Homeಮುಖಪುಟರಾಹುಲ್ ಗಾಂಧಿ ಅನರ್ಹತೆ ಒಂದು ರಾಜಕೀಯ ತಿರುವಾಗಬಹುದು ಹೇಗೆ?

ರಾಹುಲ್ ಗಾಂಧಿ ಅನರ್ಹತೆ ಒಂದು ರಾಜಕೀಯ ತಿರುವಾಗಬಹುದು ಹೇಗೆ?

- Advertisement -
- Advertisement -

’ಮೋದಿಯ ಭಾರತದಲ್ಲಿ’ (ಮೋದಿ’ಸ್ ಇಂಡಿಯಾ – ವೆಸ್ಟ್‌ಲ್ಯಾಂಡ್ ಪ್ರಕಾಶನ 2023) ಎಂಬ ಪುಸ್ತಕದಲ್ಲಿ ನಾನು ರಾಷ್ಟ್ರೀಯ ಜನಪ್ರಿಯ ರಾಜಕಾರಣದಿಂದ ಚುನಾಯಿತ ಸರ್ವಾಧಿಕಾರಕ್ಕೆ ಆದ ಸ್ಥಿತ್ಯಂತರವನ್ನು ಅಧ್ಯಯನ ಮಾಡಿದ್ದೇನೆ. ಚುನಾವಣಾ ಆಯೋಗವೂ ಸೇರಿದಂತೆ ಅತಿಮುಖ್ಯ ಸಂಸ್ಥೆಗಳನ್ನು ಕಾರ್ಯಾಂಗವು ವಶಪಡಿಸಿಕೊಂಡಿರುವುದು ಮತ್ತು ಕ್ರೋನಿ ಬಂಡವಾಳಶಾಹಿಯ ನೆರವಿನಿಂದ ’ಮುಖ್ಯವಾಹಿನಿ’ಯ ಮಾಧ್ಯಮಗಳನ್ನು ಸಾಕುಪ್ರಾಣಿಯಂತೆ ಪಳಗಿಸಿರುವುದರಿಂದ ಈ ಹಂತವನ್ನು ಗುರುತಿಸಬಹುದು.

ಬೇರೆ ದೇಶಗಳು ಕೂಡಾ ಇಂತಹುದೇ ಸನ್ನಿವೇಶವನ್ನು ಅನುಭವಿಸುತ್ತಿರುವ ಹೊತ್ತಿನಲ್ಲಿ ಚುನಾವಣೆಗಳು ಈಗಲೂ ನಡೆಯುತ್ತಿವೆ; ಯಾಕೆಂದರೆ, ಅವುಗಳ ಪರಮೋಚ್ಛ ನಾಯಕನಿಗೆ ಇತರ ಅಧಿಕಾರ ಕೇಂದ್ರಗಳ (ನ್ಯಾಯಾಂಗವೂ ಸೇರಿದಂತೆ) ಮೇಲೆ ನಿಯಂತ್ರಣ ಸಾಧಿಸಲು ತೋರಿಕೆಗಾದರೂ ಜನಾದೇಶದ ನ್ಯಾಯಸಮ್ಮತತೆ ಬೇಕಾಗುತ್ತದೆ. ಆದರೆ, ಇದೀಗ ಚುನಾವಣೆಗಳು ಸಮಾನಾವಕಾಶದ ಕಣದಲ್ಲಿ ನಡೆಯುವುದಿಲ್ಲ. ಮಾಧ್ಯಮಗಳ ತಾರತಮ್ಯ ಮಾತ್ರವಲ್ಲದೇ, ಭಾರೀ ಪ್ರಮಾಣದ ಹಣವನ್ನು ಒದಗಿಸುವ ಸಾರ್ವಜನಿಕ ಅವಕಾಶದ ಸಾಂದ್ರೀಕರಣವೂ ಇದಕ್ಕೆ ಕಾರಣ. ಅದಕ್ಕಾಗಿಯೇ ಇರುವ ಚುನಾವಣಾ ಬಾಂಡ್ ಇತ್ಯಾದಿಗಳು. (ದೊಡ್ಡ ಉದ್ದಿಮೆಗಳು ನೀಡುವ ಬಹುತೇಕ ನಿಧಿಯು ಆಳುವ ಪಕ್ಷದ ಪಾಲಾಗುತ್ತಿದೆ ಎಂದು ಲೇಖಕರು ಸೂಚಿಸುತ್ತಿದ್ದಾರೆ.)

ಒಂದು ಹೊಸ ಅನುಕ್ರಮವು ಈಗಷ್ಟೇ ಆರಂಭವಾಗಿದೆ. ಭಾರತದಲ್ಲಿ ಈಗ ನಡೆಯುತ್ತಿರುವಂತೆ ಸಾಂವಿಧಾನಿಕ ಸಂಸ್ಥೆಗಳನ್ನು ಆಳುವ ಪಕ್ಷಗಳು ವಶಕ್ಕೆ ಪಡೆಯುತ್ತಿರುವಾಗ ಪ್ರತಿಪಕ್ಷಗಳು ಬದಲಿ ದಾರಿ ಮತ್ತು ವಿಧಾನಗಳನ್ನು ಕಂಡುಕೊಳ್ಳುವುದು ಅನಿವಾರ್ಯವಾಗುತ್ತದೆ. ಮೊದಲಿಗೆ ಸಂಸತ್ತಿನಲ್ಲಿ ರಾಹುಲ್ ಗಾಂಧಿ ಈ ಕಾರ್ಯದಲ್ಲಿ ತೊಡಗಿಕೊಂಡರು. ಅವರು ಪ್ರಜಾಪ್ರಭುತ್ವದ ಮೇಲಿನ ದಾಳಿಗಳು ಮತ್ತು ಸರಕಾರ ಹಾಗೂ ಹೊಸ ಅತಿ ಶ್ರೀಮಂತರ ನಡುವಿನ ಕೂಟವನ್ನು ಖಂಡಿಸಿದರು. ಸ್ಪಷ್ಟವಾಗಿಯೇ ಅದು ಸಾಕಾಗಲಿಲ್ಲ: ಸಂಸತ್ತನ್ನು ದುರ್ಬಲಗೊಳಿಸಲಾಗಿದೆ ಮಾತ್ರವಲ್ಲದೇ, ಸಂಸತ್ತಿನಲ್ಲಿ ನಡೆಯುವ ಚರ್ಚೆಗಳನ್ನೀಗ ಮುಖ್ಯವಾಹಿನಿಯ ಮಾಧ್ಯಮಗಳು ವರದಿ ಮಾಡುವುದೇ ಇಲ್ಲ. (ಸಂಸತ್ತನ್ನು ಎಷ್ಟರ ಮಟ್ಟಿಗೆ ದುರ್ಬಲಗೊಳಿಸಲಾಗಿದೆ ಎಂದರೆ, ಈಗ ನಡೆಯುತ್ತಿರುವ ಚರ್ಚೆಗಳಿಗಿಂತ ತುರ್ತುಪರಿಸ್ಥಿತಿಯು ವೇಳೆ ನಡೆದ ಕೆಲವು ಚರ್ಚೆಗಳ ಬಗೆಗೆ ಒಲವು ತೋರುವಷ್ಟು!)

ಆದುದರಿಂದ, ಪ್ರತಿಪಕ್ಷಗಳು- ನಿರಂತರವಾದ ಸುಳ್ಳು ಮಾಹಿತಿ, ಅಪಪ್ರಚಾರಗಳ ಕಾರಣದಿಂದ ವಾಸ್ತವವನ್ನು ಕಡೆಗಣಿಸುತ್ತಾ ಬಂದಿರುವ ಜನತೆಯನ್ನು ಸಂಪರ್ಕಿಸಲು ನೇರವಾಗಿ ಅವರ ಕಡೆಗೇ ಹೋಗಬೇಕಾಯಿತು. ಪಕ್ಷದೊಳಗಿನ ಇತ್ತೀಚಿನ ಆಂತರಿಕ ಚುನಾವಣೆಗಳ ನಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಪುನಶ್ಚೇತನಗೊಳಿಸಲು ’ಭಾರತ್ ಜೋಡೊ’ ಯಾತ್ರೆ ಕೂಡಾ ಒಂದು ದಾರಿಯಾಯಿತು. ಅತ್ಯಂತ ಕಳಪೆ ಮಾಧ್ಯಮ ವರದಿಗಳ ಹೊರತಾಗಿಯೂ (ಗುಣಮಟ್ಟ ಮತ್ತು ಪ್ರಮಾಣ ಎರಡರಲ್ಲೂ) ಈ 4,000 ಕಿ.ಮೀ.ಗಳ ಈ ಯಾತ್ರೆಯು ಯಶಸ್ವಿಯಾಯಿತು: ಕಾಂಗ್ರೆಸ್ ತನ್ನ ಸ್ವಾತಂತ್ರ್ಯಪೂರ್ವದ ಬೇರುಗಳಿಗೆ ಮರಳಿತು; ಹೇಗೆಂದರೆ, ಪ್ರಬಲವಾದ ಆಳುವ ಬಹುಸಂಖ್ಯಾತವಾದಿ ಕೂಟವು ಬಹಳಷ್ಟು ಜನವರ್ಗಗಳನ್ನು ಅಧಿಕೃತ ರಾಷ್ಟ್ರದ ವ್ಯಾಪ್ತಿಯಿಂದ ಹೊರಗಿಡುವ ಧೋರಣೆಯನ್ನು ಅನುಸರಿಸುತ್ತಿರುವಾಗ, ಈ ಯಾತ್ರೆಯು ಎಲ್ಲಾ ರೀತಿಯ ಜನರನ್ನು ಒಂದು ಸಾಮಾಜಿಕ ಚಳವಳಿಯಾಗಿ ಜೊತೆ ತರಲು ಸಾಧ್ಯವಾಯಿತು.

ಮುಂದಿನ ನಡೆಗಳು

ಮುಂದಿನ ಹೆಜ್ಜೆಯನ್ನು ಮೊದಲೇ ಊಹಿಸಬಹುದಿತ್ತು: ರಾಹುಲ್ ಗಾಂಧಿಯನ್ನು ನಿಷ್ಕ್ರಿಯಗೊಳಿಸಬೇಕೆನ್ನುವುದು. ಆದಕ್ಕಾಗಿ ಉಪಯೋಗಿಸಿಕೊಂಡ ನೆಪವೆಂದರೆ, ಜಗತ್ತಿನ ಮೋದಿಗಳೆಲ್ಲರ ಮಾನಹಾನಿ ಮಾಡಿದ್ದು- ಸಿಗಬಹುದಾಗಿದ್ದ ಕುಂಟುನೆಪ ಅದೊಂದೇ. ಸ್ವತಃ ನರೇಂದ್ರ ಮೋದಿಯೇ “ಪಾಸ್ತ ಬೆಹನ್”, “ಜರ್ಸಿ ಹಸು”, “ಮೌನ್ ಮೋಹನ್ ಸಿಂಗ್” ಇತ್ಯಾದಿ ಕೀಳು ಪದಗಳನ್ನು ಬಳಸಿ ವ್ಯಂಗ್ಯವಾಡಿರುವಾಗ, ಇದೊಂದು ವಿಪರ್ಯಾಸದಂತೆ ಕಾಣುತ್ತದೆ. ಆದರೆ, ಇದಕ್ಕಿಂತ ಒಳ್ಳೆಯ ನೆಪ ದೊರಕದೇ ಇದ್ದಾಗ ಅದುವೇ ಪ್ರಯೋಜನಕ್ಕೆ ಬಂತು. ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಶಿಕ್ಷೆಯಾಯಿತು. ಅವರನ್ನು ಸಂಸತ್ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಯಿತು. ಮೂಲ ಉದ್ದೇಶ ಅದೇ ಆಗಿತ್ತು: ರಾಹುಲ್ ಗಾಂಧಿಯನ್ನು ಸಂಸತ್ತಿನಿಂದ ತೆಗೆದುಹಾಕುವುದು.

ಗೌತಮ್ ಅದಾನಿ ಮತ್ತು ನರೇಂದ್ರ ಮೋದಿಯ ಸಂಬಂಧದ ಬಗ್ಗೆ ಹೊಸ ಚರ್ಚೆ ಆರಂಭವಾಗಿರುವಾಗ ಭಾರತ ಮತ್ತು ವಿದೇಶಗಳ ಉದ್ಯಮಿ ಸಮುದಾಯಗಳು ಉಸಿರು ಬಿಗಿಹಿಡಿದು ಗಮನಿಸುವ ಸಂದರ್ಭದಲ್ಲಿ ಸರಕಾರಕ್ಕೆ ಹುಟ್ಟಿಕೊಂಡಿರುವ ತೀವ್ರ ಹೆದರಿಕೆಯನ್ನು ಈ ನಡೆ ತೋರಿಸುತ್ತದೆ. ಈ ರೀತಿಯ ನಡೆಗಳೆಲ್ಲವೂ ತೀರಾ ಕೆಟ್ಟದನ್ನು ತಪ್ಪಿಸುವ “ಪ್ಲಾನ್ ಬಿ”ಗಳು. ಆದರೆ, ಹಾನಿ ನಿಯಂತ್ರಣದ ಈ ನಡೆಯು ವ್ಯತಿರಿಕ್ತ ಪರಿಣಾಮ ಬೀರಬಹುದು.

ಪ್ರತಿಯೇಟು

ಮೊದಲನೆಯದಾಗಿ ಉದಾರವಾದಿ ಪ್ರಜಾಪ್ರಭುತ್ವಗಳಲ್ಲಿ ಈ ರೀತಿಯ ಕ್ಷುಲ್ಲಕ ಅಪರಾಧಗಳಿಗಾಗಿ ಪ್ರತಿಪಕ್ಷಗಳ ನಾಯಕರನ್ನು ಜೈಲಿಗೆ ಕಳಿಸುವುದಿಲ್ಲ. ಇದರಿಂದಾಗಿ ಭಾರತವು ತಾನು ಮಾಡುವ “ಪ್ರಜಾಪ್ರಭುತ್ವಗಳ ಮಾತೆ”, “ವಿಶ್ವಗುರು” ಇತ್ಯಾದಿ ದಾವೆಗಳನ್ನು ದುರ್ಬಲಗೊಳಿಸಿದಂತಾಗಿದೆ. ಜಿ20 ಶೃಂಗಸಭೆಗೆ ಕೇವಲ ಆರು ತಿಂಗಳುಗಳು ಇರುವಾಗ ಭಾರತವು ತನ್ನ ಈ ಇಮೇಜನ್ನು ಹೆಚ್ಚಿಸಿಕೊಳ್ಳಬೇಕಾಗಿದ್ದ ಸಂದರ್ಭದಲ್ಲಿ ಅದನ್ನು ತೆಳುಗೊಳಿಸುತ್ತಿದೆ.

ಎರಡನೆಯದಾಗಿ, ಟರ್ಕಿ, ಇಸ್ರೇಲ್, ಹಂಗೆರಿ ಮತ್ತು ಪೋಲೆಂಡಿನಲ್ಲಿ ಆದಂತೆ, ಈ ರೀತಿಯ ತೀವ್ರತರದ ಕ್ರಮಗಳು ಪ್ರತಿಪಕ್ಷಗಳನ್ನು ಇನ್ನಷ್ಟು ಬಲಗೊಳಿಸುತ್ತವೆ. ಅರವಿಂದ ಕೇಜ್ರಿವಾಲ್ ಅವರಂಥ ರಾಹುಲ್ ಗಾಂಧಿಯ ಪ್ರತಿಸ್ಪರ್ಧಿಗಳು ತಮ್ಮನ್ನು ಸೇರಿಸಿದಂತೆ ಭಿನ್ನಾಭಿಪ್ರಾಯ ವ್ಯಕ್ತಪಡಿಸುವ ಎಲ್ಲರಿಗೂ ಈ ಸರಕಾರವು ಒಡ್ಡುತ್ತಿರುವ ಬೆದರಿಕೆಯನ್ನು ಮನಗಾಣುತ್ತಿದ್ದಾರೆ. ಮನೀಶ್ ಸಿಸೋಡಿಯಾ ಅವರ ಬಂಧನವು ಈ ವಿಷಯವನ್ನು ಈಗಾಗಲೇ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ‘ಕ್ಷಮೆ ಕೇಳಲು ನಾನು ಸಾವರ್ಕರ್‌ ಅಲ್ಲ’: ಅನರ್ಹತೆ ಬಳಿಕ ರಾಹುಲ್‌ ಹೇಳಿಕೆ

ಪ್ರತಿಪಕ್ಷಗಳ ನಾಯಕರು ಒಗ್ಗಟ್ಟಾದಾಗ ಸರ್ವಾಧಿಕಾರಿ ನಾಯಕರ ಕೆಲಸ ಇನ್ನಷ್ಟು ಸಂಕೀರ್ಣವಾಗುತ್ತದೆ: ಅವರ ಧ್ರುವೀಕರಣದ ತಂತ್ರವು ತಿರುಗೇಟು ಹೊಡೆಯುತ್ತದೆ. ಈ ಹೊಸ ಪರಿಸ್ಥಿತಿಯು ಹೊಸ ಬೆಂಬಲಿಗರನ್ನು ಕಂಡುಕೊಳ್ಳದ ಹೊರತು- ಹೆಚ್ಚು ಉದಾರವಾಗುವುದನ್ನು ’ಒತ್ತಾಯ’ದಿಂದ ಅನಿವಾರ್ಯಗೊಳಿಸುತ್ತದೆ ಕೂಡಾ: ಮರಳಿಮರಳಿ ಜ್ಯೋತಿರಾದಿತ್ಯ ಸಿಂಧಿಯಾ ಮಾದರಿ/ಲಕ್ಷಣಕ್ಕೆ ಹೊರಳುವ ಸಾಧ್ಯತೆಯಿದೆ; ಮುಂಬರುವ ವಾರಗಳು ಮತ್ತು ತಿಂಗಳುಗಳಲ್ಲಿ ಭಾರತದ ರಾಜಕೀಯ ಪರಿಸ್ಥಿತಿಯನ್ನು ಅಂದಾಜು ಮಾಡುವಲ್ಲಿ ಇದು ಒಂದು ಮುಖ್ಯ ಅಂಶವಾಗಲಿದೆ. ಆದರೆ, ದಿಲ್ಲಿ ಮತ್ತು ಪಂಜಾಬ್ ಮಾತ್ರವಲ್ಲ, ಬಿಹಾರ ಮತ್ತು ಉತ್ತರ ಪ್ರದೇಶ (ಇಲ್ಲಿ ಮುಂದೊಂದು ದಿನ ಮಾಯಾವತಿ ಸಕ್ರಿಯ ರಾಜಕಾರಣಕ್ಕೆ ಮರಳಬಹುದು), ಪಶ್ಚಿಮ ಬಂಗಾಳ, ಒರಿಸ್ಸಾ, ಜಾರ್ಖಂಡ್, ಕೇರಳದ ರಾಜ್ಯ ಮಟ್ಟದ ಪಕ್ಷಗಳ ನಾಯಕರು ಮಹಾರಾಷ್ಟ್ರ ಮತ್ತು ತಮಿಳುನಾಡಿನ ಮುಖಂಡರ ಜೊತೆಗೆ ಬರಬಹುದು; ಯಾಕೆಂದರೆ, ಒಗ್ಗಟ್ಟೇ ಈ ಕಾಲದ ಮೂಲ ಮಂತ್ರ. ಕರ್ನಾಟಕದ (ಆ ನಂತರ ಮಧ್ಯಪ್ರದೇಶ, ಛತ್ತೀಸಗಢ ಮತ್ತು ರಾಜಸ್ಥಾನದ) ಚುನಾವಣಾ ಫಲಿತಾಂಶ 2024ರ ಲೋಕಸಭಾ ಚುನಾವಣೆಯ ಗತಿಯನ್ನು ನಿರ್ಧರಿಸಲಿದೆ.

ಕೊನೆಯದಾಗಿ, ರಾಹುಲ್ ಅವರನ್ನು ಸಂಸತ್ಸದಸ್ಯತ್ವದಿಂದ ಆನರ್ಹಗೊಳಿಸಿರುವುದು (ಮತ್ತು ಸಂಭಾವ್ಯ ಜೈಲುವಾಸ) ದೇಶದ ಆಡಳಿತ ಪಕ್ಷದವರಿಗೆ ತಿರುಗುಬಾಣವಾಗಬಹುದು. ಅವರನ್ನು ಜೈಲಿಗೆ ಕಳಿಸಿದ್ದೇ ಆದಲ್ಲಿ ಸಂತ್ರಸ್ತತನದ ಕಥಾನಕವು ರಾಜಕೀಯ ರಂಗದ ಒಂದು ವಿಭಾಗದಿಂದ ಇನ್ನೊಂದು ವಿಭಾಗಕ್ಕೆ ಸ್ಥಿತ್ಯಂತರಗೊಳ್ಳಬಹುದು. 2002ರಿಂದಲೂ ನರೇಂದ್ರ ಮೋದಿ ತನ್ನನ್ನು “ಉದಾರವಾದಿಗಳು”, “ಲ್ಯುಟೆನ್ ದಿಲ್ಲಿವಾಲಗಳು”, “ಖಾನ್ ಮಾರ್ಕೆಟ್ ಗ್ಯಾಂಗ್” ಪ್ರತಿನಿಧಿಸುವ ವ್ಯವಸ್ಥೆಯ ಮತ್ತು ಅವರ ವಕ್ತಾರರ (ಹಿಂದಿನ ದಿನಗಳ ಎನ್‌ಡಿಟಿವಿ ಸೇರಿದಂತೆ) ಬಲಿಪಶು ಎಂಬಂತೆ ಬಿಂಬಿಸುತ್ತಾ ಬಂದಿದ್ದಾರೆ. ತಾನೊಬ್ಬ “ಚಾಯ್‌ವಾಲ”, ಒಬಿಸಿಯವನಾದುದರಿಂದ ಈ ಪ್ರತಿಷ್ಠಿತ ಗುಂಪುಗಳ ನೇರ ಬಲಿಪಶುವಾಗಿರುವ ಕೆಳವರ್ಗದ ಸಾಕಾರರೂಪವೇ ತಾನು ಎಂದವರು ಹೇಳಿಕೊಳ್ಳುತ್ತಾರೆ. ನಿಜವಾದ ಬಲಿಪಶು- ಭಾರತದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವನದ ಒಂಬತ್ತು ವರ್ಷಗಳನ್ನು ಜೈಲಿನಲ್ಲಿ ಕಳೆದ, ಹಲವಾರು ತ್ಯಾಗಗಳನ್ನು ಮಾಡಿದ ಜವಾಹರಲಾಲ್ ನೆಹರೂ ಅವರ ಮರಿಮೊಮ್ಮಗನಾದ ರಾಹುಲ್ ಗಾಂಧಿ ಎಂದಾದಲ್ಲಿ ಮೋದಿಯವರ ಈ ಬಲಿಪಶು ಕಥಾನಕ ಇನ್ನು ಮುಂದೆ ಕೇಳಲಾರದೆ ಹೋಗಬಹುದು.

ಕೊರೊನಾ ಉಲ್ಭಣ: ಗುರುವಾರ ಮುಖ್ಯಮಂತ್ರಿಗಳೊಂದಿಗೆ ಸಭೆ ನಡೆಸಲಿರುವ ಮೋದಿ? | naanu gauriಆದರೆ, ರಾಹುಲ್ ಗಾಂಧಿಯನ್ನು ಜೈಲಿಗೆ ಕಳಿಸಲಾಗದಿದ್ದರೆ ಅವರು ಬೀದಿಯಲ್ಲೇ ಜನರ ನಡುವೆ ಮುಂದುವರಿಯಲಿದ್ದಾರೆ. “ಭಾರತ್ ಜೋಡೊ” ಯಾತ್ರೆಯು ಅವರನ್ನು ತಮಿಳುನಾಡಿನಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಕೊಂಡೊಯ್ದಿರುವಾಗ, ಇನ್ನೊಂದು ಯಾತ್ರೆಯು ಗುಜರಾತಿನಿಂದ ಆರಂಭವಾಗಿ ಈಶಾನ್ಯ ರಾಜ್ಯಗಳ ತನಕ- ಉತ್ತರ ಪ್ರದೇಶ ಸೇರಿದಂತೆ ಬಿಜೆಪಿಯ ಭದ್ರಕೋಟೆಗಳ ನಡುವಿಂದ ಸಾಗಲಿದೆ. ಕಾಂಗ್ರೆಸ್ ಈಗ ಪಕ್ಷದ ಕಾರ್ಯಕರ್ತರು ಮಾತ್ರವಲ್ಲ; ಆದರೆ ಪಕ್ಷದ ಪ್ರಮುಖ ಮುಖಂಡ ಮೋದಿಗೆ ಬದಲಿ ಎಂದು ಗುರುತಿಸುವ ಸಹಾನುಭೂತಿ ಹೊಂದಿರುವವರನ್ನು ಕೂಡಾ ಅವಲಂಬಿಸಬಹುದು.

ಇಲ್ಲಿ ಅನರ್ಹತೆಯ ಕ್ರಮದ ಕುರಿತ ಇನ್ನೊಂದು ಪಾಠವೂ ಇದೆ: ಇತ್ತೀಚಿನ ತನಕ ಮಮತಾ ಬ್ಯಾನರ್ಜಿ ಅಥವಾ ಅರವಿಂದ ಕೇಜ್ರಿವಾಲ್‌ಗಿಂತಲೂ ದುರ್ಬಲ ಎಂದು ತಾವು ಭಾವಿಸಿದ್ದ ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯು ಹೋರಾಡಬೇಕಿತ್ತು ಎಂದು ಬಿಜೆಪಿ ಮುಖಂಡರು ತಮ್ಮನ್ನು ತಾವೇ ಅಭಿನಂದಿಸಿಕೊಳ್ಳುತ್ತಿದ್ದರು. ಆದರೆ, ಕಾಲ ಬದಲಾಗುತ್ತಿದೆ- ಅವರ ಚೈತನ್ಯ ಮತ್ತು ಧಾರಣಾಶಕ್ತಿಯು ಒಂದು ಹೊಸ ವರ್ಚಸ್ಸನ್ನು ಅವರ ಗಟ್ಟಿತನ ತಂದುಕೊಟ್ಟಿದೆ; ಜೊತೆಗೆ ಬಿಜೆಪಿಯು ಯಾವ ರೀತಿಯಲ್ಲಿ ಅವರನ್ನು ಗುರಿ ಮಾಡಿ ದಾಳಿ ನಡೆಸಿದೆ ಎಂಬ ಕಾರಣದಿಂದ ಕೂಡಾ ಅದು ಲಭ್ಯವಾಗಿದೆ. ವಿಪರ್ಯಾಸವೆಂದರೆ, ದೇಶದ ಆಡಳಿತಗಾರರೇ ತಮ್ಮ ಪ್ರತಿಸ್ಪರ್ಧಿಯ ಸೃಷ್ಟಿಯಲ್ಲಿ ಸಕ್ರಿಯವಾಗಿ ಪಾಲುಗೊಳ್ಳುತ್ತಿದ್ದಾರೆ.

ಮುಂದಿನ ಹಾದಿ

ಕೊನೆಗೂ ರಾಹುಲ್ ಅವರಿಗೆ ಶಿಕ್ಷೆ ಖಾತ್ರಿ ಆಗುವುದೇ ಎಂಬುದು ನ್ಯಾಯಾಂಗವು ವಹಿಸುವ ಪಾತ್ರದ ಮೇಲೆ ಆಧರಿತವಾಗಿದೆ. ಇತ್ತೀಚೆಗೆ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾದ ಡಿ. ವೈ. ಚಂದ್ರಚೂಡ್ ಅವರು ಸಂವಿಧಾನದ ಮೂಲ ಸಂರಚನೆಯನ್ನು ಭಾರತೀಯ ಪ್ರಜಾಪ್ರಭುತ್ವದ ಧ್ರುವ ನಕ್ಷತ್ರ ಎಂದು ಬಣ್ಣಿಸಿದ್ದಾರೆ. ಅದನ್ನು ರಕ್ಷಿಸಲು ಸರ್ವೋಚ್ಚ ನ್ಯಾಯಾಲಯ ಮತ್ತೊಮ್ಮೆ ಹೋರಾಡುವುದೇ? ಹಾಗಿದ್ದರೆ, ಆರು ವರ್ಷಗಳಿಗಿಂತಲೂ ಹೆಚ್ಚು ಕಾಲದ ಅಸಡ್ಡೆಯ ತೀರ್ಪುಗಳ ನಂತರ- ಅಥವಾ ಯಾವುದೇ ತೀರ್ಪು ನೀಡುವುದರಿಂದ ಹಿಂಜರಿಯುವ ವಿದ್ಯಮಾನಗಳ ನಂತರ- ನ್ಯಾಯಾಲಯವು ಸಾರ್ವಜನಿಕ ಜೀವನದ ಮುಂಚೂಣಿಗೆ ಬರಲಿದೆ. ಅದು ದೇಶದ ಆಡಳಿತಗಾರರಿಗೆ ಕೂಡಾ ಒಳ್ಳೆಯ ವಿಷಯ ಆಗಿರಲಾರದು.

ಸಾರಾಂಶದಲ್ಲಿ ಹೇಳುವುದಾದರೆ: ರಾಹುಲ್ ಗಾಂಧಿಯವರ ಅನರ್ಹತೆಯು ಭಾರತೀಯ ರಾಜಕೀಯದಲ್ಲಿ ಒಂದು ತಿರುವಿನ ಕ್ಷಣ ಆಗಲೂಬಹುದು. ಆದರೆ ಎಲ್ಲವೂ ವಿರೋಧಪಕ್ಷಗಳ, ನ್ಯಾಯಾಂಗದ ಮತ್ತು ಸ್ವತಃ ರಾಹುಲ್ ಗಾಂಧಿಯವರ ಅಂಗಳದಲ್ಲಿದೆ! ಆದರೆ, ನಾನು ಪಾಶ್ಚಾತ್ಯ ಜಗತ್ತಿನಿಂದ ಯಾವುದೇ ಪ್ರತಿಕ್ರಿಯೆಯನ್ನು ನಿರೀಕ್ಷಿಸಲಾರೆ. ಆ ಜಗತ್ತಿನ ಆದ್ಯತೆಗಳು ಇದೀಗ ಪ್ರಜಾಪ್ರಭುತ್ವದ ಮೌಲ್ಯಗಳ ಮೇಲೆ ನಿರ್ಧಾರವಾಗುವುದಿಲ್ಲ; ಅಲ್ಲದೆ ಚರ್ಚೆಯಲ್ಲಿ ಅವರ ಭಾಗವಹಿಸುವಿಕೆ ಪ್ರತಿಕೂಲವಾದೀತು ಕೂಡ: ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯ ವೇಳೆ ಬಳಸಿದ “ವಿದೇಶಿ ಕೈವಾಡ”ದ ರೋಗಲಕ್ಷಣ- ಇಂದೂ ಪ್ರಬಲವಾಗಿದೆ. ರಾಹುಲ್ ಇತ್ತೀಚಿಗೆ ಯುಕೆಯಲ್ಲಿ ಮಾಡಿದ ಭಾಷಣಗಳ ಕುರಿತು ಎಬ್ಬಿಸಲಾದ ಬೊಬ್ಬೆ ಇದನ್ನು ತೋರಿಸಿಕೊಟ್ಟಿದೆ.

(ಕೃಪೆ): The Wire

ಕನ್ನಡಕ್ಕೆ: ನಿಖಿಲ್ ಕೋಲ್ಪೆ

ಕ್ರಿಸ್ಟೋಫ್ ಜಫ್ರೆಲೋ

ಕ್ರಿಸ್ಟೋಫ್ ಜಫ್ರೆಲೋ
CERI-Sciences Po/CNRS, ಪ್ಯಾರಿಸ್‌ನಲ್ಲಿ ಹಿರಿಯ ಸಂಶೋಧಕ. ಲಂಡನ್ನಿನ ಕಿಂಗ್ಸ್ ಇಂಡಿಯಾ ಇನ್‌ಸ್ಟಿಟ್ಯೂಟಿನಲ್ಲಿ ’ಭಾರತೀಯ ರಾಜಕೀಯಶಾಸ್ತ್ರ ಮತ್ತು ಸಮಾಜಶಾಸ್ತ್ರ’ದ ಹಿರಿಯ ಪ್ರಾಧ್ಯಾಪಕ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...