Homeಚಳವಳಿಕೋಮು ಗಲಭೆ ಬಿಟ್ಟು ಚಪ್ಪಲಿ ಅಂಗಡಿ ಹಾಕಿದ ಅಶೋಕ್: ಗುಜರಾತಿನ ಈ ಗೆಳೆಯರು ಇಂದಿನ ಭಾರತಕ್ಕೆ...

ಕೋಮು ಗಲಭೆ ಬಿಟ್ಟು ಚಪ್ಪಲಿ ಅಂಗಡಿ ಹಾಕಿದ ಅಶೋಕ್: ಗುಜರಾತಿನ ಈ ಗೆಳೆಯರು ಇಂದಿನ ಭಾರತಕ್ಕೆ ಮಾದರಿಯಾಗಬಲ್ಲರೆ?

ಅವನನ್ನು ಚೆನ್ನಾಗಿ ನೋಡುವುದನ್ನು ಬಿಟ್ಟು ನಾನು ಇನ್ನೇನು ಬಯಸುತ್ತೇನೆ? ನಾನು ಅಂಗಡಿ ಉದ್ಘಾಟಿಸಿದೆ ಮತ್ತು ಒಂದು ಜೋಡಿ ಚಪ್ಪಲಿಗಳನ್ನು ಕೂಡ ಖರೀದಿಸಿದೆ. ಅವನ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ ಎನ್ನುತ್ತಾರೆ ಅನ್ಸಾರಿ

- Advertisement -
- Advertisement -

ಅಹಮದಾಬಾದ್ ನಲ್ಲಿ ಅಶೋಕ್ ಪರ್ಮಾರ್ ಎಂಬುವವರು ‘ಏಕತಾ ಚಪ್ಪಲ್ ಘರ್’ ಎಂಬ ಚಪ್ಪಲಿ ಶೂ ಅಂಗಡಿ ಆರಂಭಿಸಿದ್ದಾರೆ. ಅದನ್ನು ಕುತುಬುದ್ದೀನ್ ಅನ್ಸಾರಿ ಎಂಬುವವರು ಉದ್ಘಾಟಿಸಿದ್ದಾರೆ. ಆ ಇಬ್ಬರು ಗೆಳೆಯರು ಅಂಗಡಿಯ ಮುಂದೆ ನಿಂತು ತೆಗೆಸಿಕೊಂಡ ಫೋಟೊ ಎಲ್ಲಾ ಕಡೆ ವೈರಲ್ ಆಗಿದೆ. ಲಕ್ಷಾಂತರ ಜನ ಈ ಜೋಡಿಗೆ ಶುಭ ಹಾರೈಸಿದ್ದಾರೆ. ಏಕೆ? ಯಾರಿವರು? ಇವರ ಹಿನ್ನೆಲೆ ಏನು?

ಅದು 2002ರ ಕಾಲ. ಸರಿಯಾಗಿ 17 ವರ್ಷಗಳ ಹಿಂದೆ ಗುಜರಾತ್ ನಲ್ಲಿ ಕೋಮುಗಲಭೆಗಳು ಉತ್ತುಂಗಕ್ಕೇರಿದ್ದವು. ಗೋಧ್ರಾ ರೈಲು ದುರಂತಕ್ಕೆ ಸೇಡು ತೀರಿಸಬೇಕೆಂದು ಒಂದು ಸಮುದಾಯದವರು ಮತ್ತೊಂದು ಸಮುದಾಯದವರನ್ನು ಹುಡಕಿ ಕೊಲ್ಲುತ್ತಿದ್ದ ಸಮಯ. ವೃತ್ತಿಯಲ್ಲಿ ಟೈಲರ್ ಆದ ಕುತುಬುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ಸಮುದಾಯದ ವ್ಯಕ್ತಿ ಫೆಬ್ರವರಿ 28, 2002 ರಂದು ಅಹಮದಾಬಾದ್‌ನ ನರೋಡಾ ಪಟಿಯಾ ಪ್ರದೇಶದಲ್ಲಿ ಗಲಭೆ ಉತ್ತುಂಗದಲ್ಲಿದ್ದಾಗ, ನರೋಲ್-ನರೋಡಾ ರಸ್ತೆಯಲ್ಲಿರುವ ತನ್ನ ಮನೆಯ ಹೊರಗೆ ಆತ ಸಹಾಯಕ್ಕಾಗಿ ರಾಪಿಡ್ ಆಕ್ಷನ್ ಫೋರ್ಸ್ (ಆರ್‌ಎಎಫ್) ಸಿಬ್ಬಂದಿಗೆ  ಕೈ ಮುಗಿದ ಮನವಿ ಮಾಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅವರ ರಕ್ತದ ಅಂಗಿಯ ಚಿತ್ರ ಮತ್ತು ಕಣ್ಣೀರು ತುಂಬಿದ ಕಣ್ಣುಗಳು ಗುಜರಾತ್ ಗಲಭೆಯ ಸಂತ್ರಸ್ತರನ್ನು ಪ್ರತಿನಿಧಿಸುವ ಚಿತ್ರವಾಯಿತು.

ಅದೇ ಸಂದರ್ಭದಲ್ಲಿ ಬಲಗೈಯ್ಯಲ್ಲೊಂದು ಕಬ್ಬಿಣದ ರಾಡ್, ತಲೆಗೆ ಕೇಸರಿ ಬಟ್ಟೆ ಕಟ್ಟಿ ಎರಡೂ ಕೈಗಳನ್ನು ಮೇಲಕ್ಕೆತ್ತಿ ಅಟ್ಟಹಾಸ ಮೆರೆಯುತ್ತಿರುವ ಹಿಂದೂ ಸಮುದಾಯಕ್ಕೆ ಸೇರಿದ ಅಶೋಕ್ ಪರ್ಮಾರ್ ಅಲಿಯಾಸ್ ಅಶೋಕ್ ಮೋಚಿಯ ಫೋಟೊ ಕೂಡ ಅಂದಿನ ದೌರ್ಜನ್ಯದ ಸಂಕೇತವಾಗಿತ್ತು.

ಆದರ ಗಲಭೆಗಳು ನಿಂತು ಬಹಳ ಕಾಲವಾದ ನಂತರ ಅವರಿಬ್ಬರನ್ನು ಮಾತನಾಡಿಸಿ ಅವರನ್ನು ಒಂದೇ ವೇದಿಕೆಗೆ ತರುವ ಮೂಲಕ ಕೋಮು ಸೌಹಾರ್ದತೆ ಸಾರಲು ಕೇರಳದ ಸಿಪಿಎಂ ಪಕ್ಷ ಪ್ರಯತ್ನಿಸಿತ್ತು ಮತ್ತು ಅದಕ್ಕೆ ಯಶ ಸಿಕ್ಕಿತು ಕೂಡ. ಅಶೋಕ್ ಪರ್ಮಾರ್ ರನ್ನು ಮಾತನಾಡಿಸಿ ಈ ರೀತಿ ಕೋಮುದ್ವೇಷ ಸಾಧಿಸಿ ದಾಳಿ ಮಾಡುವುದು ತಪ್ಪಲ್ಲವೇ? ಇದರಿಂದ ಸಮಾಜಕ್ಕಾಗುವ ಅಪಾಯಗಳನ್ನು ತಿಳಿಹೇಳಲಾಯಿತು. ಆತನಿಗೆ ತನ್ನ ತಪ್ಪಿನ ಮನವರಿಕೆಯಾಗಿ ಬಹಿರಂಗ ಕ್ಷಮೆ ಕೇಳಿದ್ದ. ಮುಂದೆಂದೂ ಕೋಮುಗಲಭೆಗಳಲ್ಲಿ ಭಾಗವಹಿಸದೇ ಸಾಮಾನ್ಯ ಜೀವನ ಸಾಗಿಸಲು ನಿರ್ಧರಿಸಿದ್ದ. ಕೇರಳದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಇಬ್ಬರೂ ಭಾಗವಹಿಸಿ ಅಶೋಕ್ ಮೋಚಿ, ಅನ್ಸಾರಿಗೆ ಗುಲಾಬಿ ಹೂ ಕೊಡುವ ಮೂಲಕ ಭಾವೈಕ್ಯತೆ ಮೆರದಿದ್ದ.

