“ಚುನಾವಣಾ ಬಾಂಡ್ ಹಗರಣವು ಭಾರತದ ಅತಿ ದೊಡ್ಡ ಹಗರಣ ಮಾತ್ರವಲ್ಲ, ಜಗತ್ತಿನಲ್ಲೇ ಅತಿ ದೊಡ್ಡ ಹಗರಣವಾಗಿದೆ” ಎಂದು ಚಿಂತಕ, ಖ್ಯಾತ ರಾಜಕೀಯ ವಿಶ್ಲೇಷಕ ಹಾಗೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಹೇಳಿದ್ದಾರೆ.
ಮಲಯಾಳಂ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ಚುನಾವಣಾ ಬಾಂಡ್ ಒಂದು ಗಂಭೀರ ವಿಚಾರ. ಚುನಾವಣಾ ಬಾಂಡ್ ಕಾರಣದಿಂದಲೇ ಈ ಬಾರಿಯ ಚುನಾವಣೆ ಬಿಜೆಪಿ ಮತ್ತು ಇತರ ಪಕ್ಷಗಳ ನಡುವಿನ ಹೋರಾಟವಾಗಿರದೆ, ಬಿಜೆಪಿ ಮತ್ತು ಭಾರತೀಯರ ನಡುವಿನ ಹೋರಾಟವಾಗಲಿದೆ ಎಂದಿದ್ದಾರೆ.
“It will be a fight between the BJP and the rest of India. The Electoral Bond Scam is not just the biggest scam in India, it is the biggest scam in the world."
– Parakala Prabhakar, FM Nirmala Sitharaman's husband about electoral bonds.
A must listen. pic.twitter.com/0I2EmgbnSX
— Advaid അദ്വൈത് (@Advaidism) March 27, 2024
ಬಿಜೆಪಿಯ ನಿರೀಕ್ಷೆಗೂ ಮೀರಿ ಈ ವಿಚಾರ ಅದರ ಕೈತಪ್ಪಿ ಹೋಗಿದೆ. ಚುನಾವಣಾ ಬಾಂಡ್ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈಗೀಗ ಈ ಹಗರಣದ ಬಗ್ಗೆ ಜನರಲ್ಲಿ ಅರಿವು ಮೂಡುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಲೋಕಸಭಾ ಚುನಾವಣೆ 2024: ಉದ್ಧವ್ ಅಭ್ಯರ್ಥಿಯನ್ನು ‘ಖಿಚಡಿ ಚೋರ್’ ಎಂದು ಕರೆದ ಕಾಂಗ್ರೆಸ್ ನಾಯಕ