Homeಎಕಾನಮಿಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

ಆರ್ಥಿಕ ಕುಸಿತದಿಂದ ಲಾಸ್ ಆಗುತ್ತಿರುವುದು ಸೋಮಾರಿ ಕಂಪನಿಗಳಾ?

- Advertisement -
- Advertisement -

ಭಾರತದ ಆರ್ಥಿಕತೆ ಬೀಳುತ್ತಿದೆ ಎಂದು ಜಾಗತಿಕ ಮಟ್ಟದಲ್ಲಿ ಆರ್ಥಿಕ ತಜ್ಞರು ಹೇಳುತ್ತಿದ್ದಾರೆ, ಆರ್.ಬಿ.ಐ. ನ ಮಾಜಿ ಗವರ್ನರ್ ರಘುರಾಮ್ ರಾಜನ್ ಅವರು “ಈ ದೇಶ ನಿರುದ್ಯೋಗದ ಟೈಂ ಬಾಂಬ್ ಮೇಲೆ ಕೂತಿದೆ” ಎಂದು ಎಚ್ಚರಿಕೆಯನ್ನೂ ನೀಡಿದ್ದಾರೆ. ಹೀಗಿರುವ ಸಂದರ್ಭದಲ್ಲಿ ಈ ಟೈಂ ಬಾಂಬ್ ಸಿಡಿಯದೇ ದೇಶ ರಕ್ಷಣೆ ಹೇಗೆ ಮಾಡಬೇಕು ಎಂದು ಕೆಲವರು ಯೋಚಿಸುತ್ತಿದ್ದಾರೆ. ಆದರೆ ಇನ್ನೊಂದು ಕಡೆ “ಕೆಲಸ ಮಾಡದ ಸೋಮಾರಿಗಳ ಕಂಪನಿಗಳು ಮಾತ್ರ ಮುಚ್ಚುತ್ತಿವೆ, ಅವುಗಳು ಇದ್ದೂ ಏನೂ ಪ್ರಯೋಜನವಿಲ್ಲ ಹೋಗ್ಲಿ ಬಿಡಿ, ದೇಶಕ್ಕೆ ಯಾವುದೇ ಅಪಾಯವಿಲ್ಲ” ಎಂದು ಮೋದಿಯ ಅಭಿಮಾನಿಗಳು ವಾದಿಸುತ್ತಿದ್ದಾರೆ. ಹಾಗಾದರೆ ನಷ್ಟದಲ್ಲಿರುವ ಕಂಪನಿಗಳು/ಕಾರ್ಖಾನೆಗಳೆಲ್ಲಾ ಸೋಮಾರಿಗಳಾ? ನಷ್ಟದಲ್ಲಿರುವ ಕಂಪನಿಗಳು ಈಗ ಮೂರಂಕೆಯ ಸಂಖ್ಯೆ ದಾಟಿವೆಯಾದರೂ ಇಲ್ಲಿ ಕೆಲವನ್ನು ಮಾತ್ರ ನೋಡೋಣ.