ಅಶೋಕ್ ಪರ್ಮಾರ್ ಬಡವನಾಗಿದ್ದರಿಂದ ದೆಹಲಿಯ ಫುಟ್ ಪಾತ್ ಗಳಲ್ಲಿ ಶೂ, ಚಪ್ಪಲಿ ಹೊಲೆಯುತ್ತಿದ್ದ ಮತ್ತು ಮಾರುತ್ತಿದ್ದ. ತನ್ನ ಜೀವನವನ್ನು ಮತ್ತಷ್ಟು ತಹಬದಿಗೆ ತರುವುದಕ್ಕಾಗಿ ಈಗ ಅಹಮದಾಬಾದ್ ನಲ್ಲಿ ಹೊಸ ಚಪ್ಪಲಿ ಅಂಗಡಿ ಹಾಕಿದ್ದಾನೆ. ಇದಕ್ಕಾಗಿ ಆತನಿಗೆ ಕೇರಳದ ಸಿಪಿಎಂ ಪಕ್ಷವು ಆರಂಭಿಕ ಬಂಡವಾಳದ ಹಣಕಾಸು ಸಹಾಯ ಮಾಡಿದೆ. ಅದಕ್ಕೆ ‘ಏಕತಾ ಚಪ್ಪಲ್ ಘರ್’ ಎಂಬ ಸೌಹಾರ್ದ ಸೂಚಿಸುವ ಹೆಸರು ಸಹ ಇಟ್ಟಿದ್ದಾನೆ. ಜೊತೆಗೆ ತನ್ನ ಗೆಳೆಯ ಕುತುಬುದ್ದೀನ್ ಅನ್ಸಾರಿರವರಿಂದಲೇ ಅದರ ಉದ್ಘಾಟನೆ ಮಾಡಿಸುವ ಮೂಲಕ ತನ್ನ ಹಿಂದಿನ ತಪ್ಪುಗಳಿಗೆ ಒಂದು ರೀತಿಯ ಪ್ರಾಯಶ್ಚಿತ ಮಾಡಿಕೊಂಡಿದ್ದಾನೆ ಎಂದು ಎಲ್ಲೆಡೆ ಮಾತನಾಡಿಕೊಳ್ಳುತ್ತಿದ್ದಾರೆ.

ಇನ್ನು ಅಶೋಕ್ ಪರ್ಮಾರ್ ರವರ ಹೊಸ ಅಂಗಡಿ ಉದ್ಘಾಟನೆಯ ಗೌರವಾನ್ವಿತ ಅತಿಥಿಯಾಗಿದ್ದ ಕುತುಬುದ್ದೀನ್ ಅನ್ಸಾರಿ ಗಲಭೆಯ ನಂತರ ಪಶ್ಚಿಮ ಬಂಗಾಳದಲ್ಲಿ ತಾತ್ಕಾಲಿಕವಾಗಿ ನೆಲೆಸಿದ್ದರು. ಅಲ್ಲಿಯೂ ಅವರು ಟೈಲರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಅಶೋಕ್ ಪರ್ಮಾರ್ ಮೋಚಿಯೊಂದಿಗಿನ ತನ್ನ ಸಂಬಂಧದ ಬಗ್ಗೆ ಮಾತನಾಡಿರುವ ಕುತುಬುದ್ದೀನ್ ಅನ್ಸಾರಿ, “ನಾವು ಕಾಲಕಾಲಕ್ಕೆ ಭೇಟಿಯಾಗುತ್ತಲೇ ಇರುತ್ತೇವೆ. ಅವರು (ಅಶೋಕ್) ಅವರು ತಮ್ಮ ಅಂಗಡಿಯನ್ನು ನಾನು ಉದ್ಘಾಟಿಸಬೇಕೆಂದು ಕೇಳಿದರು ಮತ್ತು ನಾನು ಒಪ್ಪಿಕೊಂಡೆ. ಅವನನ್ನು ಚೆನ್ನಾಗಿ ನೋಡುವುದನ್ನು ಬಿಟ್ಟು ನಾನು ಇನ್ನೇನು ಬಯಸುತ್ತೇನೆ? ನಾನು ಅಂಗಡಿ ಉದ್ಘಾಟಿಸಿದೆ ಮತ್ತು ಒಂದು ಜೋಡಿ ಚಪ್ಪಲಿಗಳನ್ನು ಕೂಡ ಖರೀದಿಸಿದೆ. ನಾನು ಅವನನ್ನು ಚೆನ್ನಾಗಿ ಇರಲು ಬಯಸುತ್ತೇನೆ ಮತ್ತು ಅವನ ವ್ಯವಹಾರವು ಅಭಿವೃದ್ಧಿ ಹೊಂದುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಕಷ್ಟು ಜನರ ಮೆಚ್ಚುಗೆಯನ್ನು ಗಳಿಸಿದೆ.

