Homeಮುಖಪುಟಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ' - ಎಚ್‌.ನಾಗೇಂದ್ರಪ್ಪ..

ಎಲೆಮರೆ-2: `ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕವಿ’ – ಎಚ್‌.ನಾಗೇಂದ್ರಪ್ಪ..

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು...

- Advertisement -
- Advertisement -

ಚಳ್ಳಕೆರೆಯ ವಿಠ್ಠಲನಗರದಲ್ಲಿ ಇಸ್ತ್ರಿ ಮಾಡುವ ಪೆಟ್ಟಿಗೆ ಅಂಗಡಿಯಲ್ಲೇ ಪುಸ್ತಕಗಳನ್ನು ನೀಟಾಗಿ ಒತ್ತರಿಸಿಟ್ಟು ಓದುಬರಹ ಮಾಡುವ ಜನಪದ ಕವಿ ಪಗಡಲಬಂಡೆ ಹೆಚ್. ನಾಗೇಂದ್ರಪ್ಪ. ಆಶುಕವಿ, ಸ್ವರಚಿತ ಕವಿತೆಗಳನ್ನು ಹಾಡಿಕೆ ಮೂಲಕ ಜನರಿಗೆ ತಲುಪಿಸುವಾತ. ಬಿ.ಎ ಪದವಿಯಲ್ಲಿ ಕನ್ನಡ ಮೇಜರ್ ಓದಿ ಕನ್ನಡ ಎಂ.ಎ ಸ್ನಾತಕೋತ್ತರ ಪದವಿ ಕನಸಿದ್ದರೂ ಮಾಡಲಾಗದೆ ಓದನ್ನು ನಿಲ್ಲಿಸಿದರು. ನಂತರ ಖಾಸಗಿ ಸಂಸ್ಥೆಯೊಂದರಲ್ಲಿ ಸಂಬಳವಿಲ್ಲದೆ ದುಡಿದು ಕೆಟ್ಟ ಅನುಭವದೊಂದಿಗೆ ವೃತ್ತಿ ಕಸಬು ಇಸ್ತ್ರಿಯ ಕೈಹಿಡಿದು, ಕಾಯಕದ ಜತೆ ನುಡಿ ವ್ಯವಸಾಯ ನಡೆಸಿದ್ದಾರೆ. ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಕುಸ್ತಿ, ಕಬಡ್ಡಿ, ರನ್ನಿಂಗ್ ರೇಸಲ್ಲಿ ಕಾಲೇಜಿಗೆ ಹೆಸರು ತಂದಾತ. ನಂತರದ ದಿನಗಳಲ್ಲಿ ಕಲೆಯತ್ತ ಹೊರಳಿ ಭಜನೆ, ಹಾಡಿಕೆ, ತತ್ವಪದ, ಏಕಪಾತ್ರಾಭಿನಯ, ದೊಡ್ಡಾಟ ಸಣ್ಣಾಟ ಹೀಗೆ ಬಹುಮುಖ ಪ್ರತಿಭೆಯಾಗಿ ರೂಪುಗೊಂಡರು.

ನಾಗೇಂದ್ರಪ್ಪ ಒಬ್ಬ ಜನಪದ ಕವಿ. ಹಾಗಾಗಿ ಇವರನ್ನು ಇತರೆ ಶಿಷ್ಟಕವಿಗಳ ಜತೆ ಹೋಲಿಸಲಾಗದು. ಅವರ ಕವಿತೆಗಳಲ್ಲಿ ತೀವ್ರವಾದ ರೂಪಕಗಳಾಗಲಿ, ಗಂಭೀರ ಶೋಧವಾಗಲಿ ಕಾಣುವುದಿಲ್ಲ. ಬದಲಾಗಿ ತನ್ನ ಸುತ್ತಮುತ್ತಣ ಯಕಶ್ಚಿತ್ ಎನ್ನುವಂತಹ ಸಂಗತಿಗಳನ್ನು ಆಯ್ದು ಅವುಗಳನ್ನು ಜನÀಪರವಾದ ಕೋರಿಕೆ, ದುಃಖ, ಅಸಹಾಯಕತೆ, ಪ್ರೀತಿ, ಸ್ನೇಹ, ಮೆಚ್ಚುಗೆ, ಬಂಧುತ್ವದಂತಹ ಭಾವನೆಗಳ ಜತೆ ಕಟ್ಟಿದ್ದಾರೆ. ಹೀಗೆ ದಿನದಿನದ ವಿದ್ಯಮಾನಗಳೇ ನಾಗೇಂದ್ರಪ್ಪನ ಕವಿತ್ವದಲ್ಲಿ ಹಾಡುಗಳಾಗಿವೆ. ಈ ಕಾರಣಕ್ಕೆ ಕವಿ ಬೇಂದ್ರೆ ನನಗೆ ಇಷ್ಟ ಎನ್ನುತ್ತಾರೆ.

