HomeUncategorizedಆರ್ಥಿಕ ಕುಸಿತ: ಮೋದಿಗೆ ಕಳಂಕ ತಪ್ಪಿಸಲು ಬಲಿಪಶು ಆಗುತ್ತಿದ್ದಾರಾ ನಿರ್ಮಲಾ ಸೀತಾರಾಮನ್!?

ಆರ್ಥಿಕ ಕುಸಿತ: ಮೋದಿಗೆ ಕಳಂಕ ತಪ್ಪಿಸಲು ಬಲಿಪಶು ಆಗುತ್ತಿದ್ದಾರಾ ನಿರ್ಮಲಾ ಸೀತಾರಾಮನ್!?

- Advertisement -
- Advertisement -

ಪ್ರಧಾನಿ ಮೋದಿ ನೇತೃತ್ವದ ಸರ್ಕಾರದಲ್ಲಿ ಎರಡನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸಿ, ಪ್ರಮುಖ ಜವಾಬ್ದಾರಿ ಹೊತ್ತಿರುವ ನಿರ್ಮಲಾ ಸೀತಾರಾಮನ್ ವಿತ್ತ ಸಚಿವೆಯಾದ ನಾಲ್ಕೇ ತಿಂಗಳಿಗೆ ಆರ್ಥಿಕ ಕುಸಿತದ ಮೇನ್ ವಿಲನ್' ರೂಪದಲ್ಲಿ ಎಲ್ಲರೆದುರು ಕಾಣಿಸಿಕೊಳ್ಳುತ್ತಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಭಾರತದ ಆರ್ಥಿಕತೆ ಗಂಭೀರವಾಗಿ ಪತನವಾಗಲು, ಈ ಹಿಂದಿನ ಬಿಜೆಪಿ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿಗಿಂತಲೂ ಪ್ರಧಾನಿ ಮೋದಿಯವರ ಯಡವಟ್ಟು ಆರ್ಥಿಕ ನೀತಿಗಳು ಕಾರಣಗಳು ಎನ್ನುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮೊನ್ನೆಯಷ್ಟೇ ಅರ್ಥಶಾಸ್ತ್ರಕ್ಕೆ ನೊಬೆಲ್ ಪ್ರಶಸ್ತಿ ಪಡೆದ ಅಭಿಜಿತ್ ಬ್ಯಾನರ್ಜಿ ಹಾಗೂ ಎಸ್ತರ್ ಡುಪ್ಲೋ ತುಂಬಾ ಹಿಂದೆಯೇ ಕರಾಳ ದಿನಗಳಿಗೆ ಕಾರಣವಾಗುತ್ತದೆಂದು ಅಂದಾಜಿಸಿದ್ದ `ನೋಟು ಅಮಾನ್ಯೀಕರಣ’ವನ್ನು ಹೇರುವುದರ ಹಿಂದೆ ಅರ್ಥ ಸಚಿವ ಜೇಟ್ಲಿ, ಆರ್.ಬಿ.ಐ. ಆಡಳಿತ ಮಂಡಳಿಗೆ ಯಾವ ಪಾತ್ರವೂ ಇರಲಿಲ್ಲ. ಅಷ್ಟರ ಮಟ್ಟಿಗೆ ಮೋದಿಯವರ ನೀತಿಗಳು ಇವತ್ತಿನ ಆರ್ಥಿಕ ದುಸ್ಥಿತಿಗೆ ಕಾರಣ. ಆದರೆ ಈಗ ಪರಿಸ್ಥಿತಿಯನ್ನು ಎತ್ತ ತಿರುಗಿಸಲಾಗುತ್ತಿದೆಯೆಂದರೆ, ಈ ಸಮಸ್ತ ಕುಸಿತಕ್ಕೆ ನಾಲ್ಕು ತಿಂಗಳ ಹಿಂದಷ್ಟೇ ಹಣಕಾಸು ಇಲಾಖೆಯ ಹೊಣೆ ಹೊತ್ತ ನಿರ್ಮಲಾ ಸೀತಾರಾಮನ್ ಖಳನಾಯಕಿಯಾಗಿ ಬಿಂಬಿತವಾಗುತ್ತಿದ್ದಾರೆ. ನಿರ್ಮಲಾ ಕೂಡಾ, ಆರ್ಥಿಕ ಕುಸಿತದ ಕುರಿತಾಗಿ ಕೇಳಿಬರುತ್ತಿರುವ ಟೀಕೆಗಳನ್ನು ವೈಯಕ್ತಿಕವಾಗಿ ಸ್ವೀಕರಿಸಿ `ಅಗ್ರೆಸಿವ್’ ಆಗಿ ಪ್ರತಿಕ್ರಿಯಿಸುತ್ತಿರೋದು, ಇಡೀ ರಂಗವೇದಿಕೆಯಿಂದ ಹಿಂದೆ ಸರಿಯಲು ಮೋದಿಗೆ ಅನುವು ಮಾಡಿಕೊಡುತ್ತಿದೆ. ಸ್ವತಃ ಮೋದಿ ಅಭಿಮಾನಿಗಳು, ಮೋದಿಯನ್ನು ಹಾಡಿ ಹೊಗಳಿದ್ದ ದೊಡ್ಡದೊಡ್ಡ ಉದ್ಯಮಿಗಳು ನಿರ್ಮಲಾರನ್ನೇ ಟಾರ್ಗೆಟ್ ಮಾಡಿ ಟೀಕೆಗಳನ್ನು ಸುರಿಸುತ್ತಿದ್ದಾರೆ.