“ಇದು ಹಿಂದೂ ವರ್ಣ ವ್ಯವಸ್ಥೆಯಾಗಿದ್ದು, ನನ್ನನ್ನು ಚಮ್ಮಾರನಾಗಿ ಸಿಲುಕಿಕೊಳ್ಳುತ್ತಲೇ ಇದೆ. ಅವರು ನಮಗೆ ಮುಂದುವರಿಯಲು ಬಿಡುವುದಿಲ್ಲ” ಎಂದಿರುವ ಅಶೋಕ್ ಪರ್ಮಾರ್ ಮೋಚಿ, ಉನಾದಲ್ಲಿ ದಲಿತರನ್ನು ಸಾರ್ವಜನಿಕವಾಗಿ ಥಳಿಸಿದ ನಂತರ ತಮ್ಮ ಸಮುದಾಯದ ಹಕ್ಕುಗಳಿಗಾಗಿ ಹೋರಾಡಲು 2017 ರಲ್ಲಿ ಗುಜರಾತ್‌ನ ದಲಿತ ಆಜಾದಿ ಕೂಚ್‌ಗೆ ಸೇರಿದ್ದರು. ತನ್ನ ಅಂಗಡಿಯ ಉದ್ಘಾಟನೆಯಲ್ಲಿ ತನ್ನ ಗೆಳೆಯ ಅನ್ಸಾರಿ ಟೇಪು ಕತ್ತರಿಸುವುದನ್ನು ನೋಡಿದ ಮೋಚಿ ಭಾವುಕಗೊಂಡಿದ್ದಾರೆ.

ಒಟ್ಟಿನಲ್ಲಿ ಗುಜರಾತ್ ಗಲಭೆಯ ಸಮಯದಲ್ಲಿ ಎರಡು ವಿರುದ್ಧ ಧ್ರುವಗಳನ್ನು ಪ್ರತಿನಿಧಿಸಿದ್ದ ಇಬ್ಬರೂ ವ್ಯಕ್ತಿಗಳು ವಾಸ್ತವವನ್ನು ಅರ್ಥ ಮಾಡಿಕೊಂಡು ಸೌಹಾರ್ದತೆ ಮೆರೆದಿದ್ದಾರೆ. ಅಲ್ಲದೇ ಕೇವಲ ಭಾವನಾತ್ಮಕ ವಿಚಾರದಲ್ಲಿ ಜನರು ಆವೇಶಗೊಳಗಾಗದೆ ತಮ್ಮ ಬದುಕನ್ನು ಸುಧಾರಿಸುವ ಜೀವನೋಪಾಯದ ಕಡೆ ಚಲಿಸಬೇಕೆಂಬುದನ್ನು ಸಹ ಈ ಚಪ್ಪಲಿ ಅಂಗಡಿ ತೋರಿಸಿದೆ. ಇದು ಇಂದು ಇಡೀ ಭಾರತ ಅರ್ಥ ಮಾಡಿಕೊಳ್ಳಬೇಕಾದ ಪಾಠವಾಗಿದೆ. ಧರ್ಮ-ಧರ್ಮಗಳ ನಡುವಿನ ಕಂದರಗಳನ್ನು ಮುಚ್ಚಿಹಾಕಿ ಭಾರತದ ಎಲ್ಲಾ ಜನರು ತಮ್ಮ ಬದುಕನ್ನು ಅರ್ಥಪೂರ್ಣವಾಗಿ ಕಟ್ಟಿಕೊಳ್ಳುವುದರ ಜೊತೆಗೆ ದೇಶದ ಐಕ್ಯತೆ, ಸೌಹರ್ದತೆಗೆ ಶ್ರಮಿಸಬೇಕಿದೆ.

