Homeಫ್ಯಾಕ್ಟ್‌ಚೆಕ್Fact Check: 'ದಿಲ್ಲಿ ಚಲೋ'ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು...

Fact Check: ‘ದಿಲ್ಲಿ ಚಲೋ’ಗೆ ರೈತರು ಒಂದೂವರೆ ಕೋಟಿ ರೂ. ಬೆಲೆಯ ಜೀಪ್‌ನಲ್ಲಿ ಬಂದಿದ್ದಾರೆ ಎಂಬುವುದು ಸುಳ್ಳು

- Advertisement -
- Advertisement -

ಡಿಸೆಂಬರ್ 2020ರಲ್ಲಿ ಕೇಂದ್ರದ ಕೃಷಿ ಕಾನೂನುಗಳ ವಿರುದ್ದ ರೈತರು ಹೋರಾಟ ನಡೆಸುತ್ತಿದ್ದ ಸಂದರ್ಭ ಮರ್ಸಿಡಿಸ್ ಬೆಂಝ್ ಜೀಪಿನ ಮೇಲೆ ಸಿಕ್ಕ್ ಸಮುದಾಯದ ಕೆಲ ವ್ಯಕ್ತಿಗಳು ಕುಳಿತು ಪತ್ರಿಕೆ ಓದುತ್ತಿದ್ದ ಫೋಟೋ ಒಂದು ಭಾರೀ ವೈರಲ್ ಆಗಿತ್ತು.

ಹಲವರು ಸಾಮಾಜಿಕ ಜಾಲತಾಣಗಳಲ್ಲಿ ಆ ಫೋಟೋ ಹಂಚಿಕೊಂಡು ‘ದೆಹಲಿಯ ಸಿಂಘು ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ಬಡ ರೈತರ ಜೀಪ್ ನೋಡಿ, 1.5 ಕೋಟಿ ರೂಪಾಯಿ ಬೆಲೆಯದ್ದು’ ಎಂದು ಬರೆದುಕೊಂಡಿದ್ದರು. ಈ ಮೂಲಕ ದೆಹಲಿ ಗಡಿಯಲ್ಲಿ ಹೋರಾಟ ನಡೆಸುತ್ತಿರುವವರು ರೈತರೇ ಅಲ್ಲ ಎಂದು ಪ್ರತಿಪಾದಿಸಿದ್ದರು.

ಅಂದು ವೈರಲ್ ಫೋಟೋವನ್ನು ಎಕ್ಸ್ ಬಳಕೆದಾರ @nishant_india ಅವರು ಹಂಚಿಕೊಂಡಿದ್ದರು. ಇವರನ್ನು ಪ್ರಧಾನಿ ನರೇಂದ್ರ ಮೋದಿ ಎಕ್ಸ್‌ನಲ್ಲಿ ಫಾಲೋ ಮಾಡುತ್ತಿದ್ದಾರೆ. ರಾಜಾ ರಾಮಮೋಹನ್ ರಾಯ್ ಲೈಬ್ರರಿ ಫೌಂಡೇಶನ್ ಅಧ್ಯಕ್ಷ ಕಾಂಚನ್ ಗುಪ್ತಾ (@KanchanGupta) ಅಂಕಣಕಾರ ಕಾರ್ತಿಕೇಯ ತನ್ನಾ(@KartikeyaTanna) ಕೂಡ ಫೊಟೋ ಶೇರ್ ಮಾಡಿದ್ದರು.

ಈಗ ಮತ್ತೆ ವಿವಿಧ ರಾಜ್ಯಗಳ ರೈತರು ತಮ್ಮ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ದಿಲ್ಲಿ ಚಲೋ’ ಹಮ್ಮಿಕೊಂಡಿದ್ದಾರೆ. ಹಾಗಾಗಿ, ಅದೇ ಹಳೆಯ ಫೋಟೋ ಮತ್ತೆ ವೈರಲ್ ಆಗಿದೆ. ಈ ಬಾರಿಯೂ 1.5 ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಜೀಪ್ ರೈತರದ್ದು ಎಂದು ಹೇಳಲಾಗಿದೆ.

ಫ್ಯಾಕ್ಟ್‌ ಚೆಕ್ : ರೈತ ಹೋರಾಟದ ಸಂದರ್ಭದಲ್ಲೇ ಮತ್ತೊಮ್ಮೆ ಮುನ್ನೆಲೆಗೆ ಬಂದಿರುವ ಹಳೆಯ ಫೋಟೋದ ಬಗ್ಗೆ ಖ್ಯಾತ ಫ್ಯಾಕ್ಟ್‌ ಚೆಕ್ ವೆಬ್‌ಸೈಟ್‌ ಆಲ್ಟ್‌ ನ್ಯೂಸ್‌ 2020ರಲ್ಲೇ ಸತ್ಯಾಸತ್ಯತೆ ಪರಿಶೀಲನೆ ನಡೆಸಿತ್ತು.

