ಕಳೆದ 24 ಗಂಟೆಯಲ್ಲಿ ಮಹಾರಾಷ್ಟ್ರದ ಥಾಣೆಯ ಕಲ್ವಾದಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ 18 ಮಂದಿ ರೋಗಿಗಳು ಮೃತಪಟ್ಟಿರುವ ಆಘಾತಕಾರಿ ಘಟನೆ ಬಗ್ಗೆ ಪೌರಾಯುಕ್ತ ಅಭಿಜಿತ್ ಬಂಗಾರ್ ಮಾಹಿತಿ ನೀಡಿದ್ದಾರೆ.
ಮೃತರಲ್ಲಿ 10 ಮಹಿಳೆಯರು ಮತ್ತು 8 ಪುರುಷರು ಸೇರಿದ್ದಾರೆ.ಅವರಲ್ಲಿ ಆರು ಮಂದಿ ಥಾಣೆ ನಗರದವರು, ನಾಲ್ವರು ಕಲ್ಯಾಣ್ ನಗದವರು, ಮೂವರು ಸಹಾಪುರದ ನಿವಾಸಿಗಳು, ಭಿವಂಡಿ, ಉಲ್ಲಾಸನಗರ ಮತ್ತು ಗೋವಂಡಿಯ ತಲಾ ಓರ್ವರು ಸೇರಿದ್ದಾರೆ.ಸತ್ತವರಲ್ಲಿ ಹನ್ನೆರಡು ಮಂದಿ 50 ವರ್ಷಕ್ಕಿಂತ ಮೇಲ್ಪಟ್ಟವರು ಎಂದು ಅಭಿಜಿತ್ ಬಂಗಾರ್ ಹೇಳಿದ್ದಾರೆ.
ಇದಕ್ಕೂ ಮುನ್ನ ರಾಜ್ಯ ಆರೋಗ್ಯ ಸಚಿವ ತಾನಾಜಿ ಸಾವಂತ್ ಮತ್ತು ಸ್ಥಳೀಯ ಉಪ ಪೊಲೀಸ್ ಆಯುಕ್ತ ಗಣೇಶ್ ಗಾವ್ಡೆ ಸಾವಿನ ಸಂಖ್ಯೆ 17 ಎಂದು ಹೇಳಿದ್ದರು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಂಗಾರ್, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಘಟನೆ ಬಗ್ಗೆ ಮಾಹಿತಿ ಪಡೆದಿದ್ದು, ಆರೋಗ್ಯ ಸೇವೆಗಳ ಆಯುಕ್ತರ ನೇತೃತ್ವದಲ್ಲಿ ಸ್ವತಂತ್ರ ತನಿಖಾ ಸಮಿತಿಯನ್ನು ಸ್ಥಾಪಿಸಲು ಆದೇಶಿಸಿದ್ದಾರೆ ಎಂದು ಹೇಳಿದ್ದಾರೆ.
ಸಮಿತಿ ಜಿಲ್ಲಾಧಿಕಾರಿ, ನಾಗರಿಕ ಮುಖ್ಯಸ್ಥರು, ಆರೋಗ್ಯ ನಿರ್ದೇಶಕರನ್ನು ಒಳಗೊಂಡಿರುತ್ತದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ದಲಿತ ಸಮುದಾಯಕ್ಕೆ ಅವಮಾನ – ತೀವ್ರ ಟೀಕೆಯ ನಂತರ ಕ್ಷಮೆಯಾಚಿಸಿದ ನಟ ಉಪೇಂದ್ರ