ನೋ ಡೌಟ್, ವಿತ್ತ ಸಚಿವೆಯಾಗಿ ದೇಶದ ಸದ್ಯದ ಆರ್ಥಿಕ ಪರಿಸ್ಥಿತಿಗೆ ಅವರೇ ಉತ್ತರದಾಯಿ ಆಗುತ್ತಾರೆ. ಟೀಕೆಗಳೂ ಅವರಿಗೇ ಸಲ್ಲುತ್ತವೆ. ಆದರೆ ಕಳೆದ ಬಿಜೆಪಿ ಅವಧಿಯಲ್ಲಿ ಪರಿಸ್ಥಿತಿ ಹೀಗೇ ಇತ್ತಾ? ಕಡೇಪಕ್ಷ ಹಣಕಾಸು ಸಚಿವರ ಜೊತೆ ಚರ್ಚಿಸಿಯೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿತ್ತೇ? ಈ ಪ್ರಶ್ನೆಗಳಿಗೆ ಉತ್ತರ ಎಲ್ಲರಿಗೂ ಗೊತ್ತಿರುವಂತದ್ದೇ. ಆದರೆ ಕುಸಿತ ಶುರುವಾಗಿ, ದೇಶ ಸಂಕಷ್ಟಕ್ಕೆ ಸಿಲುಕುತ್ತಿದ್ದಂತೆಯೇ ಅದಕ್ಕೆ ಕಾರಣರಾದವರು ಹಿನ್ನೆಲೆಗೆ ಸರಿದು, ಹುದ್ದೆಯ ಕಾರಣಕ್ಕೆ ನಿರ್ಮಲಾ ಸೀತಾರಾಮನ್ ಅವರನ್ನು ಮುಂದೆ ಬಿಡುತ್ತಿರೋದು ನೋಡಿದರೆ, ಬಲಿಪಶು ಮಾಡಲಾಗುತ್ತಿದೆಯಾ? ಎಂಬ ವಾದವೀಗ ಮುನ್ನೆಲೆಗೆ ಬರುತ್ತಿದೆ. ಅಂದಹಾಗೆ, ಕಳೆದ ಸರ್ಕಾರದ ಅವಧಿಯಲ್ಲೂ ಮನೋಹರ್ ಪಾರಿಕ್ಕರ್ ರಕ್ಷಣಾ ಮಂತ್ರಿಯಾಗಿದ್ದರೂ, ರಕ್ಷಣಾ ಇಲಾಖೆಯನ್ನೇ ಬೈಪಾಸ್ ಮಾಡಿದ್ದ ಪ್ರಧಾನಿ ಮಂತ್ರಿ ಕಾರ್ಯಾಲಯ ಏಕಪಕ್ಷೀಯವಾಗಿ ವ್ಯವಹಾರ ಕುದುರಿಸಿದ್ದ `ರಫೇಲ್ ಖರೀದಿ’ ಹಗರಣ ಮಾಧ್ಯಮಗಳ ಮೂಲಕ ದೊಡ್ಡ ಬಿರುಗಾಳಿ ಎಬ್ಬಿಸುವ ಹೊತ್ತಿಗೆ ಸರಿಯಾಗಿ ನಿರ್ಮಲಾ ಸೀತಾರಾಮನ್ ಅವರನ್ನು ಪಾರಿಕ್ಕರ್ ಜಾಗದಲ್ಲಿ ಪ್ರತಿಷ್ಠಾಪಿಸಿ, ಕಳಂಕ ಮೆತ್ತಿಸಿಕೊಳ್ಳುವಂತೆ ಮಾಡಿದ್ದು ಕಾಕತಾಳೀಯವೇ ಇರಬಹುದು!