ಚಳ್ಳಕೆರೆ ಭಾಗ ಕರ್ನಾಟಕದಲ್ಲಿಯೇ ಅತಿ ಕಡಿಮೆ ಮಳೆಬೀಳುವ ಪ್ರದೇಶ. ಹಾಗಾಗಿ ಮಳೆಯನ್ನು ನಂಬಿ ಬಿತ್ತನೆ ಮಾಡಿದ ರೈತರು ಹೆಚ್ಚಾಗಿ ಕೈಸುಟ್ಟುಕೊಳ್ಳುವುದೇ ಹೆಚ್ಚು. ಈ ಸಂಗತಿಯು ಕವಿಯನ್ನು ಬಹುವಾಗಿ ಕಾಡಿದೆ. ಈ ಕವಿತೆಗಳಲ್ಲಿ ರೈತ ಹೊಲ ಮಳೆ ಮೋಡ ಕುರಿತ ರೂಪಕಗಳು ಮತ್ತೆ ಮತ್ತೆ ಮರುಕಳಿಸಿವೆ. ಅಂತೆಯೇ ಮಳೆ ಕರೆಯುವ ಮೂರ್ನಾಲ್ಕು ಪದ್ಯಗಳಿವೆ. `ಮುನಿದೆ ಏಕೋ ಮಳೆರಾಯ’ ಎನ್ನುವ ಪದ್ಯದಲ್ಲಿ `ಉತ್ತಿದರು ಬಿತ್ತಿದರು ಕತ್ತೆತ್ತಿ ನೋಡಿ/ ಗೋಗರೆದರೂ ಕರಗಲಿಲ್ಲ/ ವರುಣ ದೇವನೆದೆ’ ಎನ್ನುತ್ತಾರೆ.

