Homeಮುಖಪುಟತೊಂಭತ್ತರ ಹರೆಯದಲ್ಲೂ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತ ಹಿರಿಯಜ್ಜ..!!

ತೊಂಭತ್ತರ ಹರೆಯದಲ್ಲೂ ಪ್ರಯೋಗಾಲಯದಲ್ಲಿ ಸಂಶೋಧನಾ ನಿರತ ಹಿರಿಯಜ್ಜ..!!

2019ನೆಯ ವರ್ಷದ ರಸಾಯನ ವಿಜ್ಞಾನದ ನೊಬೆಲ್ ಪುರಸ್ಕೃತರಾದ ಜಾನ್ ಈವರೆಗಿನ ನೊಬೆಲ್ ಪುರಸ್ಕೃತರಲ್ಲೇ ಹಿರಿಯರು...

- Advertisement -
- Advertisement -

ಇದೇ ವರ್ಷದ ಜುಲೈ 22ಕ್ಕೆ 98ವರ್ಷ ತುಂಬುವ ಹಿರಿಯಜ್ಜ ಪ್ರತಿದಿನವೂ ಪ್ರಯೋಗಾಲಕ್ಕೆ ಹೋಗಿ ಬರುತ್ತಾರೆಂದರೆ ದೊಡ್ಡ ಅಚ್ಚರಿಯೇ! ಜಾನ್ ಗುಡ್‌ಎನಫ್ ತಮ್ಮ ತೊಂಭತ್ತರ ಹರೆಯದಲ್ಲಿ ದಿನವೂ ಆಸ್ಟಿನ್ನಲ್ಲಿರುವ ಟೆಕ್ಸಾಸ್ ವಿಶ್ವವಿದ್ಯಾಲಯದ ಮೆಕಾನಿಕಲ್ ಇಂಜನಿಯರಿಂಗ್ ಮತ್ತು ಮಟೆರಿಯಲ್ ವಿಜ್ಞಾನ ಪ್ರಯೋಗಾಲಕ್ಕೆ ಹೋಗಿ ಸಂಶೋಧನೆಯಲ್ಲಿ ತೊಡಗಿರುತ್ತಾರೆ.2019ನೆಯ ವರ್ಷದ ರಸಾಯನ ವಿಜ್ಞಾನದ ನೋಬೆಲ್ ಪುರಸ್ಕೃತರೂ ಆಗಿರುವ ಜಾನ್ ಈವರೆಗಿನ ನೊಬೆಲ್ ಪುರಸ್ಕೃತರಲ್ಲೇ ಹಿರಿಯರು. ಅಷ್ಟೇ ಅಲ್ಲ ಪ್ರಶಸ್ತಿ ಸ್ವೀಕಾರಕ್ಕೂ ಗಾಲಿ ಖುರ್ಚಿಯಲ್ಲೇ ಬಂದು, ತಮ್ಮ ಭಾಷಣವನ್ನೂ ಮಾಡಿದರು.

ನಾಗರಿಕ ಜಗತ್ತಿಗೆ ಮಹತ್ವವಾದ ಅನ್ವೇಷಣೆಯನ್ನು ತಮ್ಮ 50ರ ಹರೆಯದಲ್ಲಿಯೇ ಕೊಡುಗೆಯಾಗಿ ಕೊಟ್ಟ ಈ ವಿಜ್ಞಾನಿಗೆ ಇನ್ನೂ ಮತ್ತೂ ಮಹತ್ತರವಾದ ತಮ್ಮ ಕನಸೊಂದನ್ನು ನನಸು ಮಾಡುವ ಬಯಕೆಯಂತೆ.

