Homeಕರ್ನಾಟಕಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಜಿಂದಾಲ್‍ಗೆ ಭೂಮಿ: ಕೊಟ್ಟರೋ, ಬಿಟ್ಟರೊ? ಈಗೇನಾಗುತ್ತಿದೆ ಗೊತ್ತೆ?

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು.

- Advertisement -
- Advertisement -

| ಮಲ್ಲನಗೌಡರ್ |

ಜಿಂದಾಲ್‍ಗೆ ಭೂಮಿ ಮಾರುವ ಸರ್ಕಾರದ ನಡೆ ವಿರುದ್ಧ ಬೆಂಗಳೂರಿನಲ್ಲಿ ಅಹೋರಾತ್ರಿ ಧರಣಿಯನ್ನು ಬಿಜೆಪಿ ನಡೆಸಿದೆ. ರಾಜ್ಯ ಸರ್ಕಾರ ಸಚಿವ ಸಂಪುಟದ ಉಪಸಮಿತಿಯ ಮೊರೆ ಹೋಗಿದೆ. ಇದರ ನಡುವೆ ಹಿಂದಿನ ದಶಕದ ‘ಗಣಿ ವೈಭವದ’ ಕತೆಗಳು ಪರಸ್ಪರ ಆರೋಪಾಧನೆಯಲ್ಲಿ ಜಿಟಿಜಿಟಿ ಮಳೆಯ ರೂಪದಲ್ಲಿ ಪ್ರಚಲಿತಕ್ಕೆ ಬಂದಿವೆ. ಆದರೆ, ಅಕ್ರಮ ಅದಿರಿನ ವ್ಯವಹಾರದ ಕಡತಗಳ ಮೇಲಿನ ಧೂಳು ಕೊಡವಲೂ ಯಾರದೂ ಒತಾಯ್ತವೇ ಇಲ್ಲ…

ಆಡಳಿತ ಮತ್ತು ವಿಪಕ್ಷಗಳು ಈಗ ಜೊಂದಾಲ್ ಭೂಮಿ ಪ್ರಕರಣದಲ್ಲಿ ಎಚ್ಚರಿಕೆಯ ನಡೆಯನ್ನೇ ಇಡುತ್ತಿವೆ. ಇದರ ವಿರುದ್ಧ ರಾಜ್ಯಾದ್ಯಂತ ಬಿರುಗಾಳಿಯಂತಹ ಪ್ರತಿಭಟನೆ ಮಾಡಬೇಕಿದ್ದ ಬಿಜೆಪಿ ಬೆಂಗಳೂರಿನ ಸರ್ಕಲ್‍ವೊಂದರಲ್ಲಿ ಹಾಸು ಹೊದ್ದಿ ಮಲಗಿ ಎದ್ದು ಹೋಗಿದೆ. ಸರ್ಕಾರ ಉಪಸಮಿತಿ ಎಂಬ ಜಿಟಿಜಿಟಿ ಮಳೆ ಉದುರಿಸಿ ಕಾಲ ತಳ್ಳಲು ಹೊರಟಿದೆ. ಜಿಂದಾಲ್ ಗೆ ಭೂಮಿ ಕೊಡುವುದನ್ನು ವಿರೋಧಿಸಿ ಬಳ್ಳಾರಿಗೆ ಪಾದಯಾತ್ರೆ ಮಾಡುವುದಿಲ್ಲ, ನಮ್ಮ ಹೋರಾಟ ಇಷ್ಟೇ ಎಂದು ಯಡಿಯೂರಪ್ಪ ಘೋಷಿಸಿದ್ದಾರೆ. ಭಾರಿ ಬಿರುಗಾಳಿ ಎಬ್ಬಿಸಲು ಯಾರಿಗೂ ಮನಸ್ಸಿಲ್ಲ. ಈ ಬಿರುಗಾಳಿ ಬಳ್ಳಾರಿಯ ಅಕ್ರಮ ಗಣಿ ಕಡತಗಳ ಮೇಲೆ ವ್ಯವಸ್ಥೆಯೇ ಕೃತಕವಾಗಿ ಹರಡಿರುವ ಧೂಳನ್ನು ಹುಡಿ ಎಬ್ಬಿಸಿ ಬಿಡುತ್ತದೋ ಎಂಬ ಭಯ!