ದೇಶದ ಬಹುದೊಡ್ಡ ಉದ್ಯೋಗ ಕ್ಷೇತ್ರ ಕೃಷಿ. ಇದೀಗ ಕೃಷಿ ಲಾಭದಾಯಕದ ಮಾತು ಹಾಗಿರಲಿ ಕೃಷಿಯಲ್ಲಿ ತೊಡಗಿರುವ ಮುಂದೊಂದು ದಿನ ಆತ್ಮಹತ್ಯೆ ಮಾಡಿಕೊಳ್ಳಲಿರುವ ರೈತರು ಹಾಗೂ ರೈತ ಕಾರ್ಮಿಕರ ಬದುಕನ್ನು ಉಳಿಸಿಕೊಳ್ಳಲು ನಾವೆಲ್ಲಾ ಪರದಾಡುತ್ತಿರುವ ಸಂದರ್ಭದಲ್ಲಿದ್ದೇವೆ. ರೈತರನ್ನು ಸೋಮಾರಿಗಳು ಕಷ್ಟಪಟ್ಟು ದುಡಿಯದವರು ಎಂದು ವಾದ ಮಾಡುವುದಾದರೆ ಇದು ಆತ್ಮವಂಚನೆ ಅಲ್ಲವೇ? ‘ಕೃಷಿ ಆತ್ಮಹತ್ಯೆ ಕ್ಷೇತ್ರ’ವಾಗಿದ್ದು ಮೋದಿಯ ಕಾಲದಲ್ಲೇ ಅಲ್ಲ. ಇದಕ್ಕೆ ಕಾಂಗ್ರೆಸ್ ಆಡಳಿತವೂ ಸೇರಿ ಕಾರಣವಾಗಿದೆ. ಆದರೆ ದುರಾದೃಷ್ಟವಶಾತ್ ಹೋಲಿಸಿ ನೋಡಲು ರೈತರ ಆತ್ಮಹತ್ಯೆಯ ಮಾಹಿತಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡುತ್ತಲೇ ಇಲ್ಲ! ಇಂದಿಗೂ ಸಾಪೇಕ್ಷವಾಗಿ ನಷ್ಟದಲ್ಲಿರುವ ಕಾರ್ಖಾನೆಗಳಿಗೆ ಹಿಂದಿನ ಸರ್ಕಾರಗಳು ಕಾರಣವಾಗಿರುವುದು ನಿಜವೇ ಆದರೂ ಮೋದಿ ‘ಆಳ್ವಿಕೆಯಲ್ಲಿ’ ನಷ್ಟ ಕಂಡ/ಕಾಣುತ್ತಿರುವ ಸಂಸ್ಥೆಯ ಬಗ್ಗೆ ಗಮನಹರಿಸೋಣ.

ಎಚ್.ಎ.ಎಲ್: ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆಯು 1940 ರಿಂದಲೂ ಬಾಹ್ಯಾಕಾಶಕ್ಕೆ ಕೊಡುಗೆ ನೀಡುತ್ತಾ ಬಂದಿದೆ. 1964 ರಿಂದ ಹಿಂದುಸ್ತಾನ್ ಏರ್ ಕ್ರಾಫ್ಟ್ ನಿಂದ ಎಚ್.ಎ.ಎಲ್ ಎಂದು ಮರುನಾಮಕರಣಗೊಂಡು ಬಾಹ್ಯಾಕಾಶ ಹಾಗೂ ಭಾರತೀಯ ಸೈನ್ಯಕ್ಕೆ ಸೇವೆ ಸಲ್ಲಿಸುತ್ತಾ ಬಂದಿದೆ. ಭಾರತೀಯ ಸೇನೆಗೆ ಧೃವ್, ಚೇತಕ್, ಲ್ಯಾನ್ಸರ್ ಇನ್ನೂ ಮುಂತಾದ ಹೆಲಿಕಾಪ್ಟರ್ ಅನ್ನು ನೀಡಿದೆ. ಹಾಗೂ ಎಲ್.ಸಿ.ಎ, ಎಚ್ ಟಿಟಿ-40, ಐಜೆಟಿ ನಂತಹ ಯುದ್ಧ ವಿಮಾನಗಳನ್ನೂ ಕೊಡೆಗೆಯಾಗಿ ನೀಡಿದೆ. ಇದಲ್ಲದೆ ಫೈಟರ್ ಜೆಟ್, ಪವರ್ ಪ್ಲಾಂಟ್, ಹಲವಾರು ಬೇರೆ ಬೇರೆ ಉಪಕರಣಗಳನ್ನು ನೀಡಿದೆ.

