ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಮಧ್ಯ ಕೇರಳ ಹಾಗೂ ದಕ್ಷಿಣ ಭಾಗದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಹಲವಾರು ಸ್ಥಳಗಳು ಜಲಾವೃತಗೊಂಡಿದ್ದು, ಅಣೆಕಟ್ಟು ಪ್ರದೇಶದಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಅಣೆಕಟ್ಟುಗಳಲ್ಲಿ ಗೇಟ್ಗಳನ್ನು ತೆರೆದು ನೀರನ್ನು ಬಿಡುಗಡೆ ಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ..
ಹವಮಾನ ಇಲಾಖೆಯು ಪತ್ತನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ತಿಳಿಸಿದ್ದು, ಈ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ.
Local residents towing a KSRTC bus which got stuck in flood at Poonjar on Saturday. No loss of life.Heavy rain lashes #Kerala triggering floods and inundating several areas.#REDALERT in Pathanamthitta, Kottayam, Ernakulam, Idukki & Thrissur. 4 shutters of Malampuzha dam opened. pic.twitter.com/D1dbOtEqcV
— Raam Das (@PRamdas_TNIE) October 16, 2021
ಗುಡುಗು-ಮಿಂಚು ಸಹಿತ ಭಾರಿ ಮಳೆಯು ಶನಿವಾರ ರಾತ್ರಿವರೆಗೂ ಮುಂದಯವರೆಯುವ ನಿರೀಕ್ಷೆಯಿದೆ. ಏಳು ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು ಕಣ್ಣೂ ಮತ್ತು ವಯನಾಡ್ ಜಿಲ್ಲೆಗಳಿಗೆ ಹಳದಿ ಅಲರ್ಟ್ ಘೋಷಿಸಲಾಗಿದೆ.
ವಿಪತ್ತು ನಿರ್ವಹಣಾ ಇಲಾಖೆಯ ಉಸ್ತುವಾರಿ, ಕಂದಾಯ ಸಚಿವ ಕೆ. ರಾಜನ್ ಮಾತನಾಡಿ “ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗುಡ್ಡಗಾಡು, ನದಿ ಪಾತ್ರ ಹಾಗೂ ಭೂ ಕುಸಿತ ಉಂಟಾಗುವ ಪ್ರದೇಶದಲ್ಲಿ ವಾಸಿಸುತ್ತಿರುವ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗುತ್ತದೆ. ಎನ್ಡಿಆರ್ಎಫ್ನ ಆರು ತಂಡಗಳು ಕೇರಳದಾದ್ಯಂತ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಾಗಿ ನೀಯೋಜಿಸಲಾಗಿದೆ. ಕಕ್ಕಿ ಅಣೆಕಟ್ಟಿನಲ್ಲಿ ನೀರಿನ ಮಟ್ಟ ಏರುತ್ತಿದ್ದು, ಶಬರಿಮಲೆ ಯಾತ್ರಾರ್ಥಿಗಳು ಪಂಪಾ ನದಿಯಲ್ಲಿ ಸ್ನಾನ ಮಾಡುವುದನ್ನು ನಿಲ್ಲಿಸಬೇಕು” ಎಂದಿದ್ದರು.
Heavy ? Rain in #Kerala it's my place #Flood #heavyrain pic.twitter.com/75CkaRPINm
— Rijo Rajan (@MastetRijo) October 16, 2021
ಕೇರಳ ಸರ್ಕಾರವೂ ಈಗಾಗಲೇ ಇಡುಕ್ಕಿ ಜಿಲ್ಲಿಯಲ್ಲಿ ರಾತ್ರಿ ಸಾರಿಗೆಯನ್ನು ಅಕ್ಟೋಬರ್ 21ರವರೆಗೆ ಸ್ಥಗಿತಗೊಳಿಸಿದ್ದು, ಪ್ರವಾಸಿ ಪ್ರದೇಶಗಳಲ್ಲಿ ಬೋಟಿಂಗ್ ಮತ್ತು ಕಯಾಕಿಂಗ್ ಅನ್ನು ಸ್ಥಗಿತಗೊಳಿಸಲಾಗಿದೆ. ಪತ್ತನಂತಿಟ್ಟ ಜಿಲ್ಲಿಯಲ್ಲಿ ಮುಂಡಕ್ಕಾಯಂ-ಎರುಮೇಲಿ ರಸ್ತೆಯಲ್ಲಿ ರಸ್ತೆ ಸಾರಿಗೆಯನ್ನು ಸ್ಥಗಿತಗೊಳಲಿಸಲಾಗಿದೆ ಎಂದು ತಿಳಿಸಿದ್ದಾರೆ.
Things are getting worse here at Kerala#Kerala #flood #alert pic.twitter.com/0JwMtpOeE8
— Vimal (@vimalsaju333) October 16, 2021
ಕೇರಳದ ಈ ಪ್ರವಾಹದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರು ಎಚ್ಚರಿಕೆ ವಹಿಸುವಂತೆ ಮನವಿ ಮಾಡಲಾಗಿದೆ.
ಇದನ್ನೂ ಓದಿ: ಯೋಗಿ ಆದಿತ್ಯನಾಥರನ್ನು ರಾಮನ ಅವತಾರದಂತೆ ಬಿಂಬಿಸಿದ ಯುಪಿ ಬಿಜೆಪಿ