ಸಿಎಂ ಪ್ರಚೋದನೆ: ಯಡಿಯೂರಪ್ಪಗೆ ‘ಪ್ರೇರಣೆ’
ಚನ್ನಪಟ್ಟಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಿಂದಾಲ್ ಜೊತೆ ಲೀಸ್ ಕಮ್ ಸೇಲ್ ಒಪ್ಪಂದ ಮಾಡಿಕೊಂಡಿದ್ದು ಯಡಿಯೂರಪ್ಪ ಅವಧಿಯಲ್ಲಿ. ಈಗ ಅವರೇ ಸೇಲ್ ಬೇಡ ಎನ್ನುತ್ತಿದ್ದಾರೆ… ಯಡಿಯೂರಪ್ಪ ಜಿಂದಾಲ್‍ನಿಂದ 20 ಕೋಟಿ ಪಡೆದಿದ್ದರು..’ ಎಂದು ಹೇಳಿದ ಕೂಡಲೇ ಅಹೋರಾತ್ರಿಯೇ ‘ಪ್ರೇರಣೆ’ಗೊಂಡ ಯಡಿಯೂರಪ್ಪ, ಆ ಪ್ರಕರಣದಲ್ಲಿ ಸಿಬಿಐ ಕೋರ್ಟು ತನಗೆ ಕ್ಲೀನ್‍ಚಿಟ್ ನೀಡಿದೆ’ ಎಂದು ಪ್ರತ್ಯುತ್ತರ ನೀಡಿದ್ದಾರೆ. ಆದರೆ 2016ರಲ್ಲಿ ಸಿಬಿಐ ಕೋರ್ಟು ಈ ಪ್ರಕರಣದಲ್ಲಿ ಯಡಿಯೂರಪ್ಪ, ಅವರ ಮಗ ರಾಘವೇಂದ್ರ ಮತ್ತು ಅಳಿಯ ಸೋಹಲ್‍ರನ್ನು ಮುಕ್ತಿಗೊಳಿಸಿತ್ತು. ಪ್ರಾಸಿಕ್ಯೂಷನ್ ಸರಿಯಾದ ಸಾಕ್ಷ್ಯ ಒದಗಿಸಿಲ್ಲ ಎಂಬುದು ಕೋರ್ಟಿನ ವಿವರಣೆಯಾಗಿತ್ತು. ತಮ್ಮ ಅಧಿಕಾರ ಬಳಸಿ ಯಡಿಯೂರಪ್ಪ ಜಿಂದಾಲ್‍ಗೆ ಫೆವರ್ ಮಾಡಿದರು ಅಥವಾ ಜಿಂದಾಲ್ ಆ ಕಾರಣಕ್ಕೆ ಪ್ರೇರಣಾಕ್ಕೆ 20 ಕೋಟಿ ದೇಣಿಗೆ ನೀಡಿತ್ತು ಎಂಬುದಕ್ಕೆ ಆಧಾರಗಳಿಲ್ಲ ಎಂಬುದಷ್ಟೇ ಅದರ ಸಾರಾಂಶವಾಗಿತ್ತು.

ಬೆಂಗಳೂರಿನ ರಾಚೇನಹಳ್ಳಿಯಲ್ಲಿ ಡಿನೋಟಿಫೈ ಆದ ಭೂಮಿಯನ್ನು ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪದ ಹತ್ತಿರದ ಸಂಬಂಧಿ 40 ಲಕ್ಷಕ್ಕೆ ಖರೀದಿಸಿ ನಂತರ ಜಿಂದಾಲ್‍ನ ಅಂಗಸಂಸ್ಥೆ ಸೌಥ್ ವೆಸ್ಟ್ ಮೈನಿಂಗ್ ಕಂಪನಿಗೆ 20 ಕೋಟಿ ರೂ.ಗೆ ಮಾರಿದ್ದರು. ಯಡಿಯೂರಪ್ಪ ಪುತ್ರ ರಾಘವೇಂದ್ರ ಮತ್ತು ಅಳಿಯ ಸೋಹನ್ ಒಡೆತನದ ಪ್ರೇರಣಾ ಟ್ರಸ್ಟ್‍ಗೆ ಜಿಂದಾಲ್ ದೇಣಿಗೆ ನೀಡಿತ್ತು. ಇದೆಲ್ಲ 2008-11ರ ಅವಧಿಯಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ನಡೆದ ಘಟನೆಗಳು.
ಅದಿರು ಧೂಳು ಕೊಡವಲು ಸಿದ್ಧರಿಲ್ಲ!

ಗಣಿ ಅಕ್ರಮಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿದ್ದರಾಮಯ್ಯ ರಚಿಸಿದ್ದ ಉಪಸಮಿತಿಯ ವರದಿಯ ಶಿಫಾರಸುಗಳನ್ನು ಇಂದಿಗೂ ಜಾರಿಗೆ ತಂದಿಲ್ಲ. ಹತ್ತಾರು ಗಣಿಗಳ್ಳರು ಮತ್ತು 700 ಚಿಲ್ಲರೆ ಅಧಿಕಾರಿಗಳ ಮೇಲೆ ಯಾವ ಕ್ರಮವನ್ನೂ ತೆಗೆದುಕೊಂಡಿಲ್ಲ. ಇದೆಲ್ಲ ಮೂರೂ ಪಕ್ಷಗಳಿಗೂ ಬೇಡವಾದ ಸಂಗತಿಯೇ ಆಗಿದೆ. ಇನ್ನು ಮೈಸೂರ್ ಮಿನರಲ್ಸ್‍ಗೆ (ಎಂಎಂಎಲ್) ಜಿಂದಾಲ್ ವಂಚಿಸಿದ ಕತೆ ಶುರುವಾಗಿದ್ದು 2001ರಿಂದಲೇ. 2001-10ರ ಅವಧಿಯಲ್ಲಿ ಜಿಂದಾಲ್ ಎಂಎಂಎಲ್‍ಗೆ ಕಡಿಮೆ ಪ್ರಿಮಿಯಮ್ ದರದಲ್ಲಿ ಅದಿರನ್ನು ನೀಡಿತ್ತು. ಈ ಅವಧಿಯಲ್ಲಿ 1,059.89 ಕೋಟಿ ಮೌಲ್ಯದ 9.25 ಮಿಲಿಯನ್ ಟನ್ ಅದಿರನ್ನು ಮೈನಿಂಗ್ ಮಾಡಿದ್ದ ಜಿಂದಾಲ್ ಎಂಎಂಎಲ್‍ಗೆ ಕೇವಲ 62.17 ಕೋಟಿ ಪ್ರಿಮಿಯಮ್ ನೀಡಿತ್ತು, ಜಿಂದಾಲ್ ಈ ವ್ಯವಹಾರದಲ್ಲಿ 879.19 ಕೋಟಿ ಅನಾಮತ್ತು ಲಾಭ ಪಡೆದಿತ್ತು ಎಂದು 2013ರಲ್ಲಿ ಸಿಎಜಿ ವರದಿ ಹೇಳಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರವೂ ಕ್ರಮ ಕೈಗೊಳ್ಳಲಿಲ್ಲ, ಎರಡೂ ವಿಪಕ್ಷಗಳಿಗೂ ಇದು ಬೇಕಾಗಿರಲಿಲ್ಲ.

