Homeಮುಖಪುಟಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ : ಇನ್ಸಲ್ಟ್ ಉತ್ತರ ಕರ್ನಾಟಕ - ರಿಯಲ್ ಎಸ್ಟೇಟ್ ಧಮಾಕ..

ಹುಬ್ಬಳ್ಳಿಯಲ್ಲಿ ‘ಇನ್ವೆಸ್ಟ್ ಕರ್ನಾಟಕ’ : ಇನ್ಸಲ್ಟ್ ಉತ್ತರ ಕರ್ನಾಟಕ – ರಿಯಲ್ ಎಸ್ಟೇಟ್ ಧಮಾಕ..

2010 ಜೂನ್ 4, 5ರಂದು ಬೆಂಗಳೂರಲ್ಲಿ ಒಂದು ಗ್ಲೋಬಲ್ ಇನ್ವೆಸ್ಟ್‌ ಮೀಟ್ ನಡೆದಿತ್ತು. ಆದರೆ ಅಭಿವೃದ್ದಿಯ ಬದಲು ರಾಜ್ಯದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯಲಾಗಿತ್ತು.. ಅದರ ಮುಂದಿನ ಭಾಗ ಇದು..

- Advertisement -
- Advertisement -

‘ಇನ್ವೆಸ್ಟ್ ಕರ್ನಾಟಕ’ ಎಂಬ 8 ತಾಸುಗಳ ಡ್ರಾಮಾ ಆಡುವ ಮೂಲಕ ‘ಇನ್ಸಲ್ಟ್ ಉತ್ತರ ಕರ್ನಾಟಕ’ ಎಂಬ ಅಪಹಾಸ್ಯವನ್ನು ಫೆ.14ರಂದು ಯಡಿಯೂರಪ್ಪ ಮತ್ತವರ ಬಳಗ ಹುಬ್ಬಳ್ಳಿಯಲ್ಲಿ ಮಾಡಿ ಹೋಗಿದೆ. ನೆರೆ ಸಂತ್ರಸ್ರರಿಗೆ ತಲೆ ಮೇಲೆ ನೆರಳು ಕೊಡಲಾಗದ ಯಡಿಯೂರಪ್ಪ, ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಉದ್ಯಮಿಗಳಿಗೆ ಮೂಲಭೂತ ಸೌಕರ್ಯ ಒದಗಿಸುತ್ತಾರಂತೆ…!

ಇವರು ಹೀಗೆ ಹೇಳುವ ಹೊತ್ತಿನಲ್ಲಿ ವೇದಿಕೆ ಮೇಲಿದ್ದ ಗಣಿ ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲರು, ತಿಂಗಳ ಹಿಂದಷ್ಟೇ ತಮ್ಮ ನರಗುಂದ ಕ್ಷೇತ್ರದ ನೆರೆಪೀಡಿತ ಗ್ರಾಮಗಳಲ್ಲಿ ಸಂಚರಿಸುವಾಗ, ಗ್ರಾಮಸ್ಥರು ಎಕ್ಕುಟ್ಟಿ ಹೋದ ರಸ್ತೆ ರಿಪೇರಿ ಮಾಡಿಸಿ ಎಂದಾಗ, ಎಲ್ಲಿಂದ ರೊಕ್ಕ ತರಲಿ? ಬೊಕ್ಕಸದಲ್ಲಿ ಪುಟ್ಟಿ ಮಣ್ಣಿಗೂ ದುಡ್ಡಿಲ್ಲ ಎನ್ನುವ ಮೂಲಕ ರಾಜ್ಯ ಸರ್ಕಾರದ ಹಣಕಾಸು ಸ್ಥಿತಿಯ ಅಧೋಗತಿಯನ್ನು ಸಾಂಕೇತಿಕವಾಗಿ ಹೇಳಿದ್ದರು.