ಪೂರ್ಣ ಪ್ರಮಾಣದ ಹಣಕಾಸು ಸಚಿವೆಯಾಗಿ ದೇಶದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದ ನಿರ್ಮಲಾ ಸೀತಾರಾಮನ್ ಅಧಿಕಾರ ವಹಿಸಿಕೊಂಡ ಘಳಿಗೆಯಲ್ಲೇ ಆರ್ಥಿಕತೆ ಇಳಿಜಾರಿನತ್ತ ಮುಖ ಮಾಡಿತ್ತು. ಭಾರತದ ಆರ್ಥಿಕ ಬೆಳವಣಿಗೆ ಕಳೆದ ವರ್ಷದ ಕಡೆಯ ತ್ರೈಮಾಸಿಕದಲ್ಲಿ ಶೇ.6ಕ್ಕೆ ಕುಸಿದಿದ್ದರೆ, 2018-19ನೇ ಸಂಪೂರ್ಣ ವಿತ್ತ ವರ್ಷದಲ್ಲಿ ಅದರ ಸರಾಸರಿ ವೇಗ ಶೇ.6.8ಕ್ಕೆ ಕ್ಷೀಣಗೊಂಡಿತ್ತು. ಇನ್ನು 2019-20ರ ಮೊದಲ ತ್ರೈಮಾಸಿಕದಲ್ಲಿ ಜಿಡಿಪಿ ಚಾರಿತ್ರಿಕ ಕನಿಷ್ಠ ಶೇ.5ರತ್ತ ದಾಪುಗಾಲಿಡಲು ಶುರು ಮಾಡಿತ್ತು. ಅಂತೆಯೇ ದೇಶದ ನಿರುದ್ಯೋಗ ದರ 2017ರಲ್ಲೇ ಶೇ.6ಕ್ಕೆ ದಾಖಲೆಯ ಕುಸಿತ ಕಂಡಿತ್ತು. ಅಂತಹ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಅವರು ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದು!

ಇನ್ನು ನಿರ್ಮಲಾ ಸೀತಾರಾಮನ್ ಜುಲೈನಲ್ಲಿ ತಮ್ಮ ಮೊದಲ ಬಜೆಟ್ ಮಂಡಿಸಿದರು. ಆಗ ಹಿಂದಿದ್ದ ಹಲವು ಸಂಪ್ರದಾಯಗಳನ್ನು ಮುರಿದರು. ದಿನಬೆಳಗಾದರೆ ದೇವರು, ಹಬ್ಬ ಹರಿದಿನಗಳ ಬಗ್ಗೆ ಟ್ವೀಟ್ ಮಾಡುವ ನಿರ್ಮಲಾ ಸೀತಾರಾಮನ್ ಕುಸಿಯುತ್ತಿರುವ ಆರ್ಥಿಕತೆ ಬಗ್ಗೆ ಮಾತ್ರ ಮಾತನಾಡುವುದಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿತ್ತು. ಆರ್ಥಿಕತಜ್ಞರಾದ ಶಮಿಕಾ ರವಿ ಮಾತನಾಡಿ, ಭಾರತ ಆರ್ಥಿಕತೆಯ ಕುಸಿತ ಗಂಭೀರ ಪರಿಣಾಮ ಬೀರಲಿದೆ. ಕುಸಿಯುತ್ತಿರುವ ಆರ್ಥಿಕತೆಯನ್ನು ಸುಧಾರಿಸಲು ಪ್ರಮುಖ ತಂತ್ರಗಳನ್ನು ಕಂಡುಕೊಳ್ಳುವ ಅವಶ್ಯಕತೆಯಿದೆ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಬಗ್ಗೆ ಆಲೋಚಿಸಬೇಕಿದೆ ಎಂದು ಹೇಳಿದ್ದರು. ಬಿಜೆಪಿ ಎಂ.ಪಿ ಸುಬ್ರಮಣಿಯನ್ ಸ್ವಾಮಿ ಕೂಡ ನಿರ್ಮಲಾ ಸೀತಾರಾಮನ್ ಅವರ ಕಾರ್ಯ ವೈಖರಿಯನ್ನು ಖಂಡಿಸಿದ್ದರು. ನೆಲಕಚ್ಚುತ್ತಿರುವ ಆರ್ಥಿಕತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ, ಮೋದಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ಸೂಕ್ಷ್ಮ ಚಿಂತನೆಯ ಅವಶ್ಯಕತೆಯ ಬಗ್ಗೆ ತಿಳಿಸಿದ್ದರು.

