳಿಕ ಭಾರತೀಯ ಜನತಾ ಪಕ್ಷದ ಸದಸ್ಯರು ಸರಣಿ ಹಿಂಸಾತ್ಮಕ ಘಟನೆಗಳನ್ನು ನಡೆಸಿದ್ದಾರೆ ಎಂದು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ದಾಖಲಿಸಿದೆ. ವಿಶೇಷವಾಗಿ, ಮುಸ್ಲಿಮರ ವಿರುದ್ಧ...

ದುಬಾರಿ ರ‍್ಯಾಲಿ, ರೋಡ್ ಶೋ ನಡೆಸುತ್ತಾ ದೇಶದ ಜನರಿಗೆ ಮಿತವ್ಯಯದ ಸಲಹೆ ನೀಡಿದ ಪ್ರಧಾನಿ ಮೋದಿ

ನಾಲ್ಕು ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ವಿಧಾನಸಭೆ ಚುನಾವಣೆಗಳು ಪೂರ್ಣಗೊಂಡ ಬಳಿಕ, ಮೇ 10ರಂದು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೆಲವು ಸಲಹೆಗಳನ್ನು ನೀಡಿದ್ದು, ಕೋವಿಡ್ ಸಂದರ್ಭದ ಮಿತಿಗಳನ್ನು ಹಾಕಿಕೊಳ್ಳುವಂತೆ...

ಮೇ 15 ರಂದು ರಾಷ್ಟ್ರವ್ಯಾಪಿ ಮನರೇಗಾ ಕಾರ್ಮಿಕರ ಮುಷ್ಕರ; ದೇಶದಾದ್ಯಂತ ಕಾರ್ಮಿಕ ಸಂಘಟನೆಗಳ ಬೆಂಬಲ

ವಿಬಿ ಜಿರಾಮ್‌ (ಜಿ) ಕಾಯ್ದೆಯನ್ನು ಹಿಂಪಡೆಯುವ ಜೊತೆಗೆ ಗ್ರಾಮೀಣ ಉದ್ಯೋಗ ಯೋಜನೆಯಡಿಯಲ್ಲಿ ಬಲವಾದ ಉದ್ಯೋಗ ಖಾತರಿಗಳನ್ನು ನೀಡುವಂತೆ ಒತ್ತಾಯಿಸಿ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘಗಳ ಜಂಟಿ ವೇದಿಕೆ ಮತ್ತು ಮನರೇಗಾ ಸಂಘರ್ಷ...

ಕಾಂಗ್ರೆಸ್‌ಗೆ ಕಗ್ಗಂಟಾದ ಕೇರಳ ಸಿಎಂ ಆಯ್ಕೆ : ಮೂವರು ಪ್ರಭಾವಿಗಳಲ್ಲಿ ಹೈಕಮಾಂಡ್ ಒಲವು ಯಾರ ಪರ?

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯ ಗಳಿಸಿರುವ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಯುಡಿಎಫ್)ಗೆ ಮುಖ್ಯಮಂತ್ರಿ ಆಯ್ಕೆ ಕಗ್ಗಂಟಾಗಿದೆ. ಯುಡಿಎಫ್‌ ಮೈತ್ರಿಕೂಟ ಗೆದ್ದಿರುವ ಒಟ್ಟು 102 ಸ್ಥಾನಗಳ ಪೈಕಿ 63 ಸ್ಥಾನಗಳನ್ನು...

ಏಪ್ರಿಲ್‌ನಲ್ಲಿ ಗಾಜಾ ಮತ್ತು ಪಶ್ಚಿಮ ದಂಡೆಯಾದ್ಯಂತ ಇಸ್ರೇಲಿ ಪಡೆಗಳಿಂದ 122 ಪ್ಯಾಲೆಸ್ಟೀನಿಯನ್ನರ ಹತ್ಯೆ: ವಿಶ್ವಸಂಸ್ಥೆಯ ಹಕ್ಕುಗಳ ಕಚೇರಿ

ಏಪ್ರಿಲ್‌ನಲ್ಲಿ ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶಗಳಲ್ಲಿ ಇಸ್ರೇಲಿ ಪಡೆಗಳು ಮತ್ತು ವಸಾಹತುಗಾರರು 22 ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 122 ಪ್ಯಾಲೆಸ್ಟೀನಿಯನ್ನರನ್ನು ಕೊಂದಿದ್ದಾರೆ ಎಂದು ಆಕ್ರಮಿತ ಪ್ಯಾಲೆಸ್ಟೀನಿಯನ್ ಪ್ರದೇಶದಲ್ಲಿನ ವಿಶ್ವಸಂಸ್ಥೆಯ ಮಾನವ...

2026ರ ತಮಿಳುನಾಡು ವಿಧಾನಸಭಾ ಚುನಾವಣೆಯ ಫಲಿತಾಂಶ: ರಾಜಕೀಯ ಸ್ಥಿತ್ಯಂತರಗಳ ಅವಲೋಕನ

"2026ರ ತಮಿಳುನಾಡು ವಿಧಾನಸಭಾ ಚುನಾವಣೆಯು ರಾಜ್ಯದ ರಾಜಕೀಯ ಇತಿಹಾಸದ ಹಾದಿಯನ್ನೇ ಬದಲಿಸಿದೆ. ಟಿವಿಕೆ ಪಕ್ಷದ ನಾಯಕ ಜೋಸೆಫ್ ವಿಜಯ್ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡುವ ಮೂಲಕ ದಶಕಗಳ ಕಾಲ ನಡೆದಿದ್ದ ಡಿಎಂಕೆ-ಎಐಎಡಿಎಂಕೆ...

ಬಂಗಾಳದಲ್ಲಿ ‘ಅಧಿಕಾರಿ’ ಆಡಳಿತ: ಜಾತ್ಯತೀತ ಮುಖವಾಡ ಕಳಚಿ ಹಿಂದುತ್ವದ ಅಸ್ತ್ರ ಹಿಡಿದು ಗದ್ದುಗೆ ಏರಿದ ಸುವೇಂದು! 

ಕೋಲ್ಕತ್ತಾ/ನವದೆಹಲಿ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಗಾದಿಗೆ ಸುವೇಂದು ಅಧಿಕಾರಿ ಅವರ ಪದಾರ್ಪಣೆಯು, ಹಳೆಯ ಭ್ರಷ್ಟ ವ್ಯವಸ್ಥೆಯನ್ನು ಗುಡಿಸಿ ಹಾಕಲು ಬಂದ 'ಹೊರಗಿನ' ವ್ಯಕ್ತಿಯ ಕಥೆಯಲ್ಲ. ಬದಲಿಗೆ, ಬಂಗಾಳದ ಹಿಂಸಾತ್ಮಕ, ಬಣ ರಾಜಕೀಯ ಮತ್ತು...

ಬಂಗಾಳ ಚುನಾವಣೆ : SIRನಲ್ಲಿ ಅತಿ ಹೆಚ್ಚು ಹೆಸರು ಅಳಿಸಿದ ಕ್ಷೇತ್ರಗಳು ಬಿಜೆಪಿ ಪಾಲು

ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಬಿಜೆಪಿ, ಸರ್ಕಾರ ರಚಿಸಲು ಅಣಿಯಾಗಿದೆ. ಈ ನಡುವೆ ಹಲವು ಪ್ರಶ್ನೆಗಳು, ಗೊಂದಲಗಳು ಹಾಗೆಯೇ ಮುಂದುವರಿದಿದೆ. ಚುನಾವಣೆ ಘೋಷಣೆಗೆ ಮುನ್ನವೇ ಬಂಗಾಳದ ಮತದಾರರ ಪಟ್ಟಿಯ ವಿಶೇಷ...

ತಮಿಳುನಾಡು ರಾಜ್ಯಪಾಲರ ನಡೆ ಎಷ್ಟು ಸಮಂಜಸ?

'ಮಳೆ ನಿಂತರೂ ಮರದ ಹನಿ ನಿಲ್ಲಲ್ಲ' ಎಂಬ ಮಾತಿಗೆ ಅನ್ವರ್ಥದಂತೆ ಚುನಾವಣೆ ಮುಗಿದರೂ ಸರ್ಕಾರ ರಚನೆಯ ಸರ್ಕಸ್ ಮಾತ್ರ ನಿಲ್ಲುವ ಸೂಚನೆ ಕಾಣುತ್ತಿಲ್ಲ. ತಮಿಳುನಾಡಿನ ರಾಜಕೀಯ ವಿದ್ಯಮಾನಗಳನ್ನು ನೋಡುತ್ತಿದ್ದರೆ ಅಲ್ಲಿ ನಡೆಯುತ್ತಿರವ ಬೆಳವಣಿಗೆಗಳು...

ಬಿಜೆಪಿಯಿಂದ ಯಡಿಯೂರಪ್ಪ ಅಭಿಮಾನೋತ್ಸವ: ಲಿಂಗಾಯತ ಮತಕ್ಕಾಗಿ ಮಾಸ್ಟರ್ ಫ್ಲಾನ್…?  

ದಕ್ಷಿಣ ಭಾರತದ ರಾಜಕಾರಣದಲ್ಲಿ ಬಿಜೆಪಿ ಎನ್ನುವುದು ಒಂದು ಕಾಲಕ್ಕೆ ಕೇವಲ ನಗರ ಪ್ರದೇಶಗಳಿಗೆ ಸೀಮಿತವಾಗಿದ್ದ ಪಕ್ಷ. ಆದರೆ, ಅದೇ ಬಿಜೆಪಿಯನ್ನು ಕರ್ನಾಟಕದಲ್ಲಿ ಬೇರೂರುವಂತೆ ಮಾಡಿದ್ದು ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅಂದರೆ ಬಿ.ಎಸ್. ಯಡಿಯೂರಪ್ಪ....