 

ಅದಿರಲಿ, ಇಡೀ ಕಾರ್ಯಕ್ರಮ ಒಂದು ಪ್ರಹಸನದಂತೆ ಭಾಸವಾಗುತ್ತಿತ್ತು. ಭಾಷಣಕಾರರೆಲ್ಲ ಉತ್ತರ ಕರ್ನಾಟಕದ ಸಮಸ್ಯೆಗಳೇ ಬಗೆಹರಿದವು ಎಂಬಂತೆ ಮಾತಾಡುತ್ತಿದ್ದರು. ವೇದಿಕೆ ಹತ್ತಿದ ಉದ್ಯಮಿಗಳಂತೂ ಬಾಯಿ ತೆರೆದರೆ ಸಾವಿರ ಕೋಟಿ ರೂ. ಬಂಡವಾಳ ಹೂಡುತ್ತೇವೆ ಎನ್ನುತ್ತಿದ್ದುದು ಬಾಯಿಪಾಠದ ಸಾಲಿನಂತಿರುತ್ತಿತ್ತು.
ಎಲ್ಲಕ್ಕಿಂತ ಅಪಾಯಕಾರಿ ಸಂಗತಿ ಎಂದರೆ, ಬೆಂಗಳೂರು ಸುತ್ತಮುತ್ತ ಕೈಗಾರಿಕೆ ಹೆಸರಲ್ಲಿ ಭೂಮಿ ಹೊಡೆದವರು ಈಗ ಇಲ್ಲಿಗೂ ದಾಳಿ ಇಟ್ಟಿರುವುದು. ಮೂಲಭೂತ ಸೌಕರ್ಯಗಳಿಲ್ಲದೇ ಹೂಡಿಕೆ ಮಾಡಲು ಯಾವ ಉದ್ಯಮಿಯೂ ಮೂರ್ಖನಲ್ಲ. ಮೂಲಭೂತ ಸೌಕರ್ಯ ಕಲ್ಪಿಸಲು ಬಿಡಿ, ನೆರೆ ಸಂತ್ರಸ್ತರಿಗೆ ಕನಿಷ್ಠ ಸೌಲಭ್ಯ ಕೊಡಲೂ ಆಗದ ದುಸ್ಥಿತಿಯಲ್ಲಿ ಸರ್ಕಾರವಿದೆ.

ರಿಯಲ್‌ ಎಸ್ಟೇಟ್‌ ದಂಧೆ..

ಹಾಗಿದ್ದರೆ ಈ ಉದ್ಯಮಿಗಳು ಹೂಡಿಕೆ ಭರವಸೆ ನೀಡಿದ್ದು ಯಾವ ಆಧಾರದ ಮೇಲೆ? ಇಲ್ಲೇ ಶುರುವಾಗುತ್ತದೆ ರಿಯಲ್ ಎಸ್ಟೇಟ್ ದಂಧೆಯ ಕತೆ. ಈಗ ಸ್ವಲ್ಪ ಫ್ಲಾಶಬ್ಯಾಕ್‌ಗೆ ಹೋಗೋಣ. 2010 ಜೂನ್ 4, 5ರಂದು ಬೆಂಗಳೂರಲ್ಲಿ ಒಂದು ಗ್ಲೋಬಲ್ ಇನ್ವೆಸ್ಟರ್‍ಸ್‌ ಮೀಟ್ ನಡೆಯಿತು. ಹುಬ್ಬಳ್ಳಿಯಲ್ಲಿ ವೇದಿಕೆ ಮೇಲಿದ್ದ ಬಹುಪಾಲು ಮುಖಗಳೇ ಅವತ್ತು ಬೆಂಗಳೂರಿನ ವೇದಿಕೆ ಮೇಲಿದ್ದವು. ಆಗಲೂ ಯಡಿಯೂರಪ್ಪ ಮುಖ್ಯಮಂತ್ರಿ. ಆ ‘ಜಾತ್ರೆ’ಯಲ್ಲಿ ಸ್ಟೀಲ್ ಸೆಕ್ಟರ್ ಒಂದರಲ್ಲೇ 2 ಲಕ್ಷ ಕೋಟಿ ರೂ. ಬಂಡವಾಳ ಹೂಡಿಕೆ ಒಪ್ಪಂದಗಳಾದವು. ಆಗ ಪ್ರವಾಸೋದ್ಯಮ ಸಚಿವರಾಗಿದ್ದ ಗಾಲಿ ಜನಾರ್ದನ ರೆಡ್ಡಿಯ ಬ್ರಹ್ಮಣಿ ಸ್ಟೀಲ್ಸ್ ಕಂಪನಿ ಬಳ್ಳಾರಿ ಸಮೀಪ 36 ಸಾವಿರ ಕೋಟಿ ರೂ. ಬಂಡವಾಳ ಹೂಡಿ, 6 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆಯ ಫ್ಯಾಕ್ಟರಿ ಸ್ಥಾಪಿಸುವುದಾಗಿ ಒಡಂಬಡಿಕೆ ಮಾಡಿಕೊಂಡಿತು.

ಅದಕ್ಕಾಗಿ ರಿಯಾಯತಿ ದರದಲ್ಲಿ ಸುಮಾರು 1,500 ಎಕರೆ ಭೂಮಿಯನ್ನು ಸರ್ಕಾರದಿಂದ ಪಡೆಯಿತು. ಕೇವಲ ಎಂಟೇ ತಿಂಗಳಲ್ಲಿ, ಮುಂಬೈ ಮೂಲದ ಮಿಗ್ಲಾನಿ ಕುಟುಂಬದ ಉತ್ತಮ್ ಗಲ್ವಾ ಸ್ಟೀಲ್ಸ್ ಕಂಪನೆಗೆ ಮಾರಿಬಿಟ್ಟರು. ವಿಚಿತ್ರ ಎಂದರೆ, ಬ್ರಹ್ಮಣಿ ಎನ್ನುವ ಕಂಪನಿ ಅಸ್ತಿತ್ವದಲ್ಲೇ ಇರಲಿಲ್ಲ. ರೆಡ್ಡಿಗೆ ಸ್ಟೀಲ್ ಫ್ಯಾಕ್ಟರಿ ಮಾಡುವ ಉದ್ದೇಶವೂ ಇರಲಿಲ್ಲ. ಹಾಗಾದರೆ ಉತ್ತಮ್ ಗಲ್ವಾ ಕಂಪನಿಗೆ ಮಾರಿದ್ದೇನು? ಬಳ್ಳಾರಿ ಜಿಲ್ಲೆಯ ಫಲವತ್ತಾದ ಭೂಮಿಯನ್ನು, ನೆನಪಿರಲಿ ಸಾವಿರಾರು ಕೋಟಿಯ ಮಾರುಕಟ್ಟೆ ಬೆಲೆಗೆ!

2007ರಲ್ಲಿ ಆಂಧ್ರದಲ್ಲಿ ವೈಎಸ್‌ಆರ್ ಸರ್ಕಾರವಿದ್ದಾಗ ಅಲ್ಲೂ ಬ್ರಹ್ಮಣಿ ಹೆಸರಲ್ಲಿ ವೈಎಸ್‌ಆರ್ ಮತ್ತು ಜನಾರೆಡ್ಡಿ ರಿಯಲ್ ಎಸ್ಟೇಟ್ ದಂಧೆ ಮಾಡಿದ್ದರು. ಅಲ್ಲಿ ಬ್ರಹ್ಮಣಿ ಸ್ಟೀಲ್ಸ್ ಹೆಸರಲ್ಲಿ 2 ಮಿಲಿಯನ್ ಟನ್ ಸ್ಟೀಲ್ ಫ್ಯಾಕ್ಟರಿಗೆ ಬಂಡವಾಳ ಹೂಡುವುದಾಗಿ, ಕಡಪಾ ಜಿಲ್ಲೆಯಲ್ಲಿ ಎಕರೆಗೆ ಕೇವಲ 18 ಸಾವಿರದಂತೆ, 10,760 ಎಕರೆ (ಒಟ್ಟು ಮೊತ್ತ ಕೇವಲ 19 ಕೋಟಿ ರೂ) ಮತ್ತು ಏರ್‌ಪೋರ್ಟ್ ಮಾಡುವುದಾಗಿ 78 ಕೋಟಿಗೆ 3,115 ಎಕರೆ ಭೂಮಿಯನ್ನು ಪಡೆದಿದ್ದರು.

