ಬಿಸಿಸಿಐ ಕಾರ್ಯಾದರ್ಶಿಯಾಗಿ ಗೃಹ ಸಚಿವ ಅಮಿತ್ ಶಾ ಪುತ್ರ ಜಯ್ ಶಾ ಹಾಗೂ ಖಜಾಂಚಿಯಾಗಿ ಸಚಿವ ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಆಯ್ಕೆಯಾಗಿರುವುದರ ಹಿಂದೆ ಕ್ರೀಡಾ ಇಲಾಖೆಯನ್ನು ನಿಯಂತ್ರಿಸುವ ಕೆಲ ರಾಜಕೀಯ ನಾಯಕರ ಹುನ್ನಾರವಿದೆ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.
ರಾಜಕೀಯ ನಾಯಕರ ಕುಟುಂಬದವರು ಕ್ರೀಡಾ ವಿಭಾಗಗಳಲ್ಲಿ ಮಾಡುತ್ತಿರುವ ಹಸ್ತಕ್ಷೇಪ ಕಳವಳಕಾರಿಯಾಗಿದೆ. ಹೀಗಾಗಿ ಇದನ್ನು ಟೀಕಿಸುವುದು ಸರಿಯಾಗಿದೆ. ಪ್ರತಿ ರಾಜ್ಯದಲ್ಲೂ ತಮ್ಮ ಸಹೋದ್ಯೋಗಿಗಳು ಹಾಗೂ ನಾಯಕರು ಅಂತಿಮವಾಗಿ ಬಿಸಿಸಿಐನ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಈ ಯಾವ ಅಂಶಗಳು ಈ ಬಾರಿ ಕಂಡು ಬಂದಿಲ್ಲ ಎಂದಿದ್ದಾರೆ.
ಸೌರವ್ ಗಂಗೂಲಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ ಸುದ್ದಿ ಹಾಗೂ ಇದುವರೆಗೆ ಕೇಳಿರದಿದ್ದ ವ್ಯಕ್ತಿಗಳನ್ನು ಆಯ್ಕೆ ಮಾಡಿರುವುದನ್ನು ಕೇಳಿದ್ದೇನೆ. ಸ್ವತಃ ಕ್ರೀಡಾ ವಿಭಾಗದಿಂದ ಆಯ್ಕೆಯಾದವರನ್ನು ವಿರೋಧಿಸುವುದಾದರೂ ಹೇಗೆ? ಎಂದು 78 ವರ್ಷದ ಅನುಭವಿ ರಾಜಕಾರಣಿ ಪವಾರ್ ಹೇಳಿದ್ದಾರೆ. ಇನ್ನು ಪವಾರ್ 2005 ರಿಂದ 2008ರವರೆಗೆ ಬಿಸಿಸಿಐನ ಮುಖ್ಯಸ್ಥರಾಗಿದ್ದರು.