`ಲೋಕದ ಸುಕ್ಕುಗಳ ಇಸ್ತ್ರಿ ಮಾಡುವ ಕಾಯಕದಲಿ’ ಕವಿತೆ ಗಮನ ಸೆಳೆವ ಪದ್ಯ. ನಾಗೇಂದ್ರಪ್ಪ ಸ್ವತಃ ಮಡಿವಾಳ ಸಮುದಾಯಕ್ಕೆ ಸೇರಿದಾತ. ಜಗದ ಬಟ್ಟೆಗಳ ಮಡಿಮಾಡಿಕೊಡುವ ಕುಲಕಸಬನ್ನು ಮಾಡಿದಾತ. ಈಗಲೂ ಇಸ್ತ್ರಿ ಅಂಗಡಿಯಲ್ಲಿ ಲೋಕದ ಬಟ್ಟೆಗಳ ಗರಿಗರಿಯಾಗಿಸುವಾತ. ಇಂತಹ ಸಮುದಾಯದ ಅನುಭವಗಳನ್ನು ನಾಗೇಂದ್ರಪ್ಪ ತುಂಬಾ ಸೂಕ್ಷ್ಮವಾಗಿ ಹಿಡಿದಿದ್ದಾರೆ. `ಇದ್ದಿಲು ನಿಗಿನಿಗಿ ಹೊಳೆದು/ಹೊಟ್ಟೆ ಬಟ್ಟೆ ತೊಡಿಸಿ/ಸ್ಫೂರ್ತಿ ನೀಡಿತು/ಬೂದಿಮುಚ್ಚಿದ ಕೆಂಡವಿದ್ದು/ ಬದುಕಿನ ನೆರವಿನ ತಂಗಾಳಿ ಬೀಸಿದಾಗ ಮತ್ತೆ ಪ್ರಜ್ವಲಿಸಿತು/ ಅಗುಳಿನ ಗಳಿಗೆಯ ಚೀಲ ತುಂಬಿ ನಿದ್ರಿಸಿತು’ ಎನ್ನುತ್ತಾರೆ. ಅಂತೆಯೇ ಉಳ್ಳವರ ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಕವಿ ಸಿರಿವಂತಿಕೆಯ ಮೇಲಿನ ಸಿಟ್ಟನ್ನು ತನ್ನ ಕಾಯಕದಲ್ಲಿ ದಾಟಿಸಿ ಹಗುರಾಗುವಂತಿದೆ. ಹಾಗಾಗಿಯೇ `ಜುಬ್ಬದ ದಿಬ್ಬ ನಿದ್ದೆಯ ಕೆಡಿಸಿ/ಸೊಕ್ಕಿದ ಸುಕ್ಕು ಕೊಬ್ಬನು ಕರಗಿಸಿ/ ಹಾಸಿಗೆ ಹಿಡಿಸಿತು/ ಆಶ್ರಯ ತಪ್ಪಿದ ಪ್ರತಿಭೆ/ತರಗೆಲೆಯಾಗಿ/ಕಮರಿ ಧೂಳಾಯಿತು’ ಎನ್ನುತ್ತಾರೆ. ಮುಂದುವರಿದು `ಲೋಕದ ಸುಕ್ಕುಗಳ/ಇಸ್ತ್ರಿ ಮಾಡುವ ಕಾಯಕದಲಿ/ ನಾನು ನನ್ನವರು/ ಸುಟ್ಟುಕೊಳ್ಳುತ್ತಲೇ/ ಗಟ್ಟಿಯಾಗುತ್ತಿದ್ದೇವೆ/ ಬದುಕೆಂಬ ಇಟ್ಟಿಗೆ ಭಟ್ಟಿಯಲಿ’ ಎಂದು ಬದುಕಿಗೆ ಚೈತನ್ಯ ಪಡೆಯುತ್ತಾರೆ.

ನಾಗೇಂದ್ರಪ್ಪ ಜನಪದ ಕವಿಯಾಗಿಯೂ ಆಧುನಿಕ ವೈಚಾರಿಕತೆ ಇವರ ಕವಿತೆಗಳಲ್ಲಿ ಹೆಣೆದುಕೊಂಡಿದೆ. ಈ ಕಾರಣಕ್ಕೆ ಇಲ್ಲಿ ಜನರ ಕಷ್ಟನಷ್ಟಗಳನ್ನು ಕವಿತೆಯನ್ನಾಗಿಸುತ್ತಲೇ ಇವುಗಳಿಂದ ಹೊರಬರಬಹುದಾದ ದಾರಿಗಳ ಬಗ್ಗೆಯೂ ಜಾಗೃತರಾಗಿದ್ದಾರೆ. ಈ ಸಂಕಲನದ `ಕ್ರಾಂತಿಗೀತೆ’ ಎನ್ನುವ ಕವಿತೆ ಗಮನ ಸೆಳೆಯುವಂತಿದೆ. `ನೆಲ ಅಗೆದರು ಮರ ಕಡಿದರು/ ಅದಿರು ತೆಗೆದರು ಮರಳು ಮಾರಿದರು/ಕನ್ನಡಮ್ಮನ ಬಂಜೆ ಮಾಡಿದರು/ಖಜಾನೆ ಲೂಟಿ ಹೊಡೆದರು’ ಎಂದು ವಾಸ್ತವದ ಕನ್ನಡಮ್ಮನ ನೆನೆಯುತ್ತಾರೆ. ಅಂತೆಯೇ `ಕ್ರಾಂತಿ ಕಹಳೆ ಮೊಳಗಲಿ/ಶಾಂತಿ ಬೀಡು ಆಗಲಿ/ಏಳಿರಿ ಸಿಡಿದೇಳಿರಿ’ ಎಂದು ಕರೆಕೊಡುತ್ತಾರೆ. ಇಷ್ಟರಮಟ್ಟಿಗೆ ಕವಿ ವರ್ತಮಾನವನ್ನು ಎಚ್ಚರದ ಕಣ್ಣಿಂದ ಗಮನಿಸಿದ್ದಾರೆ.