ಸದ್ಯಕ್ಕೆ 32,108 (2014 ರ ಗಣತಿ) ಜನರು ಈ ಸರ್ಕಾರಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಐತಿಹಾಸಿಕ ಸಂಸ್ಥೆ ನಮ್ಮ ಕರ್ನಾಟಕದಲ್ಲಿರುವುದು ನಮ್ಮ ಹೆಮ್ಮೆಯೇ ಸರಿ. (ರಾಫೇಲ್ ಒಪ್ಪಂದದ ಚರ್ಚೆಯಲ್ಲಿ ಕೇಂದ್ರದ ಮಂತ್ರಿಗಳು ಎಚ್.ಎ.ಎಲ್ ಕಾರ್ಯಕ್ಷಮತೆ ಚೆನ್ನಾಗಿಲ್ಲ ಹಾಗಾಗಿ ಅಂಬಾನಿಗೆ ಈ ಒಪ್ಪಂದ ಮಾಡಿಕೊಡುತ್ತೇವೆ ಎಂದು ಹೇಳಿದ್ದರು. ಆದರೆ ಅಂಬಾನಿ ತನ್ನ ಜೀವನದಲ್ಲಿ ಒಂದೂ ಯುದ್ಧ ವಿಮಾನವನ್ನು ತಯಾರು ಮಾಡಿಲ್ಲ ಹಾಗು ಅಂತಹ ಘಟಕ ಆತನ ಬಳಿ ಇಲ್ಲ ಎನ್ನುವುದು ವಾಸ್ತವ. ಇತಿಹಾಸ ತಿಳಿಯದ ಮುಗ್ಧರು ಇದನ್ನೇ ಸತ್ಯವೆಂದು ತಿಳಿದು ವಾದಿಸುವುದು ದುರಂತ) ಇಂತಹ ಎಚ್.ಎ.ಎಲ್ ಸಂಸ್ಥೆ ಇತಿಹಾಸದಲ್ಲೇ ಪ್ರಥಮ ಬಾರಿಗೆ (ಜನವರಿ, 2019) ತನ್ನ ಸಿಬ್ಬಂದಿಗಳಿಗೆ ಸಂಬಳ ನೀಡಲು ಹಣವಿಲ್ಲದೆ 1,000 ಕೋಟಿ ರೂ ಸಾಲವನ್ನು ಮಾಡಿತ್ತು! ಈಗಲೂ ಒಟ್ಟಾರೆ ಆದಾಯ ಏರಿಕೆ ಕಂಡಿಲ್ಲ. ಈ ಸಂಸ್ಥೆಯನ್ನು ಸೋಮಾರಿ ಸಂಸ್ಥೆ ಎಂದರೆ ಆತ್ಮವಂಚನೆಯ ಕೆಲಸವಲ್ಲದೆ ಮತ್ತೇನು?

ಬಿ.ಎಸ್.ಎನ್.ಎಲ್: 2000 ನೇ ಇಸವಿಯಲ್ಲಿ ಶುರುವಾಗಿರುವ ಈ ಸಂಸ್ಥೆಯ ವಾರಸುದಾರರು ಭಾರತ ಸರ್ಕಾರವಾಗಿದೆ. 1,74,216 ಸಿಬ್ದಂದಿಗಳಿರುವ ಈ ಸಂಸ್ಥೆ ಹಳ್ಳಿ ಹಳ್ಳಿಗೂ ದೂರವಾಣಿ ಸಂಪರ್ಕವನ್ನು ನೀಡಿದ ಮೊಟ್ಟ ಮೊದಲ ಸಂಸ್ಥೆಯಾಗಿದೆ. ಈ ಸಂಸ್ಥೆಯ ಬಲವರ್ಧನೆಗೆ ಕೆಲಸ ಮಾಡದ ಸರ್ಕಾರ ಜಿಯೋ ಎನ್ನುವ ಖಾಸಗೀ ವ್ಯಕ್ತಿಯೊಬ್ಬನ ಟೆಲಿಕಾಂ ಪ್ರಚಾರಕ್ಕಾಗಿ ದೇಶದ ಪ್ರಧಾನ ಮಂತ್ರಿಗಳೇ ಅಧಿಕೃತ ರಾಯಭಾರಿ ಆಗಿದ್ದು ನಿಜಕ್ಕೂ ದೇಶದ ಬಹುದೊಡ್ಡ ದುರಂತ. ಈಗ ಬಿ.ಎಸ್.ಎನ್.ಎಲ್ ಸಂಸ್ಥೆ ನಷ್ಟದಲ್ಲಿದ್ದು ವರಮಾನ ಇಳಿಮುಖ ಕಾಣುತ್ತಿದೆ. ಇದರ ಆಪರೇಷನಲ್ ಇನ್ಕಂ -14,000 ಕೋಟಿ (ಮೈನಸ್). ಹೀಗಾಗಿ ಸಿಬ್ಬಂದಿಗಳ ವೇತನಕ್ಕೂ ತೊಂದರೆಯಾಗುತ್ತಿದೆ. ಈಗ ಸಂಸ್ಥೆಯ ಬಲವರ್ಧನೆಗೆ ದುಡಿಯದ ಸರ್ಕಾರವನ್ನು ಬಿಟ್ಟು 1,74,216 ಜನರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ?