ಇಪ್ಪತ್ತನೆಯ ಶತಮಾನದ ಎರಡು ಮಹತ್ವದ ಶೋಧಗಳೆಂದರೆ ಇಲೆಕ್ಟ್ರಾನಿಕ್ ಲೋಕವನ್ನು ಸಾಧ್ಯಮಾಡಿದ ಟ್ರಾನ್ಸ್ಸಿಸ್ಟರ್ ಮತ್ತು ಇಡೀ ಎಲೆಕ್ಟ್ರಾನಿಕ್ ಲೋಕವನ್ನು ಮೊಬೈಲಾಗಿಸಿದ ಹಗುರವಾದ ಲಿತಿಯಂ ಅಯಾನಿನ ಬ್ಯಾಟರಿ. ಗಾತ್ರದಲ್ಲಿ ಎರಡೂ ಒಂದನ್ನೊಂದು ಪೈಪೋಟಿ ಮಾಡುತ್ತಾ ಚಿಕ್ಕದಾಗುತ್ತಾ ಬೆಳೆದವು. ಟ್ರಾನ್ಸಿಸ್ಟರ್ ಅನ್ವೇಷಣೆಯನ್ನು ಬೆಲ್ ಪ್ರಯೋಗಾಲಯದ ವಿಜ್ಞಾನಿಗಳು 1947ರಲ್ಲಿಯೇ ಮಾಡಿ ಇಂದಿನ ಇಲೆಕ್ಟ್ರಾನಿಕ್ ಜಗತ್ತನ್ನು ಇಷ್ಟು ಅಗಲವಾಗಿ ಬೆಳೆಸಿದ್ದಾರೆ. ಅದರ ಈ ಬೆಳವಣಿಗೆಯನ್ನು ಚಲನೆಗೆ ಒಗ್ಗುವಂತೆ ಮಾಡಿದ ಕೀರ್ತಿಯು ಚಿಕ್ಕದಾಗುತ್ತಾ-ಹಗುರವಾಗುತ್ತಾ ಬೆಳೆಯುತ್ತಿರುವ ಲಿತಿಯಂ ಬ್ಯಾಟರಿಯದು. ಸಮಕಾಲೀನ ನಾಗರಿಕತೆಯಲ್ಲಿ ಒಟ್ಟಾರೆ ಆರ್ಥಿಕ ವಹಿವಾಟಿನಲ್ಲಿ ಇಲೆಕ್ಟ್ರಾನಿಕ್ ಉದ್ಯಮದ ಪಾತ್ರ ಹಿರಿದು. ಎಷ್ಟೆಂದರೆ ಎಲ್ಲರ ಕೈಯಲ್ಲೂ ಮೊಬೈಲ್ ಫೋನು! ನಮ್ಮ ಆಲೋಚನೆಗಳಿಗೆ ಧ್ವನಿಯನ್ನು ಅಷ್ಟೇ ವೇಗವಾಗಿ ಹರಿಬಿಡಲು ಸಾಧ್ಯವಾಗುತ್ತಿದೆ ಎಂದರೆ, ಅದಕ್ಕೆ ಸಾಧನವಾಗಿ ಶಕ್ತಿ ಒದಗಿಸುವ ಲಿತಿಯಂ ಬ್ಯಾಟರಿಯ ಚಮತ್ಕಾರವು ಅದರಲ್ಲಿ ಬೆರೆತಿದೆ. ಇದರ ಹಿಂದಿರುವ ವಿಜ್ಞಾನಿಯೇ ಈ ಹಿರಿಯಜ್ಜ, ಇನ್ನೂ ಕನಸುಗಳನ್ನು ಹೊತ್ತು ದಿನವೂ ಪ್ರಯೋಗಾಲಯಕ್ಕೆ ಅಲೆಯುತ್ತಿದ್ದಾರೆ.

ಕಳೆದ 60-70 ವರ್ಷದ ವೈಜ್ಞಾನಿಕ ಬದಲಾವಣೆಗಳಲ್ಲಿ ಮಹತ್ವವಾದ ಪೋಲಿಯೋ ವ್ಯಾಕ್ಸೀನು, ರಾಕೆಟ್ ತಂತ್ರಜ್ಞಾನ-ಆ ಮೂಲಕ ಸಾಧ್ಯವಾದ- ವ್ಯೋಮಯಾನ, ಇಂಟರ್ನೆಟ್ ಬೆಳವಣಿಗೆಗಳು ನಮ್ಮ ನಾಗರಿಕ ಬದುಕಿನ ನೋಟವನ್ನೇ ಅಚ್ಚರಿಗೊಳಿಸಿವೆ. ಇದನ್ನೆಲ್ಲಾ ಸಾಧ್ಯಮಾಡಲು ಒಳಗೆ ಮುಚ್ಚಿಟ್ಟ ಡಬ್ಬಿಯಲ್ಲಿ ಅಡಗಿದ ಬ್ಯಾಟರಿಯು ಇಡೀ ಕೌತುಕವನ್ನು ಜನಪ್ರಿಯಗೊಳಿಸುತ್ತಾ ತನ್ನ ಶಕ್ತಿಯನ್ನು ಕೊಡುತ್ತಿದೆ. ಈ ಲಿತಿಯಂ ಬ್ಯಾಟರಿಯನ್ನು 1980ರಲ್ಲಿ ಮೊದಲಬಾರಿಗೆ ಜಾನ್ ಗುಡ್‌ಎನಫ್ ರೂಪುಗೊಳಿಸಿದರು.

