ಕಳೆದ 50ದಿನಗಳಿಂದ ನಡೆಯುತ್ತಿರುವ ಹೋರಾಟವನ್ನು ವಿವಿಧ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನವನ್ನು ಸರ್ಕಾರ ಹಾಗೂ ಮಾಧ್ಯಮಗಳನ್ನು ಮಾಡುತ್ತಲೇ ಬಂದಿವೆ. ಇದೇ ಕಾರಣಕ್ಕೆ ಹೋರಾಟ ನಿರತ ರೈತರು ಕೆಲವು ಮಾಧ್ಯಮ ಸಂಸ್ಥೆಗಳನ್ನು, ಗೋದಿ ಮೀಡಿಯಾ ಎಂದು ಟೀಕಿಸಿ ಅವುಗಳಿಗೆ ಪ್ರತಿಕ್ರಿಯಿಸುವುದನ್ನು ನಿರಾಕರಿಸಿದ್ದವು. ಇಷ್ಟುದಿನ ರಿಪಬ್ಲಿಕ್ ನ್ಯೂಸ್ ವಿರುದ್ಧ ಕಿಡಿಕಾರಿದ್ದ ರೈತರು ಈಗ ಝೀ ನ್ಯೂಸ್ ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ಝೀ ನ್ಯೂಸ್, ‘ರೈತ ಹೋರಾಟ; ಖಾಲಿಸ್ತಾನದ ಯೋಜನೆ’ ಎಂಬ ಕಾರ್ಯಕ್ರಮವೊಂದನ್ನು ಪ್ರಸಾರ ಮಾಡುವ ಮೂಲಕ ತೀವ್ರವಾದ ಟೀಕೆಗೆ ಗುರಿಯಾಗಿದೆ. ಕಿಸಾನ್ ಏಕ್ತಾ ಮೋರ್ಚಾದ ಅಧಿಕೃತ ಟ್ವಿಟರ್ ಹ್ಯಾಂಡಲ್ನಲ್ಲಿ ಭ್ರಷ್ಟ ಹಾಗೂ ವಿಷಯ ಹರಡುವ ಪತ್ರಿಕೋದ್ಯಮದಿಂದ ಎಚ್ಚರವಾಗಿರಿ, ಗೋದಿ ಮೀಡಿಯಾದ ಪಕ್ಷಪಾತ ಎಲ್ಲರಿಗೂ ತಿಳಿದಿರುವುದೇ ಎಂದು ಪ್ರತಿಕ್ರಿಯಿಸಿದೆ.
तिहाड़ से छूटे दलाल फ़ैसला करेंगे कि किसान क्या करें?
सूत्रों के हवाले से बदनाम करने वाली ख़बरों से ख़बरदार । दलाल पर भरोसा न करें।@sudhirchaudhary @ZeeNews#FarmersProtest #KisanEktaMarch https://t.co/bukVDXrVKD
— Kisan Ekta March (@KisanEktaMarch) January 15, 2021
ಝೀ ನ್ಯೂಸ್ ನ ಸಂಸ್ಥಾಪಕ ಸುಭಾಷ್ ಚಂದ್ರ ರಾಜ್ಯಸಭೆ ಸದಸ್ಯರಾದಾಗ ಯೆಸ್ಬ್ಯಾಂಕ್ ಬಗ್ಗೆ ಏನು ಹೇಳಿದರು ಎಂದು ರೈತರು ಪ್ರಶ್ನಿಸಿದ್ದಾರೆ.
ಝೀ ನ್ಯೂಸ್ ನಲ್ಲಿ ಬಿತ್ತರವಾದ ವಿಶೇಷ ಕಾರ್ಯಕ್ರಮ ಮತ್ತು ಅದರ ಸಹೋದರ ಸಂಸ್ಥೆಯಾದ ಡಿಎನ್ಎ ಪತ್ರಿಕೆಯಲ್ಲಿ ವಿಶ್ಲೇಷಣೆಗಳೆರಡು ಹೋರಾಟವನ್ನು ತಪ್ಪಾಗಿ ವ್ಯಾಖ್ಯಾನಿಸುವ ಪ್ರಯತ್ನ ಎಂದು ರೈತ ನಾಯಕರು ಝೀ ನ್ಯೂಸ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
यह सवालिया निशान (?) लगाकर, सूत्रों के हवाला देकर ज़हर फैलाने वाली पत्रकारिता से सावधान रहें।
गोदी मीडिया की भांडगीरी सब जानतें है। @ZeeNews अपने फ़ाऊंडर सुभाष चन्द्रा के राज्यसभा MP बनने पर बोले, Yes Bank के 8,400 करोड़ कैसे NPA करें बताए, ED ने Yes Bank स्कैम में कैसे छोड़ा। https://t.co/kxR9vHn6vy
— Kisan Ekta March (@KisanEktaMarch) January 15, 2021
ಈ ಹಿಂದೆ ರೈತರು ಗೋದಿ ಮೀಡಿಯಾಗಳನ್ನು ನಾಯಿಗಳೆಂದು ಕರೆದು ಹರಾಜಿಗಿಟ್ಟಿದ್ದರು. ಅದರಲ್ಲಿ ರಿಪಬ್ಲಿಕ್ ನಾಯಿಗೆ ಹೆಚ್ಚಿನ ಬೆಲೆಯಿಂದೆ ವ್ಯಂಗ್ಯವಾಡಿದ್ದರು.
ಇದನ್ನು ಓದಿ: ಹೋರಾಟವನ್ನು ಬೆಚ್ಚಗಿರಿಸುತ್ತಿರುವ ‘ಟ್ರ್ಯಾಲಿ’ ಎಂಬ ರೈತರ ಬದುಕಿನ ಬಂಡಿ!