ಪ್ರತಿಷ್ಠಿತ ಜೆಎನ್.ಯು ವಿವಿಯಲ್ಲಿ ಎಂಎ, ಎಂ.ಫಿಲ್  (ಎಕನಾಮಿಕ್ಸ್) ಪಡೆದಿದ್ದ ನಿರ್ಮಲಾ, ಓದು-ವಿದ್ಯಾರ್ಹತೆ-ಅನುಭವದ ನಿಟ್ಟಿನಲ್ಲಿ ಹಣಕಾಸು ಸಚಿವೆಯ ಹುದ್ದೆಗೆ ಲಾಯಕ್ಕಾದವರೇ ಇರಬಹುದು. ಆದರೆ, ದೇಶದ ಆರ್ಥಿಕ ಸ್ಥಿತಿ ಅದೆಷ್ಟು ಹದಗೆಟ್ಟು ಹೋಗಿತ್ತೆಂದರೆ, (ಹದಗೆಡಿಸಲಾಗಿತ್ತೆಂದರೆ) ತುಂಬಾ ದೃಢ ಮತ್ತು ದೂರಾಲೋಚನೆಯ ನಿರ್ಧಾರಗಳಿಂದ ಮಾತ್ರ ಅದನ್ನು ನಿಭಾಯಿಸಲು ಸಾಧ್ಯ ಎನ್ನುವ ಸ್ಥಿತಿಯಲ್ಲಿತ್ತು. ಆದರೆ ನಿರ್ಮಲಾಗೆ ಅಂತಹ ಸ್ವಾತಂತ್ರ್ಯವೂ ಇರಲಿಲ್ಲ, ಆ ಬಗೆಯ ಇಚ್ಛೆ ನಿರ್ಮಲಾ ಅವರಿಗೂ ಇದ್ದಂತಿರಲಿಲ್ಲ. ಅವರು ಮಂಡಿಸಿದ ಮೊದಲ ಬಜೆಟ್ಟಿನ ಕ್ರಮಗಳು ಹಾಗೂ ಆ ನಂತರದಲ್ಲಿ ಅವರೇ ಆ ಕ್ರಮಗಳಿಂದ ತೆಗೆದುಕೊಂಡ ಯೂ-ಟರ್ನ್ ಗಳು ಇದಕ್ಕೆ ಸಾಕ್ಷಿ. ಈಗ ಅವರ ಪತಿಯೇ ಅವರನ್ನು ಟೀಕಿಸುವಂತಹ ಸಂದರ್ಭ ಬಂದೊದಗಿದೆ. ದುರಂತವೆಂದರೆ, ಈಗಲೂ ಕೇಂದ್ರದ ಬಿಜೆಪಿ ಸರ್ಕಾರದ ಬಳಿ ಸಮರ್ಪಕ ಪರಿಹಾರದ ನೀಲನಕ್ಷೆಗಳು ಗೋಚರಿಸುತ್ತಿಲ್ಲ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕ ಓದಿಗೆ ಎಲ್ಲಿಂದ ಬಂತು ಹಣ? CJP ಸ್ಥಾಪಕ ಅಭಿಜೀತ್ ದೀಪ್ಕೆ ತಂದೆಯ ಆಸ್ತಿ ತನಿಖೆಗೆ RTI ಕಾರ್ಯಕರ್ತ ಆಗ್ರಹ

ಕಾಕ್ರೋಚ್ ಜನತಾ ಪಾರ್ಟಿ (CJP) ಸ್ಥಾಪಕ ಅಭಿಜೀತ್ ದೀಪ್ಕೆ ಅವರ ತಂದೆ, ಮಹಾರಾಷ್ಟ್ರ ಸರ್ಕಾರದ ನಿವೃತ್ತ ಉದ್ಯೋಗಿ ಭಗವಾನ್‌ರಾವ್ ದೀಪ್ಕೆ ಅವರ ಆದಾಯ ಮತ್ತು ಅಕ್ರಮ ಆಸ್ತಿ ಗಳಿಕೆ ಕುರಿತು ಸಮಗ್ರ ತನಿಖೆ...