ನಂತರ 1991ರಲ್ಲಿ ಅದು ಸೋನಿ ಕಂಪನಿಯ ಮೂಲಕ ನಾಗರಿಕ ಬದುಕಿಗೆ ಪರಿಚಯಗೊಂಡಿತು. ಈ ಬ್ಯಾಟರಿಗಳು ಆ ಮೊದಲೂ ಇಲ್ಲವೆಂದಲ್ಲ ಇದ್ದವು ಅವು ಆಮ್ಲದೊಳಗೆ ಮುಳುಗಿದ್ದ ಲೋಹದ ಸರಳುಗಳನ್ನು ಒಳಗೊಂಡು ಗಾತ್ರದಲ್ಲಿ ಅತ್ಯಂತ ದೊಡ್ಡದಾಗಿ ಎಲ್ಲಿಯಾದರೂ ಕೊಂಡೊಯ್ಯಲು ಅಸಾಧ್ಯ ಎನ್ನುವಂತಿದ್ದವು. ಆದರೆ ಲಿತಿಯಂ ಅತ್ಯಂತ ಹಗುರವಾದ ಲೋಹವಾಗಿದ್ದು ಅದರ ಮೂಲಕ ಇಂದು ಬ್ಯಾಟರಿಗಳು ಚಿಕ್ಕದಾಗುತ್ತಾ ಹಗುರವಾಗುತ್ತಾ ಬಂದಿವೆ.

ಈ ಲಿತಿಯಂಅನ್ನು ಬ್ಯಾಟರಿಯಲ್ಲಿ ಊಹಿಸಿದ್ದೇ ಒಂದು ಅಪ್ಪಟ ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವಾದ ಮಿಶ್ರಣ. ಈ ಎರಡೂ ಜ್ಞಾನಶಾಖೆಗಳ ಮೂಲಭೂತ ಅಧ್ಯಯನವಿಲ್ಲದ ವ್ಯಕ್ತಿಯೊಬ್ಬರು ಸಾಧ್ಯಮಾಡಿದ್ದು ಅಚ್ಚರಿಯೇ ಸರಿ. ಜಾನ್ ಗುಡ್‌ಎನಫ್ ತಮ್ಮ ಗಣಿತದ ಪದವಿಯನ್ನು ಪಡೆದ ನಂತರ ಸೈನ್ಯದಲ್ಲಿ ಸೇವೆ ಸಲ್ಲಿಸಲು ಆರಂಭಿಸಿದವರು. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಸೇನೆಯಲ್ಲಿದ್ದು ಹೊರದೇಶಗಳ ಸುತ್ತಾಟದಲ್ಲಿ ಕಳೆದವರು. ಯುದ್ಧ ಮುಗಿದನಂತರ ಸೈನಿಕರಿಗೆ ಪುನರ್ವಸತಿ ಮಾಡಿಕೊಡುವ ತಯಾರಿಯಲ್ಲಿ ಉಳಿದ ಹಣದಿಂದ ಕೆಲವರನ್ನು ಹೆಚ್ಚಿನ ಓದಿಗೆ ಕಳಿಸಲು ಆಲೋಚಿಸಲಾಯಿತು. ಅಂತಹ ಆಕಸ್ಮಿಕವಾದ ನಿರ್ಧಾರದಲ್ಲಿ ಸಿಕ್ಕಿಕೊಂಡವರು ಜಾನ್ ಅವರನ್ನು ಚಿಕಾಗೋ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಓದಿಗೆ ಶಿಫಾರಸ್ಸು ಮಾಡಿ ಕಳಿಸಲಾಯಿತು. ಅದೂ ಭೌತವಿಜ್ಞಾನದ ಅಧ್ಯಯನಕ್ಕೆ! ತಮಾಷೆ ಎಂದರೆ ಆಗಲೇ ಜಾನ್ ಅವರಿಗೆ 24 ವರ್ಷ ತುಂಬಿದ್ದವು.

ಆಗಿನಕಾಲದಲ್ಲಿ ಭೌತವಿಜ್ಞಾನ ಏನಿದ್ದರೂ ಮೊದಲ 2-3 ದಶಕದೊಳಗೇ ಓದಿ ಅರ್ಥೈಸಿಕೊಳ್ಳುವುದು ಎನ್ನುವಂತಹ ಪರಿಪಾಠ. ಅಲ್ಲದೆ ತಮ್ಮ ಸಹಪಾಠಿಗಳಿಗೆ ಹೋಲಿಸಿದರೆ ಜಾನ್ ಹಿರಿಯರಾದ ಕಾರಣ ಭೌತವಿಜ್ಞಾನ ಕಲಿಸುವ ಶಿಕ್ಷಕರು ಅವರ ಕುರಿತು ತಮಾಷೆಯನ್ನೂ ಮಾಡುತ್ತಿರುತ್ತಾರೆ. “ಏನ್ರಿ ಈ ವಯಸ್ಸಿನಲ್ಲಿ ಭೌತವಿಜ್ಞಾನ ಕಲಿಯೋದು ಅಂದರೆ ಹೇಗೆ? ನಿಮ್ಮ ವಯಸ್ಸಿನವರು ಈಗಾಗಲೇ ಭೌತವಿಜ್ಞಾನದಲ್ಲಿ ಸಾಧನೆ ಮಾಡಿರುವವರು ಇದ್ದಾರಲ್ಲವೇ?” ಎಂದು ಹಾಸ್ಯ ಮಾಡಿದ್ದೂ ಇದೆ. ಇವೆಲ್ಲದರ ನಡುವೆಯೇ ಜಾನ್ ಅವರಿಗೆ ಸಂಶೋಧನೆ ಮುಗಿಸಿ ಪಿಎಚ್.ಡಿ ಪದವಿ ಪಡೆಯಲು ಸಾಧ್ಯವಾಯಿತು.

ಕಳೆದ ಹಲವು ದಶಕಗಳಿಂದ ವಿಜ್ಞಾನ ಜಗತ್ತು ಬಗೆಬಗೆಯ ಪದಾರ್ಥಗಳ ಬೆನ್ನು ಹತ್ತಿದೆ. ಹೊಸ ಹೊಸ ವಸ್ತುಗಳ ಹುಡುಕಾಟದಲ್ಲಿ ನಿರತವಾಗಿದೆ. ಇದು ಹಿಂದಿನಿಂದಲೂ ನಡೆದುಬಂದಿದೆ. ಹಾಗಾಗಿಯೇ ಹಿತ್ತಾಳೆಯಂತಹ ಅಲಾಯ್ಗಳೂ, ಪಿಂಗಾಣಿ, ಗಾಜಿನಂತಹ ವಸ್ತುಗಳೂ ಬಹಳ ಹಿಂದೆಯೇ ನಮಗೆ ಲಭ್ಯವಾಗಿವೆ. ಈಗಂತೂ ಲಭ್ಯ ಪದಾರ್ಥಗಳ ಪಟ್ಟಿಯೇ ಬಲು ದೊಡ್ಡದಿದ್ದರೆ ಆಶ್ಚರ್ಯವೇನಲ್ಲ. ಅವುಗಳ ಜಾಲ ದೊಡ್ಡ ದೊಡ್ಡ ಕಟ್ಟಡ ಕಟ್ಟುವ ಪದಾರ್ಥಗಳಿಂದ ಹಿಡಿದು ವಿದ್ಯುತ್ ಸಂಪರ್ಕಿಸುವ ಸಣ್ಣ ತಂತಿಯವರೆಗೂ ಹಬ್ಬಿದೆ. ಹಾಗಾಗಿ ಇಂತಹ ಪದಾರ್ಥಗಳ ಹುಡುಕಾಟದ ಹಿಂದೆ ಸಂಶೋಧಕರ ದೊಡ್ಡ ಹಿಂಡೇ ಇದೆ. ಅನೇಕ ಕಂಪನಿಗಳೂ ಇವೆ. ಬ್ಯಾಟರಿ ರೂಪಿಸುವ ಪದಾರ್ಥಗಳನ್ನು ಅರ್ಥೈಸಿಕೊಂಡು ನಿರ್ವಹಿಸಲು ಭೌತವಿಜ್ಞಾನದ ಹಾಗೂ ರಸಾಯನವಿಜ್ಞಾನದ ಹದವರಿತ ತಿಳಿವಳಿಕೆಯ ಅವಶ್ಯಕತೆಯಿರುತ್ತದೆ. ಏಕೆಂದರೆ ಬ್ಯಾಟರಿಯಲ್ಲಿ ಇಲೆಕ್ಟ್ರೋ ಕೋಡ್‌ಗಳಿರುತ್ತವೆ ಮತ್ತು ಅವುಗಳ ಮಧ್ಯೆ ಪ್ರವಹಿಸಲು ಆಯಾನುಗಳಿರಬೇಕಿರುತ್ತದೆ. ವಿದ್ಯುದಂಶದ ಉತ್ಪಾದನೆ ಹಾಗೂ ಪ್ರವಹಿಸುವ ಮಾಧ್ಯಮದಲ್ಲಿ ಆಯಾನುಗಳ ಚಲನೆ. ಇವೆಲ್ಲಾ ಅರ್ಥವಾಗಲು ಪದಾರ್ಥದ ಅಣುಸ್ವರೂಪದ ಲಕ್ಷಣಗಳ ಜತೆಗೆ ಪದಾರ್ಥದ ವರ್ತನೆಯ ತಿಳಿವಳಿಕೆಯೂ ಇರಬೇಕಿರುತ್ತದೆ. ವಿವಿಧ ಆಕ್ಸೈಡ್‌ಗಳ ಮಿಶ್ರಣದಿಂದ ಉನ್ನತವಾಗಿರುವುದನ್ನೂ ಮತ್ತು ಅದು ಹಗುರವಾಗಿಯೂ ಬಹುಕಾಲ ತಡೆಯಬಲ್ಲದ್ದಾಗಿಯೂ ಇರುವ ಹುಡುಕಾಟಕ್ಕೆ ಮೂಲವಸ್ತುಗಳ ರಚನೆ ಮತ್ತು ವರ್ತನೆಗಳ ಪಕ್ವವಾದ ಊಹೆಯು ತಿಳಿವಳಿಕೆಯ ಭಾಗವಾಗಿರಬೇಕು. ವಿದ್ಯುತ್ ಪ್ರವಹಿಸಲು ಲೋಹವೇ ಆಗಬೇಕು. ಲೋಹಗಳು ಹೇಳಿಕೇಳಿ ಸಾಂದ್ರವಾದವು, ಹೆಚ್ಚು ಭಾರವಾದವು. ಲಿತಿಯಂ ಲೋಹಗಳಲ್ಲೆಲ್ಲಾ ಹಗುರವಾದದ್ದು. ಅದಕ್ಕೆ ಸರಿಯಾದ ಮಿಶ್ರಣವನ್ನು ಸಾಧಿಸಿ ಇಲೆಕ್ಟ್ರೋಡ್ ಸಾಧಿಸಿದ್ದು ಜಾನ್ ಅವರ ಜಾಣ್ಮೆ. ಅಷ್ಟೇ ಅಲ್ಲ, ಅದನ್ನು ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸಲೂ ಆಗವಂತೆ ಮಾಡಿದ್ದು ಹಿರಿಯ ಸಾಧನೆ. ಅದಕ್ಕೇ ನಾವು ದಿನವೂ ಮೊಬೈಲ್ ಚಾರ್ಜ್ ಮಾಡುವುದನ್ನು ಒಂದು ಕಾಯಕ ಮಾಡಿಕೊಂಡಿದ್ದೇವೆ. ಸಾಲದ್ದಕ್ಕೆ ಎಲ್ಲಿಗಾದರೂ ಹೊರಟರೆ ತೆಗೆದುಕೊಂಡೊಯ್ಯುವ ಚಾರ್ಜರ್ ಕೂಡ ನಮ್ಮ ಹೊಸ ಸಂಗಾತಿ ಆಗಿದೆ.

ಹೀಗೆ ಮತ್ತೆ ಮತ್ತೆ ಚಾರ್ಜ್ ಮಾಡಿ ಬಳಸುವ ಬ್ಯಾಟರಿಗಳ ಮರುಬಳಕೆ ಮಾಡುವ ಗುಣವು ಪದಾರ್ಥಗಳ ಜಾಣತನದ ಬಳಕೆಗೂ ಸಹಾಯವಾಗುತ್ತವೆ. ಇಂತಹ ಅನ್ವೇಷಣೆಯಲ್ಲಿ ಮಹತ್ವವಾದದ್ದು ಲಿತಿಯಂ ಬ್ಯಾಟರಿ. ಏಕೆಂದರೆ ಇವನ್ನು ನಾವು ಎಲ್ಲೆಲ್ಲಿ ಎಲೆಕ್ಟ್ರಾನಿಕ್ ಆಕರಗಳನ್ನು ಕಾಣುತ್ತೇವೆಯೋ, ಅವುಗಳೆಲ್ಲದರ ಒಳಗಡೆ ಕಾಣದಂತಹ ಪುಟ್ಟ ಲಿತಿಯಂ ಬ್ಯಾಟರಿಯು ಕುಳಿತಿರುತ್ತದೆ. ಅದು ಕುಳಿತಿದ್ದು ಆ ಪರಿಕರವನ್ನು ಚಲನೆಗೂ ಒಳಪಡಿಸಿ ಎಲ್ಲಿಗೆ ಬೇಕಾದರೂ ಒಯ್ಯಬಲ್ಲಂತೆ ಮಾಡುವಲ್ಲಿ ಸಹಾಯವಾಗುತ್ತದೆ. ಅದು ನಮ್ಮೆಲ್ಲರ ಕೈಯಲ್ಲಿರುವ ಮೊಬೈಲ್ ಫೋನಿರಬಹುದು ಅಥವಾ ನಮ್ಮ ನಭೋಮಂಡಲದಲ್ಲಿ ತೇಲಾಡುತ್ತಿರುವ ಉಪಗ್ರಹಗಳ ನಿರ್ವಹಿಸುವ ಸಾಧನಗಳಲ್ಲಿಯೂ ಇರಬಹುದು.

ಕಾಣದಂತೆ ಅಡಗಿ ಕುಳಿತ ಮಾಯಾಪೆಟ್ಟಿಗೆಯ ಇಲೆಕ್ಟ್ರೋಡ್ ಅನ್ವೇಷಕ ಜಾನ್ ಬದುಕು ಸಹ ಮಾಯಾಜಾಲವೆ. ತನ್ನ ಹೆತ್ತಮ್ಮನಿಗೆ ಬೇಡವಾದ ಮಗುವಾಗಿ ಹುಟ್ಟಿದ ಜಾನ್, ಅಮ್ಮನ ಪ್ರೀತಿಯನ್ನೇ ಅನುಭವಿಸಲಿಲ್ಲ. ಅಪ್ಪನೂ ಪರಿಚಿತನಂತಹ ಬದುಕನ್ನೇ ಕೊಟ್ಟವರು. ಅದಕ್ಕೆ ತಮ್ಮ ಪುಟ್ಟ ಆತ್ಮಕತೆಯಲ್ಲಿ ಎಲ್ಲಿಯೂ ಅಮ್ಮ-ಅಪ್ಪನ ಹೆಸರನ್ನೂ ಹೇಳಿಲ್ಲ! ಇದೀಗ ಕಡೆಗಾಲದಲ್ಲಿ ಹೆಂಡತಿಯೂ ತೀರಿಹೋಗಿದ್ದಾರೆ. ಸಹೋದರರೊಬ್ಬರು ತಮ್ಮ 90ರ ಇಳಿವಯಸ್ಸಿನಲ್ಲಿ ಜೀವನಯಾತ್ರೆ ಮುಗಿಸಿದ್ದಾರೆ. ಸ್ವತಃ ಜಾನ್ 97 ವಸಂತಗಳ ಕಂಡು ಲವಲವಿಕೆಯ ಅಧ್ಯಯನ, ಸಂಶೋಧನೆ ನಡೆಸುತ್ತಾ, ಇಡೀ ನಾಗರಿಕ ಬದುಕನ್ನು ಚಲನೆಯಾಗಿಸುವ ಕನಸುಗಳ ನನಸಾಗಿಸುವಲ್ಲಿ ನಿರತರಾಗಿದ್ದಾರೆ. ಅವರ ಹೊಸ ಕನಸು, ನಮ್ಮ ಮಾಮೂಲಿ ಪೆಟ್ರೋಲ್ ಕಾರುಗಳ ಕಂಬಶ್ಚನ್ ಯಂತ್ರದ ಮಾದರಿಯ ವಿದ್ಯುತ್ ಕಾರು ರಸ್ತೆಯಲ್ಲಿ ಓಡಿಸುವುದಾಗಿದೆ.

ಹೊಸತೊಂದನ್ನು ಕೊಡುವ ಉತ್ಸಾಹದ ದಣಿವರಿಯದ ವಿಜ್ಞಾನದ ಅಜ್ಜನಿಗೆ ಹಲವಾರು ಗೌರವಗಳು. ಕಳೆದ 2009ರ ಎನ್ರಿಕೋ ಫರ್ಮಿ ಪುರಸ್ಕಾರದ ಜತೆಗೆ 2013ರಲ್ಲಿ ಅಮೆರಿಕಾದ ರಾಷ್ಟ್ರೀಯ ವಿಜ್ಞಾನ ಪುರಸ್ಕಾರ ಲಭಿಸಿದೆ. ರಸಾಯನಶಾಸ್ತ್ರದ ರಾಯಲ್ ಸೊಸೈಟಿಯು ಜಾನ್ ಗುಡ್‌ಎನಫ್ ಹೆಸರಲ್ಲಿ ರಸಾಯನವಿಜ್ಞಾನದ ಬಹುಮಾನವನ್ನು ಸ್ಥಾಪಿಸಿದೆ. ಭೌತಶಾಸ್ತ್ರ ಮತ್ತು ರಸಾಯನವಿಜ್ಞಾನದ ಸರಿಯಾದ ಮಿಳಿತವಾದ ಸಂಶೋಧನೆಯನ್ನು ಮಾಡಿದ ಹಿರಿಯಜ್ಜನಿಗೆ 90ರ ನಂತರ ಹೆಚ್ಚೂಕಡಿಮೆ ಪ್ರತೀವರ್ಷ ನೊಬೆಲ್ ಪುರಸ್ಕಾರಕ್ಕೆ ಹೆಸರು ಸೂಚಿಸಲಾಗಿತ್ತು. ಇಡೀ ಇಲೆಕ್ಟ್ರಾನಿಕ್ ಜಗತ್ತನ್ನು ಕ್ರಾಂತಿಕಾರಿಯಾಗಿಸುವ ಶೋಧಕ್ಕೆ ನೊಬೆಲ್ ಬಹುಮಾನ ಯೋಗ್ಯವೆಂದು ಹಲವಾರು ವಿಜ್ಞಾನಿಗಳ ಅನಿಸಿಕೆಯಾಗಿತ್ತು. ಕಡೆಗೂ 2019ನೆಯ ವರ್ಷದ ಅಕ್ಟೋಬರ್‌ನಲ್ಲಿ ಘೋಷಿಸಲಾದ ಪುರಸ್ಕಾರದಲ್ಲಿ ಜಾನ್ ಗುಡ್‌ಎನಫ್ ಕೇಳಿಬಂದು, ಅವರ ಅಭಿಮಾನಿಗಳಲ್ಲಿ ಪುಳಕವನ್ನು ಉಂಟುಮಾಡಿತ್ತು. 98 ರ ಹರೆಯದ ತಾತನ ಆಯುಷ್ಯ ಹೆಚ್ಚಲಿ, ವಿಶ್ವಾಸದ ಕಣಜವಾಗಿರುವ ಹಿರಿಯ ವಿಜ್ಞಾನಿಯಿಂದ ಎಳೆಯರಿಗೆ ಹುರುಪು ಬರಲಿ ಎಂಬುದು ಹಲವಾರು ವಿಜ್ಞಾನಪ್ರಿಯರ ಅಭಿಲಾಷೆ.

ಗುಡ್‌ಎನಫ್ ಅಂದರೆ ಸಹಜವಾಗಿ ಅಷ್ಟು ಸಾಕು, ಎಂದರ್ಥ. ಜಾನ್ ಅವರಿಗೆ ಅದು ಅವರ ಹೆಸರು ಮಾತ್ರ. ತೊಂಭತ್ತೆಂಟು ವರ್ಷಗಳ ಸಮೀಪದ ಹಿರಿಯಜ್ಜನಿಗೆ ತಾನು ಮಾಡಿದ್ದೇನೂ ಸಾಕಾಗಿಲ್ಲ. “It is not enough for Goodenough”.

  • ಡಾ. ಟಿ.ಎಸ್. ಚನ್ನೇಶ್

ಸೆಂಟರ್ ಫಾರ್ ಪಬ್ಲಿಕ್ ಅಂಡರ್ ಸ್ಟ್ಯಾಂಡಿಂಗ್ ಆಫ್ ಸೈನ್ಸ್, ಬೆಂಗಳೂರು.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...