Homeಅಂಕಣಗಳು'ಬಿಟ್ಟಿ ಸವಲತ್ತಿ'ನ ಬಗ್ಗೆ ಬುದ್ದಿಯವರು ಸಿಟ್ಟಾಗಿದ್ದಾರಲ್ಲಾ!

‘ಬಿಟ್ಟಿ ಸವಲತ್ತಿ’ನ ಬಗ್ಗೆ ಬುದ್ದಿಯವರು ಸಿಟ್ಟಾಗಿದ್ದಾರಲ್ಲಾ!

- Advertisement -
- Advertisement -

ಮೋದಿ ಪ್ರಧಾನಿಯಾಗಿ ಮೆರೆದಿದ್ದು ಹೇಗೆಂಬುಂವುದನ್ನು ಅರ್ಥ ಮಾಡಿಕೊಳ್ಳಲು ಅದರ ಹಿಂದಿನ ಆಡಳಿತ ನೋಡಬೇಕು. ಹತ್ತು ವರ್ಷ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಅರ್ಥಶಾಸ್ತ್ರಜ್ಞನಾಗಿ ಹೆಚ್ಚು ವರ್ತಿಸಿದರೇ ಹೊರತು, ಪ್ರಧಾನಿಯ ಕುರ್ಚಿಯ ವರ್ಚಸ್ಸಿಗೆ ಆತುಕುಳಿತವರಲ್ಲ. ಜನಮೆಚ್ಚಿಸುವ ಮಾತನಾಡಲಿಲ್ಲ. ಸುಳ್ಳುಗಳನ್ನು ಹೇಳಲಿಲ್ಲ. ಪ್ರಪಂಚವೇ ಗೌರವಿಸುವ ಪ್ರಧಾನಿಯಾಗಿದ್ದರು. ಅವರು ಕೂಡ ಕೆಲವೊಂದು ವಿಷಯಗಳಿಗೆ ಪ್ರತಿಕ್ರಿಯಿಸದೆ ಮೌನವಾಗಿದ್ದರು; ಅವರೆದುರು ಬಾಯಿಗೆ ಬಂದಂತೆ ಮೋಹಕವಾಗಿ ಮಾತನಾಡುವ ಮೋದಿಯನ್ನು ಪ್ರಧಾನಿಯಾಗಿ ಮೆರೆಸಲಾಯ್ತು. ಏನೇನೋ ಕಾರಣಗಳಿಂದ ದೇಶ ಆರ್ಥಿಕವಾಗಿ ಹಳ್ಳ ಹಿಡಿಯುವಾಗಲೂ ಮನಮೋಹನ್ ಸಿಂಗ್ ಗಟ್ಟಿಯಾಗಿ ಮಾತನಾಡಲಿಲ್ಲ. ಸಂಘಟಿತ ಲೂಟಿ ಎಂದು ಗೊಣಗಿಕೊಂಡರು. ಆದರೆ ಮೋದಿಯವರಂತೂ, ಕೆಲವು ಭೀಕರ ಘಟನೆಗಳಿಗೂ ಪ್ರತಿಕ್ರಿಯಿಸಲಿಲ್ಲ; ಭಾರತವನ್ನೇ ಅಲ್ಲಾಡಿಸಿದ ಕರಾಳ ಕೃಷಿ ಕಾಯ್ದೆ ವಿರೋಧೀ ಚಳವಳಿಗೆ ಪ್ರತಿಕ್ರಿಯಿಸಲಿಲ್ಲ. 750 ಜನ ರೈತರು ಸತ್ತಾಗಲೂ ತುಟಿ ಬಿಚ್ಚಲಿಲ್ಲ. ಈಗಲೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯರಾಗಿರುವ ಕುಸ್ತಿಪಟುಗಳ ಮೇಲೆ ಬೆಚ್ಚುವಂತಹ ಲೈಂಗಿಕ ಹಗರಣ ನಡೆದಿದ್ದರೂ, ಪ್ರಧಾನಿ ಆರೋಪಿಯ ಜೊತೆಯಲ್ಲೇ ಮೌನವಾಗಿ ನಿಂತಿರುವುದಲ್ಲದೆ, ಬ್ರಿಜ್ ಭೂಷಣ್ ಶಕ್ತಿ ಪ್ರದರ್ಶನದ ಬಗ್ಗೆ ಕೂಡ ಮೌನವಾಗಿದ್ದಾರೆ. ಸೂಕ್ಷ್ಮವಾಗಿ ನೋಡಿದರೆ ಬಿಜೆಪಿಗಳು ಮಾಡುವ ಅಪರಾಧಗಳ ಆರೋಪದ ವಿಷಯದಲ್ಲಿ ಈವರೆಗೆ ಬಾಯಿ ಬಿಡದೆ ಮೋದಿ ಮೌನವಾಗಿದ್ದಾರಲ್ಲಾ, ಥೂತ್ತೇರಿ.

****

ಮಂಡ್ಯದ ಕರ್ನಾಟಕ ಸಂಘದ ಜಯಪ್ರಕಾಶ್ ಗೌಡರು ಹೊಸದಾಗಿ ಗೆದ್ದು ಬಂದ ಶಾಸಕ ಮಂತ್ರಿಗಳಿಗೆ ಅಭಿನಂದನಾ ಸಭೆ ಮಾಡಿದರು. ಪಿ.ಇ.ಎಸ್ ಕಾಲೇಜಿನ ನಿವೃತ್ತ ಪ್ರಿನ್ಸಿಪಾಲ್ ಶಂಕರೇಗೌಡರು ಮಾತನಾಡುತ್ತ ರಸ್ತೆಗಳು ನಮ್ಮ ಕಾಲ ಕೆಳಗೆ ಇರಬೇಕು, ಅದುಬಿಟ್ಟು ತಲೆಯಮೇಲೆ ಇರಬಾರದು, ಮಂಡ್ಯದಲ್ಲಿ ಹೀಗಾಗಿದೆ ಎಂದರು. ಇದಕ್ಕುತ್ತರವಾಗಿ ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿ, ಶಂಕರೇಗೌಡರು ಅಭಿವೃದ್ಧಿ ಕೆಲಸಗಳನ್ನ ಟೀಕಿಸದೆ ಮೆಚ್ಚಿಕೊಳ್ಳಬೇಕೆಂದರು. ಈ ನರೇಂದ್ರ ಸ್ವಾಮಿಗೆ ಸ್ವಲ್ಪ ತಿಳಿವಳಿಕೆ ಹೇಳುವುದಾದರೆ, ಅಭಿವೃದ್ಧಿ ಎಂದರೆ ಏನು? ಅದು ಯಾರಿಗೆ ಬೇಕಾಗಿದೆ? ಅದರಿಂದ ಆಗುತ್ತಿರುವ ಅನಾಹುತಗಳೇನು? ಎಂಬುದೇ ಅವರಿಗೆ ತಿಳಿದಿಲ್ಲವಲ್ಲ, ಥೂತ್ತೇರಿ.

