ಲೋಕಸಭೆ ಚುನಾವಣೆಯ ನಂತರ ಕೇಂದ್ರದಲ್ಲಿ ಇಂಡಿಯಾ ಮೈತ್ರಿಕೂಟ ಸರ್ಕಾರ ರಚಿಸಿದರೆ, ರಾಷ್ಟ್ರವ್ಯಾಪಿ ಜಾತಿ ಗಣತಿ ಮಾಡಿಸುತ್ತೇವೆ ಮತ್ತು ಮೀಸಲಾತಿ ಮೇಲಿನ ಶೇ.50 ಮಿತಿಯನ್ನು ತೆಗೆದು ಹಾಕುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಭರವಸೆ ನೀಡಿದ್ದಾರೆ.
ಜಾರ್ಖಂಡ್ನಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮಾಡುವ ಮೊದಲ ಕೆಲಸವೇ 'ಮೀಸಲಾತಿಗೆ ಇರುವ ಮಿತಿ'ಯನ್ನು ಕಿತ್ತೆಸೆಯುವುದು.
ಗುಡ್ಡಗಾಡುಗಳಲ್ಲಿ ಕಲ್ಲಿದ್ದಲು ಹೊರುವ ಜಾಗದಲ್ಲಿ ಕಾಣುವ ಆದಿವಾಸಿಗಳು ವಿಶ್ವವಿದ್ಯಾಲಯಗಳ, ಕೋರ್ಟ್ಗಳ, ಆಸ್ಪತ್ರೆಗಳ ಉನ್ನತ ಹುದ್ದೆಗಳಲ್ಲಿ ಕಾಣುವುದಿಲ್ಲ. ಅಗತ್ಯ ಪ್ರಮಾಣದ ಮೀಸಲಾತಿ… pic.twitter.com/HXtr1zn8Ie
— Siddaramaiah (@siddaramaiah) February 6, 2024
ಜಾತಿ ಗಣತಿಗೆ ಬೇಡಿಕೆ ಬಂದಾಗ. ಒಬಿಸಿಗಳು, ದಲಿತರು ಮತ್ತು ಬುಡಕಟ್ಟು ಜನಾಂಗದವರಿಗೆ ಹಕ್ಕುಗಳನ್ನು ನೀಡುವ ಸಮಯ ಬಂದಾಗ ಪ್ರಧಾನಿ ಮೊಡಿ ಜಾತಿ ವ್ಯವಸ್ಥೆಯೇ ಇಲ್ಲ ಎಂದು ಹೇಳುತ್ತಾರೆ. ಆದರೆ, ಓಟ್ ಬಂದಾಗ ನಾನು ಒಬಿಸಿ ಎನ್ನುತ್ತಾರೆ ಎಂದು ಕಿಡಿಕಾರಿದರು.
ದಲಿತರು, ಆದಿವಾಸಿಗಳಿಗೆ ಮೀಸಲಾತಿಯಲ್ಲಿ ಯಾವುದೇ ಕೊರತೆ ಆಗುವುದಿಲ್ಲ. ನಾನು ಈ ಮಾತಿಗೆ ಗ್ಯಾರಂಟಿ ನೀಡುತ್ತೇನೆ. ಹಿಂದುಳಿದ ಜನರಿಗೆ ನಿಮ್ಮ ಹಕ್ಕು ಖಂಡಿತಾ ಸಿಗಲಿದೆ ಎಂದು ರಾಹುಲ್ ಜನರಿಗೆ ಭರವಸೆ ನೀಡಿದರು.
ಹಿಂದುಳಿದವರು, ದಲಿತರು ಮತ್ತು ಆದಿವಾಸಿಗಳನ್ನು ಜೀತದಾಳುಗಳನ್ನಾಗಿ ಮಾಡಲು ಹೊರಟಿದ್ದಾರೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ, ಆಸ್ಪತ್ರೆಗಳಲ್ಲಿ, ಕೋರ್ಟ್ಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಇವರ್ಯಾರಿಗೂ ಸಮಾನತೆ ಎಂಬುವುದಿಲ್ಲ. ಆದಿವಾಸಿಗಳು ಸೈಕಲ್ ಮೇಲೆ 200 ಕೆ.ಜಿ ಕಲ್ಲಿದ್ದಲ್ಲನ್ನು ಹೇರಿಕೊಂಡು ಒಬ್ಬರೇ ದೂಡುತ್ತಾ 50 ಕಿ.ಮೀ ಸಾಗುತ್ತಾರೆ. ನಾನು ನನ್ನ ಕಣ್ಣಾರೆ ಕಂಡಿದ್ದೇನೆ. ಅಂತಹ ಕೆಲಸಗಳಲ್ಲಿ ಆದಿವಾಸಿಗಳು ಸಿಗುತ್ತಾರೆ. ದಲಿತರು ಸಿಗುತ್ತಾರೆ. ಇದು ಹಿಂದುಸ್ತಾನ ಎದುರಿಸುತ್ತಿರುವ ಅತ್ಯಂತ ದೊಡ್ಡ ಸವಾಲು ಎಂದರು.
ನಮ್ಮ ಹೋರಾಟದ ಮೊದಲ ಹೆಜ್ಜೆ ಜಾತಿ ಗಣತಿ ಮಾಡುದಾಗಿದೆ. ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. ಆದಿವಾಸಿಗಳಿಗೆ ಸರ್ನಾ ಪ್ರತ್ಯೇಕ ಧರ್ಮ ಸ್ಥಾನಮಾನ ಕೊಡಬೇಕು. ಈ ಕೆಲಸವನ್ನು ನಾವು ನಿಮಗಾಗಿ ಮಾಡೇ ಮಾಡುತ್ತೇವೆ. ಗಾಬರಿಯಾಗಬೇಡಿ, ಭಯಪಡಬೇಡಿ ಎಂದು ರಾಹುಲ್ ಹೇಳಿದರು.
ಇದನ್ನೂ ಓದಿ : ಭಾರತ್ ಜೋಡೋ ನ್ಯಾಯ ಯಾತ್ರೆ: ಜಾತಿವಾರು ಜನಸಂಖ್ಯೆ, ತೆರಿಗೆ ಪಾವತಿ ಬಗ್ಗೆ ಬಹಿರಂಗಪಡಿಸಬೇಕು; ರಾಹುಲ್ ಗಾಂಧಿ