Homeಫ್ಯಾಕ್ಟ್‌ಚೆಕ್Fact Check: 'ದಿಲ್ಲಿ ಚಲೋ'ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು...

Fact Check: ‘ದಿಲ್ಲಿ ಚಲೋ’ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

ಡಿಸೆಂಬರ್ 2020ರಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ದ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭ ಮರ್ಸಿಡಿಸ್ ಬೆಂಝ್ ಜೀಪಿನ ಮೇಲೆ ಸಿಕ್ಕ್ ಸಮುದಾಯದ ಕೆಲ ವ್ಯಕ್ತಿಗಳು ಕುಳಿತು ಪತ್ರಿಕೆ ಓದುತ್ತಿದ್ದ ಫೋಟೋ ಒಂದು ಭಾರೀ ವೈರಲ್ ಆಗಿತ್ತು.

ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ ಹಂಚಿಕೊಂಡು ‘ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಡ ರೈತರ ಜೀಪ್ ನೋಡಿ, 1.5 ಕೋಟಿ ರೂಪಾಯಿ ಬೆಲೆಯದ್ದು’ ಎಂದು ಬರೆದುಕೊಂಡಿದ್ದರು. ಈ ಮೂಲಕ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ ಎಂದು ಪ್ರತಿಪಾದಿಸಿದ್ದರು.

ಅಂದು ವೈರಲ್ ಫೋಟೋವನ್ನು ಎಕ್ಸ್ ಬಳಕೆದಾರ @nishant_india ಅವರು ಹಂಚಿಕೊಂಡಿದ್ದರು. ಇವರನ್ನು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ರಾಜಾ ರಾಮಮೋಹನ್ ರಾಯ್ ಲೈಬ್ರರಿ ಫೌಂಡೇಶನ್ ಅಧ್ಯಕ್ಷ ಕಾಂಚನ್ ಗುಪ್ತಾ (@KanchanGupta) ಅಂಕಣಕಾರ ಕಾರ್ತಿಕೇಯ ತನ್ನಾ(@KartikeyaTanna) ಕೂಡ ಫೊಟೋ ಶೇರ್ ಮಾಡಿದ್ದರು.

ಈಗ ಮತ್ತೆ ವಿವಿಧ ರಾಜ್ಯಗಳ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದಾರೆ. ಹಾಗಾಗಿ, ಅದೇ ಹಳೆಯ ಫೋಟೋ ಮತ್ತೆ ವೈರಲ್ ಆಗಿದೆ. ಈ ಬಾರಿಯೂ 1.5 ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಜೀಪ್ ರೈತರದ್ದು ಎಂದು ಹೇಳಲಾಗಿದೆ.

ಫ್ಯಾಕ್ಟ್‌ ಚೆಕ್ : ರೈತ ಹೋರಾಟದ ಸಂದರ್ಭದಲ್ಲೇ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಹಳೆಯ ಫೋಟೋದ ಬಗ್ಗೆ ಖ್ಯಾತ ಫ್ಯಾಕ್ಟ್‌ ಚೆಕ್ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ 2020ರಲ್ಲೇ ಸತ್ಯಾಸತ್ಯತೆ ಪರಿಶೀಲನೆ ನಡೆಸಿತ್ತು.

ಆಲ್ಟ್ ನ್ಯೂಸ್‌ ಪ್ರಕಾರ, ಈ ಜೀಪ್ ಪಂಜಾಬ್‌ನ ಉದ್ಯಮಿ ಮನ್‌ಪ್ರೀತ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ. ವಾಹನದ ನೋಂದಣಿ ಸಂಖ್ಯೆ PB 12Z 8282 ಎಂದಾಗಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪೋರ್ಟಲ್ ‘ವಾಹನ್‌’ನಲ್ಲಿ ಜೀಪ್‌ನ RTO ವಿವರಗಳನ್ನು ಪರಿಶೀಲಿಸಿದಾಗ, ‘ಈ ವಾಹನವು ಫೋರ್ಸ್ ಮೋಟಾರ್ಸ್‌ನ ಎಸ್‌ಯುವಿ ಗೂರ್ಖಾ ಆಗಿದೆ. ಫೋರ್ಸ್ ಗೂರ್ಖಾ ವೆಬ್‌ಸೈಟ್ ಪ್ರಕಾರ, ಕಾರಿನ ಆವೃತ್ತಿಯು 2.6/4×2 ಆಗಿದ್ದು, ಇವುಗಳು ಎರಡು ಮಾಡೆಲ್‌ಗಳನ್ನು ಹೊಂದಿವೆ. ಇದರ ಬೆಲೆ 9.75 ರಿಂದ 10 ಲಕ್ಷ ರೂ. ಆಗಿದೆ.