ಆಲ್ಟ್ ನ್ಯೂಸ್‌ ಪ್ರಕಾರ, ಈ ಜೀಪ್ ಪಂಜಾಬ್‌ನ ಉದ್ಯಮಿ ಮನ್‌ಪ್ರೀತ್ ಸಿಂಗ್ ಎಂಬವರಿಗೆ ಸೇರಿದ್ದಾಗಿದೆ. ವಾಹನದ ನೋಂದಣಿ ಸಂಖ್ಯೆ PB 12Z 8282 ಎಂದಾಗಿದ್ದು, ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪೋರ್ಟಲ್ ‘ವಾಹನ್‌’ನಲ್ಲಿ ಜೀಪ್‌ನ RTO ವಿವರಗಳನ್ನು ಪರಿಶೀಲಿಸಿದಾಗ, ‘ಈ ವಾಹನವು ಫೋರ್ಸ್ ಮೋಟಾರ್ಸ್‌ನ ಎಸ್‌ಯುವಿ ಗೂರ್ಖಾ ಆಗಿದೆ. ಫೋರ್ಸ್ ಗೂರ್ಖಾ ವೆಬ್‌ಸೈಟ್ ಪ್ರಕಾರ, ಕಾರಿನ ಆವೃತ್ತಿಯು 2.6/4×2 ಆಗಿದ್ದು, ಇವುಗಳು ಎರಡು ಮಾಡೆಲ್‌ಗಳನ್ನು ಹೊಂದಿವೆ. ಇದರ ಬೆಲೆ 9.75 ರಿಂದ 10 ಲಕ್ಷ ರೂ. ಆಗಿದೆ.

2017 ರಲ್ಲಿ, CNN News18 ಈ ಜೀಪ್ ಕುರಿತು ವರದಿ ಮಾಡಿದ್ದು, ‘ಕಲರ್ ಗ್ಲೋ ಕೇರಳ ಕಾರು ಮೋಡಿಫೈಯರ್’ ಎಂಬ ಸಂಸ್ಥೆ ಫೋರ್ಸ್ ಗೂರ್ಖಾ ಎಸ್‌ಯುವಿ ಕಾರನ್ನು ಥೇಟ್ ಮರ್ಸಿಡಿಸ್ ಜಿ ವ್ಯಾಗನ್‌ ಜೀಪ್ ರೀತಿ ಕಾಣುವಂತೆ ಮಾರ್ಪಡಿಸಿದೆ. ಇದರ ಮಾರ್ಪಾಡು ವೆಚ್ಚ ಆ ಸಮಯದಲ್ಲಿ 8.5 ಲಕ್ಷ ರೂ. ಎಂದು CNN News 18 ಹೇಳಿತ್ತು.