ಕೊನೆಯಲ್ಲಿ ಈ ಗೆಳೆಯರು ಹೀಗೆ ಬದಲಾಗಲು, ಹೊಸ ಬದುಕು ಕಟ್ಟಿಕೊಳ್ಳಲು ನೆರವಾಗುತ್ತಿರುವ ಕೇರಳ ಸಿಪಿಎಂ ಪಕ್ಷವನ್ನು ಮನಃಪೂರ್ವಕವಾಗಿ ಅಭಿನಂದಿಸೋಣ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

3 COMMENTS

  1. ಸೌಹಾರ್ದ ಳ್ಳೆಯದು.
    ಆದರೆ ಸಿಪಿಐದು ಒನ್ ವೇ ಸೌಹಾರ್ದ. ಸೌಹಾರ್ದತೆಯಾಗಲೀ ಗಲಭೆಯಾಗಲೀ – ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ.. ನಿಮಗೆ ಗೋಧ್ರಾ ರೈಲಿಗೆ ಬೆಂಕಿ ಆಕಸ್ಮಿಕ, ನಂತರದ ಗಲಭೆ ಪೂರ್ವಯೋಜಿತ !
    ಹಿಂದೂ ಮಾತ್ರ ಗಲಭೆಕೋರ
    ಮುಸ್ಲಿಮರು ಸಂತ್ರಸ್ತರು !
    ನೀವು ಸಾಮಾಜಿಕ ನ್ಯಾಯ ಸಾರುವವರೇ ಹೌದಾದರೆ ….
    ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ, ಹೊಡೆದು, ಕೊಂದು, ಅತ್ಯಾಚಾರಗೈದು, ಬದುಕಿ ಉಳಿದವರನ್ನು ಓಡಿಸಿದವರಿಂದ ‘ಬನ್ನಿ, ನಮ್ಮೊಂದಿಗೆ ಬದುಕಿ, ಇಲ್ಲೇ ನೆಲೆಸಿ’ ಎಂಬ ಕರೆ ಕೊಡಿಸಿ…ಕೈ ಕುಲುಕಿಸಿ.
    ಅಂದೇ ನಿಮ್ಮ ಸಿದ್ಧಾಂತಗಳ ಅನುಯಾಯಿಯಾಗುತ್ತೇನೆ ..

  2. ಸೌಹಾರ್ದ ಳ್ಳೆಯದು.
    ಆದರೆ ಸಿಪಿಎಂದು ಒನ್ ವೇ ಸೌಹಾರ್ದ. ಸೌಹಾರ್ದತೆಯಾಗಲೀ ಗಲಭೆಯಾಗಲೀ – ಒಂದೇ ಕೈಯಲ್ಲಿ ಚಪ್ಪಾಳೆ ಸಾಧ್ಯವಿಲ್ಲ.. ನಿಮಗೆ ಗೋಧ್ರಾ ರೈಲಿಗೆ ಬೆಂಕಿ ಆಕಸ್ಮಿಕ, ನಂತರದ ಗಲಭೆ ಪೂರ್ವಯೋಜಿತ !
    ಹಿಂದೂ ಮಾತ್ರ ಗಲಭೆಕೋರ
    ಮುಸ್ಲಿಮರು ಸಂತ್ರಸ್ತರು !
    ನೀವು ಸಾಮಾಜಿಕ ನ್ಯಾಯ ಸಾರುವವರೇ ಹೌದಾದರೆ ….
    ಕಾಶ್ಮೀರಿ ಪಂಡಿತರನ್ನು ಅವರ ನೆಲದಿಂದ ಒಕ್ಕಲೆಬ್ಬಿಸಿ, ಹೊಡೆದು, ಕೊಂದು, ಅತ್ಯಾಚಾರಗೈದು, ಬದುಕಿ ಉಳಿದವರನ್ನು ಓಡಿಸಿದವರಿಂದ ‘ಬನ್ನಿ, ನಮ್ಮೊಂದಿಗೆ ಬದುಕಿ, ಇಲ್ಲೇ ನೆಲೆಸಿ’ ಎಂಬ ಕರೆ ಕೊಡಿಸಿ…ಕೈ ಕುಲುಕಿಸಿ.
    ಅಂದೇ ನಿಮ್ಮ ಸಿದ್ಧಾಂತಗಳ ಅನುಯಾಯಿಯಾಗುತ್ತೇನೆ ..

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...