ಈ ಭೂಮಿಯನ್ನೆಲ್ಲ ಆಕ್ಸಿಸ್ ಬ್ಯಾಂಕ್‌ನಲ್ಲಿ ಅಡವಿಟ್ಟಿದ್ದ ಜನಾರ್ಧನ ರೆಡ್ಡಿ, 350 ಕೋಟಿ ರೂ ಸಾಲ ಎತ್ತಿದ್ದರು! ಮುಂದಿನ ಸರ್ಕಾರ ಈ ಒಪ್ಪಂದವನ್ನೇ ರದ್ದು ಮಾಡಿತು. ರೆಡ್ಡಿಯ ಈ ದಂಧೆ ಕುರಿತು 2012ರಲ್ಲಿ ಇಂಗ್ಲಿಷ್ ಪತ್ರಿಕೆಯೊಂದಿಗೆ ಮಾತಾಡಿದ್ದ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗಡೆ, ಆತನಿಗೆ ಸ್ಟೀಲ್ ಫ್ಯಾಕ್ಟರಿ ಮಾಡುವ ಯಾವ ಉದೇಶವೂ ಇಲ್ಲ. ಸರ್ಕಾರದಿಂದ ತುಂಬ ಕಡಿಮೆ ಬೆಲೆಗೆ ಭೂಮಿ ಪಡೆಯುವುದು, ಅದನ್ನು 50-60 ಪಟ್ಟಿಗೆ ಮಾರಿಬಿಡುವುದೇ ಆತನ ‘ಮೊಡಸ್ ಅಪರೆಂಡಿ’ ಎಂದಿದ್ದರು.

ಹುಬ್ಬಳ್ಳಿಯಲ್ಲೂ ರಿಯಲ್ ಎಸ್ಟೇಟ್ ಧಮಾಕ?
ಸಚಿವ ಜಗದೀಶ ಶೆಟ್ಟರ್ ಸಹೋದರ ಎಂಎಲ್‌ಸಿ ಪ್ರದೀಪ ಶೆಟ್ಟರ್ ಹೇಳಿಕೇಳಿ ರಿಯಲ್‌ಎಸ್ಟೇಟ್ ವ್ಯವಹಾರದವರು. ಹಿಂದೆ ಹುಬ್ಬಳ್ಳಿಯ ಸುಪ್ರಸಿದ್ಧ ಜಿಮಖಾನಾ ಕ್ಲಬ್ ಮತ್ತು ಅದರ ಭೂಮಿಯನ್ನು ಎಗರಿಸಲು ಶೆಟ್ಟರ್, ಜೋಶಿ ಯತ್ನಿಸಿದ್ದರು. ಇದರ ವಿರುದ್ಧ ಎಸ್‌.ಆರ್ ಹಿರೇಮಠ ಕಾನೂನು ಹೋರಾಟ ಮಾಡಿದ್ದರು. ಪಾಟೀಲ ಪುಟ್ಟಪ್ಪ ಉಪವಾಸ ಕುಳಿತಿದ್ದರು ಎಂಬುದನ್ನು ಇಲ್ಲಿ ಗಮನಿಸಬೇಕು.

ಹೀಗಾಗಿ ಕಳೆದ ಶುಕ್ರವಾರ ಹುಬ್ಬಳ್ಳಿಯಲ್ಲಿ ನಡೆದ ಇನ್ವೆಸ್ಟ್ ಕರ್ನಾಟಕದಲ್ಲೂ ಭೂ ದರೋಡೆಯ ವಾಸನೆ ಹೊಡೆಯುತ್ತಿತ್ತು. ಹಾಗೆಯೇ ಸಮಸ್ಯೆಯಲ್ಲಿರುವ ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶವಿತ್ತು. ಸಾರ್ವಜನಿಕವಾಗಿ ನಡೆಯಬೇಕಿದ್ದ ಈ ಕಾರ್ಯಕ್ರಮ ಡೆನಿಸನ್ಸ್ ಎಂಬ ಐಷಾರಾಮಿ ಹೊಟೆಲ್ ಒಳಗಡೆ ಕೇವಲ ವಿಐಪಿಗಳ ನಡುವೆ ಜರುಗಿತು.