CNN News18 ಸುದ್ದಿ ಲಿಂಕ್ ಇಲ್ಲಿದೆ 

ಮಾರ್ಪಾಡು ಮಾಡಲಾದ ಕಾರಿನ ಮಾಲೀಕ ಪಂಜಾಬ್‌ನ ಆನಂದಪುರದ ನಿವಾಸಿ ಮನ್‌ಪ್ರೀತ್ ಸಿಂಗ್ ಅವರೊಂದಿಗೆ ನಾವು ಮಾತನಾಡಿದ್ದು ಅವರು, ನಾನೋರ್ವ ಉದ್ಯಮಿ. ನನ್ನ ಕುಟುಂಬ ಸದಸ್ಯರು ಕೃಷಿಕರು. ಕೃಷಿ ಕಾನೂನುಗಳ ವಿರುದ್ದ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಡಿಸೆಂಬರ್ 5 ರಂದು ನಾನು ನನ್ನ ಜೀಪ್‌ನೊಂದಿಗೆ ಹೋರಾಟದ ಸ್ಥಳಕ್ಕೆ ಭೇಟಿ ನೀಡಿದ್ದೆ. ರೈತರನ್ನು ಬೆಂಬಲಿಸಲು ಎಲ್ಲಾ ವರ್ಗಗಳ ಜನರು ಗಡಿಯಲ್ಲಿದ್ದಾರೆ. ವೈರಲ್ ಆಗಿರುವ ಫೋಟೋ ಕಾರು ನನ್ನದು. ಇದು ಮರ್ಸಿಡಿಸ್ ಬೆಂಝ್-ಜಿ ವ್ಯಾಗನ್‌ನ ಪ್ರತಿರೂಪವಾಗಿದೆ. ಈ ವಿಚಾರದಲ್ಲಿ ನನಗೆ ಮುಚ್ಚಿಡಲು ಏನೂ ಇಲ್ಲ. ನಾನು ಸಾಮಾನ್ಯ ತೆರಿಗೆದಾರ. ರೈತರ ಪ್ರತಿಭಟನೆಯನ್ನು ಕುರಿತು ತಪ್ಪು ಕಲ್ಪನೆ ಮೂಡಿಸಲು ನನ್ನ ಕಾರಿನ ಫೋಟೋವನ್ನು ಬಳಸಿಕೊಳ್ಳಲಾಗಿದೆ. ಇದು ತುಂಬಾ ಬೇಸರದ ಸಂಗತಿ. ನನ್ನ ಜೀಪ್‌ನ ವೈರಲ್ ಫೋಟೋ ಮುಂದಿಟ್ಟುಕೊಂಡು ನಡೆಯುತ್ತಿರುವ ಆನ್‌ಲೈನ್ ದಾಳಿಗಳು ರೈತರ ಪ್ರತಿಭಟನೆಯನ್ನು ಬೆಂಬಲಿಸುವ ನನ್ನ ಉತ್ಸಾಹದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದರು ಎಂದು ಆಲ್ಟ್ ನ್ಯೂಸ್‌ 2020ರಲ್ಲೇ ತಿಳಿಸಿತ್ತು.

ಒಟ್ಟಿನಲ್ಲಿ ಹೋರಾಟ ನಿರತ ರೈತರು ಕೋಟಿ ಬೆಲೆಯ ಮರ್ಸಿಡಿಸ್ ಬೆಂಝ್ ಜೀಪ್ ಹೊಂದಿದ್ದಾರೆ ಎಂಬುವುದು ಸುಳ್ಳು ಪ್ರತಿಪಾದನೆಯಾಗಿದೆ. ಅಸಲಿಗೆ ವೈರಲ್‌ ಫೋಟೋದಲ್ಲಿರುವುದಯ ಬೆಂಝ್ ಜೀಪೇ ಅಲ್ಲ. ಅದು ಫೋರ್ಸ್ ಗೂರ್ಖಾ ಎಸ್‌ಯುವಿ ಕಾರನ್ನು ಮಾರ್ಪಡಿಸಿ ಬೆಂಝ್ ರೀತಿ ಮಾಡಿರುವುದಾಗಿದೆ. ಸುಳ್ಳು ಸುದ್ದಿ, ಫ್ಯಾಕ್ಟ್‌ ಚೆಕ್ ಇವೆಲ್ಲದರ ಹೊರತಾಗಿಯೂ ನೋಡುವುದಾದರೆ, ರೈತರು ಒಂದೂವರೆ ಕೋಟಿ ಬೆಲೆಯ ಬೆಂಝ್ ಜೀಪ್ ಹೊಂದುವುದು ಅಪರಾಧವೇನಲ್ಲ. ಲಕ್ಷಾಂತರ ರೂಪಾಯಿ ಸುರಿದು ಕೃಷಿ ಮಾಡುವ ರೈತರು ದುಬಾರಿ ಬೆಲೆಯ ಜೀಪ್ ಕೊಳ್ಳಲು ಸಾಮಾರ್ಥ್ಯ ಇಲ್ಲದವರೂ ಅಲ್ಲ. ಜೀಪ್‌ ಹೊಂದಿದವರು ಹೋರಾಟ ಮಾಡಬಾರದೆಂದೂ ಇಲ್ಲ. ಅಲ್ಲದೆ, ರೈತರೆಂದರೆ ಬಡವರು ಮಾತ್ರ ಎಂಬುವುದು ಒಂದು ತಪ್ಪು ಕಲ್ಪನೆಯಾಗಿದೆ.

ಇದನ್ನೂ ಓದಿ : Fact Check: ರಾಹುಲ್ ಗಾಂಧಿ ರಹಸ್ಯವಾಗಿ ಮದುವೆಯಾಗಿದ್ದಾರೆ ಎಂಬುದು ಸುಳ್ಳು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತುಮಕೂರಿನಲ್ಲಿ ಮಲಹೊರುವ ಪದ್ದತಿ ಜೀವಂತ; ದಲಿತ ಕಾರ್ಮಿಕರನ್ನು ಶೌಚಗುಂಡಿ ಸ್ವಚ್ಛತೆಗೆ ನಿಯೋಜಿಸಿದ ಕೆಇಬಿ ಇಂಜಿನಿಯರ್ಸ್ ಸಂಘ