2017 ರಲ್ಲಿ, CNN News18 ಈ ಜೀಪ್ ಕುರಿತು ವರದಿ ಮಾಡಿದ್ದು, ‘ಕಲರ್ ಗ್ಲೋ ಕೇರಳ ಕಾರು ಮೋಡಿಫೈಯರ್’ ಎಂಬ ಸಂಸ್ಥೆ ಫೋರ್ಸ್ ಗೂರ್ಖಾ ಎಸ್‌ಯುವಿ ಕಾರನ್ನು ಥೇಟ್ ಮರ್ಸಿಡಿಸ್ ಜಿ ವ್ಯಾಗನ್‌ ಜೀಪ್ ರೀತಿ ಕಾಣುವಂತೆ ಮಾರ್ಪಡಿಸಿದೆ. ಇದರ ಮಾರ್ಪಾಡು ವೆಚ್ಚ ಆ ಸಮಯದಲ್ಲಿ 8.5 ಲಕ್ಷ ರೂ. ಎಂದು CNN News 18 ಹೇಳಿತ್ತು.

CNN News18 ಸುದ್ದಿ ಲಿಂಕ್ ಇಲ್ಲಿದೆ 

ಮಾರ್ಪಾಡು ಮಾಡಲಾದ ಕಾರಿನ ಮಾಲೀಕ ಪಂಜಾಬ್‌ನ ಆನಂದಪುರದ ನಿವಾಸಿ ಮನ್‌ಪ್ರೀತ್ ಸಿಂಗ್ ಅವರೊಂದಿಗೆ ನಾವು ಮಾತನಾಡಿದ್ದು ಅವರು, ನಾನೋರ್ವ ಉದ್ಯಮಿ. ನನ್ನ ಕುಟುಂಬ ಸದಸ್ಯರು ಕೃಷಿಕರು. ಕೃಷಿ ಕಾನೂನುಗಳ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಡಿಸೆಂಬರ್ 5 ರಂದು ನಾನು ನನ್ನ ಜೀಪ್‌ನೊಂದಿಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದೆ. ರೈತರನ್ನು ಬೆಂಬಲಿಸಲು ಎಲ್ಲಾ ವರ್ಗಗಳ ಜನರು ಗಡಿಯಲ್ಲಿದ್ದಾರೆ. ವೈರಲ್ ಆಗಿರುವ ಫೋಟೋ ಕಾರು ನನ್ನದು. ಇದು ಮರ್ಸಿಡಿಸ್ ಬೆಂಝ್-ಜಿ ವ್ಯಾಗನ್‌ನ ಪ್ರತಿರೂಪವಾಗಿದೆ. ಈ ವಿಚಾರದಲ್ಲಿ ನನಗೆ ಮುಚ್ಚಿಡಲು ಏನೂ ಇಲ್ಲ. ನಾನು ಸಾಮಾನ್ಯ ತೆರಿಗೆದಾರ. ರೈತರ ಪ್ರತಿಭಟನೆಯನ್ನು ಕುರಿತು ತಪ್ಪು ಕಲ್ಪನೆ ಮೂಡಿಸಲು ನನ್ನ ಕಾರಿನ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ತುಂಬಾ ಬೇಸರದ ಸಂಗತಿ. ನನ್ನ ಜೀಪ್‌ನ ವೈರಲ್ ಫೋಟೋ ಮುಂದಿಟ್ಟುಕೊಂಡು ನಡೆಯುತ್ತಿರುವ ಆನ್‌ಲೈನ್ ದಾಳಿಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನನ್ನ ಉತ್ಸಾಹದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು ಎಂದು ಆಲ್ಟ್ ನ್ಯೂಸ್‌ 2020ರಲ್ಲೇ ತಿಳಿಸಿತ್ತು.

