Homeಮುಖಪುಟರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ 'ಗೋ ಗ್ರೀನ್' ಅಭಿಯಾನ: ಎಲ್ಲೆಡೆ ಹಸಿರು ಸಂಭ್ರಮ

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳಿಂದ ‘ಗೋ ಗ್ರೀನ್’ ಅಭಿಯಾನ: ಎಲ್ಲೆಡೆ ಹಸಿರು ಸಂಭ್ರಮ

- Advertisement -
- Advertisement -

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬ ಐವತ್ತು ದಿನಗಳಿರುವಾಗಲೇ, ಹಸಿರು ಕರೆ ನೀಡಲಾಗಿದೆ. ಅಭಿಮಾನಿಗಳು ನೀಡಿರುವ ಹಸಿರು ಕರೆಗೆ ಅದ್ಭುತ ಸ್ಪಂದನೆ ಸಿಕ್ಕಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಗೋ ಗ್ರೀನ್ ಗೆ ಹಸಿರು ನಿಶಾನೆ ತೋರಿಸಿದರು. ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡಿನಲ್ಲೂ ಯಶ್ ಹಸಿರು ಕ್ರಾಂತಿ ಆಗುತ್ತಿದೆ. ದೇಶದ ಗಡಿದಾಟಿ ಬಾಂಗ್ಲಾದೇಶದವರೆಗೂ ಯಶ್ ಬಾಸ್ ಬರ್ತ್ ಡೇಯ 50 ದಿನಗಳ ಹಸಿರು ಸಂಭ್ರಮ ಮನೆ ಮಾಡಿದೆ.

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಇನ್ನೂ ಐವತ್ತು ದಿನಗಳು ಬಾಕಿಯಿದೆ. ಪರಿಸರ ಸ್ನೇಹಿ ಹುಟ್ಟು ಹಬ್ಬ ಆಚರಣೆಗೆ ಅಭಿಮಾನಿಗಳು ಮುಂದಾಗಿದ್ದಾರೆ. ತೆರೆಯ ಮುಂದೆ ಮಾತ್ರವಲ್ಲ, ತೆರೆಯ ಹಿಂದೆಯೂ ಯಶ್ ಹೀರೋ. ಯಶೋಮಾರ್ಗದ ಮೂಲಕ ಯಶ್ ವಿವಿಧ ಬಗೆಯ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದಾರೆ.

ಉತ್ತರ ಕರ್ನಾಟಕದ ಕೆರೆ ಜೀರ್ಣೋದ್ಧಾರದಿಂದ ಹಿಡಿದು ಬೇಸಗೆ ಕಾಲದಲ್ಲಿ ಹತ್ತಾರು ಹಳ್ಳಿಗಳಿಗೆ ಟ್ಯಾಂಕರ್ ಮೂಲಕ ನೀರು ಒದಗಿಸಿದ್ದು, ನೆರೆಯ ಸಮಯದಲ್ಲೂ ಸಂತ್ರಸ್ತರ ಜತೆಗೆ ನಿಂತಿದ್ದರು. ಈಗ ಜನವರಿ 8ನೇ ತಾರೀಖು ಬರುವುದರೊಳಗೆ ದೇಶವ್ಯಾಪಿ #GoGreenYashFans ಟ್ಯಾಗ್ ಲೈನ್ ಮೂಲಕ ಗಿಡ ನೆಡಲು ಆರಂಭಿಸಿದ್ದಾರೆ.

ದೇಶದಾದ್ಯಂತ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಅಭಿಯಾನದಲ್ಲಿ ಭಾಗಿಯಾಗಿದ್ದಾರೆ. ಅಭಿಯಾನಕ್ಕೆ ಜನಸಾಮಾನ್ಯರ ಸ್ಪಂದನೆ ಮತ್ತು ಬೆಂಬಲ ಸಿಗುತ್ತಿದೆ. ಅಭಿಯಾನ ಆಯೋಜಿಸಿರುವ ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳ ಸಂಘ, ಇವತ್ತು ಅಭಿಯಾನಕ್ಕೆ ಸಿಕ್ಕಿರೋ ಭವ್ಯ ಸ್ಪಂದನೆಗೆ ಧನ್ಯವಾದ ಹೇಳುವ ಒಂದು ವಿಡಿಯೋವನ್ನು ತಮ್ಮ ಪೇಜ್ ನಲ್ಲಿ ಅಪ್ಲೋಡ್ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಬಾಂಬ್ ಸ್ಫೋಟ: ಬಾಲಕ ಮೃತ್ಯು, ಇಬ್ಬರಿಗೆ ಗಂಭೀರ ಗಾಯ

0
ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ಕಚ್ಚಾ ಬಾಂಬ್ ಸ್ಫೋಟ ಸಂಭವಿಸಿ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದು, ಇತರ ಇಬ್ಬರು ಅಪ್ರಾಪ್ತ ಬಾಲಕರಿಗೂ ತೀವ್ರ ಗಾಯಗಳಾಗಿದೆ. ಮೃತ ಬಾಲಕನನ್ನು ರಾಜ್ ಬಿಸ್ವಾಸ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ...