Homeಚಳವಳಿಹೊನ್ನಾವರ: ಖಾಸಗಿ ಬಂದರು ಯೋಜನೆಗಾಗಿ ಬಡ ಬೆಸ್ತರ ಬಲಿಗೆ ಹುನ್ನಾರ!

ಹೊನ್ನಾವರ: ಖಾಸಗಿ ಬಂದರು ಯೋಜನೆಗಾಗಿ ಬಡ ಬೆಸ್ತರ ಬಲಿಗೆ ಹುನ್ನಾರ!

ಕೃಷಿಕಾಯ್ದೆಗಳು ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವಂತೆಯೇ ಕಡಲು ಮತ್ತು ಬಂದರು ಖಾಸಗೀಕರಣ ಮೀನುಗಾರರ ಉದ್ಯೋಗ ಕಸಿದುಕೊಂಡು ನಿರ್ಗತಿಕರನ್ನಾಗಿಸುತ್ತದೆ.

- Advertisement -
- Advertisement -

ಉತ್ತರಕನ್ನಡದ ಕಡಲಂಚಿನ ಪಟ್ಟಣ ಹೊನ್ನಾವರಕ್ಕೆ ಹೊಂದಿಕೊಂಡೇ ಇರುವ ಕಾಸರಕೋಡು ಟೊಂಕದ ಬಡ ಬೆಸ್ತರನ್ನು ಕಳೆದೊಂದು ವರ್ಷದಿಂದ ಕಾಡುತ್ತಿರುವ ಬೃಹತ್ ಖಾಸಗಿ ಬಂದರು ಯೋಜನೆಯ ಹಿಂಸೆ ಈಗ ಪರಾಕಷ್ಠೆ ತಲುಪಿಬಿಟ್ಟಿದೆ! ಕಳೆದ ವಾರದ ಕರೊನಾ ವೀಕ್ಎಂಡ್ ಕರ್ಫ್ಯೂನಲ್ಲಿಯೇ 500ಕ್ಕೂ ಹೆಚ್ಚು ಪೊಲೀಸ್ ಬಲದಲ್ಲಿ ಅಸಾಯಕ ಮೀನುಗಾರರ ಒಕ್ಕಲೆಬ್ಬಸುವ ಬಲಾತ್ಕಾರವೂ ನಡೆದು ಹೋಗಿದೆ. ಪ್ರಭುತ್ವ ಮತ್ತು ಬಂಡವಾಳಶಾಹಿ ಜಂಟೀ ಕಾರ್ಯಾಚರಣೆಗೆ ತತ್ತರಿಸಿ ಹೋದ ಮೀನುಗಾರರ ತರುಣರು ಮಹಿಳೆಯರು ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ.

ತಮ್ಮ ತುತ್ತಿಗಾಧಾರವಾದ ಮೀನುಗಾರಿಕೆಗೆ ಸಂಚುಕಾರ ತರುವ ಈ ಖಾಸಗೀಕರಣ ಯೋಜನೆ ಬೇಡವೇ ಬೇಡವೆಂದು ಬಡ ಬೆಸ್ತರು ತಿಂಗಳಾನುಗಟ್ಟಲೆ ಉಪವಾಸ ಸತ್ಯಾಗ್ರಹ, ರ್ಯಾಲಿ, ಪ್ರತಿಭಟನೆ ನಡೆಸಿದ್ದರು. ಮೀನುಗಾರರ ಮನೆ, ಮೀನುಗಾರಿಕಾ ನೆಲೆ, ಬಲೆ-ಒಣ ಮೀನು ಇಡುವ ಶೆಡ್ ತೆರೆವಿಗೆ ಖಾಸಗಿ ಬಂದರು ಕಂಪನಿಯವರು ಜೆಸಿಬಿ, ಬುಲ್ಡೊಜರ್ ತಂದಾಗ ಅಡ್ಡ ಮಲಗಿ ಪ್ರತಿರೋಧಿಸಿದ್ದರು. ಆಳುವ ವರ್ಗದ ಬೆಂಬಲ ಪಡೆದಿದ್ದ ಈ ಕಂಪನಿ ಸಾಹುಕಾರರು ಬಲಾತ್ಕಾರ ನಡೆಸಿದಾಗ ಉಚ್ಛನ್ಯಾಯಲಯಕ್ಕೆ ತಕರಾರು ಸಲ್ಲಿಸಲಾಗಿತ್ತು. ಹೊನ್ನಾವರ ಪೋರ್ಟ್ ಪ್ರೈವೆಟ್ ಕಂಪನಿ ನಿರ್ಮಿಸುತ್ತಿರುವ ಖಾಸಗಿ ವಾಣಿಜ್ಯ ಬಂದರು ಯೋಜನೆ ಅನುಷ್ಠಾನ ವಿರುದ್ದದ ಸಾರ್ವಜನಿಕ ಹಿತಾಸಕ್ತಿ ದಾವೆ ವಿಚಾರಣೆಯಲ್ಲಿ ಹೈಕೋರ್ಟ್ ಅರಣ್ಯ ಸರ್ವೆ ನಂಬರ್ 233 ಮತ್ತು 237ರಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಎಚ್‌ಪಿಪಿಲಿಗೆ ಸೂಚನೆ ನೀಡಿತ್ತು.

ಆದರೆ ಎಚ್‌ಪಿಪಿಲಿ ಕಂಪನಿ ಹೈಕೋರ್ಟ್ ತಡೆಯಾಜ್ಞೆಗೂ ಕೇರ್ ಮಾಡದೆ ಕಳದೆ ಶನಿವಾರ ಜಿಲ್ಲಾಡಳಿತ, ತಾಲ್ಲೂಕಾಡಳಿತ ಸಹಕಾರದಿಂದ ಮೀನುಗಾರರ ಶೆಡ್, ಮನೆ, ಮರ ನೆಲಕ್ಕುರುಳಿಸಲು ಹವಣಿಸಿದೆ. ಮೀನುಗಾರ ಮಹಿಳೆಯರು ಪ್ರತಿಭಟಿಸುವ ಅಂದಾಜಿದ್ದ ಪ್ರಭುತ್ವ ಮತ್ತು ಕಂಪನಿ ಬೆಳಗಾವಿಯಿಂದ 500ರಷ್ಟು ಪೊಲೀಸ್‌ ಪಡೆಯನ್ನು ತರಿಸಿತ್ತು. ಒಂದೆರಡು ಮನೆ, ಶೆಡ್‌, ಮರ ಉರುಳಿಸುತ್ತಿದ್ದಂತೆ ಒಂದೇ ಸಮನೆ ಜಮೆಯಾದ ಮೀನುಗಾರರು ತೆರವಿಗೆ ಅವಕಾಶ ಕೊಡದೆ ಪ್ರತಿಭಟಿಸಿದರು. ತಮ್ಮ ತಲತಲಾಂತರದ ಕಸುಬಿಗೆ ಆಧಾರವಾದ ನೆಲೆ ಧ್ವಂಸ ಮಾಡದಂತೆ ಮಹಿಳೆಯರು ಕಣ್ಣೀರು ಸುರಿಸಿದರು. ಬೆಸ್ತರ ಯುವಕರು ಸಮುದ್ರಕ್ಕೆ ಹಾರಲು ಓಡಿದರು. ಅಧಿಕಾರಿಗಳು ದಾರಿ ಕಾಣದೆ ತೆರವಿನ ಕಾರ್ಯ ಸ್ಥಗಿತಗೊಳಿಸಬೇಕಾಗಿ ಬಂತು.

ಸದ್ಯಕ್ಕೆ ಒಕ್ಕಲೆಬ್ಬಿಸುವ ಕಾರ್ಯಚರಣೆ ನಿಂತಿದೆಯಾದರೂ ಬೆಸ್ತರ ತಲೆ ಮೇಲೆ ಕತ್ತಿ ತೂಗುತ್ತಲೇ ಇದೆ. ಮೀನುಗಾರರ ಮನೆ ಶೆಡ್ ತೆಗೆಯುವುದಿಲ್ಲ, ಅವರ ಮೀನುಗಾರಿಕಾ ಬಂದರಿಗೆ ತೊಂದರೆ ಕೊಡುವುದಿಲ್ಲ ಎಂದು ಆಡಳಿತಗಾರರು ಹೇಳುತ್ತಾರೆ. ಆದರೆ ಖಾಸಗಿ ಬಂದರು ನೀಲಿ ನಕ್ಷೆ ನೋಡಿದರೆ ಬಂದರು ಕಂಪನಿಯವರ ಧಾವಂತ ಗಮನಿಸಿದರೆ ಬಂದರು ಮತ್ತು ಅದಕ್ಕೆ ಬೇಕಾದ ಚತುಷ್ಪಥ ರಸ್ತೆಗೆ ಸಾವಿರಾರು ಎಕರೆ ಭೂಮಿ ಬೇಕೆಂಬುದು ಖಾತ್ರಿಯಾಗುತ್ತದೆ. ಆಗ ಈ ಭಾಗದಲ್ಲಿರುವ 600 ಮೀನುಗಾರ ಕುಟುಂಬದ ಕೇರಿಗೆ ಕೇರಿಯೇ ಆಹುತಿಯಾಗಲಿದೆ.

ಒಂದೇ ಸಾಲಿಸಲ್ಲಿರುವ ಬೆಸ್ತರ ಮನೆ ತೆರವು ಮಾಡದೇ ಚತುಷ್ಪಥ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ನಿಧಾನಕ್ಕೆ ಕಾಸರಕೋಡು ಟೊಂಕದ ಮೀನುಗಾರರ ಬದುಕಿಗಾಧಾರವಾದ ನೆಲೆಯೇ ಬಂದರು ಸ್ವಾಹ ಮಾಡುತ್ತದೆ ಎಂಬ ಆತಂಕ ಸಹಜವಾಗೇ ಮೂಡಿದೆ. ಆಗ ಪಾವಿನಕುರ್ವ, ಕರ್ಕಿಕೋಡಿ, ರಮಟೆಹಿತ್ತಲು, ಮುಲ್ಲಕುರ್ವಾ… ಮುಂತಾದ ಪ್ರದೇಶವೂ ಬೃಹತ್ ಬಂದರು ವ್ಯಾಪ್ತಿಗೆ ಸೇರುತ್ತದೆ. ಶರಾವತಿ ನದಿ ಮತ್ತು ಅರಬ್ಬೀ ಸಮುದ್ರದ ಸಂಗಮ ಕಾಸರಕೋಡು ಟೊಂಕದಲ್ಲಿ 600 ಕೋಟಿ ರೂಪಾಯಿ ಬಜೆಟ್‌ನ ಬಂದರು ಕಟ್ಟಲು ಹೊನ್ನಾವರ ಪೋರ್ಟ್ ಪ್ರೈವೆಟ್ ಕಂಪನಿ ಲಿಮಿಟೆಡ್(ಎಚ್‌ಪಿಪಿಲಿ)ಗೆ 2010ರಲ್ಲಿ ಗುತ್ತಿಗೆ ನೀಡಲಾಗಿದೆ. ಆದರೆ ಸರ್ಕಾರ 93 ಎಕರೆ ಜಾಗ ಮಂಜೂರು ಮಾಡಿರುವುದು ನಾರ್ತ್ ಕೆನಾರಾ ಸೀ ಪೋರ್ಟ್ ಪ್ರವೈಟ್ ಲಿಮಿಟೆಡ್ ಹೆಸರಿನ ಕಂಪನಿಗೆ.

ಇಲ್ಲೊಂದು ತಮಾಷೆಯಿದೆ ಈ ಎರಡೂ ಕಂಪನಿ ಹೆಸರಷ್ಟೇ ಬೇರೆ. ಶೇರುದಾರರು, ಒಡೆಯರು, ನಿರ್ದೇಶಕರು ಮಾತ್ರ ಅವರೇ. ಜಾಗ ಮಂಜೂರು ಮಾಡಿಸಿಕೊಂಡ ಎಸಿಸಿಪಿಪಿಲಿ ಕಂಪನಿ ಕಾಸರಕೋಡು ಟೊಂಕ ಮಲ್ಲುಕುರ್ವಾಕ್ಕೆ ಬಂದು ನೋಡಿದಾಗ ಈ ಜಾಗ ಸುಮಾರು 300 ಮೀನುಗಾರರಿಗೆ ಮನೆ ನಿರ್ಮಾಣಕ್ಕೆಂದು ಕೊಟ್ಟಿರುವುದು ತಿಳಿಯುತ್ತದೆ. ಜಾಗದ ಸರ್ವೆ ನಂಬರ್ ಕೂಡ ಬೋಗಸ್ ಆಗಿತ್ತು (ಸರ್ವೆ ನಂಬರ್ 9999) ಆ ಜಾಗದ ಸರ್ವೆ ಹೆಸರನ್ನೇ ಬದಲಿಸಿ ಎಚ್‌ಪಿಪಿಲಿ ಎಂದು ಬದಲಾಯಿಸಲಾಯಿತು. ಈ ಎಸಿಸಿಪಿಪಿಲಿ ಮತ್ತು ಎಚ್‌ಪಿಪಿಲಿ ಕಂಪನಿಗಳು ಆಂಧ್ರ ಮೂಲದ್ದು; ಸಿಕಂದರಾಬಾದ್, ಹೈದರಾಬಾದ್ ವಿಳಾಸದ ಕಂಪನಿಗಳ ಹಿಂದೆ ಆಂಧ್ರ ಅಧಿಕಾರಿಗಳ ಪ್ರಬಲ ಲಾಬಿಯಿದೆ ಎನ್ನಲಾಗಿದೆ. ಕರ್ನಾಟಕ ಆಯಕಟ್ಟಿನ ಇಲಾಖೆಗಳ ಮುಖ್ಯಸ್ಥರು ಆಂಧ್ರದವರಾಗಿರುವುದರಿಂದ ಈ ಬಂದರು ಕಂಪನಿ ತಮಗೆ ಬೇಕಾದಂತೆ ಕಾನೂನನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪವಿದೆ.

ಎಚ್‌ಪಿಪಿಗೆ ಅನುಕೂಲವಾಗುವಂತೆ ಹೊನ್ನಾವರ ತಾಲ್ಲೂಕಿನ ಕರಾವಳಿ ಗಡಿಯನ್ನೆ ಬದಲಿಸಲಾಗಿದೆ! ಪಾವಿನಕುರ್ವಾ, ಮಲ್ಲುಕುರ್ವಾ, ಕರ್ಕಿ ಮತ್ತು ಕಾಸರಕೋಟು ಗ್ರಾಮದ ಗಡಿಯನ್ನು ಜಿಲ್ಲಾಡಳಿತ ಮತ್ತು ಸರ್ವೆ ಇಲಾಖೆ (ಎಡಿಎಲ್‌ಆರ್—ಕಚೇರಿ) ಬದಲಿಸಿದೆ. ಕಡಲಂಚಿನ ವಿಜ್ಞಾನಿಯೊಬ್ಬರು ಮತ್ತು ಮೀನುಗಾರರು ಈ ಅಕ್ರಮದ ಬಗ್ಗೆ ಸರ್ವೆ ಆಫ್ ಇಂಡಿಯಾಕ್ಕೆ ದೂರು ಕೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದ ಸರ್ವೆ ಆಫ್ ಇಂಡಿಯಾದ ಅಧಿಕಾರಿಗಳು ಸಂಬಂಧಿಸಿದ ಪ್ರದೇಶದ ಅಷ್ಟೂ ದಾಖಲೆ ಕಳಿಸುವಂತೆ ಸೂಚಿಸಿದ್ದರು. ಅಲ್ಲಿಗೆ ಆಂಧ್ರ ಮೂಲದ ಬಂಡವಾಳಶಾಹಿ ಮತ್ತು ಅಧಿಕಾರಿಗಳ ಲಾಬಿ ಗೋಲ್‌ಮಾಲ್ ಮಾಡುತ್ತಿದೆ ಎಂಬುದು ಜಗಜ್ಜಾಹೀರಾಗಿ ಹೋಗಿದೆ!!