ಒಟ್ಟಿನಲ್ಲಿ ಹೋರಾಟ ನಿರತ ರೈತರು ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಜೀಪ್ ಹೊಂದಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ. ಅಸಲಿಗೆ ವೈರಲ್‌ ಫೋಟೋದಲ್ಲಿರುವುದಯ ಬೆಂಝ್ ಜೀಪೇ ಅಲ್ಲ. ಅದು ಫೋರ್ಸ್ ಗೂರ್ಖಾ ಎಸ್‌ಯುವಿ ಕಾರನ್ನು ಮಾರ್ಪಡಿಸಿ ಬೆಂಝ್ ರೀತಿ ಮಾಡಿರುವುದಾಗಿದೆ. ಸುಳ್ಳು ಸುದ್ದಿ, ಫ್ಯಾಕ್ಟ್‌ ಚೆಕ್ ಇವೆಲ್ಲದರ ಹೊರತಾಗಿಯೂ ನೋಡುವುದಾದರೆ, ರೈತರು ಒಂದೂವರೆ ಕೋಟಿ ಬೆಲೆಯ ಬೆಂಝ್ ಜೀಪ್ ಹೊಂದುವುದು ಅಪರಾಧವೇನಲ್ಲ. ಲಕ್ಷಾಂತರ ರೂಪಾಯಿ ಸುರಿದು ಕೃಷಿ ಮಾಡುವ ರೈತರು ದುಬಾರಿ ಬೆಲೆಯ ಜೀಪ್ ಕೊಳ್ಳಲು ಸಾಮಾರ್ಥ್ಯ ಇಲ್ಲದವರೂ ಅಲ್ಲ. ಜೀಪ್‌ ಹೊಂದಿದವರು ಹೋರಾಟ ಮಾಡಬಾರದೆಂದೂ ಇಲ್ಲ. ಅಲ್ಲದೆ, ರೈತರೆಂದರೆ ಬಡವರು ಮಾತ್ರ ಎಂಬುವುದು ಒಂದು ತಪ್ಪು ಕಲ್ಪನೆಯಾಗಿದೆ.

ಇದನ್ನೂ ಓದಿ : Fact Check: ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಧರ್ಮದ ಕಾರಣಕ್ಕೆ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಗೆ ಹಲವು ಬಾರಿ ಇರಿತ: ಅಮೆರಿಕದ ಮಾಲ್‌ನಲ್ಲಿ ಕೃತ್ಯ

ಅಮೆರಿಕದ ಉತಾಹ್‌ನಲ್ಲಿರುವ ಶಾಪಿಂಗ್ ಮಾಲ್‌ನಲ್ಲಿ ಹೈದರಾಬಾದ್ ಮೂಲದ ಮುಸ್ಲಿಂ ವ್ಯಕ್ತಿಯೊಬ್ಬನಿಗೆ ಹಲವು ಬಾರಿ ಇರಿತದ ಆರೋಪ ಹೊರಿಸಲಾಗಿದೆ. ಹೈದರಾಬಾದ್‌ ನಗರದ ಟೋಲಿಚೌಕಿಯ ನಿವಾಸಿ ಸೈಯದ್ ಸೊಹೈಲ್ ಉದ್ದೀನ್, ಉತಾಹ್‌ನ ಸಾಲ್ಟ್ ಲೇಕ್ ಕೌಂಟಿಯ...

47 ವರ್ಷಗಳ ನಂತರ ಸಾಮೂಹಿಕ ಅತ್ಯಾಚಾರ ಪ್ರಕರಣದ ಶಿಕ್ಷೆ ಎತ್ತಿಹಿಡಿದ ಅಲಹಾಬಾದ್ ಹೈಕೋರ್ಟ್

1979 ರಲ್ಲಿ ನಡೆದಿದ್ದ ಅಪ್ರಾಪ್ತೆ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ 71 ವರ್ಷದ ವ್ಯಕ್ತಿಯ ಶಿಕ್ಷೆಯನ್ನು ಅಲಹಾಬಾದ್ ಹೈಕೋರ್ಟ್ ಎತ್ತಿಹಿಡಿದಿದೆ. ಆದರೆ, ಕ್ರಿಮಿನಲ್ ಮೇಲ್ಮನವಿಯ 43 ವರ್ಷಗಳ ಸುದೀರ್ಘ ವಿಚಾರಣೆ ಮತ್ತು ಆತನ...