ರಾಜ್ಯ ಅಧೀನದ ಸಂಸ್ಥೆ ಎಂಎಂಎಲ್‍ಗೆ ವಂಚನೆ ಎಂದರೆ ರಾಜ್ಯದ ಬೊಕ್ಕಸಕ್ಕೆ ವಂಚನೆ. ನಮ್ಮದೇ ಸಂಸ್ಥೆಯನ್ನು ತುಳಿದು ಖಾಸಗಿ ಕಂಪನಿಗಳಿಗೆ ಲಾಭ ಮಾಡಿಕೊಡುವುದೇ ಖಾಸಗೀಕರಣದ ಮೊದಲ ಪಾಠ. ಈ ಪಾಠದ ಅಂತ್ಯದಲ್ಲಿ ಕಿಕ್‍ಬ್ಯಾಕ್ ಪಕ್ಕಾ ಎಂದು ಅಲಿಖಿತ ಸಾಲೂ ಇದೆ! ಒಟ್ಟಿಗೆ ಎಂಎಂಎಲ್‍ಗೆ 1,200 ಕೋಟಿ (ಬಡ್ಡಿ ಸೇರಿದರೆ ಅಂದಾಜು 2 ಸಾವಿರ ಕೋಟಿ) ಹಣವನ್ನು ಜಿಂದಾಲ್‍ನಿಂದ ಕಕ್ಕಿಸುವ ಕೆಲಸಕ್ಕೆ ಯಾರಿಗೂ ಆಸಕ್ತಿಯೇ ಇಲ್ಲವೇ? ಅಷ್ಟು ಹಣ ಸರ್ಕಾರದ ಬೊಕ್ಕಸಕ್ಕೆ ಬಂದರೆ ನೂರಾರು ಅಭಿವೃದ್ದಿ ಕೆಲಸಗಳನ್ನು ಮಾಡಬೇಕಲ್ಲವೇ? ಜಿಂದಾಲ್ ಬಳಿ ಕೊಡಲು ಅಷ್ಟು ಹಣವಿಲ್ಲವೇ? ಆದರೂ 2001ರಿಂದ 2019ರವರೆಗೆ ಈಗಿನ ಕುಮಾರಸ್ವಾಮಿ ಸೇರಿ ಎಂಟು ಮುಖ್ಯಮಂತ್ರಿಗಳು ಆಳಿದ್ದಾರೆ/ಆಳುತ್ತಿದ್ದಾರೆ. ಯಾರಿಗೂ ತಾರ್ಕಿಕ ಅಂತ್ಯಕ್ಕೆ ಹೋಗಲು ಇಷ್ಟವಿಲ್ಲ.

ಜಿಂದಾಲ್‍ಗೆ ಭೂಮಿ ಮಾರಾಟದ ಸುದ್ದಿ ಜಿಟಿ ಜಿಟಿ ಮಳೆಯಲ್ಲಿ ಹಿಂದಕ್ಕೆ ಸರಿಯುತ್ತದೆ, ಉಪ ಸಮಿತಿ ‘ಸಮಾಲೋಚನೆ’ ನಡೆಸುತ್ತದೆ. ಆ ಹೊತ್ತಿಗೆ ಮತ್ತೆ ಆಪರೇಷನ್ ಕಮಲದ 14ನೇ ಅಂಕ ಶುರುವಾಗಿರುತ್ತದೆ. ಗಣಿ ಧೂಳಲ್ಲಿ ಎಲ್ಲ ಮರೆತೇ ಹೋಗುತ್ತದೆ. ದೆಹಲಿಯಲ್ಲಿ ಸಜ್ಜನ್ ಮುಖದಲ್ಲಿ ಸಿಂಚನ ಅರಳುತ್ತದೆ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...