ಭಾರತೀಯ ಜನತಾ ಪಕ್ಷದ ಹಾಲಿ ಸಂಸದ ವರುಣ್ ಗಾಂಧಿ ಅವರು ಉತ್ತರ ಪ್ರದೇಶದ ಪಿಲಿಭಿತ್ನಲ್ಲಿ ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿ ವಿಫಲರಾಗಿದ್ದು, ಬಿಜೆಪಿಯು ಕೇಂದ್ರ ಸಚಿವರೊಬ್ಬರಿಗೆ ಟಿಕೆಟ್ ಘೋಷಣೆ ಮಾಡಿದೆ. ಈ ಬಗ್ಗೆ ತಮ್ಮ ಕ್ಷೇತ್ರದ ಜನರಿಗೆ ಪತ್ರ ಬರೆದಿದ್ದು, “ನನ್ನ ಅಧಿಕಾರಾವಧಿಯು ಕೊನೆಗೊಳ್ಳುತ್ತಿದ್ದರೂ ಸಹ… ನನ್ನ ಕೊನೆಯ ಉಸಿರು ಇರುವವರೆಗೂ ನನ್ನ ಸಂಬಂಧ (ನಿಮ್ಮೊಂದಿಗೆ) ಕೊನೆಗೊಳ್ಳುವುದಿಲ್ಲ” ಎಂದು ಭಾವಾನಾತ್ಮಕವಾಗಿ ಮಾತನಾಡಿದ್ದಾರೆ.
“ಪಿಲಿಭಿತ್ನ ಮಹಾನ್ ಜನರಿಗೆ ಸೇವೆ ಸಲ್ಲಿಸುವ ಅವಕಾಶವನ್ನು ಪಡೆದಿದ್ದನ್ನು ನಾನು ಅದೃಷ್ಟಶಾಲಿ ಎಂದು ಪರಿಗಣಿಸಿದ್ದೇನೆ. ನಿಮ್ಮ ಆದರ್ಶಗಳು, ಸರಳತೆ ಮತ್ತು ದಯೆ… ಭಿವೃದ್ಧಿಯಲ್ಲಿ ದೊಡ್ಡ ಕೊಡುಗೆಯನ್ನು ಹೊಂದಿದೆ. ನಿಮ್ಮ ಪ್ರತಿನಿಧಿಯಾಗಿರುವುದು ನನ್ನ ಜೀವನದ ಅತ್ಯಂತ ದೊಡ್ಡ ಗೌರವವಾಗಿದೆ ಮತ್ತು ನಾನು ಯಾವಾಗಲೂ ನನ್ನ ಸಾಮರ್ಥ್ಯಕ್ಕೆ ತಕ್ಕಂತೆ ನಿಮ್ಮ ಹಿತಾಸಕ್ತಿಗಳನ್ನು ಸಮರ್ಥಿಸಿಕೊಂಡಿದ್ದೇನೆ” ಎಂದು ಬಿಜೆಪಿ ನಾಯಕ ಹೇಳಿದ್ದಾರೆ.
“ಸಂಸದನಾಗಲ್ಲದಿದ್ದರೆ, ಮಗನಾಗಿ ನನ್ನ ಜೀವನದುದ್ದಕ್ಕೂ ನಿಮ್ಮ ಸೇವೆ ಮಾಡಲು ನಾನು ಬದ್ಧನಿದ್ದೇನೆ. ನನ್ನ ಮನೆ ಬಾಗಿಲು ನಿಮಗಾಗಿ ಯಾವಾಗಲೂ ತೆರೆದಿರುತ್ತದೆ. ಯಾವುದೇ ವೆಚ್ಚವನ್ನು ಲೆಕ್ಕಿಸದೆ ನಿಮ್ಮ ಕೆಲಸವನ್ನು ಯಾವಾಗಲೂ ಮಾಡುವುದನ್ನು ಮುಂದುವರಿಸಲು ನಾನು ನಿಮ್ಮ ಆಶೀರ್ವಾದವನ್ನು ಕೋರುತ್ತೇನೆ” ಎಂದು ಅವರು ಹೇಳಿದ್ದಾರೆ.
ಪಿಲಿಭಿತ್ ಜತೆಗಿನ ಅವರ ಪರಿಚಯವನ್ನು ನೆನಪಿಸಿಕೊಂಡ ವರುಣ್, ಮೂರು ವರ್ಷದ ಬಾಲಕನಾಗಿದ್ದಾಗ ತನ್ನ ತಾಯಿ ಮೇನಕಾ ಗಾಂಧಿಯೊಂದಿಗೆ 1983ರಲ್ಲಿ ಭೇಟಿ ನೀಡಿದ್ದನ್ನು ಮೆಲುಕು ಹಾಕಿದ್ದಾರೆ.
“1983ರಲ್ಲಿ ಮೂರು ವರ್ಷದ ಹುಡುಗನಾಗಿದ್ದಾಗ ನಾನು ಪಿಲಿಭಿತ್ಗೆ ಮೊದಲ ಬಾರಿಗೆ ತನ್ನ ತಾಯಿಯ ಬೆರಳು ಹಿಡಿದು ಬಂದದ್ದು ನೆನಪಿದೆ. ಮುಂದೊಂದು ದಿನ ಈ ಭೂಮಿ ತನ್ನ ಕೆಲಸದ ಸ್ಥಳವಾಗುತ್ತದೆ ಮತ್ತು ಇಲ್ಲಿನ ಜನರು ನನ್ನವಾರಾಗುತ್ತಾರೆ ಎಂಬುದು ಆ ಬಾಲಕನಿಗೆ ಹೇಗೆ ಗೊತ್ತು’ ಎಂದಿದ್ದಾರೆ.
“ಪಿಲಿಭಿತ್ ಮತ್ತು ನನ್ನ ನಡುವಿನ ಸಂಬಂಧವು ಪ್ರೀತಿ ಮತ್ತು ವಿಶ್ವಾಸದಿಂದ ಕೂಡಿದೆ… ಇದು ಯಾವುದೇ ರಾಜಕೀಯ ಗುಣಾಕಾರಕ್ಕಿಂತ ಹೆಚ್ಚಿನದಾಗಿದೆ. ನಾನು ಇದ್ದೆ, ಇದ್ದೇನೆ ಮತ್ತು ನಿಮ್ಮವನಾಗಿರುತ್ತೇನೆ…” ಎಂದು ವರುಣ್ ಗಾಂಧಿ ಹೇಳಿದರು.
प्रणाम पीलीभीत 🙏 pic.twitter.com/D6T3uDUU6o
— Varun Gandhi (@varungandhi80) March 28, 2024
ವರುಣ್ ಗಾಂಧಿ ಪಿಲಿಭಿತ್ನಿಂದ ಎರಡು ಬಾರಿ ಸಂಸದರಾಗಿದ್ದಾರೆ, ಇದು 1989 ರಿಂದ ಅವರ ತಾಯಿ ಮೇನಕಾ ಗಾಂಧಿಯವರಿಂದ ಗೆದ್ದಾಗಿನಿಂದ ಕುಟುಂಬ ಸಂಬಂಧವಾಗಿದೆ. ಹೆಸರಾಂತ ಪರಿಸರ ಕಾರ್ಯಕರ್ತೆ ಮತ್ತು ಮಾಜಿ ಕೇಂದ್ರ ಸಚಿವೆ, ಮೇನಕಾ ಗಾಂಧಿ ಸ್ವತಂತ್ರ ಅಭ್ಯರ್ಥಿಯಾಗಿ ಬ್ಯಾಕ್ ಟು ಬ್ಯಾಕ್ ಗೆಲುವು ಸೇರಿದಂತೆ ಆರು ಬಾರಿ ಈ ಸ್ಥಾನವನ್ನು ಗೆದ್ದಿದ್ದಾರೆ.