2013ರಲ್ಲಿ ನಂ.1 ಬ್ರಾಂಡ್ ಆಗಿದ್ದ ಭಾರತದ ಪಾರ್ಲೇಜಿ ಕಂಪನಿ 1939 ರಿಂದಲೂ ಕೆಲಸ ಮಾಡುತ್ತಿದೆ. ಅಲ್ಲದೆ ಇದು ಹಾಲು ಉತ್ಪಾದಕ ರೈತರಿಗೂ ಸಂಜೀವಿನಿಯಾಗಿತ್ತು. ಇದೀಗ ಪಾರ್ಲೆಜಿ ಕಂಪನಿಯೂ ನಷ್ಟದಲ್ಲಿದ್ದು 10,000 ನೌಕರರನ್ನು ಕಿತ್ತುಹಾಕಿದೆ. ಜಿ.ಎಸ್.ಟಿ ಮತ್ತು ನೋಟು ರದ್ಧತಿಯೇ ತಮ್ಮ ನಷ್ಟಕ್ಕೆ ಕಾರಣ ಎಂದು ಕಂಪನಿಯ ಆಡಳಿತಾಧಿಕಾರಿಗಳು ಹೇಳಿದ್ದಾರೆ. ಆದರೆ ಇಂತಹ ದೀರ್ಘ ಇತಿಹಾಸವಿರುವ ಕಂಪನಿಯನ್ನು “ಇದು ಭಾರತದ ಕಂಪನಿಯಲ್ಲ, ಅಲ್ಲಿ ಕೇವಲ 4 ಸಾವಿರ ಸಿಬ್ಬಂದಿ ಅಷ್ಟೇ ಇರೋದು, 10 ಸಾವಿರ ಎಲ್ಲಿಂದ?” ಎನ್ನುವ ಸುಳ್ಳು ಸಂದೇಶವನ್ನು ಬಿಜೆಪಿಯ ವಕ್ತಾರರೇ ಹಂಚುತ್ತಿದ್ದಾರೆ. ಅಂದರೆ ಬ್ರಿಟಾನಿಯ ಕಂಪನಿಯ 4 ಸಾವಿರ ಸಿಬ್ಬಂದಿಯನ್ನು ತೋರಿಸಿ ಪಾರ್ಲೆಜಿಗೆ ಹೋಲಿಸುವ ಸುಳ್ಳನ್ನು ಬಿತ್ತುತ್ತಿದ್ದಾರೆ. ಇದನ್ನು ನಂಬಿದ ಮುಗ್ದರು ಪಾರ್ಲೆಜಿಯನ್ನೂ ಸೋಮಾರಿಗಳು ಎನ್ನುತ್ತಿದ್ದಾರೆ.

ಇನ್ನೂ ನೂರಾರು ವರ್ಷಗಳ ಇತಿಹಾಸವಿರುವ ನೇಯ್ಗೆ ಕ್ಷೇತ್ರದ ತಮಿಳುನಾಡಿನಲ್ಲಿ ಒಂದೇ ಬಾರಿ 200 ಕಾರ್ಖಾನೆಗಳು ಮುಚ್ಚಿದವು, ಟೀ ಉತ್ಪಾದನಾ ಕ್ಷೇತ್ರವೂ ನಷ್ಟದಲ್ಲಿದೆ. ಈ ಎರಡು ಕ್ಷೇತ್ರಗಳು ಇತಿಹಾಸದಲ್ಲಿ ಮೊದಲ ಬಾರಿಗೆ “ನಾವು ನಷ್ಟದಲ್ಲಿದ್ದೇವೆ ನಮ್ಮನ್ನು ಕಾಪಾಡಿ” ಎನ್ನುವ ಪತ್ರಿಕಾ ಜಾಹೀರಾತನ್ನೇ ನೀಡಿದವು. ಈ ಗಂಭೀರತಯನ್ನು ಅರ್ಥ ಮಾಡಿಕೊಳ್ಳದೆ ಆ ನೇಕಾರ ಹಾಗೂ ರೈತ ಕಾರ್ಮಿಕರನ್ನೂ ಸೋಮಾರಿಗಳು ಎಂದರೆ ಅಂಬಾನಿಯ ಟ್ರಾಪ್ ಗೆ ನಾವು ಬಿದ್ದಂತೆಯೇ ಸರಿ.