ಪಶ್ಚಿಮ ಬಂಗಾಳ: ಮುರ್ಷಿದಾಬಾದ್‌ನಲ್ಲಿ ಶಾಲಾ ವ್ಯಾನ್‌ಗೆ ರೈಲು ಡಿಕ್ಕಿ: ಇಬ್ಬರು ವಿದ್ಯಾರ್ಥಿಗಳು ಸೇರಿ 3 ಮಂದಿ ಸಾವು

ಮುರ್ಷಿದಾಬಾದ್: ದೇಶದಲ್ಲಿ ರೈಲ್ವೆ ಸುರಕ್ಷತೆಯ ಕುರಿತು ಸರ್ಕಾರಗಳು ದೊಡ್ಡ ದೊಡ್ಡ ಭರವಸೆ ಹಾಗೂ ಯೋಜನೆಗಳನ್ನು ಮಂಡಿಸುತ್ತಿದ್ದರೂ, ತಳಮಟ್ಟದ ವಾಸ್ತವ ಮಾತ್ರ ಇಂದಿಗೂ ಅತ್ಯಂತ ಭೀಕರವಾಗಿದೆ ಎಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಈ ಘೋರ...

ವಿಜಯ್ ನೇತೃತ್ವದ ಟಿವಿಕೆ ಸರ್ಕಾರವನ್ನು ಅಸ್ಥಿರಗೊಳಿಸಲು ‘ಪ್ರಾಜೆಕ್ಟ್ ಮೇಘಾಲಯ’ ಸಂಚು ಆರೋಪ : ಪತ್ರಕರ್ತನ ವಿಚಾರಣೆ

ತಮಿಳುನಾಡಿನ ಆಡಳಿತಾರೂಢ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಶಾಸಕ ಎನ್. ಇಲೈಯರಾಜ ಅವರಿಗೆ ಹಣದ ಆಮಿಷವೊಡ್ಡಲು ಯತ್ನಿಸಿದ ಆರೋಪ ಪ್ರಕರಣ ಸಂಬಂಧ ಚೆನ್ನೈ ಪೊಲೀಸರು 'ಪುದಿಯಾ ತಲೈಮುರೈ' ವಾಹಿನಿಯ ಪತ್ರಕರ್ತ ವಿಜಯನ್...

ಜಂತರ್ ಮಂತರ್ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಕೇಜ್ರಿವಾಲ್ ಭೇಟಿ

ದೇಶಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ (NEET) ಪರೀಕ್ಷಾ ಅಕ್ರಮ ಹಾಗೂ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಂತರ್ ಮಂತರ್‌ನಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಖ್ಯಾತ ಶಿಕ್ಷಣ ತಜ್ಞ ಹಾಗೂ ಪರಿಸರ...

E20 ಪೆಟ್ರೋಲ್ ಪ್ರಕರಣ : ‘ಗ್ರ್ಯಾಂಡ್ ವಿಟಾರಾ’ ಕಾರು ಬದಲಾಯಿಸಿ ಕೊಡಲು ಮಾರುತಿ ಸುಝುಕಿಗೆ ಗ್ರಾಹಕ ನ್ಯಾಯಾಲಯ ಆದೇಶ

ಛತ್ತೀಸ್‌ಗಢದ ರಾಯ್‌ಪುರದ ಜಿಲ್ಲಾ ಗ್ರಾಹಕ ವಿವಾದಗಳ ಪರಿಹಾರ ಆಯೋಗವು (ಡಿಸಿಡಿಆರ್‌ಸಿ), E20 ಇಂಧನ (ಪೆಟ್ರೋಲ್) ಬಳಕೆಯಿಂದಾಗಿ ಕಾರು ಕೆಟ್ಟುಹೋಗಿದೆ ಎಂದು ಆರೋಪಿಸಿದ ವ್ಯಕ್ತಿಗೆ ಹೊಸ 'ಗ್ರಾಂಡ್ ವಿಟಾರಾ' ಕಾರನ್ನು ನೀಡುವಂತೆ ಕಾರು ತಯಾರಿಕಾ...

