Homeನಿಜವೋ ಸುಳ್ಳೋFact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

Fact check: ಅರ್ನಬ್ ಗೋಸ್ವಾಮಿ ವಿಡಿಯೋ ದಾಳಿಗೂ ಮುನ್ನವೇ ಮಾಡಲಾಗಿತ್ತೇ?

- Advertisement -
- Advertisement -

ರಿಪಬ್ಲಿಕ್ ಟಿವಿ ಸಂಪಾದಕ ಅರ್ನಬ್ ಗೋಸ್ವಾಮಿ ಅವರು ಏಪ್ರಿಲ್ 23 ರಂದು ತನ್ನ ಕೆಲಸ ಮುಗಿಸಿ ಹೆಂಡತಿಯೊಂದಿಗೆ ಕಾರಿನಲ್ಲಿ ಮನೆಗೆ ಹೋಗುತ್ತಿರುವಾಗ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ವಿಡಿಯೋ ಹೇಳಿಕೆಯೊಂದರಲ್ಲಿ ಆರೋಪಿಸಿದ್ದರು.

ಕಾಂಗ್ರೆಸ್ ಐಟಿ ಸೆಲ್‌ನ ರಾಷ್ಟ್ರೀಯ ಸಂಯೋಜಕ ಗೌರವ್ ಪಾಂಡಿ ಅರ್ನಬ್ ಗೋಸ್ವಾಮಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ ವೀಡಿಯೊವೂ ದಾಳಿಗಿಂತ ಮುಂಚೆಯೇ ಚಿತ್ರೀಕರಿಸಲಾಗಿದೆ ಎಂದು ಆರೋಪಿಸಿದ್ದರು. ಕಾಂಗ್ರೆಸ್ ಸದಸ್ಯ ಸೂರಜ್ ಹೆಗ್ಡೆ ಮತ್ತು ರೋಫ್ಲ್ ರಿಪಬ್ಲಿಕ್ ಟ್ವಿಟರ್ ಹ್ಯಾಂಡಲ್ ಸಹ  ಇದೇ ವಿಷಯವನ್ನು ಟ್ವೀಟ್ ಮಾಡಿದ್ದರು. ಅಲ್ಲದೆ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅರ್ನಬ್ ಮೇಲೆ ದಾಳಿಯೇ ನಡೆದಿಲ್ಲ, ಆದರೂ ವಿಡಿಯೋ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

 

ರಿಪಬ್ಲಿಕ್ ಟಿವಿಯಿಂದ ದಾಳಿ ಸುದ್ದಿಯನ್ನು ಪ್ರಸಾರ ಮಾಡುವ ಮೊದಲೇ ಬಿಜೆಪಿ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರ ಮತ್ತು ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಈ ದಾಳಿಯ ಬಗ್ಗೆ ತಿಳಿದಿದ್ದರು ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಪ್ರಚಾರ ಉಸ್ತುವಾರಿ ಶ್ರೀವತ್ಸ ಹೇಳಿದ್ದಾರೆ. ಚಾನೆಲ್‌ಗಳು ಮತ್ತು ಇಬ್ಬರು ವ್ಯಕ್ತಿಗಳು ಹಾಕಿದ ಟ್ವೀಟ್‌ಗಳ ಸಮಯವನ್ನು ಆಧರಿಸಿ ಅವರು ಈ ಆರೋಪ ಮಾಡಿದ್ದಾರೆ.

ಫ್ಯಾಕ್ಟ್-ಚೆಕ್

ಈ ಫ್ಯಾಕ್ಟ್ ಚೆಕ್ಕನ್ನು ಆಲ್ಟ್ ನ್ಯೂಸ್ ಎರಡು ರೀತಿಯಲ್ಲಿ ಪ್ರತ್ಯೇಕವಾಗಿ ವಿಶ್ಲೇಷಿಸಿದೆ.

1. ರಿಪಬ್ಲಿಕ್ ಟಿವಿ ಆಪಾದಿತ ದಾಳಿಯ ಬಗ್ಗೆ ವೀಕ್ಷಕರಿಗೆ ತಿಳಿಸುವ ಮೊದಲೆ ಅದನ್ನು ಚಿತ್ರೀಕರಿಸಲಾಗಿದೆ ಎಂದು ವೀಡಿಯೊದ ಮೆಟಾಡೇಟಾ ತೋರಿಸುತ್ತದೆಯೇ?