ಒಬ್ಬ ಕವಿಯಾಗಿ ನಾಗೇಂದ್ರಪ್ಪ ಲೋಕದ ಗಾಯಗಳಿಗೆ ಮುಲಾಮು ಹುಡುಕುವಾಗ ಆಯ್ಕೆ ಮಾಡಿಕೊಳ್ಳುವುದು ಬುದ್ಧ ಬಸವ ಅಂಬೇಡ್ಕರ್ ಜ್ಯೋತಿಬಾಪುಲೆ ಗಾಂಧಿ ಮೊದಲಾದವರನ್ನು ಎನ್ನುವುದು ಗಮನ ಸೆಳೆಯುತ್ತದೆ. ಹಾಗಾಗಿ ಇಲ್ಲಿ ಕವಿತೆಗಳನ್ನು ಕಟ್ಟುವಲ್ಲಿ ವಾಚ್ಯವಾದರೂ ಈ ಕವಿಗೆ ಕವಿತೆಯಲ್ಲಿ ತಾನು ಹೇಳಬೇಕಿರುವುದು ಏನನ್ನು ಮತ್ತು ಯಾರ ಧ್ವನಿಯನ್ನು ಎನ್ನುವ ಸ್ಪಷ್ಟತೆ ಇದೆ. ಹಾಗಾಗಿಯೇ ನೇಪಾಳದ ಭೂಕಂಪಕ್ಕೆ ಕಣ್ಣೀರಾಗುತ್ತಾರೆ. ರೈತರ ಬವಣೆಗೆ ಕರಗುತ್ತಾರೆ. ನಾಗೇಂದ್ರಪ್ಪ ಶಾಲೆಗಳಿಗೆ ತೆರಳಿ ಕವಿತೆಗಳನ್ನು ಹಾಡಿ ಮಕ್ಕಳನ್ನು ಖುಷಿಗೊಳಿಸುತ್ತಾರೆ. ಆ ಸಂದರ್ಭಗಳಲ್ಲಿ ಬಯಲಾಟ, ಏಕಪಾತ್ರಾಭಿನಯ ಮೊದಲಾದ ಕಲಾರೂಪಗಳಲ್ಲಿಯೂ ಅಭಿನಯಿಸಿ, ಕವಿತೆಯನ್ನು ವಾಚಿಸಿ ಕಾವ್ಯದ ಹಲವು ಸಾಧ್ಯತೆಗಳನ್ನು ಪ್ರಯೋಗಿಸಿದ್ದಾರೆ. ಹೀಗೆ ಜೀವಪರವಾಗಿ ತುಡಿಯುವ ಕವಿ ಇನ್ನಷ್ಟು ಗಟ್ಟಿಯಾಗಿ ಕವಿತೆಗಳನ್ನು ಕಟ್ಟಲಿ ಎಂದು ಆಶಿಸುವೆ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಶ್ರೀಲಂಕಾ | 2019ರ ಈಸ್ಟರ್ ಬಾಂಬ್ ಸ್ಫೋಟ ಪ್ರಕರಣ: ಇಬ್ಬರು ಮಾಜಿ ಅಧಿಕಾರಿಗಳಿಗೆ ಮರಣದಂಡನೆ ವಿಧಿಸಿದ ಕೋರ್ಟ್

ಬರೋಬ್ಬರಿ 260ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗಿದ್ದ 2019ರ ಶ್ರೀಲಂಕಾದ 'ಈಸ್ಟರ್ ಸಂಡೇ' ಬಾಂಬ್ ಸ್ಫೋಟ ಪ್ರಕರಣದಲ್ಲಿ ಕ್ರಿಮಿನಲ್ ನಿರ್ಲಕ್ಷ್ಯ ಆರೋಪ ಸಾಬೀತಾದ ಹಿನ್ನೆಲೆ, ಪೊಲೀಸ್ ಮಾಜಿ ಮುಖ್ಯಸ್ಥ ಮತ್ತು ರಕ್ಷಣಾ ಸಚಿವಾಲಯದ...

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...