ದಶಕಗಳ ಹಿಂದೆಯೇ ತಲೆ ಮೇಲೆ ಮಲಹೊರುವ ಅನಿಷ್ಠ ಪದ್ಧತಿಯನ್ನು ದೇಶದಲ್ಲಿ ನಿಷೇಧಿಸಲಾಗಿದೆ. ಕಾನೂನಿನ ಪ್ರಕಾರ ಈ ಅಮಾನವೀಯ ಪದ್ಧತಿ ನಿಷೇದಗೊಂಡಿದ್ದರು ರಾಜ್ಯದಲ್ಲಿ ಮಾತ್ರ ಇನ್ನೂ ಜೀವಂತವಾಗಿರುವುದು ತುಮಕೂರಿನಲ್ಲಿ ಮತ್ತೊಮ್ಮೆ ಬಹಿರಂಗವಾಗಿದೆ. ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್...

ವರ್ಷ ಪೂರೈಸಿದ ಎಸ್‌ಐಆರ್‌ ಪ್ರಕ್ರಿಯೆ; ಸುಮಾರು 6 ಕೋಟಿ ಹೆಸರುಗಳು ಡಿಲೀಟ್

ಸುಮಾರು ಆರು ಕೋಟಿ ಮತದಾರರನ್ನು ಅಳಿಸಲು ಕಾರಣವಾದ, ವಿರೋಧ ಪಕ್ಷಗಳು ಮತ್ತು ಚುನಾವಣಾ ಆಯೋಗದ ನಡುವೆ ಘರ್ಷಣೆಗೆ ಕಾರಣವಾದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯು 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ...

ರಾಮ ಮಂದಿರ ಹಗರಣ | ಶಿವಸೇನೆ ಕೊಟ್ಟ 1 ಕೋಟಿ ರೂ.ಗೆ ರಸೀದಿ ಸಿಕ್ಕಿಲ್ಲ : ಸಂಜಯ್ ರಾವತ್

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ನೀಡಿದ 1 ಕೋಟಿ ರೂಪಾಯಿ ದೇಣಿಗೆಗೆ ತಮ್ಮ ಪಕ್ಷ ಶಿವಸೇನೆ (ಯುಬಿಟಿ) ರಸೀದಿಯನ್ನು ಸ್ವೀಕರಿಸಿಲ್ಲ ಎಂದು ಸಂಜಯ್ ರಾವತ್ ಶುಕ್ರವಾರ (ಜೂ.26) ಹೇಳಿದ್ದಾರೆ. ರಾಮ ಮಂದಿರದ ದೇಣಿಗೆ...

ರಾಮ ಮಂದಿರ ಹಗರಣ: ಶ್ರೀರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಅನಿಲ್ ಮಿಶ್ರಾ ರಾಜೀನಾಮೆ

ಶ್ರೀ ರಾಮ ಜನ್ಮಭೂಮಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್, ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನೈತಿಕ ಹೊಣೆ ಹೊತ್ತು, ಸದಸ್ಯ ಟ್ರಸ್ಟಿ ಅನಿಲ್ ಮಿಶ್ರಾ ಅವರೊಂದಿಗೆ ಶುಕ್ರವಾರ ರಾಜೀನಾಮೆ...

‘ಕೂಡಿ ಹಾಕಿ ಥಳಿಸುತ್ತಿದ್ದರು, ತಪ್ಪಿಸಿಕೊಳ್ಳದಂತೆ ನಾಯಿ ಬಿಟ್ಟಿದ್ದರು’: ಭೀಕರ ಶೋಷಣೆಯಿಂದ 12 ಜೀತ ಕಾರ್ಮಿಕರ ರಕ್ಷಣೆ

ಮೂರು ತಿಂಗಳ ಕಾಲ 68 ವರ್ಷದ ಮೆಹರ್ಬಾನ್ ಶಾ ಅನಿಶ್ಚಿತತೆಯಲ್ಲಿ ಜೀವನ ನಡೆಸುತ್ತಿದ್ದರು. ದುಡಿಯಲು ಹೋಗಿದ್ದ ಅವರ ಕಿರಿಯ ಮಗ ದಿಲ್ಶಾದ್ ಮೊಹಮ್ಮದ್ ಜೀವಂತವಾಗಿದ್ದಾನಾ?, ಇಲ್ಲಾ ಮರಣ ಹೊಂದಿದ್ದಾನಾ? ಎಂಬುವುದು ಅವರಿಗೆ ಗೊತ್ತಿರಲಿಲ್ಲ. 24...

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...