ಕಾವೇರಿ ವಿಚಾರದಲ್ಲಿ ರಾಜಕೀಯ ಪಕ್ಕಕ್ಕಿಟ್ಟು ರಾಜ್ಯದ ಹಿತ ಕಾಯೋಣ: ಸರ್ವಪಕ್ಷ ಸಭೆಯಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಕರೆ

ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಪರಿಸ್ಥಿತಿ ಸುಧಾರಿಸುವ ಲಕ್ಷಣಗಳು ಕಂಡುಬರುತ್ತಿದ್ದು, ನದಿ ನೀರಿನ ಹಂಚಿಕೆಯಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ನಿವಾರಿಸುವುದೇ ಸರ್ಕಾರದ ಮೊದಲ ಆದ್ಯತೆಯಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. ಕಾವೇರಿ...

ಉತ್ತರ ಪ್ರದೇಶ : 33 ವರ್ಷಗಳ ಬಳಿಕ ದೇಶದ್ರೋಹ ಪ್ರಕರಣದಿಂದ ಮುಸ್ಲಿಂ ವ್ಯಕ್ತಿ ಖುಲಾಸೆ

ಪ್ರಾಸಿಕ್ಯೂಷನ್ ಆರೋಪಗಳನ್ನು ಸಾಂದರ್ಭಿಕ ಪುರಾವೆಗಳೊಂದಿಗೆ ಸಾಬೀತುಪಡಿಸಲು ವಿಫಲವಾಗಿದೆ ಮತ್ತು ಆರೋಪಿಯನ್ನು ಕೃತ್ಯಕ್ಕೆ ಲಿಂಕ್ ಮಾಡುವ ಪ್ರಮುಖ ಪುರಾವೆಗಳು ಕಾಣೆಯಾಗಿವೆ ಎಂದು ಅಭಿಪ್ರಾಯಪಟ್ಟ ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ದಳ (ಎನ್ಐಎ) ನ್ಯಾಯಾಲಯ, ದೇಶದ್ರೋಹ...

‘ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು’ ಎಂಬಂತೆ NTA ಯಿಂದ ₹7.5 ಕೋಟಿಯ ಬೃಹತ್ ಸೆಕ್ಯೂರಿಟಿ ಟೆಂಡರ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಾಗಿ, ಅಮಾಯಕ ವಿದ್ಯಾರ್ಥಿಗಳ ಜೀವ-ಭವಿಷ್ಯ ಹಾಳಾದ ಮೇಲೆ, ಊರು ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದರು ಎಂಬಂತೆ ಈಗ ಎನ್‌ಟಿಎ (NTA) ₹7.5 ಕೋಟಿ ವೆಚ್ಚದ ಭದ್ರತಾ ಟೆಂಡರ್...

SIR: ನಮೂನೆಯೂ ಇಲ್ಲ, ನೋಟಿಸ್‌ ಇಲ್ಲ ಸ್ವಂತ ಮನೆಯಲ್ಲಿದ್ದವರ ಹೆಸರನ್ನೇ ಅಳಿಸಿಹಾಕಿದ ಚುನಾವಣಾ ಆಯೋಗ

ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಒಂದಾದ ಮೇಲೊಂದರಂತೆ ಆತಂಕಕಾರಿ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಮನೆಮನೆಗೆ ತೆರಳಿ ಎನ್ಯುಮರೇಷನ್ ನಮೂನೆ ವಿತರಿಸುವ ಮೊದಲ ಹಂತದ ಪ್ರಕ್ರಿಯೆ...

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಅಮಾನತುಗೊಂಡಿದ್ದ ಯುಪಿ ಪೊಲೀಸ್ ಕಾನ್‌ಸ್ಟೇಬಲ್; ಮರುನೇಮಕದ ಬೆನ್ನಲ್ಲೇ ಬಾಲಕಿಯ ಅತ್ಯಾಚಾರ, ಕೊಲೆ!

ಹತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ, ಆಕೆಯ ಸಾವಿಗೆ ಕಾರಣನಾದ ಆರೋಪದ ಮೇಲೆ ಬಂಧಿತನಾದ ಉತ್ತರ ಪ್ರದೇಶದ ಪೊಲೀಸ್ ಕಾನ್‌ಸ್ಟೇಬಲ್ ಅಭಿಷೇಕ್ ಯಾದವ್‌ನನ್ನು ವೈದ್ಯಕೀಯ ತಪಾಸಣೆಗಾಗಿ ಗೋರಖ್‌ಪುರದ ಜಿಲ್ಲಾಸ್ಪತ್ರೆಗೆ ಕರೆತಂದಾಗ, ಅಲ್ಲಿನ...

BJP ವಿರುದ್ಧದ ಆಕ್ರೋಶವೇ Gen-Z ಹೋರಾಟದ ಮೂಲ: ವಿಪಕ್ಷಗಳಿಗೆ ಇದು ದೊಡ್ಡ ಪಾಠ

ಜಂತರ್ ಮಂತರ್‌ನಲ್ಲಿ ನಡೆದ ವಿದ್ಯಾರ್ಥಿಗಳ ಹೋರಾಟವನ್ನು ನಿಮ್ಮ ರಾಜಕೀಯ ದೃಷ್ಟಿಕೋನಕ್ಕೆ ತಕ್ಕಂತೆ ನೀವು ಕ್ರಾಂತಿ ಎಂದಾದರೂ ನೋಡಬಹುದು, ಅಥವಾ ಕ್ಷಣಿಕವಾಗಿ ಎದ್ದ ಬಿರುಗಾಳಿ ಎಂದಾದರೂ ಭಾವಿಸಬಹುದು. ಆದರೆ ಇಲ್ಲಿ ನಿಜವಾಗಿಯೂ ಆಗಿದ್ದೇನು ಮತ್ತು...

ಇನ್‌ಸ್ಟಾಗ್ರಾಮ್‌ನಲ್ಲಿ ಕ್ಷಮಿಸಿದರೆ ಸಾಲದು, ವಿದ್ಯಾರ್ಥಿಗಳ ಮೇಲಿನ ಕೇಸ್ ವಾಪಸ್ ಪಡೆಯಿರಿ: ಪ್ರಧಾನಿಗೆ ದೀಪ್ಕೆ ನೇರ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಅವರು ಇನ್‌ಸ್ಟಾಗ್ರಾಮ್ ವಿಡಿಯೋವೊಂದರಲ್ಲಿ ತಮ್ಮ ವಿರುದ್ಧ ನಿಂದನಾತ್ಮಕ ಪದ ಬಳಸಿದ್ದ ‘ಕಾಕ್ರೋಚ್ ಜನತಾ ಪಾರ್ಟಿ’ (CJP) ಪ್ರತಿಭಟನಾ ನಿರತ ವಿದ್ಯಾರ್ಥಿಗಳನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದಕ್ಕೆ ಸಿಜೆಪಿ ಸಂಸ್ಥಾಪಕ ಅಭಿಜೀತ್...

ಪ್ರತಿಭಟನೆ ಭೀತಿ : ಸಿಜೆಐ ಸೂರ್ಯಕಾಂತ್ ಭಾಗವಹಿಸಬೇಕಿದ್ದ ಘಟಿಕೋತ್ಸವ ದಿಢೀರ್ ಮುಂದೂಡಿದ TISS

ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (ಟಿಐಎಸ್‌ಎಸ್‌) ಸಂಸ್ಥೆಯು ಆಗಸ್ಟ್ 2ರಂದು ನಡೆಸಲು ನಿಗದಿಪಡಿಸಿದ್ದ ತನ್ನ 86ನೇ ವಾರ್ಷಿಕ ಘಟಿಕೋತ್ಸವವನ್ನು ದಿಢೀರ್ ಮುಂದೂಡಿದೆ. ಕ್ಯಾಂಪಸ್ ಭದ್ರತೆಯ ಬಗೆಗಿನ ಕಳವಳಗಳು ಮತ್ತು ವಿದ್ಯಾರ್ಥಿಗಳ...

ಪ್ರಧಾನಿಗಳೇ ನಿಮ್ಮ ರೀಲ್‌ಗಳನ್ನು ಅಂಧಭಕ್ತರು ಮೆಚ್ಚಬಹುದು, ಆದರೆ ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ: ಬಿ.ಕೆ. ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಿರುವ ಇತ್ತೀಚಿನ ವಿಡಿಯೋ (ರೀಲ್) ಕುರಿತು ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಾನು ಮಾಡಿದರೆ ರಾಜತಂತ್ರ, ಬೇರೆಯವರು...