ಎಚ್ಪಿಪಿಲಿಗೆ ಯಾವುದೇ ಬಂದರು ಕಟ್ಟಿದ ಅಥವಾ ಬಂದರು ನಿರ್ವಹಿಸಿದ ದಾಖಲೆ ಇಲ್ಲ. ಈಗ ಕಾಸರಕೋಡದಲ್ಲಿ ಕಂಪನಿ ತನಗೆ ಬೇಕಾದಲ್ಲಿ ಭೂಕಬಳಿಕೆ ಮಾಡಿ ಬಂದರು ನಿರ್ಮಾಣ ಮಾಡುತ್ತಿದೆ. ಬಂದರು ಕಟ್ಟಲು ಸರ್ಕಾರ ಮಂಜೂರು ಮಾಡಿದ ಸ್ಥಳವೇ ಬೇರೆ, ಸದರಿ ನಿರ್ಮಿಸುತ್ತಿರುವ ಜಾಗವೇ ಬೇರೆಯಂದು ಸ್ಥಳೀಯ ಮೀನುಗಾರರು ಆರೋಪಿಸಿದ್ದಾರೆ.

ಕರಾವಳಿ ಗಡಿ ಬದಲಾಯಿಸಿವುದು ತುಂಬ ಅಪಾಯಕಾರಿ. ವಿದೇಶಿಯರಿಗೆ ಆಕ್ರಮಣಕ್ಕೆ ಇದು ಅವಕಾಶ ಮಾಡಿಕೊಡುತ್ತದೆನ್ನುತ್ತಾರೆ ಕಡಲ ಶಾಸ್ತ್ರಜ್ಞರು. ಕರಾವಳಿ ಪ್ರದೇಶದ ಗಡಿಯನ್ನು ಬದಲಾಯಿಸುವುದು ಕೋಸ್ಟಲ್ ಝೋನ್ ಮ್ಯಾನೇಜ್‌ಮೆಂಟ್ ಪ್ಲಾನ್‌ಗೆ ವಿರುದ್ಧವಾದದು. ಕರಾವಳಿ ಗಡಿಯನ್ನು ನೆವೆಲ್ ಹೈಡ್ರಾಲಜಿ ಆಫೀಸರ್ ಮತ್ತು ಸರ್ವೆ ಆಫ್ ಇಂಡಿಯಾ ನಿರ್ಧರಿಸುತ್ತದೆ. ಸ್ಥಳೀಯ ಕಂದಾಯ ಇಲಾಖೆ ನಕ್ಷೆ ಬಳಸಿ ಗಡಿ ಗುರುತಿಸಬೇಕು. ಜಲಗಡಿ ಬದಲಿಸುವ ಅಧಿಕಾರವಿರುವುದು ಭಾರತ ಸರ್ಕಾರಕ್ಕೆ ಮಾತ್ರ ಆದರೂ ಕಾಸರಕೋಡು, ಕರ್ಕಿ, ಪಾವಿನಕುರ್ವಾದ ಗಡಿ ರಾಜ್ಯ ಸರ್ಕಾರ ಬದಲಾಯಿಸಿರುವುದು ಇದು ಅನೇಕ ಅನುಮಾನಕ್ಕೆ ಮತ್ತು ಅನಾಹುತಕ್ಕೂ ಕಾರಣವಾಗಲಿದೆ.

ಕಾಸರಕೋಡು ಪ್ರದೇಶದ ಮೀನುಗಾರರಲ್ಲಿ ಹಿಂದು, ಮುಸ್ಲಿಮ್, ಕ್ರಿಶ್ಚಿಯನ್ ಸಮುದಾಯದವರಿದ್ದಾರೆ. ಖಾಸಗಿ ಬಂದರು ಯೋಜನೆಯಿಂದ ತಮ್ಮ ಬದುಕು ಮೂರಾಬಟ್ಟೆಯಾಗುತ್ತದೆಂಬ ಆತಂಕದಿಂದ ಸಾಮೂಹಿಕವಾಗಿ ಸಮುದ್ರಕ್ಕೆ ಹಾರಲು ಮುಂದಾಗಿದ್ದೂ ನಡೆದುಹೋಗಿದೆ. ಆದರೆ ಸ್ಥಳಿಯ ಶಾಸಕ ಸುನಿಲ್‌ ನಾಯ್ಕ್ ಅತ್ತ ಸುಳಿದಿಲ್ಲ. ಕಳೆದ ಚುನಾವಣೆಯಲ್ಲಿ ಮೀನುಗಾರರ ಹುಡುಗ ಪರೇಶ್ ಮೇಸ್ತನ ಸಂಶಯಾಸ್ಪದ ಸಾವಿನ ವಿಚಾರದಲ್ಲಿ ಬಹಳ ಹೋರಾಟ ನಡೆಸಿದ್ದ ಈ ಬಿಜೆಪಿ ಶಾಸಕರ ಬಗ್ಗೆ ಸಹಜವಾಗೇ ಮೀನುಗಾರರೀಗ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಸಕ ಸುನಿಲ್‌ನಾಯ್ಕ್ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗೊಳಾಗಗುತ್ತಿದ್ದಾರೆ.

ಕೃಷಿಕಾಯ್ದೆಗಳು ರೈತರನ್ನು ಭೂಮಿಯಿಂದ ಒಕ್ಕಲೆಬ್ಬಿಸುವಂತೆಯೇ ಕಡಲು ಮತ್ತು ಬಂದರು ಖಾಸಗೀಕರಣ ಮೀನುಗಾರರ ಉದ್ಯೋಗ ಕಸಿದುಕೊಂಡು ನಿರ್ಗತಿಕರನ್ನಾಗಿಸುತ್ತದೆ. ಮೊದಲೇ ಸಣ್ಣ ಹಾಗೂ ನಾಡದೋಣಿ ಮೀನುಗಾರಿಕೆಯವರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಮೀನಿನ ಇಳುವರಿ ಕಮ್ಮಿಯಾಗಿ ಆದಾಯವೇ ಇಲ್ಲದಾಗಿದೆ. ಇಂಥ ಸಂದರ್ಭದಲ್ಲಿ ಬೆನ್ನಿಗೆ ಬಿದ್ದು ಕಾಡುತ್ತಿರುವ ಖಾಸಗಿ ಬಂದರು ಯೋಜನೆ ಮೀನುಗಾರರಿಗೆ ದೊಡ್ಡ ಚಿಂತೆಯಾಗಿದೆ. ಕಡಲಂಚಿನ ಪಟ್ಟಣಗಳಲ್ಲಿ ಜಾರಿಗೊಳಿಸಿರುವ ತರತರದ ಯೋಜನೆಗಳು ಮೀನುಗಾರರನ್ನು ಸಂಕಷ್ಟಕ್ಕೆ ನೂಕಿದೆ; ಕಡಲು ಮಾಲಿನ್ಯದಿಂದ ಮೀನಿನ ಸಂತತಿ ನಶಿಸಿದೆ. ಆಳ ಸಮುದ್ರ ಮೀನುಗಾರಿಕೆಯಿಂದ ಪಾರಂಪರಿಕ ಮೀನುಗಾರರು ಕಷ್ಟಕ್ಕೆ ಸಿಲುಕಿದ್ದಾರೆ. ಹೀಗೆ ಹತ್ತು ಹಲವು ಸಮಸ್ಯೆಗಳು ಮೀನುಗಾರರನ್ನು ಬಾಧಿಸುತ್ತಿವೆ.

ಆಳುವವರು ಬಂದರು ಖಾಸಗೀಕರಣ ಯೋಜನೆ ನಿಲ್ಲಿಸಿ, ಸ್ಥಳಿಯರ ಜೀವನಕ್ಕೆ ಅನುಕೂಲವಾದ ಅಭಿವೃದ್ಧಿ ಯೋಜನೆಗಳನ್ನು ಜಾರಿಗೊಳಿಸಬೇಕು, ಮೀನುಗಾರರ ಒಳತಿಗೆ ತಕ್ಕಂತ ಯೋಜನೆಗಳು ಬೇಕು ಎಂಬ ಕೂಗು ದಿನೇ ದಿನೇ ಜೋರಾಗುತ್ತಿದೆ.


ಇದನ್ನೂ ಓದಿ: ಉತ್ತರ ಕನ್ನಡ: ವಿಭಿನ್ನ ಜನ – ಜಾತಿ: ವೈವಿದ್ಯ ಭಾಷೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...