****

ಮಂಡ್ಯವನ್ನ ಸೀಳಿಕೊಂಡು ಹೋಗಿರುವ ಬೈಪಾಸ್ ರಸ್ತೆಯಲ್ಲಿ, ಬೆಂಗಳೂರು ಮೈಸೂರ ನಡುವೆ ಕೇವಲ ಒಂದೂವರೆ ಗಂಟೆ ಜರ್ನಿಯಾಗಿದೆ. ಆಯ್ತು ಬೇಗ ಮೈಸೂರಿಗೆ ಹೋಗಿ ನೀವು ಮಾಡುವುದೇನು, ಅದೇನು ವಾಣಿಜ್ಯ ನಗರಿಯೇ ಅಥವಾ ಕೈಗಾರಿಕೆಯ ಬೀಡೆ ಇಲ್ಲ ಬಾಂಬೆ ತರದ ನಗರವೇ? ಬೆಂಗಳೂರಿಂದ ವೇಗದಲ್ಲಿ ಮೈಸೂರು ತಲುಪುವ ತವಕದಲ್ಲಿ ಹೋದವರ ಪೈಕಿ ಈಗಾಗಲೇ ನೂರಾರು ಜನ ಅಂತರ್ಧಾನವಾಗಿದ್ದಾರೆ! ಬೆಂಗಳೂರು ಮೈಸೂರು ನಡುವೆಯಿದ್ದ ಹೋಟೆಲುಗಳು ಡಲ್ಲಾಗಿವೆ. ಕೆಲವೆಡೆ ಇರುವ ರಸ್ತೆಯನ್ನ ಅಗಲಮಾಡಿ ನಗರಗಳು ಸಿಕ್ಕಾಗ ಹತ್ತು ಇಪ್ಪತ್ತು ಕಿ.ಮೀ ವೇಗ ನಿಯಮ ಮಾಡಿದ್ದಾರೆ. ಈ ಐತಿಹಾಸಿಕ ರಸ್ತೆ ಎಲ್ಲ ಊರುಗಳಿಗೂ ಒಂದು ’ಶೋಭೆ’ ತಂದಿರುವುದು, ನಮ್ಮ ಅಭಿವೃದ್ಧಿ ಜನಜೀವನವನ್ನು ಅಸಹನೀಯಗೊಳಿಸುವ ಮತ್ತು ಪರಿಸರನಾಶದ ಹಾಗೂ ಸಂಸ್ಕೃತಿ ನಾಶದ ಪ್ರತೀಕವಾಗಿ ಎಂಬರ್ಥದಲ್ಲಿ ಮಾತನಾಡಿದ ಶಂಕರೇಗೌಡರ ಇಂಗಿತ ನರೇಂದ್ರಸ್ವಾಮಿಯವರಿಗೆ ಅರ್ಥವಾಗಬೇಕಾದರೆ, ಶಂಕರೇಗೌಡರಿಂದ ಈ ಮೊದಲೇ ಪಾಠ ಹೇಳಿಸಿಕೊಳ್ಳಬೇಕಿತ್ತು. ಅಭಿವೃದ್ಧಿ ಕೆಲಸಗಳ ಕಮಿಶನ್ ಪಡೆವ ರಾಜಕಾರಣಿಗಳೆಲ್ಲಾ ಹೀಗೇ ಮಾತನಾಡುವುದಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ನಾನಂತೂ ನಿವೃತ್ತಿಯಾಗಲ್ಲ ಕಂಡ್ರೀ!