ಇದೀಗ ಅತಿದೊಡ್ಡ ನಷ್ಟ ಹಾಗೂ ತಿಂಗಳಿಗೆ 15-20 ವರ್ಷಗಳ ಅನುಭವವಿದ್ದರೂ ನೂರಾರು ಕಾರ್ಮಿಕರನ್ನು ಕೆಲಸದಿಂದ ಕಿತ್ತುಹಾಕುತ್ತಿರುವ ಆಟೋಮೊಬೈಲ್ ಕ್ಷೇತ್ರಗಳಿಗೆ ಹತ್ತಾರು ವರ್ಷದ ಇತಿಹಾಸವಿದೆ ಹಾಗೂ ಲಕ್ಷಾಂತರ ಕಾರ್ಮಿಕರು/ಸಿಬ್ಬಂದಿಗಳು ಜಪಾನ್ ಟೆಕ್ನಾಲಜಿಯ ಅನುಸಾರ ಅಮಾನವೀಯವಾಗಿ ಸೆಕೆಂಡ್ ಲೆಕ್ಕದಲ್ಲಿ ಮಾನೇಸಾರ್, ಹೊಂಡಾ, ಟಿವಿಎಸ್, ಹಿರೋ ಇತ್ಯಾದಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನೂ ಸೋಮಾರಿಗಳು ಎನ್ನಲು ಸಾಧ್ಯವೇ? ಟಿವಿಎಸ್, ಟಾಟಾ ಕಂಪನಿಗಳು ಸಹ ನಷ್ಟಕ್ಕೆ ಸಿಲುಕಿವೆ. ಅದಕ್ಕೆ ಸೋಮಾರಿತನ ಕಾರಣವೇ?

ಹೀಗೆ ನಷ್ಟ ಅನುಭವಿಸುತ್ತಿರುವ ಎಲ್ಲರನ್ನು ಸೋಮಾರಿಗಳು ಎನ್ನುತ್ತಾ ಮುಖೇಶ್ ಅಂಬಾನಿ ಅಥವಾ ಇನ್ನೊಬ್ಬ ವ್ಯಕ್ತಿ ಮಾತ್ರ ‘ಕ್ರೀಯಾಶೀಲ’ ಎಂದು ನಾವು ಹೇಳುವುದಾದರೆ ಅದು ಮೋಸ ಎಂತಲೇ ಅರ್ಥ. ಏಕೆಂದರೆ ಅಂಬಾನಿಗೆ ಸರ್ಕಾರಗಳು ಲಕ್ಷ ಕೋಟಿಗಳ ಲೆಕ್ಕದಲ್ಲಿ ತೆರಿಗೆ ವಿನಾಯಿತಿ ನೀಡಿವೆ. ಅವರ ಸಾವಿರಾರು ಕೋಟಿ ಸಾಲವನ್ನು ಮನ್ನಾ ಮಾಡಿವೆ. ಪುಕ್ಕಟೆಯಾಗಿ ಆತನ ಜಿಯೊ ಟೆಲಿಕಾಂಗೆ ಪ್ರಧಾನಿಗಳು ಜಾಹಿರಾತು ಕೊಟ್ಟಿದ್ದಾರೆ. ಆದರೆ ಇದನ್ನೆ ಸರ್ಕಾರಿ ಸಂಸ್ಥೆಗಳಿಗೆ ಅಥವಾ ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಸಂಸ್ಥೆಗಳಿಗೆ ಏಕೆ ಮಾಡಲಿಲ್ಲ? ಕರ್ನಾಟಕ ಸಿದ್ದಾರ್ಥ್ ರವರ ಕಾಫಿಡೇ ಗೆ ಏಕೆ ನೆರವು ನೀಡಲಿಲ್ಲ? ಈ ಪ್ರಶ್ನೆಗೆ ಉತ್ತರಿಸುತ್ತೀರಾ?

