Homeಕರ್ನಾಟಕಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು.

- Advertisement -
- Advertisement -

| ಮಲ್ಲನಗೌಡರ್ |

ಜಿಂದಾಲ್‍ಗೆ ಭೂಮಿ ಮಾರುವ ಸರ್ಕಾರದ ನಡೆ ವಿರುದ್ಧ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ನಡೆಸಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿಯ ಮೊರೆ ಹೋಗಿದೆ. ಇದರ ನಡುವೆ ಹಿಂದಿನ ದಶಕದ ‘ಗಣಿ ವೈಭವದ’ ಕತೆಗಳು ಪರಸ್ಪರ ಆರೋಪಾಧನೆಯಲ್ಲಿ ಜಿಟಿಜಿಟಿ ಮಳೆಯ ರೂಪದಲ್ಲಿ ಪ್ರಚಲಿತಕ್ಕೆ ಬಂದಿವೆ. ಆದರೆ, ಅಕ್ರಮ ಅದಿರಿನ ವ್ಯವಹಾರದ ಕಡತಗಳ ಮೇಲಿನ ಧೂಳು ಕೊಡವಲೂ ಯಾರದೂ ಒತಾಯ್ತವೇ ಇಲ್ಲ…

ಆಡಳಿತ ಮತ್ತು ವಿಪಕ್ಷಗಳು ಈಗ ಜೊಂದಾಲ್ ಭೂಮಿ ಪ್ರಕರಣದಲ್ಲಿ ಎಚ್ಚರಿಕೆಯ ನಡೆಯನ್ನೇ ಇಡುತ್ತಿವೆ. ಇದರ ವಿರುದ್ಧ ರಾಜ್ಯಾದ್ಯಂತ ಬಿರುಗಾಳಿಯಂತಹ ಪ್ರತಿಭಟನೆ ಮಾಡಬೇಕಿದ್ದ ಬಿಜೆಪಿ ಬೆಂಗಳೂರಿನ ಸರ್ಕಲ್‍ವೊಂದರಲ್ಲಿ ಹಾಸು ಹೊದ್ದಿ ಮಲಗಿ ಎದ್ದು ಹೋಗಿದೆ. ಸರ್ಕಾರ ಉಪಸಮಿತಿ ಎಂಬ ಜಿಟಿಜಿಟಿ ಮಳೆ ಉದುರಿಸಿ ಕಾಲ ತಳ್ಳಲು ಹೊರಟಿದೆ. ಜಿಂದಾಲ್ ಗೆ ಭೂಮಿ ಕೊಡುವುದನ್ನು ವಿರೋಧಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ, ನಮ್ಮ ಹೋರಾಟ ಇಷ್ಟೇ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಭಾರಿ ಬಿರುಗಾಳಿ ಎಬ್ಬಿಸಲು ಯಾರಿಗೂ ಮನಸ್ಸಿಲ್ಲ. ಈ ಬಿರುಗಾಳಿ ಬಳ್ಳಾರಿಯ ಅಕ್ರಮ ಗಣಿ ಕಡತಗಳ ಮೇಲೆ ವ್ಯವಸ್ಥೆಯೇ ಕೃತಕವಾಗಿ ಹರಡಿರುವ ಧೂಳನ್ನು ಹುಡಿ ಎಬ್ಬಿಸಿ ಬಿಡುತ್ತದೋ ಎಂಬ ಭಯ!

ಸಿಎಂ ಪ್ರಚೋದನೆ: ಯಡಿಯೂರಪ್ಪಗೆ ‘ಪ್ರೇರಣೆ’
ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಂದಾಲ್ ಜೊತೆ ಲೀಸ್ ಕಮ್ ಸೇಲ್ ಒಪ್ಪಂದ ಮಾಡಿಕೊಂಡಿದ್ದು ಯಡಿಯೂರಪ್ಪ ಅವಧಿಯಲ್ಲಿ. ಈಗ ಅವರೇ ಸೇಲ್ ಬೇಡ ಎನ್ನುತ್ತಿದ್ದಾರೆ… ಯಡಿಯೂರಪ್ಪ ಜಿಂದಾಲ್‍ನಿಂದ 20 ಕೋಟಿ ಪಡೆದಿದ್ದರು..’ ಎಂದು ಹೇಳಿದ ಕೂಡಲೇ ಅಹೋರಾತ್ರಿಯೇ ‘ಪ್ರೇರಣೆ’ಗೊಂಡ ಯಡಿಯೂರಪ್ಪ, ಆ ಪ್ರಕರಣದಲ್ಲಿ ಸಿಬಿಐ ಕೋರ್ಟು ತನಗೆ ಕ್ಲೀನ್‍ಚಿಟ್ ನೀಡಿದೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಆದರೆ 2016ರಲ್ಲಿ ಸಿಬಿಐ ಕೋರ್ಟು ಈ ಪ್ರಕರಣದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ ಮತ್ತು ಅಳಿಯ ಸೋಹಲ್‍ರನ್ನು ಮುಕ್ತಿಗೊಳಿಸಿತ್ತು. ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂಬುದು ಕೋರ್ಟಿನ ವಿವರಣೆಯಾಗಿತ್ತು. ತಮ್ಮ ಅಧಿಕಾರ ಬಳಸಿ ಯಡಿಯೂರಪ್ಪ ಜಿಂದಾಲ್‍ಗೆ ಫೆವರ್ ಮಾಡಿದರು ಅಥವಾ ಜಿಂದಾಲ್ ಆ ಕಾರಣಕ್ಕೆ ಪ್ರೇರಣಾಕ್ಕೆ 20 ಕೋಟಿ ದೇಣಿಗೆ ನೀಡಿತ್ತು ಎಂಬುದಕ್ಕೆ ಆಧಾರಗಳಿಲ್ಲ ಎಂಬುದಷ್ಟೇ ಅದರ ಸಾರಾಂಶವಾಗಿತ್ತು.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು. ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಅಳಿಯ ಸೋಹನ್ ಒಡೆತನದ ಪ್ರೇರಣಾ ಟ್ರಸ್ಟ್‍ಗೆ ಜಿಂದಾಲ್ ದೇಣಿಗೆ ನೀಡಿತ್ತು. ಇದೆಲ್ಲ 2008-11ರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳು.
ಅದಿರು ಧೂಳು ಕೊಡವಲು ಸಿದ್ಧರಿಲ್ಲ!

ಗಣಿ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ರಚಿಸಿದ್ದ ಉಪಸಮಿತಿಯ ವರದಿಯ ಶಿಫಾರಸುಗಳನ್ನು ಇಂದಿಗೂ ಜಾರಿಗೆ ತಂದಿಲ್ಲ. ಹತ್ತಾರು ಗಣಿಗಳ್ಳರು ಮತ್ತು 700 ಚಿಲ್ಲರೆ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೆಲ್ಲ ಮೂರೂ ಪಕ್ಷಗಳಿಗೂ ಬೇಡವಾದ ಸಂಗತಿಯೇ ಆಗಿದೆ. ಇನ್ನು ಮೈಸೂರ್ ಮಿನರಲ್ಸ್‍ಗೆ (ಎಂಎಂಎಲ್) ಜಿಂದಾಲ್ ವಂಚಿಸಿದ ಕತೆ ಶುರುವಾಗಿದ್ದು 2001ರಿಂದಲೇ. 2001-10ರ ಅವಧಿಯಲ್ಲಿ ಜಿಂದಾಲ್ ಎಂಎಂಎಲ್‍ಗೆ ಕಡಿಮೆ ಪ್ರಿಮಿಯಮ್ ದರದಲ್ಲಿ ಅದಿರನ್ನು ನೀಡಿತ್ತು. ಈ ಅವಧಿಯಲ್ಲಿ 1,059.89 ಕೋಟಿ ಮೌಲ್ಯದ 9.25 ಮಿಲಿಯನ್ ಟನ್ ಅದಿರನ್ನು ಮೈನಿಂಗ್ ಮಾಡಿದ್ದ ಜಿಂದಾಲ್ ಎಂಎಂಎಲ್‍ಗೆ ಕೇವಲ 62.17 ಕೋಟಿ ಪ್ರಿಮಿಯಮ್ ನೀಡಿತ್ತು, ಜಿಂದಾಲ್ ಈ ವ್ಯವಹಾರದಲ್ಲಿ 879.19 ಕೋಟಿ ಅನಾಮತ್ತು ಲಾಭ ಪಡೆದಿತ್ತು ಎಂದು 2013ರಲ್ಲಿ ಸಿಎಜಿ ವರದಿ ಹೇಳಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ, ಎರಡೂ ವಿಪಕ್ಷಗಳಿಗೂ ಇದು ಬೇಕಾಗಿರಲಿಲ್ಲ.

ರಾಜ್ಯ ಅಧೀನದ ಸಂಸ್ಥೆ ಎಂಎಂಎಲ್‍ಗೆ ವಂಚನೆ ಎಂದರೆ ರಾಜ್ಯದ ಬೊಕ್ಕಸಕ್ಕೆ ವಂಚನೆ. ನಮ್ಮದೇ ಸಂಸ್ಥೆಯನ್ನು ತುಳಿದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಖಾಸಗೀಕರಣದ ಮೊದಲ ಪಾಠ. ಈ ಪಾಠದ ಅಂತ್ಯದಲ್ಲಿ ಕಿಕ್‍ಬ್ಯಾಕ್ ಪಕ್ಕಾ ಎಂದು ಅಲಿಖಿತ ಸಾಲೂ ಇದೆ! ಒಟ್ಟಿಗೆ ಎಂಎಂಎಲ್‍ಗೆ 1,200 ಕೋಟಿ (ಬಡ್ಡಿ ಸೇರಿದರೆ ಅಂದಾಜು 2 ಸಾವಿರ ಕೋಟಿ) ಹಣವನ್ನು ಜಿಂದಾಲ್‍ನಿಂದ ಕಕ್ಕಿಸುವ ಕೆಲಸಕ್ಕೆ ಯಾರಿಗೂ ಆಸಕ್ತಿಯೇ ಇಲ್ಲವೇ? ಅಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ಬಂದರೆ ನೂರಾರು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಲ್ಲವೇ? ಜಿಂದಾಲ್ ಬಳಿ ಕೊಡಲು ಅಷ್ಟು ಹಣವಿಲ್ಲವೇ? ಆದರೂ 2001ರಿಂದ 2019ರವರೆಗೆ ಈಗಿನ ಕುಮಾರಸ್ವಾಮಿ ಸೇರಿ ಎಂಟು ಮುಖ್ಯಮಂತ್ರಿಗಳು ಆಳಿದ್ದಾರೆ/ಆಳುತ್ತಿದ್ದಾರೆ. ಯಾರಿಗೂ ತಾರ್ಕಿಕ ಅಂತ್ಯಕ್ಕೆ ಹೋಗಲು ಇಷ್ಟವಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟದ ಸುದ್ದಿ ಜಿಟಿ ಜಿಟಿ ಮಳೆಯಲ್ಲಿ ಹಿಂದಕ್ಕೆ ಸರಿಯುತ್ತದೆ, ಉಪ ಸಮಿತಿ ‘ಸಮಾಲೋಚನೆ’ ನಡೆಸುತ್ತದೆ. ಆ ಹೊತ್ತಿಗೆ ಮತ್ತೆ ಆಪರೇಷನ್ ಕಮಲದ 14ನೇ ಅಂಕ ಶುರುವಾಗಿರುತ್ತದೆ. ಗಣಿ ಧೂಳಲ್ಲಿ ಎಲ್ಲ ಮರೆತೇ ಹೋಗುತ್ತದೆ. ದೆಹಲಿಯಲ್ಲಿ ಸಜ್ಜನ್ ಮುಖದಲ್ಲಿ ಸಿಂಚನ ಅರಳುತ್ತದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಪ್ರಾಪ್ತ ಬಾಲಕಿಯ ಅತ್ಯಾಚಾರ-ಕೊಲೆ ಆರೋಪ : ಪ. ಬಂಗಾಳದ ಬಾರುಯಿಪುರದಲ್ಲಿ ಹಿಂಸಾಚಾರ ; ಶಂಕಿತ ಆರೋಪಿಯ ಗುಂಪು ಹತ್ಯೆ

ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣ ಜಿಲ್ಲೆಯ ಬಾರುಯಿಪುರದಲ್ಲಿ ಶನಿವಾರ (ಜು.4) ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯೊಬ್ಬಳ ಶವ ಭಾನುವಾರ (ಜು.5) ಬೆಳಿಗ್ಗೆ ಕೆರೆಯಲ್ಲಿ ಪತ್ತೆಯಾಗಿದ್ದು, ಆ ಬಳಿಕ ಅಲ್ಲಿ ತೀವ್ರ ಹಿಂಸಾತ್ಮಕ...

SIR ಬಳಿಕ ಒಡಿಶಾದ ಕರಡು ಮತದಾರರ ಪಟ್ಟಿ ಪ್ರಕಟ : 20 ಲಕ್ಷ ಹೆಸರುಗಳು ಡಿಲೀಟ್

ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಗಣತಿ ಹಂತದ ಬಳಿಕ ಚುನಾವಣಾ ಆಯೋಗ ಭಾನುವಾರ (ಜು.5) ಒಡಿಶಾದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು, ಇದರಲ್ಲಿ 20 ಲಕ್ಷಕ್ಕೂ ಹೆಚ್ಚು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ...

SIR: ಟಾರ್ಗೆಟ್ ಮತ್ತು ಒತ್ತಡದ ಕೆಲಸದಿಂದ ಮೂವರು ಸಿಬ್ಬಂದಿ ಸಾವು

ಕರ್ನಾಟಕದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯು ಕೆಳಹಂತದ ನೌಕರರ ಪಾಲಿಗೆ ಮರಣಶಾಸನವಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯೊಂದು ಎದ್ದಿದೆ. ಅಧಿಕಾರಿಗಳು ನೀಡುತ್ತಿರುವ ಅತಿಯಾದ ಒತ್ತಡ ಮತ್ತು ಟಾರ್ಗೆಟ್ ಬೆನ್ನತ್ತುವ ಧಾವಂತದಿಂದಾಗಿ...

ಖಮೇನಿ ಅಂತ್ಯಕ್ರಿಯೆ ವೇಳೆ ಟ್ರಂಪ್ ಉದ್ಧಟತನದ ಹೇಳಿಕೆ: “ಇತಿಹಾಸ, ಗೌರವವಿಲ್ಲದ ದೇಶ ಅಮೆರಿಕ” ಎಂದು ಇರಾನ್ ತೀಕ್ಷ್ಣ ತಿರುಗೇಟು

ಟೆಹ್ರಾನ್: ಇರಾನ್‌ನ ಮಾಜಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ನಿಧನದ ನಂತರ ಜಾಗತಿಕ ರಾಜತಾಂತ್ರಿಕ ವಲಯದಲ್ಲಿ ಭಾರೀ ವಾಕ್ಸಮರ ಉಂಟಾಗಿದೆ. ಖಮೇನಿ ಅವರ ಅಂತ್ಯಕ್ರಿಯೆಯ ಸಂದರ್ಭದಲ್ಲಿ ಒಟ್ಟುಗೂಡಿರುವ ಇರಾನ್‌ನ ಇಡೀ...

ಮ್ಯಾಚ್ ಮಧ್ಯೆ ಕಾಂಡೊಮ್ ಜಾಹೀರಾತು: ಬಿಸಿಸಿಐ ವಿರುದ್ಧ ಕಿಡಿಕಾರಿದ ಮಾಜಿ ಕ್ರಿಕೆಟಿಗ, TMC ಸಂಸದ ಕೀರ್ತಿ ಆಜಾದ್

ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟಿ20 ಅಂತರರಾಷ್ಟ್ರೀಯ ಪಂದ್ಯದ ನೇರ ಪ್ರಸಾರದ ವೇಳೆ ಕಾಂಡೊಮ್ ಜಾಹೀರಾತುಗಳನ್ನು ಪ್ರಸಾರ ಮಾಡಿದ್ದನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸದ ಮತ್ತು ಮಾಜಿ...

ಒಂದೇ ಒಂದು ಇಟ್ಟಿಗೆ ಇಟ್ಟಿಲ್ಲ : ಕಳೆದ ಆರು ವರ್ಷಗಳಿಂದ ಕಾಗದದ ಮೇಲೆಯೇ ಕಾರ್ಯ ನಿರ್ವಹಿಸುತ್ತಿರುವ 100 ಹಾಸಿಗೆಗಳ ಆಸ್ಪತ್ರೆ!

ಮಧ್ಯ ಪ್ರದೇಶದ ಇಂದೋರ್‌ನ ಖಜರಾನಾದಲ್ಲಿ ಮಂಜೂರಾದ 100 ಹಾಸಿಗೆಗಳ ಸಿವಿಲ್ ಆಸ್ಪತ್ರೆಯು ಕಳೆದ 6 ವರ್ಷಗಳಿಂದ ಕೇವಲ ಕಾಗದದ ಮೇಲಷ್ಟೇ (ದಾಖಲೆಗಳಲ್ಲಿ) ಅಸ್ತಿತ್ವದಲ್ಲಿರುವುದು ವರದಿಯಾಗಿದೆ. ಈ ವಿಲಕ್ಷಣ ಮತ್ತು ಆಘಾತಕಾರಿ ಆಡಳಿತಾತ್ಮಕ ವೈಫಲ್ಯದ ಪ್ರಕರಣವು...

ವೋಟ್‌ಯಿಂದ ಹಿಡಿದು ಮಂದಿರದ ಚಂದಾದವರೆಗೆ ಬಿಜೆಪಿಯದ್ದು ಬರೀ ‘ಚೋರಿ’ ಎಂದ ಕಾಂಗ್ರೆಸ್

ಅಯೋಧ್ಯೆಯ ರಾಮ ಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ದುರುಪಯೋಗದ ವಿಚಾರವಾಗಿ ಭಾನುವಾರ ಕಾಂಗ್ರೆಸ್ ಪಕ್ಷವು ಬಿಜೆಪಿ-ಆರ್‌ಎಸ್‌ಎಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ. ಇದು ಅವರದೇ ಆದ ಇಕೋ ಸಿಸ್ಟಮ್‌ನ ದೊಡ್ಡ "ಹಗರಣ"ವಾಗಿದ್ದು, ಈ...

ಮುಸ್ಲಿಮರನ್ನು ಮಾದಕ ದ್ರವ್ಯ, ಭಯೋತ್ಪಾದನೆಗೆ ಲಿಂಕ್ ಮಾಡಿ ಪೋಸ್ಟ್: ಕೇರಳ ಹಿಂದೂ ಐಕ್ಯ ವೇದಿಕೆ ಮುಖ್ಯಸ್ಥ ಆರ್‌ವಿ ಬಾಬು ವಿರುದ್ಧ ಪ್ರಕರಣ ದಾಖಲು

ಕೊಚ್ಚಿ: ಮುಸ್ಲಿಂ ಸಮುದಾಯ ಮತ್ತು ಅದರ ಧಾರ್ಮಿಕ ಮುಖಂಡರನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಹಾಗೂ ಕೋಮು ಪ್ರಚೋದನಾತ್ಮಕ ಪೋಸ್ಟ್ ಹಂಚಿಕೊಂಡಿದ್ದಕ್ಕಾಗಿ ಕೇರಳದ ಹಿಂದೂ ಐಕ್ಯ ವೇದಿಕೆಯ ರಾಜ್ಯ ಅಧ್ಯಕ್ಷ ಆರ್.ವಿ. ಬಾಬು...

ಇರಾನ್ ಜನರು ಅವರನ್ನು ದ್ವೇಷಿಸುತ್ತಾರೆ ಅಂದುಕೊಂಡಿದ್ದೆ: ಖಮೇನಿ ಅಂತ್ಯಕ್ರಿಯೆಯ ಜನಸಾಗರ ನೋಡಿ ಶಾಕ್ ಆದ ಟ್ರಂಪ್

ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲಿ ಲಕ್ಷಾಂತರ ಜನರು ಭಾಗವಹಿಸಿ ಕಣ್ಣೀರು ಹಾಕುತ್ತಿರುವುದನ್ನು ನೋಡಿ ತಮಗೆ ತೀವ್ರ ಆಘಾತವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ....

‘ನಿಮ್ಮ ಮೌನ ಯುವಜನರನ್ನು ಕೇವಲ ಕೀಟಗಳಂತೆ ನೋಡುತ್ತೀರಿ ಎಂಬುದಕ್ಕೆ ಒಪ್ಪಿಗೆಯಾಗಿದೆ’: ಮೋದಿಗೆ ಬಹಿರಂಗ ಪತ್ರ ಬರೆದ ಸಿಜೆಪಿ

"ಈ ದೇಶದ ಯುವಜನರನ್ನು ನೀವು ಕೇವಲ ನಿರ್ಲಕ್ಷಿಸಬೇಕಾದ ಕೀಟಗಳಂತೆ ನೋಡುತ್ತಿದ್ದೀರಾ?" ಎಂದು ಪ್ರಶ್ನಿಸಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶನಿವಾರ (ಜುಲೈ 4) ಬಹಿರಂಗ ಪತ್ರ ಬರೆದಿದೆ. ದೇಶದ...