****

ನಮ್ಮ ನಡುವಿನ ಜಗದ್ಗುರುವೊಬ್ಬರು ಸಿದ್ದರಾಮಯ್ಯನವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಬಿಟ್ಟಿ ಸಲಹೆ ಕೊಟ್ಟಿದ್ದಾರಲ್ಲಾ. ಬುದ್ದಿಯವರು ಕೊಟ್ಟ ಬೋಧನೆ ಪ್ರಕಾರ ಜನರಿಗೆ ಬಿಟ್ಟಿ ಸವಲತ್ತಿಗಿಂತ ದುಡಿದು ತಿನ್ನುವ ಕಾಯಕ ಜೀವನ ರೂಪಿಸಬೇಕಿತ್ತು. ಈಗಿನ ಕಾರ್ಯಕ್ರಮಗಳಿಂದ ಜನ ಸೋಮಾರಿಗಳಾಗಿ ಕಾಯಕ ಜೀವನದಿಂದ ವಿಮುಖರಾಗುತ್ತಾರೆ ಎಂದಿದ್ದಾರೆ. ಸುವರ್ಣಾಕ್ಷರದಲ್ಲಿ ಬರೆದು ರಸ್ತೆ ಪಕ್ಕದಲ್ಲಿ ಅಂಟಿಸಬಹುದಾದ ಈ ಉಪದೇಶಾಮೃತ ನೀಡಿದೆ ಬುದ್ದಿಯವರು ಈವರೆಗೂ ಬದುಕಿದ್ದುದ್ದು ಮಠದ ಬಿಟ್ಟಿ ಸವಲತ್ತಿನಿಂದ ಅಲ್ಲವೆ? ಬಿಟ್ಟಿ ಸವಲತ್ತನ್ನು ಅನುಭವಿಸಿ ಪೂಜ್ಯರು ಸೋಮಾರಿಗಳಾದುದನ್ನ ನಾವಂತೂ ನೋಡಿಲ್ಲ. ಸಮಯಕ್ಕೆ ಸರಿಯಾಗಿ ಪ್ರಸಾದ ಸ್ವೀಕರಿಸಿ ಬೋಧನೆಗೆ ತಯಾರಾಗುವ ಜಗದ್ಗುರುಗಳು ಜನರಿಗೆ ದುಡಿದು ತಿನ್ನುವ ಕೆಲಸಗಳನ್ನ ರೂಪಿಸಿ ಅದನ್ನ ಸರಕಾರದ ಗಮನಕ್ಕೆ ತರಬೇಕಿತ್ತು. ಅದು ಈವರೆಗೆ ಆಗಿಲ್ಲ. ಅವರೂ ಕೂಡ ಸರಕಾರದ ಅನುದಾನಕ್ಕೆ ಕಾಯುವಂತಾಗಿದ್ದಾರೆ. ಈಗ ಸಿದ್ದರಾಮಯ್ಯನವರ ಸರಕಾರ ಮಾಡಬೇಕಾದ ತುರ್ತಿನ ಕೆಲಸ ಯಾವುದೆಂದರೆ ಈ ಮಠಗಳು ಅನಾಯಾಸವಾಗಿ ಪಡೆಯುತ್ತಿರುವ ಅನುದಾನದ ಭಿಕ್ಷೆಯನ್ನು ನಿಲ್ಲಿಸುವುದು. ಜಗದ್ಗುರುಗಳೂ ರಾಜಕಾರಣಿಗಳಾಗಿ ಪರಿವರ್ತನೆಯಾಗಿರುವ ಈ ಸಮಯದಲ್ಲಿ ಅದು ಅದಷ್ಟು ಸುಲಭವಲ್ಲವಂತಲ್ಲಾ, ಥೂತ್ತೇರಿ.