ಹೀಗೆ ಸೋಮಾರಿ ಕಂಪನಿಗಳು ಎಂಬ ಸುಳ್ಳನ್ನು ಹಂಚುವುದರಿಂದ ನಾವು “ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೃಷಿ, ಸಣ್ಣ ವ್ಯಾಪಾರಗಳು ಹಾಗೂ ಗುಡಿ ಕೈಗಾರಿಕೆಗಳನ್ನು ನಾಶ ಮಾಡುತ್ತೇವೆ, ಉದ್ಯೋಗವೇ ಸೃಷ್ಟಿಯಾಗದ ಏಕಸ್ವಾಮ್ಯ ಬಂಡವಾಳವಾದವನ್ನು ಬೆಳೆಸುವ ಮತ್ತು ನಿರುದ್ಯೋಗದ ಪರ ವಹಿಸಿದಂತಾಗುತ್ತದೆ.”

ಹಾಗಾದರೇ ಸೋಮಾರಿತನ ಇಲ್ಲವೇ? ಖಂಡಿತವಾಗಿಯೂ ಇದೆ! ಆರ್ಥಿಕತೆ ಹಿಂಜರಿತ, ನಿರುದ್ಯೋಗಕ್ಕೆ ಕಾರಣಗಳನ್ನು, ಅದರ ಅಪಾಯವನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ, ತರ್ಕಬದ್ದವಾಗಿ ಓದುವುದರಲ್ಲಿ, ಸ್ವಂತ ವಿಚಾರ ಮಾಡುವುದರಲ್ಲಿ ಸೋಮಾರಿತನ ಇದ್ದೇಯಿದೆ. ಇದರಿಂದ ಹೊರಬರಬೇಕಿದೆ. ದೇಶಕ್ಕೆ ಎದುರಾಗಲಿರುವ ಅಪಾಯದಿಂದ ಉಳಿಸಬೇಕಿದೆ. ಮುನ್ನೋಟವನ್ನು ಕಟ್ಟಿಕೊಳ್ಳಬೇಕಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಸಾರ್ವಜನಿಕ ವಲಯದ ಕಂಪೆನಿಗಳಾದ ಬಿ.ಇ.ಎಂ.ಎಲ್ , ಸೇರಿದಂತೆ ಅನೇಕ ಕಂಪೆನಿಗಳನ್ನು ಇಂದು ಖಾಸಗೀಯವರಿಗೆ ಪರಭಾರೆ ಮಾಡಿ ಸರಕಾರ ಕೈ ತೊಳೆದು ಕೊಳ್ಳಲು ಎಲ್ಲಾ ರೀತಿಯ ತಂತ್ರಗಳನ್ನು ಮಾಡುತ್ತಿದೆ, ಅವರು ನೀಡುವ ಕಾರಣ ಹೆಚ್.ಎ.ಎಲ್ ಸೇರಿದಂತೆ ಎಲ್ಲವೂ ಕೂಡ ಒಂದೋ ನಷ್ಟದಲ್ಲಿ ಇದ್ದಾವೆ ಹಾಗೂ ಅವುಗಳ ಕಾರ್ಯಕ್ಷಮತೆ ಖಾಸಗೀಯವರ ತರಹ ಇಲ್ಲ ಎಂದು. ದುರಂತ ಎಂದರೆ ಸಾರ್ವಜನಿಕ ಉದ್ದಿಮೆಗಳಲ್ಲಿ ಇರುವ ನಮೋ ಭಕ್ತರು ಈ ಕಂಪೆನಿಗಳನ್ನು ಖಾಸಗೀ ಒಡೆತನಕ್ಕೆ ಮಾರಲು ತುದಿಗಾಲಿನಲ್ಲಿ ಕಾದಿದ್ದಾರೆ, ಆ ಮೂಲಕ ಪ್ರಧಾನ ಸೇವಕ ರ ಕೈ ಬಲಪಡಿಸುತ್ತಾರಂತೆ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...