ಸಿಜೆಪಿ ಶಾಂತಿಯುತ ಪ್ರತಿಭಟನೆಗೆ ನಿರಂತರ ಪೊಲೀಸ್ ಕಣ್ಗಾವಲು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ

ರಾಷ್ಟ್ರ ರಾಜಧಾನಿ ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಜನತಾ ಪಕ್ಷ (ಸಿಜೆಪಿ) ಆಯೋಜಿಸಿರುವ ಶಾಂತಿಯುತ ಧರಣಿ ಮತ್ತು ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸುವ ನಾಗರಿಕರ ಮೇಲೆ ದೆಹಲಿ ಪೊಲೀಸರು ನಿರಂತರ ಮತ್ತು ವ್ಯಾಪಕ ಕಣ್ಗಾವಲು...

IAS ಆಗುವ ಮುನ್ನ ‘ಪರಿಪೂರ್ಣ ತಾಯಿ’ಯಾಗಿ ಎಂದ ರಾಜ್ಯಪಾಲರ ಸಲಹೆ ಪುರುಷ ಪ್ರಾಧ್ಯಾನ್ಯತೆಯ ಮುಂದುವರೆದ ಆಚರಣೆ ಅಲ್ಲವೆ?

ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿಬೆನ್ ಪಟೇಲ್ ಅವರು, "ಮಹಿಳೆಯರು IAS ಅಧಿಕಾರಿ ಅಥವಾ ಶಿಕ್ಷಕಿಯಾಗುವ ಕನಸು ಕಾಣುವ ಮೊದಲು 'ಪರಿಣಿತ ತಾಯಿ' ಆಗುವುದನ್ನು ಕಲಿಯಬೇಕು ಎಂದು ಸಲಹೆ ನೀಡಿದ್ದರು. ಕಾನ್ಪುರದ ಛತ್ರಪತಿ...

ಹಿಂದಿನ ಮದುವೆ, ಮಗು ವಿಚಾರ ಮುಚ್ಚಿಟ್ಟಿದ್ದಕ್ಕೆ ಸಹೋದರನೊಂದಿಗಿನ ಸಂಬಂಧ ಮುರಿದುಕೊಂಡಿದ್ದ ಕಾನೂನು ವಿದ್ಯಾರ್ಥಿನಿಯನ್ನು ಇರಿದು ಕೊಂದ ತಮ್ಮ

ಬೆಂಗಳೂರು: ಮೊದಲ ಮದುವೆ ಹಾಗೂ ಮಗುವಿದ್ದ ವಿಷಯವನ್ನು ಮುಚ್ಚಿಟ್ಟು ವಂಚಿಸಿದ್ದ ಪ್ರಿಯಕರನೊಂದಿಗಿನ ಸಂಬಂಧವನ್ನು ಮುರಿದುಕೊಂಡ ಕಾರಣಕ್ಕೆ, ಆತನ ಸಹೋದರನಿಂದಲೇ ಚಾಕು ಇರಿತಕ್ಕೊಳಗಾಗಿದ್ದ ಕಾನೂನು ವಿದ್ಯಾರ್ಥಿನಿಯೊಬ್ಬಳು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ...

ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ಅಮೆರಿಕ ದಾಳಿಗೆ ಇರಾನ್‌ನಿಂದ ಪ್ರತೀಕಾರ

ಕಳೆದ ಗುರುವಾರ (ಜು.16) ಖುಜೆಸ್ತಾನ್ ಪ್ರಾಂತ್ಯದಲ್ಲಿರುವ ಮಕ್ಕಳ ಕ್ಯಾನ್ಸರ್ ಆಸ್ಪತ್ರೆಯ ಮೇಲೆ ನಡೆದ ದಾಳಿಗೆ ಪ್ರತೀಕಾರವಾಗಿ, ಕುವೈತ್ ಮತ್ತು ಬಹ್ರೇನ್ ಸೇರಿದಂತೆ ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ...