- Advertisement -
- Advertisement -
ಈಜಲು ಹೋಗಿದ್ದ ಮೂವರು ವಿದ್ಯಾರ್ಥಿಗಳು ಗುಬ್ಬಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಇಂದು ನಡೆದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮೂವರು ವಿದ್ಯಾರ್ಥಿಗಳ ಶವಗಳನ್ನು ಹೊರತೆಗೆದಿದ್ದಾರೆ.
ಮೃತ ವಿದ್ಯಾರ್ಥಿಗಳು ತುಮಕೂರು ಜಿಲ್ಲೆಯ ಗುಬ್ಬಿ ಪಟ್ಟಣದ ಚಿದಂಬರ ಆಶ್ರಮದಲ್ಲಿರುವ ಪಬ್ಲಿಕ್ ಶಾಲೆಯವರೆಂದು ಗುರುತಿಸಲಾಗಿದೆ.
ದರ್ಶನ್, ಶ್ರೀನಿವಾಸ್ ಮತ್ತು ನಂದನ್ ಸೇರಿದಂತೆ ಐವರು ವಿದ್ಯಾರ್ಥಿಗಳು ಗುಬ್ಬಿ ಕೆರೆಗೆ ಈಜಲು ಹೋಗಿದ್ದರು. ಇವರಲ್ಲಿ ಮೂವರು ವಿದ್ಯಾರ್ಥಿಗಳು ಸರಿಯಾಗಿ ಈಜು ಬಾರದಿದ್ದರೆ ಆಳ ಪ್ರದೇಶಕ್ಕೆ ಹೋದ ಕಾರಣ ನೀರಿನಲ್ಲಿ ಮುಳುಗಿ ನೀರು ಕುಡಿದು ಮೃತಪಟ್ಟಿದ್ದಾರೆ. ಮೃತರ ಪೋಷಕರು ತೀವ್ರ ದುಃಖತಪ್ತರಾಗಿದ್ದಾರೆ.