2. ಸಾಂಬಿತ್ ಪಾತ್ರ ಮತ್ತು ಅಶೋಕ್ ಪಂಡಿತ್ ಅವರು ಈ ದಾಳಿ ನಡೆಯುವ ಮೊದಲೇ ಟ್ವೀಟ್ ಮಾಡಿದ್ದಾರೆಯೇ?

ಮೆಟಾಡೇಟಾ

ಮೆಟಾಡೇಟಾ ಎಂದರೆ ಡೇಟಾದ ಬಗ್ಗೆ ಇರುವ ಮಾಹಿತಿ ಆಗಿದೆ. ಕೆಲವು ಪರಿಕರಗಳು ವೀಡಿಯೊಗಳಿಗೆ ಸಂಬಂಧಿಸಿದ ಮೆಟಾಡೇಟಾವನ್ನು ಬಹಿರಂಗಪಡಿಸುತ್ತವೆ. ಆದರೆ ಮೂಲ ಫೈಲ್‌ನಿಂದ ಕಂಡುಹಿಡಿದಾಗ ಮಾತ್ರ ಅಂತಹ ಡೇಟಾ ನಿಖರವಾಗಿರುತ್ತದೆ. ವೀಡಿಯೊ ಕಳುಹಿಸಿದ ಪ್ಲಾಟ್‌ಫಾರ್ಮ್ ಆಧರಿಸಿ ಮೆಟಾಡೇಟಾವನ್ನು ಮಾರ್ಪಡಿಸಲಾಗುತ್ತದೆ. ಟ್ವಿಟರ್ ಫೈಲ್‌ಗಳ ಮೆಟಾಡೇಟಾವು ಟ್ವಿಟ್ಟರಿನಲ್ಲಿ ಅಪ್‌ಲೋಡ್ ಮಾಡಿದಾಗ ಅವುಗಳ ಆಧಾರದ ಮೇಲೆ ದಿನಾಂಕ ಮತ್ತು ಸಮಯವನ್ನು ತೋರಿಸುತ್ತದೆ, ಆದರೆ ಅವುಗಳನ್ನು ಚಿತ್ರೀಕರಿಸಿದಾಗ ಅಲ್ಲ.

ವೀಡಿಯೊದ ಮೆಟಾಡೇಟಾವನ್ನು ಕಂಡು ಹಿಡಿಯಲು ಕಾಂಗ್ರೆಸ್ ಸದಸ್ಯರು metadata2go.com ವೆಬ್‌ಸೈಟ್ ಅನ್ನು ಬಳಸಿದ್ದಾರೆ. ಅವರು ವೀಡಿಯೊವನ್ನು ಡೌನ್‌ಲೋಡ್ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಸತ್ಯವನ್ನು ಕಂಡುಕೊಳ್ಳಲು ಯಾರು ಬೇಕಾದರೂ ರೀತಿ ಪ್ರಯತ್ನಿಸಬಹುದು. ವೆಬ್‌ಸೈಟ್ ವಿಡಿಯೋ ತಯಾರಾದ ಸಮಯವನ್ನು ಏಪ್ರಿಲ್ 22 ರಂದು 8:17 PM ಎಂದು ತೋರಿಸುತ್ತದೆ. ಆದರೆ, ‘ಟ್ಯಾಗ್‌ಗಳು’  ವೆಬ್‌ಸೈಟ್ ಸಮಯವನ್ನು‘2020-04-22T20:17:11.000000Z’ ಎಂದು ತೋರಿಸುತ್ತದೆ. ಇದರ ‘Z’ ಅಕ್ಷರವು ಜುಲು ಸಮಯವನ್ನು ಗ್ರೀನ್ವಿಚ್ ಮೀನ್ ಟೈಮ್ (ಜಿಎಂಟಿ) ಎಂದು ಸೂಚಿಸುತ್ತದೆ, ಇದನ್ನು ಈಗ ಯೂನಿವರ್ಸಲ್ ಟೈಮ್ ಕೋಆರ್ಡಿನೇಟೆಡ್ (ಯುಟಿಸಿ) ಎಂದು ಕರೆಯಲಾಗುತ್ತದೆ.

ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ (ಐಎಸ್ಟಿ) ನೊಂದಿಗೆ ಇದನ್ನು ಹೊಂದಿಸಿದಾಗ 5:30 ಗಂಟೆಗಳನ್ನು ಸೇರಿಸುವ ಅಗತ್ಯವಿದೆ, ಅಂದರೆ ಸರಿಯಾದ ಸಮಯ ರಾತ್ರಿ 1:47 ಏಪ್ರಿಲ್ 23. ಅಂದರೆ ರಿಪಬ್ಲಿಕ್ ಟಿವಿ ಟ್ವಿಟ್ಟರ್ನಲ್ಲಿ ವೀಡಿಯೊವನ್ನು ಅಪ್ಲೋಡ್ ಮಾಡಿದ ನಿಖರವಾದ ಸಮಯ ಇದು.

ಟ್ವಿಟರ್ ಬಳಕೆದಾರರಾದ ರವಿ ನಾಯರ್ ಬೇರೆಯೊಂದು ಪ್ರತಿಪಾದನೆಯನ್ನು ಮಾಡಿದ್ದರು. ಅವರು ಯೂಟ್ಯೂಬ್‌ನಲ್ಲಿ ವೀಡಿಯೊವನ್ನು ಪರಿಶೀಲಿಸಿ ಮತ್ತು ಅರ್ನಬ್ ಹೇಳಿಕೆಯನ್ನು ಏಪ್ರಿಲ್ 23 ರಂದು  21:04 UTC ಅಥವಾ ರಾತ್ರಿ 2:34 IST ನಲ್ಲಿ ಉದ್ದೇಶಿತ ದಾಳಿ ರಾತ್ರಿ 12:15 ಕ್ಕೆ ನಡೆಯುವ ಮೊದಲು ರಚಿಸಲಾಗಿದೆ ಎಂದು ಸೂಚಿಸಿದ್ದರು. ಅವರ ವಿಶ್ಲೇಷಣೆ ಅವರು metadata2go.com ನಿಂದ ಪಡೆದ ಫಲಿತಾಂಶಗಳನ್ನು ಆಧರಿಸಿದೆ.

ಆದರೆ “ಆಲ್ಟ್ ನ್ಯೂಸ್” metadata2go.com ನಲ್ಲಿ ಇದನ್ನು ಪರಿಶೀಲಿಸಿದಾಗ ಅವರಿಗೆ ವಿಭಿನ್ನ ಫಲಿತಾಂಶ ಸಿಕ್ಕಿದೆ ಎಂದು ವರದಿ ಮಾಡಿದೆ. ಅಂದರೆ ಯೂ ಟ್ಯೂಬ್ ವೀಡಿಯೊದ ಮೆಟಾಡೇಟಾವನ್ನು ಡೌನ್‌ಲೋಡ್ ಮಾಡಿ metadata2go.com ಗೆ ಅಪ್‌ಲೋಡ್ ಮಾಡುವ ಮೂಲಕ ಪರಿಶೀಲಿಸುವುದು ವಿಶ್ವಾಸಾರ್ಹ ಪ್ರಕ್ರಿಯೆಯಲ್ಲ. ಯೂಟ್ಯೂಬ್ ಮೆಟಾಡೇಟಾವನ್ನು ಪರಿಶೀಲಿಸುವ ಉತ್ತಮ ಸಾಧನವೆಂದರೆ Amnesty International’s YouTube DataViewer. ಅಮ್ನೆಸ್ಟಿ ಪ್ರಕಾರ, ವೀಡಿಯೊವನ್ನು ಏಪ್ರಿಲ್ 23 ರಂದು 21:13 ಅಥವಾ ರಾತ್ರಿ 2:43 IST ನಲ್ಲಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ.

ಟ್ವಿಟರ್‌ನಂತೆಯೇ, ಯೂಟ್ಯೂಬ್ ಕೂಡಾ ವೀಡಿಯೊದಿಂದ ಎಲ್ಲಾ ಮೆಟಾಡೇಟಾವನ್ನು ತೆಗೆದುಹಾಕುತ್ತದೆ. ಅಮ್ನೆಸ್ಟಿ ತೋರಿಸಿದ ಸಮಯ ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿದ ಸಮಯ, ಆದರೆ ವೀಡಿಯೊ ಮಾಡಿದ ನಿಜವಾದ ದಿನಾಂಕವಲ್ಲ.