2019ರ ಚುನಾವಣೆಯಲ್ಲಿ ವರುಣ್ ಗಾಂಧಿ ಅವರು ಸಮಾಜವಾದಿ ಪಕ್ಷದ ಹೇಮರಾಜ್ ವರ್ಮಾ ಅವರನ್ನು 2.55 ಲಕ್ಷಕ್ಕೂ ಹೆಚ್ಚು ಮತಗಳಿಂದ ಸೋಲಿಸಿದರು. ಆದರೆ, ಈ ಬಾರಿ ಗಾಂಧಿ ಹೆಸರನ್ನು ಸಂಪೂರ್ಣವಾಗಿ ಕೈಬಿಡಲು ಬಿಜೆಪಿ ನಿರ್ಧರಿಸಿದೆ.
ಇತ್ತೀಚಿನ ವರ್ಷಗಳಲ್ಲಿ 44 ವರ್ಷದ ವರುಣ್ ಅವರು ತಮ್ಮದೇ ಪಕ್ಷದ ಸರ್ಕಾರ ಮತ್ತು ನೀತಿಗಳನ್ನು ಟೀಕಿಸುತ್ತಿದ್ದಾರೆ. ಉದಾಹರಣೆಗೆ, ಕಳೆದ ವರ್ಷ ಸೆಪ್ಟೆಂಬರ್ನಲ್ಲಿ, ಆಫ್ರಿಕಾದಿಂದ ಚಿರತೆಗಳನ್ನು ಆಮದು ಮಾಡಿಕೊಳ್ಳುವ ಕುರಿತು ಅವರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕೇವಲ ಐದು ತಿಂಗಳಲ್ಲಿ ಒಂಬತ್ತು ಚಿರತೆಗಳು ಸಾವನ್ನಪ್ಪಿದ ನಂತರ ಈ ಹೇಳಿಕೆಗಳು ಬಂದಿವೆ.
ಕಾಂಗ್ರೆಸ್ ಸಂಸದ ಅಧೀರ್ ರಂಜನ್ ಚೌಧರಿ ಅವರು ಪಕ್ಷ ಸೇರುವಂತೆ ವರುಣ್ ಗಾಂಧಿ ಅವರಿಗೆ ಆಹ್ವಾನ ನೀಡಿದ್ದಾರೆ. ಗಾಂಧಿ ಕುಟುಂಬದೊಂದಿಗೆ ಅವರ ಸಂಪರ್ಕದಿಂದಾಗಿ ಬಿಜೆಪಿಯು ವರುಣ್ ಅವರಿಗೆ ಟಿಕೆಟ್ ಅನ್ನು ನಿರಾಕರಿಸಿದೆ ಎಂದು ಪ್ರತಿಪಾದಿಸಿದ್ದಾರೆ.
“ಅವರು ಇಲ್ಲಿಗೆ ಬರಬೇಕು; ನಾವು ಸಂತೋಷವಾಗಿರುತ್ತೇವೆ. ಅವರು ವಿದ್ಯಾವಂತ ವ್ಯಕ್ತಿ. ಅವರಿಗೆ ಕ್ಲೀನ್ ಇಮೇಜ್ ಇದೆ. ಅವರು ಗಾಂಧಿ ಕುಟುಂಬಕ್ಕೆ ಸಂಬಂಧಿಸಿರುವ ಕಾರಣ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿದೆ. ಅವರು (ಕಾಂಗ್ರೆಸ್ಗೆ) ಬರಬೇಕು ಎಂದು ನಾನು ಭಾವಿಸುತ್ತೇನೆ” ಎಂದು ಕಾಂಗ್ರೆಸ್ ನಾಯಕ ಹೇಳಿದರು.
ಇದನ್ನೂ ಓದಿ; ಸಂಸದನಾಗಲ್ಲದಿದ್ದರೆ ಮಗನಾಗಿ ನಿಮ್ಮ ಸೇವೆ ಮಾಡಲು ಬದ್ಧ..’; ಪಿಲಿಭಿತ್ ಜನರಿಗೆ ಪತ್ರ ಬರೆದ ವರುಣ್ ಗಾಂಧಿ