****

ಇದೇ ಹನ್ನೊಂದನೇ ತಾರೀಕಿನಿಂದ ಸರಕಾರ ಮಹಿಳೆಯರಿಗೆ ಸರಕಾರಿ ಬಸ್ಸಿನಲ್ಲಿ ಎಲ್ಲೆಂದರಲ್ಲಿ ಹೋಗಿ ಬರುವ ಉಚಿತ ಸವಲತ್ತನ್ನು ಕರುಣಿಸಿದೆಯಲ್ಲಾ. ನಮ್ಮ ಪುರಾಣ ಸದೃಶ ಧರ್ಮದಲ್ಲಿ ಹೆಣ್ಣನ್ನು ಎಂದೂ ಸಹಜವಾಗಿ ಮತ್ತು ಸಮಾನವಾಗಿ ಕಂಡಿಲ್ಲ. ಹೀಗೆ ಕಾಣದವರ ಹೊಟ್ಟೆಗೆ ಸುಣ್ಣ ಹುಯ್ದಂತೆ ಮಾಡುವ ಈ ಕಾರ್ಯಕ್ರಮ ಸಹಜವಾಗಿಯೇ ವಿಕೃತ ಮನಸ್ಸಿನವರಿಗೆ ಶಾನೆ ಸುದ್ದಿಯಾಗಿದೆಯಂತಲ್ಲಾ. ಮಹಿಳೆಯರಾಗಿ ಮಹಿಳಾ ಸವಲತ್ತನ್ನು ಟೀಕಿಸುವ ಕಮಲ ಪ್ರಿಯ ಮಹಿಳೆಯರು ಸಿದ್ದು ಸರಕಾರದ ವಿರುದ್ಧ ಸ್ವಾಭಿಮಾನ ಮೆರೆದು ಟಿಕೆಟ್ ತೆಗೆದುಕೊಂಡರೆ ಎಷ್ಟು ಚೆಂದ ಅಲ್ಲವೆ. ಇಂಥವರ ಬಾಯಿಗಳಿಂದಲೇ ಬಂದ ಮಾತುಗಳನ್ನು ದಾಖಲಿಸುವುದಾದರೆ, ’ಇನ್ನು ಹೆಂಗಸರು ಎಲ್ಲೆಂದರಲ್ಲಿ ತಿರುಗುತ್ತಾರೆ, ಮನೆಯನ್ನು ಸೇರುವುದಿಲ್ಲ, ಗಂಡನ ಮಾತು ಕೇಳುವುದಿಲ್ಲ’ ಎನ್ನತೊಡಗಿದ್ದಾರಲ್ಲ. ಸರಿಯಾಗಿ ಕಣ್ಣುಬಿಟ್ಟು ನೋಡಿದರೆ ಸಾಮಾನ್ಯವಾಗಿ ಯಾವ ಹೆಂಗಸೂ ವಿನಾಕಾರಣ ಎಲ್ಲೂ ಸುತ್ತುವುದಿಲ್ಲ. ಈ ಸಮಾಜ ಆಧಾರಸ್ಥಂಭಗಳೆಂದುಕೊಂಡು ಕುಟುಂಬವನ್ನು ನಿರ್ವಹಿಸುವ ಮಹಿಳೆ, ಮುಫತ್ತಾಗೆ ಪಡೆದ ಸವಲತ್ತು ಯಾವುದೆಂದರೆ ಈವರೆಗೆ ಗಂಡಂದಿರನ್ನು ತಿರುಗಲುಬಿಟ್ಟು ಗಾಣದ ಎತ್ತಿನಂತೆ ಮನೆ ನಿರ್ವಹಿಸಿದ್ದಷ್ಟೇ! ಇದೆಲ್ಲಕ್ಕಿಂತ ಬಸ್ಸಿನಲ್ಲಿ ಹೋಗುವ, ಅದೂ ಮೂರು ಬಸ್ಸು ಬದಲಾಯಿಸಿ ಕೂಲಿ ಮಾಡಿ ಬದುಕುತ್ತಿದ್ದ ಬೆಂಗಳೂರಿನ ಮಹಿಳೆಯರ ಕೂಲಿ ಹಣ ಹಾಗೇ ಉಳಿಯುತ್ತದೆ. ಆ ಹಣದಲ್ಲಿ ಕುಟುಂಬವನ್ನು ಕಟ್ಟುತ್ತಾಳೆ. ಎಲ್ಲಿಯಾದರೂ ಹೋಗಿ ಬರಲು ಗಂಡನ ಬಳಿ ಬಸ್ ಚಾರ್ಜಿಗಾಗಿ ಬೇಡುತ್ತಿದ್ದ ಮಹಿಳೆ ಇನ್ನು ಮುಂದೆ ಈ ತನ್ನ ದೈನೇಸಿ ಬದುಕನ್ನು ಬದಲಿಸಿಕೊಳ್ಳುತ್ತಾಳೆ. ಆದರೆ, ಈಗ ನೀಡಿರುವ ಈ ಸವಲತ್ತು, ಪುರೋಹಿತಶಾಹಿ ಭಟ್ಟರುಗಳಿಗೆ ಸಂಭ್ರಮ ಮತ್ತು ಆಶ್ಚರ್ಯವನ್ನು ಹುಟ್ಟಿಸಿದೆಯಂತಲ್ಲಾ. ಮುಂದೆ ಪುಣ್ಯಕ್ಷೇತ್ರಗಳ ಹುಂಡಿ, ಮಂಗಳಾರತಿ ತಟ್ಟೆ ತುಂಬಲಿವೆಯಂತಲ್ಲಾ. ಹಾಗಾಗಿ ಅವರೆಲ್ಲಾ ಸಿದ್ದರಾಮಯ್ಯನವರ ಈ ಕಾರ್ಯಕ್ರಮವನ್ನು ಕೊಂಡಾಡತೊಡಗಿದ್ದಾರಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...