ಆದ್ದರಿಂದ, ಹಲವಾರು ಕಾಂಗ್ರೆಸ್ ಸದಸ್ಯರು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್ ಮತ್ತು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಸಮಯವನ್ನು ವೀಡಿಯೊದ ನಿಜವಾದ ಮೆಟಾಡೇಟಾ (ರಚನೆಯ ದಿನಾಂಕ) ಎಂದು ತಪ್ಪಾಗಿ ಅರ್ಥೈಸಿದ್ದಾರೆ. ಇದಲ್ಲದೆ, ಮೆಟಾಡೇಟಾ ಯುಟಿಸಿಯಲ್ಲಿನ ಸಮಯವನ್ನು ಪ್ರತಿಬಿಂಬಿಸುತ್ತದೆ, ಇದು ಭಾರತೀಯ ಸಮಯವನ್ನು ಪ್ರತಿಬಿಂಬಿಸಲು ಸರಿಹೊಂದಿಸಬೇಕಾಗಿದೆ.

ಟ್ವೀಟ್‌ಗಳು

ವೀಡಿಯೊದಲ್ಲಿ ಏಪ್ರಿಲ್ 23 ರಂದು ಬೆಳಿಗ್ಗೆ 12:15 ಕ್ಕೆ ಅರ್ನಬ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ರಿಪಬ್ಲಿಕ್ ಟಿವಿಯು ದಾಳಿಯ ಬಗ್ಗೆ ಮೊದಲ ಟ್ವೀಟ್ ಅನ್ನು ರಾತ್ರಿ 1:06 ಕ್ಕೆ ಮಾಡಿದೆ. ಸಂಬಿತ್ ಪಾತ್ರ ಮತ್ತು ಅಶೋಕ್ ಪಂಡಿತ್ ಕೆಲವು ನಿಮಿಷಗಳ ಮೊದಲು ಕ್ರಮವಾಗಿ ರಾತ್ರಿ 1:05 ಮತ್ತು 12:55 ಕ್ಕೆ ಟ್ವೀಟ್ ಮಾಡಿದ್ದಾರೆ. ಇದು ರಿಪಬ್ಲಿಕ್ ಟಿವಿ ಸುದ್ದಿ ಮಾಡುವ ಮೊದಲೇ ಇವರಿಬ್ಬರಿಗೆ ದಾಳಿಯ ಬಗ್ಗೆ ತಿಳಿದಿತ್ತು ಎಂದು ಹಲವರು ನಂಬಲು ಕಾರಣವಾಯಿತು.

ಆದರೆ, ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹಾಕುವುದಕ್ಕಿಂತ ಮೊದಲೇ ಅಂದರೆ ರಾತ್ರಿ 12:45 ಕ್ಕೆ ರಿಪಬ್ಲಿಕ್ ಟಿವಿ ದಾಳಿಯ ಸುದ್ದಿಯನ್ನು ಬಹಿರಂಗಪಡಿಸಿದೆ. ನಂತರ ಘಟನೆಯ ಬಗ್ಗೆ ಟ್ವೀಟ್ ಹಾಗೂ ಯೂಟ್ಯೂಬಿನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಲಾಗಿದೆ.

ರಿಪಬ್ಲಿಕ್ ಟಿವಿಯ ಟ್ವೀಟ್ ಸಮಯವನ್ನು ಆಧರಿಸಿ ದಾಳಿ ನಡೆಯುವ ಮೊದಲೇ ಸಂಬಿತ್ ಪಾತ್ರ ಮತ್ತು ಪಂಡಿತ್ ಅವರಿಗೆ ತಿಳಿದಿದೆ ಎಂಬ ಹೇಳಿಕೆ ಸುಳ್ಳಾಗಿದೆ. ಆಪಾದಿತ ಘಟನೆಯ ಬಗ್ಗೆ ಚಾನೆಲ್ ಮೊದಲು ಟಿವಿಯಲ್ಲಿ, ನಂತರ ಸಾಮಾಜಿಕ ಮಾಧ್ಯಮದಲ್ಲಿ ವರದಿ ಮಾಡಿತ್ತು. ಆದ್ದರಿಂದ ಕಾಂಗ್ರೆಸ್ ಸದಸ್ಯರು ಹಾಗೂ ಇತರ ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರ ಮಾಡುವ ಎರಡೂ ಆರೋಪಗಳು ಸುಳ್ಳು ಎಂದು ಸಾಬೀತಾಗುತ್ತದೆ.


ಇದನ್ನೂ ಓದಿ: Fact check: ಪಾಲ್ಘರ್ ಗುಂಪು ಹತ್ಯೆಯ ಬಗ್ಗೆ ಸುಳ್ಳು ವರದಿ ಮಾಡಿದ ಪಿಟಿಐ 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...