ಎಲ್ಲಕ್ಕಿಂತ ಮುಖ್ಯವಾಗಿ ಪುಟ್ಟಿ ಮಣ್ಣಿಗೂ ರೊಕ್ಕ ಇಲ್ಲ ಎಂದು ನೆರೆಪೀಡಿತರನ್ನು ಅವಮಾನಿಸಿದ ಸರ್ಕಾರ ಎ.ಸಿ. ಹಾಲ್‌ನಲ್ಲಿ ಕುಳಿತು, ಉದ್ಯಮಿಗಳ ಬಾಯಲ್ಲಿ ಉತ್ತರ ಕರ್ನಾಟಕ ಅಭಿವೃದ್ಧಿ ಎಂದು ಹೇಳಿಸುವ ಮೂಲಕ ಉತ್ತರ ಕರ್ನಾಟದ ಜನರನ್ನೇ ಅವಮಾನಿಸಿದೆ ಅಷ್ಟೇ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2029ರ ವೇಳೆಗೆ 21 NDA ಆಡಳಿತದ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಮುಂಬೈನಲ್ಲಿ ಗೃಹ ಸಚಿವ ಅಮಿತ್ ಶಾ ಘೋಷಣೆ

ವಿವಾಹ, ವಿಚ್ಛೇದನ, ಪಿತ್ರಾರ್ಜಿತ ಆಸ್ತಿ ಮತ್ತು ದತ್ತು ಸ್ವೀಕಾರದಂತಹ ವೈಯಕ್ತಿಕ ಕಾನೂನುಗಳಲ್ಲಿ ಧರ್ಮಾತೀತವಾಗಿ ಏಕರೂಪತೆ ತರುವ 'ಏಕರೂಪ ನಾಗರಿಕ ಸಂಹಿತೆ'ಯನ್ನು (UCC) 2029ರ ವೇಳೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21...

KPSC ಯನ್ನು ರದ್ದು ಮಾಡುತ್ತಾ ಸರ್ಕಾರ? ಹೊಸ ಚರ್ಚೆ ಹುಟ್ಟುಹಾಕಿದ ಸಚಿವ ಈಶ್ವರ್ ಖಂಡ್ರೆ ಹೇಳಿಕೆ

ಕರ್ನಾಟಕ ಲೋಕಸೇವಾ ಆಯೋಗವನ್ನು (KPSC) ಮುಚ್ಚುವ ಅಥವಾ ಸಂಪೂರ್ಣವಾಗಿ ರದ್ದುಗೊಳಿಸುವ ಕುರಿತು ಅರಣ್ಯ ಹಾಗೂ ಜೀವಿಶಾಸ್ತ್ರ ಸಚಿವ ಈಶ್ವರ್ ಖಂಡ್ರೆ ನೀಡಿರುವ ಹೇಳಿಕೆಯು ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಮೂಡಿಸಿದ್ದು, ಲಕ್ಷಾಂತರ ಸ್ಪರ್ಧಾತ್ಮಕ...

ಹುಬ್ಬಳ್ಳಿಯಲ್ಲಿ ಗಣೇಶ ಮೆರವಣಿಗೆ ವೇಳೆ ಮಹಿಳೆಯರೊಂದಿಗೆ ಅಸಭ್ಯ ವರ್ತನೆ

ಹುಬ್ಬಳ್ಳಿಯಲ್ಲಿ ಗಣೇಶೋತ್ಸವದ ಮೂರ್ತಿ ತರುವ ಸಂಭ್ರಮದ ಮೆರವಣಿಗೆಯನ್ನೇ ನೆಪವಾಗಿಸಿಕೊಂಡು ಅಪರಿಚಿತ ಕಿಡಿಗೇಡಿಗಳು ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹಬ್ಬದ ನೆಪದಲ್ಲಿ ಸಾರ್ವಜನಿಕ ಸೌಹಾರ್ದತೆ ಮತ್ತು ಮಹಿಳೆಯರ ಸುರಕ್ಷತೆಗೆ...

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...